Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಹುತಾತ್ಮ ಅರಣ್ಯ ಇಲಾಖೆ ನೌಕರರ ಕುಟುಂಬಕ್ಕೆ ಪರಿಹಾರ ಹೆಚ್ಚಳ: ಸಂತೋಷ್ ಕುಮಾರ್ ಸರ್ಕಾರಕ್ಕೆ ಅಭಿನಂದನೆ ಸಲ್ಲಿಕೆ

11/09/2025 10:50 PM

ಸಾಗರದ ಕೊಗಾರಿನಲ್ಲಿ ಅರಣ್ಯ ಹುತಾತ್ಮರ ದಿನ ಆಚರಣೆ, ಗೌರವ ನಮನ ಸಲ್ಲಿಸಿದ ACF ಮಹೇಶ್ ಖಾತೇದಾರ್

11/09/2025 10:30 PM

ಚಾರ್ಲಿ ಕಿರ್ಕ್ ಹತ್ಯೆ ಶಂಕಿತ ವ್ಯಕ್ತಿಯ ಮೊದಲ ಪೋಟೋ ಬಿಡುಗಡೆ ಮಾಡಿದ FBI | Charlie Kirk Murder Case

11/09/2025 10:18 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕರ್ನಾಟಕದಲ್ಲಿ 14 ಸಾವಿರಕ್ಕೂ ಹೆಚ್ಚು ‘ಉದ್ಯೋಗ ಸೃಷ್ಟಿ’, 3,935 ಕೋಟಿ ರೂ ಹೂಡಿಕೆಯ 73 ಕೈಗಾರಿಕಾ ಯೋಜನೆಗಳಿಗೆ ‘ಗ್ರೀನ್‌ ಸಿಗ್ನಲ್‌’
KARNATAKA

ಕರ್ನಾಟಕದಲ್ಲಿ 14 ಸಾವಿರಕ್ಕೂ ಹೆಚ್ಚು ‘ಉದ್ಯೋಗ ಸೃಷ್ಟಿ’, 3,935 ಕೋಟಿ ರೂ ಹೂಡಿಕೆಯ 73 ಕೈಗಾರಿಕಾ ಯೋಜನೆಗಳಿಗೆ ‘ಗ್ರೀನ್‌ ಸಿಗ್ನಲ್‌’

By kannadanewsnow0713/01/2024 8:51 AM
vidhana soudha
vidhana soudha

ಬೆಂಗಳೂರು: ರಾಜ್ಯದಾದ್ಯಂತ ಕೈಗಾರಿಕಾ ಬೆಳವಣಿಗೆ ಉತ್ತೇಜಿಸಲು ಮತ್ತು ಉದ್ಯೋಗ ಸೃಷ್ಟಿಸಲು ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿಯು ಶುಕ್ರವಾರ ಇಲ್ಲಿ ಒಟ್ಟು ₹ 3,935.52 ಕೋಟಿ ಬಂಡವಾಳ ಮೊತ್ತದ ಹೂಡಿಕೆಯ ಪ್ರಸ್ತಾವಗಳಿಗೆ ಅನುಮೋದನೆ ನೀಡಿದೆ.

ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅನುಮೋದಿಸಲಾದ ಬೃಹತ್ ಹೂಡಿಕೆ ಯೋಜನೆಗಳ ಜೊತೆಗೆ, ರಾಜ್ಯದಾದ್ಯಂತ ವಿವಿಧ ಜಿಲ್ಲೆಗಳಲ್ಲಿನ ಹೂಡಿಕೆ ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದೆ. ಈ ಯೋಜನೆಗಳಲ್ಲಿ ಡೇಟಾ ಸೆಂಟರ್‌ ಮೂಲಸೌಕರ್ಯ, ಸೌರಶಕ್ತಿ ಬಿಡಿಭಾಗಗಳ ತಯಾರಿಕೆ, ಡಿಸ್ಟಿಲರಿ, ವಾಹನ ಬಿಡಿಭಾಗ ತಯಾರಿಕಾ ಘಟಕ ಮುಂತಾದವು ಸೇರಿವೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನಲ್ಲಿ ಇಟಿಎಲ್‌ ಸೆಕ್ಯುರ್‌ ಸ್ಪೇಸ್‌ ಲಿಮಿಟೆಡ್‌ನ ₹ 490.50 ಕೋಟಿ ವೆಚ್ಚದ ಡೇಟಾ ಸೆಂಟರ್‌ ಮೂಲಸೌಲಭ್ಯ, ಬಳ್ಳಾರಿಯ ಹೂವಿನಹಡಗಲಿ ತಾಲ್ಲೂಕಿನಲ್ಲಿ ಡಿಸ್ಟಿಲರಿ ಸ್ಥಾಪಿಸಲು ಮೈಲಾರ್ ಇನ್‌ಫ್ರಾ ಪ್ರೈವೇಟ್ ಲಿಮಿಟೆಡ್‌ನ ₹ 339.84-ಕೋಟಿ ಪ್ರಸ್ತಾವ ಮತ್ತು ರಾಮನಗರ ಜಿಲ್ಲೆಯ ಹಾರೊಹಳ್ಳಿಯಲ್ಲಿ ಸಾಂಗೊ ಇಂಡಿಯಾ ಆಟೊಮೋಟಿವ್ ಪಾರ್ಟ್ಸ್ ಪ್ರೈವೇಟ್ ಲಿಮಿಟೆಡ್‌ನ ₹ 278.59-ಕೋಟಿ ಹೂಡಿಕೆಯ ಎಕ್ಸಾಸ್ಟ್ ಸಿಸ್ಟಮ್ ತಯಾರಿಕಾ ಘಟಕಕ್ಕೆ ಅನುಮೋದನೆ ನೀಡಲಾಗಿದೆ.

ಮಾನ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಶ್ರೀ. ಎಂ. ಬಿ. ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆದ 142ನೇ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಯಲ್ಲಿ ಒಟ್ಟು ₹ 3935.52 ಕೋಟಿ ಬಂಡವಾಳ ಹೂಡಿಕೆಯ 73 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಇವುಗಳಿಂದ 14,497 ಜನರಿಗೆ ಉದ್ಯೋಗ ಅವಕಾಶಗಳು ದೊರೆಯಲಿವೆ.

₹ 50 ಕೋಟಿಗೂ ಹೆಚ್ಚಿನ ಬಂಡವಾಳ ಹೂಡಿಕೆಯ 9 ಪ್ರಮುಖ ಬೃಹತ್‌ ಮತ್ತು ಮಧ್ಯಮ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಇವುಗಳಿಂದ ರಾಜ್ಯದಲ್ಲಿ ₹ 2424.28 ಕೋಟಿ ಮೊತ್ತದ ಬಂಡವಾಳ ಹೂಡಿಕೆಯೊಂದಿಗೆ 9,200 ಜನರಿಗೆ ಉದ್ಯೋಗ ಅವಕಾಶಗಳು ದೊರೆಯಲಿವೆ.

₹ 15 ಕೋಟಿಗಳಿಂದ ₹ 50 ಕೋಟಿ ಮೊತ್ತದ ಒಳಗಿನ ಬಂಡವಾಳ ಹೂಡಿಕೆಯ 58 ಹೊಸ ಯೋಜನೆಗಳಿಗೆ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಇವುಗಳಿಂದ ₹ 1423.57 ಕೋಟಿ ಮೊತ್ತದ ಬಂಡವಾಳ ಹೂಡಿಕೆಯೊಂದಿಗೆ 5,297 ಜನರಿಗೆ ಉದ್ಯೋಗಗಳು ಲಭ್ಯವಾಗಲಿವೆ.

ಹೆಚ್ಚುವರಿ ಬಂಡವಾಳ ಹೂಡಿಕೆಯ 5 ಯೋಜನೆಗಳಿಗೆ ಸಭೆಯು ಅನುಮೋದಿಸಿದ್ದು ಇದರಿಂದ ₹ 87.67 ಕೋಟಿ ಬಂಡವಾಳ ಹೂಡಿಕೆ ಆಗಲಿದೆ.

ಸಭೆಯಲ್ಲಿ ಸರ್ಕಾರದ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಡಾ. ಎಸ್ ಸೆಲ್ವಕುಮಾರ್, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಆಯುಕ್ತರಾದ ಶ್ರೀಮತಿ ಗುಂಜನ್ ಕೃಷ್ಣ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಹಾಗೂ ಕಾರ್ಯನಿರ್ವಾಹಕ ಸದಸ್ಯ ಡಾ. ಎನ್‌. ಮಹೇಶ್‌, ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ಶ್ರೀ. ದೊಡ್ಡ ಬಸವರಾಜು, ರಾಜ್ಯ ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್‌ ಮೊಹಸಿನ್‌ , ಐಟಿಬಿಟಿ ಇಲಾಖೆಯ ನಿರ್ದೇಶಕ ದರ್ಶನ್‌ ಎಚ್‌. ವಿ, ಜೀವಿಪರಿಸ್ಥಿತಿ ಹಾಗೂ ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿಜಯ್‌ ಮೋಹನ್‌ ರಾಜ್‌ ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಜರಿದ್ದರು.

ಅನುಮೋದನೆ ನೀಡಿರುವ ಪ್ರಮುಖ ಪ್ರಸ್ತಾವನೆಗಳು ಹೀಗಿವೆ

ಸಂಸ್ಥೆಯ ಹೆಸರು: ಇಟಿಎಲ್‌ ಸೆಕ್ಯುರ್‌ ಸ್ಪೇಸ್‌ ಲಿಮಿಟೆಡ್‌ ಬೆಂಗಳೂರು

ಸ್ಥಳ : ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕು

ಬಂಡವಾಳ ಹೂಡಿಕೆ ₹ ಕೋಟಿಗಳಲ್ಲಿ : 490.50

ಉದ್ಯೋಗ ಅವಕಾಶ: 41

ಸಂಸ್ಥೆಯ ಹೆಸರು: ಧಾಶ್‌ ಪಿವಿ ಟೆಕ್ನಾಲಜೀಸ್‌ ಪ್ರೈವೇಟ್‌ ಲಿಮಿಟೆಡ್‌

ಸ್ಥಳ : ತುಮಕೂರು ಜಿಲ್ಲೆ, ಶಿರಾ ಕೈಗಾರಿಕ ಪ್ರದೇಶ

ಬಂಡವಾಳ ಹೂಡಿಕೆ ₹ ಕೋಟಿಗಳಲ್ಲಿ : 346.35

ಉದ್ಯೋಗ ಅವಕಾಶ: 1251

ಸಂಸ್ಥೆಯ ಹೆಸರು: ಮೈಲಾರ್ ಇನ್‌ಫ್ರಾ ಪ್ರೈವೇಟ್‌ ಲಿಮಿಟೆಡ್‌

ಸ್ಥಳ : ಬಳ್ಳಾರಿ ಜಿಲ್ಲೆ, ಹೂವಿನಹಡಗಲಿ ತಾಲ್ಲೂಕು

ಬಂಡವಾಳ ಹೂಡಿಕೆ ₹ ಕೋಟಿಗಳಲ್ಲಿ : 339.84

ಉದ್ಯೋಗ ಅವಕಾಶ: 113

ಸಂಸ್ಥೆಯ ಹೆಸರು: ಸಾಂಗೊ ಇಂಡಿಯಾ ಆಟೊಮೋಟಿವ್‌ ಪಾರ್ಟ್ಸ್‌ ಪ್ರೈವೇಟ್‌ ಲಿಮಿಟೆಡ್‌

ಸ್ಥಳ : ರಾಮನಗರ ಜಿಲ್ಲೆ; ಹಾರೋಹಳ್ಳಿ

ಬಂಡವಾಳ ಹೂಡಿಕೆ ₹ ಕೋಟಿಗಳಲ್ಲಿ : 278.59

ಉದ್ಯೋಗ ಅವಕಾಶ: 460

 

ಸಂಸ್ಥೆಯ ಹೆಸರು: ವೀನಸ್‌ ಲ್ಯಾಬ್ಸ್‌ ಪ್ರೈವೇಟ್‌ ಲಿಮಿಟೆಡ್‌

ಸ್ಥಳ : ಯಾದಗಿರಿ ಜಿಲ್ಲೆ; ಕಡೆಚೂರ್‌ ಕೈಗಾರಿಕಾ ಪ್ರದೇಶ

ಬಂಡವಾಳ ಹೂಡಿಕೆ ₹ ಕೋಟಿಗಳಲ್ಲಿ : 244

ಉದ್ಯೋಗ ಅವಕಾಶ: 315

ಸಂಸ್ಥೆಯ ಹೆಸರು: ಸಿಮ್‌ಬಯೊ ಜೆನೆರಿಕ್ಸ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌

ಸ್ಥಳ : ಚಾಮರಾಜನಗರ ಜಿಲ್ಲೆ; ಬಡನಗುಪ್ಪೆ ಕೆಲ್ಲಂಬಳ್ಳಿ ಕೈಗಾರಿಕ ಪ್ರದೇಶ

ಬಂಡವಾಳ ಹೂಡಿಕೆ ₹ ಕೋಟಿಗಳಲ್ಲಿ : 220

ಉದ್ಯೋಗ ಅವಕಾಶ: 500

ಸಂಸ್ಥೆಯ ಹೆಸರು: ಎಂಎಎಫ್‌ ಕ್ಲೋಥಿಂಗ್‌ ಪ್ರೈವೇಟ್‌ ಲಿಮಿಟೆಡ್‌

ಸ್ಥಳ : ಚಿಕ್ಕಮಗಳೂರು ಜಿಲ್ಲೆ; ಕಡೂರು

ಬಂಡವಾಳ ಹೂಡಿಕೆ ₹ ಕೋಟಿಗಳಲ್ಲಿ : 200

ಉದ್ಯೋಗ ಅವಕಾಶ: 6,000

ಸಂಸ್ಥೆಯ ಹೆಸರು: ಎಸ್‌ಎಎ ಪ್ರಾಡಕ್ಟ್ಸ್‌ ಪ್ರೈವೇಟ್‌ ಲಿಮಿಟೆಡ್‌

ಸ್ಥಳ : ರಾಮನಗರ ಜಿಲ್ಲೆ; ಹಾರೋಹಳ್ಳಿ

ಬಂಡವಾಳ ಹೂಡಿಕೆ ₹ ಕೋಟಿಗಳಲ್ಲಿ : 180

ಉದ್ಯೋಗ ಅವಕಾಶ: 120

 

ಸಂಸ್ಥೆಯ ಹೆಸರು: ನಿಫ್ಕೊ ಸೌತ್‌ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್‌ ಪ್ರೈವೇಟ್‌ ಲಿಮಿಟೆಡ್‌

ಸ್ಥಳ : ಚಿಕ್ಕಬಳ್ಳಾಪುರ ಜಿಲ್ಲೆ; ಗೌರಿಬಿದನೂರು ಕೈಗಾರಿಕಾ ಪ್ರದೇಶ

ಬಂಡವಾಳ ಹೂಡಿಕೆ ₹ ಕೋಟಿಗಳಲ್ಲಿ : 125

ಉದ್ಯೋಗ ಅವಕಾಶ: 400

ಸಂಸ್ಥೆಯ ಹೆಸರು: ರೆನ್ಸ್‌ ಬಯೊಟೆಕ್

ಸ್ಥಳ : ತುಮಕೂರು ಜಿಲ್ಲೆ; ವಸಂತನರಸಾಪುರ ಕೈಗಾರಿಕಾ ಪ್ರದೇಶ

ಬಂಡವಾಳ ಹೂಡಿಕೆ ₹ ಕೋಟಿಗಳಲ್ಲಿ : 96

ಉದ್ಯೋಗ ಅವಕಾಶ: 295

000 jobs created in Karnataka 3 73 industrial projects with an investment of Rs 3 935 crore get green signal 935 ಕೋಟಿ ರೂ ಹೂಡಿಕೆಯ 73 ಕೈಗಾರಿಕಾ ಯೋಜನೆಗಳಿಗೆ ಗ್ರೀನ್‌ ಸಿಗ್ನಲ್‌ Over 14 ಕರ್ನಾಟಕದಲ್ಲಿ 14 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ
Share. Facebook Twitter LinkedIn WhatsApp Email

Related Posts

ಹುತಾತ್ಮ ಅರಣ್ಯ ಇಲಾಖೆ ನೌಕರರ ಕುಟುಂಬಕ್ಕೆ ಪರಿಹಾರ ಹೆಚ್ಚಳ: ಸಂತೋಷ್ ಕುಮಾರ್ ಸರ್ಕಾರಕ್ಕೆ ಅಭಿನಂದನೆ ಸಲ್ಲಿಕೆ

11/09/2025 10:50 PM1 Min Read

ಸಾಗರದ ಕೊಗಾರಿನಲ್ಲಿ ಅರಣ್ಯ ಹುತಾತ್ಮರ ದಿನ ಆಚರಣೆ, ಗೌರವ ನಮನ ಸಲ್ಲಿಸಿದ ACF ಮಹೇಶ್ ಖಾತೇದಾರ್

11/09/2025 10:30 PM1 Min Read

ಶಿವಮೊಗ್ಗ: ಸಾಗರ ತಾಲ್ಲೂಕು ಕಸಾಪ ಅಧ್ಯಕ್ಷ, ಕವಿ ವಿ.ಟಿ ಸ್ವಾಮಿ ಅವರ ಕವನ ಸಂಕಲನಕ್ಕೆ ‘ಕಾವ್ಯಸಿರಿ ರಾಷ್ಟ್ರೀಯ ಪುರಸ್ಕಾರ’

11/09/2025 9:41 PM1 Min Read
Recent News

ಹುತಾತ್ಮ ಅರಣ್ಯ ಇಲಾಖೆ ನೌಕರರ ಕುಟುಂಬಕ್ಕೆ ಪರಿಹಾರ ಹೆಚ್ಚಳ: ಸಂತೋಷ್ ಕುಮಾರ್ ಸರ್ಕಾರಕ್ಕೆ ಅಭಿನಂದನೆ ಸಲ್ಲಿಕೆ

11/09/2025 10:50 PM

ಸಾಗರದ ಕೊಗಾರಿನಲ್ಲಿ ಅರಣ್ಯ ಹುತಾತ್ಮರ ದಿನ ಆಚರಣೆ, ಗೌರವ ನಮನ ಸಲ್ಲಿಸಿದ ACF ಮಹೇಶ್ ಖಾತೇದಾರ್

11/09/2025 10:30 PM

ಚಾರ್ಲಿ ಕಿರ್ಕ್ ಹತ್ಯೆ ಶಂಕಿತ ವ್ಯಕ್ತಿಯ ಮೊದಲ ಪೋಟೋ ಬಿಡುಗಡೆ ಮಾಡಿದ FBI | Charlie Kirk Murder Case

11/09/2025 10:18 PM

SHOCKING : ಪತ್ನಿ ಮತ್ತು ಆಕೆಯ ಪ್ರಿಯಕರನ ರುಂಡ ಕತ್ತರಿಸಿ ಪೊಲೀಸ್ ಠಾಣೆಗೆ ತಂದ ಪತಿ

11/09/2025 10:11 PM
State News
KARNATAKA

ಹುತಾತ್ಮ ಅರಣ್ಯ ಇಲಾಖೆ ನೌಕರರ ಕುಟುಂಬಕ್ಕೆ ಪರಿಹಾರ ಹೆಚ್ಚಳ: ಸಂತೋಷ್ ಕುಮಾರ್ ಸರ್ಕಾರಕ್ಕೆ ಅಭಿನಂದನೆ ಸಲ್ಲಿಕೆ

By kannadanewsnow0911/09/2025 10:50 PM KARNATAKA 1 Min Read

ಶಿವಮೊಗ್ಗ: ಇಂದು ರಾಷ್ಟ್ರೀಯ ಹುತಾತ್ಮರ ದಿನದಂದೇ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಹುತಾತ್ಮ ಅರಣ್ಯ ಇಲಾಖೆ ನೌಕರರ ಕುಟುಂಬಕ್ಕೆ…

ಸಾಗರದ ಕೊಗಾರಿನಲ್ಲಿ ಅರಣ್ಯ ಹುತಾತ್ಮರ ದಿನ ಆಚರಣೆ, ಗೌರವ ನಮನ ಸಲ್ಲಿಸಿದ ACF ಮಹೇಶ್ ಖಾತೇದಾರ್

11/09/2025 10:30 PM

ಶಿವಮೊಗ್ಗ: ಸಾಗರ ತಾಲ್ಲೂಕು ಕಸಾಪ ಅಧ್ಯಕ್ಷ, ಕವಿ ವಿ.ಟಿ ಸ್ವಾಮಿ ಅವರ ಕವನ ಸಂಕಲನಕ್ಕೆ ‘ಕಾವ್ಯಸಿರಿ ರಾಷ್ಟ್ರೀಯ ಪುರಸ್ಕಾರ’

11/09/2025 9:41 PM

ಈವರೆಗೆ ‘ಕರ್ನಾಟಕ ರತ್ನ ಪ್ರಶಸ್ತಿ’ಗೆ ಯಾರೆಲ್ಲ ಭಾಜನ ಗೊತ್ತಾ? ಇಲ್ಲಿದೆ ಪಟ್ಟಿ

11/09/2025 9:01 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.