ವಾಶಿಂಗ್ಟನ್: ಕಳೆದ ವರ್ಷ ನ್ಯೂಯಾರ್ಕ್ ನಗರದಲ್ಲಿ ಸಿಖ್ ಪ್ರತ್ಯೇಕತಾವಾದಿಯೊಬ್ಬರ ಹತ್ಯೆಗೆ ವಿಫಲ ಸಂಚು ರೂಪಿಸಿದ್ದ ಆರೋಪದ ಮೇಲೆ ಭಾರತದ ಮಾಜಿ ಗುಪ್ತಚರ ಅಧಿಕಾರಿಯ ವಿರುದ್ಧ ಅಮೆರಿಕ ಆರೋಪ ಹೊರಿಸಿದೆ
ವಿಕಾಶ್ ಯಾದವ್ ವಿರುದ್ಧದ ದೋಷಾರೋಪಣೆಯನ್ನು ಗುರುವಾರ ಬಹಿರಂಗಪಡಿಸಲು ಆದೇಶಿಸಲಾಗಿದೆ ಎಂದು ನ್ಯಾಯಾಲಯದ ದಾಖಲೆಗಳು ತಿಳಿಸಿವೆ. ಯಾದವ್ ಭಾರತದ ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ ಬೇಹುಗಾರಿಕೆ ಸೇವೆಯ ಮಾಜಿ ಅಧಿಕಾರಿಯಾಗಿದ್ದರು ಎಂದು ದಾಖಲೆಗಳು ತಿಳಿಸಿವೆ.
ಸಿಖ್ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್ ಸಿಂಗ್ ಪನ್ನುನ್ ಅವರ ಹತ್ಯೆ ಯತ್ನದಲ್ಲಿ ಭಾರತೀಯ ಏಜೆಂಟರು ಭಾಗಿಯಾಗಿದ್ದಾರೆ ಎಂದು ವಾಷಿಂಗ್ಟನ್ ಆರೋಪಿಸಿದೆ.
ವಿಫಲಗೊಂಡ ಕೊಲೆ ಸಂಚಿನಲ್ಲಿ ಭಾರತದ ಪಾಲ್ಗೊಳ್ಳುವಿಕೆಯ ಬಗ್ಗೆ ತನಿಖೆ ನಡೆಸುತ್ತಿರುವ ಭಾರತ ಸರ್ಕಾರದ ಸಮಿತಿಯು ಮಂಗಳವಾರ ವಾಷಿಂಗ್ಟನ್ನಲ್ಲಿ ಯುಎಸ್ ಅಧಿಕಾರಿಗಳನ್ನು ಭೇಟಿ ಮಾಡಿತು, ಈ ಸಭೆಯನ್ನು ವಾಷಿಂಗ್ಟನ್ ಫಲಪ್ರದ ಎಂದು ಬಣ್ಣಿಸಿದೆ