Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ರಾಜ್ಯದಲ್ಲಿ ಸಾರಿಗೆ ಬಸ್ ಮುಷ್ಕರ ಮುಂದೂಡಿಕೆ : ನೌಕರರು ಈ ಕ್ಷಣದಿಂದಲೇ ಕರ್ತವ್ಯಕ್ಕೆ ಹಾಜರಾಗಿ.!

05/08/2025 4:19 PM

BREAKING : CBSE 10ನೇ ತರಗತಿ ಪೂರಕ ಪರೀಕ್ಷೆ ಫಲಿತಾಂಶ ಬಿಡುಗಡೆ ; ಈ ರೀತಿ ರಿಸಲ್ಟ್ ಚೆಕ್ ಮಾಡಿ

05/08/2025 4:18 PM

BREAKING : ರಾಜ್ಯದಲ್ಲಿ ಈ ಕ್ಷಣದಿಂದಲೇ ಸಾರಿಗೆ ನೌಕರರ ಬಸ್ `ಮುಷ್ಕರ ಮುಂದೂಡಿಕೆ’ : ಅನಂತ್ ಸುಬ್ಬರಾವ್ ಹೇಳಿಕೆ

05/08/2025 4:16 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮೈಕ್ರೋ ಫೈನಾನ್ಸ್ ನಿಯಂತ್ರಣದ ಆದೇಶ ಕಟ್ಟುನಿಟ್ಟಾಗಿ ಪಾಲನೆಯಾಗಬೇಕು: ಮಂಡ್ಯ ಡಿಸಿ ಡಾ| ಕುಮಾರ
KARNATAKA

ಮೈಕ್ರೋ ಫೈನಾನ್ಸ್ ನಿಯಂತ್ರಣದ ಆದೇಶ ಕಟ್ಟುನಿಟ್ಟಾಗಿ ಪಾಲನೆಯಾಗಬೇಕು: ಮಂಡ್ಯ ಡಿಸಿ ಡಾ| ಕುಮಾರ

By kannadanewsnow0917/02/2025 6:39 PM

ಮಂಡ್ಯ: ಮೈಕ್ರೋಫೈನಾನ್ಸ್ ಸಂಸ್ಥೆಗಳು, ಸಾಲ ನೀಡಿಕೆ ಏಜೆನ್ಸಿಗಳು ಹಾಗೂ ಲೇವಾದೇವಿಗಾರರು ಸಾಲ ವಸೂಲಾತಿ ಸಂದರ್ಭದಲ್ಲಿ ನೀಡುವ ಕಿರುಕುಳ ಹಾಗೂ ಬಲವಂತದ ವಸೂಲಾತಿಯನ್ನು ತಪ್ಪಿಸಲು ಸರ್ಕಾರ ಕರ್ನಾಟಕ ( ಮೈಕ್ರೋ) ಸಾಲ ಮತ್ತು ಸಣ್ಣ ಸಾಲ ಬಲವಂತದ ಕ್ರಮಗಳ ಪ್ರತಿಬಂಧಕ ಅಧ್ಯಾದೇಶ 2025 ನ್ನು ಜಾರಿಗೊಳಿಸಿದ್ದು, ಜಿಲ್ಲಯಲ್ಲಿ ಈ ಅಧ್ಯಾದೇಶ ಕಟ್ಟುನಿಟ್ಟಾಗಿ ಅನುಷ್ಠಾನವಾಗಬೇಕು ಎಂದು ಜಿಲ್ಲಾಧಿಕಾರಿ ಡಾ: ಕುಮಾರ ಅವರು ತಿಳಿಸಿದರು.

ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಂದಾಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು ಕರ್ನಾಟಕ ( ಮೈಕ್ರೋ) ಸಾಲ ಮತ್ತು ಸಣ್ಣ ಸಾಲ ಬಲವಂತದ ಕ್ರಮಗಳ ಪ್ರತಿಬಂಧಕ ಅಧ್ಯಾದೇಶ 2025 ದಡಿ ಆರ್.ಬಿ.ಐ ಯಡಿ ನೊಂದಣಿಯಾಗಿರುವ ಹಣಕಾಸು ಸಂಸ್ಥೆಗಳು ಹಾಬರುವುದಿಲ್ಲ. ನೊಂದಣಿಯಾಗಿರುವ ಸಂಸ್ಥೆಗಳು ಸಾಲ ವಸೂಲಾತಿಯನ್ನು ಆರ್.ಬಿ.ಐ ನಿಯಮದಂತೆ ವಸೂಲಿ ಮಾಡಬೇಕು. ಉಲ್ಲಂಘನೆ ಕಂಡುಬಂದಲ್ಲಿ ಬಿ,ಎನ್.ಎಸ್ ಕಾಯ್ದೆ ಅಡಿ ದೂರು ದಾಖಲಿಸಬಹುದು ಎಂದರು

ನೊಂದಣಿಯಾಗಿರುವ ಅಥವಾ ನೊಂದಣಿಯಾಗದಿರುವ ಸಂಸ್ಥೆಗಳು ಸಾಲ ಅಥವಾ ಬಡ್ಡಿ ವಸೂಲಾತಿ ಸಂದರ್ಭದಲ್ಲಿ ಈ ಆಸ್ತಿಯನ್ನು ಅಡಮಾನ ಮಾಡಿಕೊಳ್ಳಲಾಗಿದೆ ಎಂದು ಗೋಡೆಗಳ ಮೇಲೆ ಬರೆಯುವ ಅಮಾನವೀಯ ಕೃತ್ಯ ಕಂಡುಬಂದರೆ ಜಿಲ್ಲಾಡಳಿತ ಸಹಿಸುವುದಿಲ್ಲ ಅವರನ್ನು ಪತ್ತೆ ಹಚ್ಚಿ ಕಾನೂನು ರೀತ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನೊಂದಣಿ ಕಡ್ಡಾಯ: ಮೈಕ್ರೋ ಫೈನಾನ್ಸ್ ಸಂಸ್ಥೆಗಳು, ಸಾಲ ನೀಡಿಕೆ ಏಜೆನ್ಸಿಗಳು ಅಥವಾ ಲೇವಾದೇವಿದಾರರುಗಳು 30 ದಿನಗಳೊಳಗೆ ಅವುಗಳು ಕಾರ್ಯನಿರ್ವಹಿಸುತ್ತಿರುವ ಅಥವಾ ಮುಂದೆ ಕಾರ್ಯನಿರ್ವಹಿಸಲು ಉದ್ದೇಶಿಸಿರುವ ಗ್ರಾಮಗಳು/ಪಟ್ಟಣಗಳ ಮಾಹಿತಿ. ವಿಧಿಸಿರುವ ಅಥವಾ ವಿಧಿಸಲು ಉದ್ದೇಶಿಸಿರುವ ಬಡ್ಡಿ ದರ. ಯುಕ್ತ ಜಾಗರೂಕ ನಿರ್ವಹಣಾ ಮತ್ತು ವಸೂಲಾತಿ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿ ನೊಂದಣಿ ಮಾಡಿಕೊಳ್ಳಬೇಕು ಎಂದರು

ವಸೂಲಾತಿ ಪ್ರಕ್ರಿಯೆಯನ್ನು ನಿರ್ವಹಿಸಲು ಅಧಿಕೃತಗೊಳಿಸಲಾದ ವ್ಯಕ್ತಿಗಳ ಪಟ್ಟಿ, ಸಾಲಗಾರನ ವಿವರಗಳನ್ನು (ಹೆಸರು, ವಿಳಾಸ, ಒಟ್ಟು ಸಾಲ, ವಸೂಲಾದ ಮೊತ್ತ, ಉಳಿದ ಬಾಕಿ) ಲಿಖಿತ ಮುಚ್ಚಳಿಕೆಯಲ್ಲಿ ಸಲ್ಲಿಸಿ ನೊಂದಣಿ ಮಾಡಿಕೊಳ್ಳುವುದು. ಸದರಿ ನೊಂದಣಿಯು ಒಂದು ವರ್ಷಕ್ಕೆ ಒಳಪಟ್ಟಿರುತ್ತದೆ ನಂತರ ನೊಂದಣಿಯನ್ನು ನವೀಕರಣ ಮಾಡಿಕೊಳ್ಳಬೇಕು ಎಂದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನೊಂದಣಿ ಮಾಡಿಕೊಳ್ಳದ ಸ್ವಸಹಾಯ ಗುಂಪುಗಳು, ಮೈಕ್ರೋ ಫೈನಾನ್ಸ್ ಸಂಸ್ಥೆಗಳು, ಸಾಲ ನೀಡಿಕೆ ಏಜೆನ್ಸಿಗಳು ಅಥವಾ ಲೇವಾದೇವಿದಾರರುಗಳು ಸಾಲ ನೀಡಲು ಅಥವಾ ವಸೂಲು ಮಾಡುವ ಅಧಿಕಾರ ಹೊಂದಿರುವುದಿಲ್ಲ. ಈ ಅಧ್ಯಾದೇಶದಡಿ ಯಾವುದೇ ಆಸ್ತಿಯನ್ನು ಅಡಮಾನ ಮಾಡಿಕೊಂಡು ಸಾಲ ನೀಡಲು ಅವಕಾಶವಿರುವುದಿಲ್ಲಿ ಎಂದರು.

ನೊAದಣಿ ಮಾಡಿಕೊಳ್ಳದೇ ಬಲವಂತ ವಸೂಲಾತಿ ಮಾಡುತ್ತಿರುವ ಪ್ರಕರಣಗಳು ಕಂಡು ಬಂದಲ್ಲಿ ಅಥವಾ ದೂರುಗಳು ಬಂದಲ್ಲಿ ಈ ಅಧ್ಯಾದೇಶದಲ್ಲಿ ತಿಳಿಸಿರುವಂತೆ ದೂರು ದಾಖಲಾಸಿಲಾಗುವುದು ಹಾಗೂ ಈ ಪ್ರಕರಣದಲ್ಲಿ 10 ವರ್ಷಗಳ ಜೈಲುವಾಸ ಹಾಗೂ 5 ಲಕ್ಷ ರೂ ವರೆಗೂ ದಂಡ ವಿಧಿಸಲು ಅವಕಾಶವಿದೆ ಎಂದರು.

ನೊAದಣಿ ಮಾಡಿಕೊಂಡು ಸಾಲ ನೀಡುವ ಸಂದರ್ಭದಲ್ಲಿ ವಿಧಿಸುವ ಬಡ್ಡಿ, ವಸೂಲಾತಿಗೆ ಸಂಬಂಧಿಸಿದಂತೆ ಎಲ್ಲಾ ವಿವರಗಳನ್ನು ಕನ್ನಡದಲ್ಲಿ ಲಿಖಿತವಾಗಿ ಸಾಲಗಾರರಿಗೆ ತಿಳಿಸಬೇಕು. ಬಲವಂತ ವಸೂಲಾತಿ ಕಂಡುಬಂದಲ್ಲಿ ಡಿ.ಒ.ಎಸ್.ಪಿ ತಮ್ಮ ಹಂತದಲ್ಲಿ ಸ್ವಯಂ ದೂರು ದಾಖಲಿಸಲು ಸಹ ಅವಕಾಶವಿದೆ ಎಂದರು.

ಸಭೆಯಲ್ಲಿ ಅಪರ ಪೊಲೀಸ್ ವರಿಷ್ಠಾಧಿಕಾರಿ ಗಂಗಾಧರ್ ಸ್ವಾಮಿ, ತಿಮ್ಮಯ್ಯ, ಉಪವಿಭಾಗಾಧಿಕಾರಿ ಶ್ರೀನಿವಾಸ್, ಶಿವಮೂರ್ತಿ, ಲೀಡ್ ಬ್ಯಾಂಕ್ ಮ್ಯಾನೇಜರ್ ಅರುಣ್ ಕುಮಾರ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

BREAKING: ಮೈಸೂರು ವಿವಾದಿತ ಪೋಸ್ಟ್ ನಿಂದ ಗಲಾಟೇ ಕೇಸ್: ಆರೋಪಿ ಸತೀಶ್ ಗೆ ಜಾಮೀನು ಮಂಜೂರು

ಹುಬ್ಬಳ್ಳಿಯಲ್ಲೊಂದು ವಿಚಿತ್ರ ‘ಪ್ರೇಮ ಕಹಾನಿ’: 50 ವರ್ಷದ ‘ಅಂಕಲ್ ಮದುವೆ’ಯಾದ 18ರ ಯುವತಿ

Share. Facebook Twitter LinkedIn WhatsApp Email

Related Posts

BREAKING : ರಾಜ್ಯದಲ್ಲಿ ಸಾರಿಗೆ ಬಸ್ ಮುಷ್ಕರ ಮುಂದೂಡಿಕೆ : ನೌಕರರು ಈ ಕ್ಷಣದಿಂದಲೇ ಕರ್ತವ್ಯಕ್ಕೆ ಹಾಜರಾಗಿ.!

05/08/2025 4:19 PM1 Min Read

BREAKING : ರಾಜ್ಯದಲ್ಲಿ ಈ ಕ್ಷಣದಿಂದಲೇ ಸಾರಿಗೆ ನೌಕರರ ಬಸ್ `ಮುಷ್ಕರ ಮುಂದೂಡಿಕೆ’ : ಅನಂತ್ ಸುಬ್ಬರಾವ್ ಹೇಳಿಕೆ

05/08/2025 4:16 PM1 Min Read

BREAKING: ಸಾರಿಗೆ ನೌಕರರ ಮುಷ್ಕರ ಮುಂದೂಡಿಕೆ: ಅನಂತ ಸುಬ್ಬರಾವ್

05/08/2025 4:14 PM1 Min Read
Recent News

BREAKING : ರಾಜ್ಯದಲ್ಲಿ ಸಾರಿಗೆ ಬಸ್ ಮುಷ್ಕರ ಮುಂದೂಡಿಕೆ : ನೌಕರರು ಈ ಕ್ಷಣದಿಂದಲೇ ಕರ್ತವ್ಯಕ್ಕೆ ಹಾಜರಾಗಿ.!

05/08/2025 4:19 PM

BREAKING : CBSE 10ನೇ ತರಗತಿ ಪೂರಕ ಪರೀಕ್ಷೆ ಫಲಿತಾಂಶ ಬಿಡುಗಡೆ ; ಈ ರೀತಿ ರಿಸಲ್ಟ್ ಚೆಕ್ ಮಾಡಿ

05/08/2025 4:18 PM

BREAKING : ರಾಜ್ಯದಲ್ಲಿ ಈ ಕ್ಷಣದಿಂದಲೇ ಸಾರಿಗೆ ನೌಕರರ ಬಸ್ `ಮುಷ್ಕರ ಮುಂದೂಡಿಕೆ’ : ಅನಂತ್ ಸುಬ್ಬರಾವ್ ಹೇಳಿಕೆ

05/08/2025 4:16 PM

BREAKING: ಸಾರಿಗೆ ನೌಕರರ ಮುಷ್ಕರ ಮುಂದೂಡಿಕೆ: ಅನಂತ ಸುಬ್ಬರಾವ್

05/08/2025 4:14 PM
State News
KARNATAKA

BREAKING : ರಾಜ್ಯದಲ್ಲಿ ಸಾರಿಗೆ ಬಸ್ ಮುಷ್ಕರ ಮುಂದೂಡಿಕೆ : ನೌಕರರು ಈ ಕ್ಷಣದಿಂದಲೇ ಕರ್ತವ್ಯಕ್ಕೆ ಹಾಜರಾಗಿ.!

By kannadanewsnow5705/08/2025 4:19 PM KARNATAKA 1 Min Read

ಬೆಂಗಳೂರು : ರಾಜ್ಯದಲ್ಲಿ ಸಾರಿಗೆ ಮುಷ್ಕರ ಮುಂದೂಡಿಕೆ ಮಾಡಲಾಗಿದ್ದು, ಈ ಕ್ಷಣದಿಂದಲೇ ನೌಕರರು ಕರ್ತವ್ಯಕ್ಕೆ ಹಾಜರಾಗುವಂತೆ ಎಂದು ಜಂಟಿ ಕ್ರಿಯಾ…

BREAKING : ರಾಜ್ಯದಲ್ಲಿ ಈ ಕ್ಷಣದಿಂದಲೇ ಸಾರಿಗೆ ನೌಕರರ ಬಸ್ `ಮುಷ್ಕರ ಮುಂದೂಡಿಕೆ’ : ಅನಂತ್ ಸುಬ್ಬರಾವ್ ಹೇಳಿಕೆ

05/08/2025 4:16 PM

BREAKING: ಸಾರಿಗೆ ನೌಕರರ ಮುಷ್ಕರ ಮುಂದೂಡಿಕೆ: ಅನಂತ ಸುಬ್ಬರಾವ್

05/08/2025 4:14 PM

ಗಮನಿಸಿ : ‘ರೇಷನ್ ಕಾರ್ಡ್’ ನಲ್ಲಿ ಹೆಂಡ್ತಿ, ಮಕ್ಕಳ ಹೆಸರು ಸೇರಿಸಲು ಜಸ್ಟ್ ಹೀಗೆ ಮಾಡಿ

05/08/2025 4:07 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.