Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: 2008ರ ಮಾಲೆಗಾಂವ್ ಸ್ಫೋಟ ಪ್ರಕರಣ: ಪ್ರಜ್ಞಾ ಠಾಕೂರ್ ಭವಿಷ್ಯ ಇಂದು ನಿರ್ಧಾರ | Malagaon Blast case

31/07/2025 8:17 AM

BREAKING : ಕುಡಿಯೋಕೆ ಹಣ ಕೊಡ್ಲಿಲ್ಲ ಎಂದು ತಾಯಿಯನ್ನೇ ಕೊಡಲಿಯಿಂದ ಕೊಚ್ಚಿ ಕೊಂದ ಮಗ : ಆರೋಪಿ ಅರೆಸ್ಟ್

31/07/2025 8:15 AM

BREAKING : ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣ : ಅಸ್ತಿಪಂಜರಿಗಳಿಗಾಗಿ ಇಂದು ಸಹ ಶೋಧ ಕಾರ್ಯ ಮುಂದುವರಿಕೆ

31/07/2025 8:03 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ವಿಪಕ್ಷಗಳ ನಾಯಕ’ರು ಉಪ ಚುನಾವಣೆ ಸೋಲಿನ ನೈತಿಕತೆ ಹೊತ್ತು ರಾಜೀನಾಮೆ ನೀಡಿ: ರಮೇಶ್ ಬಾಬು ಆಗ್ರಹ
KARNATAKA

‘ವಿಪಕ್ಷಗಳ ನಾಯಕ’ರು ಉಪ ಚುನಾವಣೆ ಸೋಲಿನ ನೈತಿಕತೆ ಹೊತ್ತು ರಾಜೀನಾಮೆ ನೀಡಿ: ರಮೇಶ್ ಬಾಬು ಆಗ್ರಹ

By kannadanewsnow0923/11/2024 4:56 PM

ಬೆಂಗಳೂರು: ಕರ್ನಾಟಕದ ಪ್ರಗತಿಪಥದ ಮುಂಚೂಣಿಯನ್ನು ವಹಿಸಿಕೊಂಡಿರುವ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಇವರ ವಿರುದ್ಧ ವೈಯಕ್ತಿಕ ತೇಜೋವದೆಗಳನ್ನು ಮಾಡಿಕೊಂಡು, ನಿಂದನೆ ಮತ್ತು ಆರೋಪಗಳನ್ನೇ ತಮ್ಮ ಸಾಧನೆ ಎಂದು ಬಿಂಬಿಸಿಕೊಂಡ ವಿಪಕ್ಷ ನಾಯಕರುಗಳಿಗೆ ಉಪಚುನಾವಣೆಯ ಫಲಿತಾಂಶ ಒಂದು ಪಾಠವಾಗಲಿ. ವಿಪಕ್ಷಗಳ ನಾಯಕರು ಈ ಚುನಾವಣಾ ಸೋಲಿನ ನೈತಿಕತೆಯನ್ನು ಒಪ್ಪಿಕೊಂಡು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವುದರ ಮೂಲಕ ಉಪಚುನಾವಣೆಯ ಮತದಾರರ ಆದೇಶಕ್ಕೆ ಗೌರವ ಸಲ್ಲಿಸುವಂತೆ ಮಾಜಿ ಪರಿಷತ್ ಸದಸ್ಯ, ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಒತ್ತಾಯಿಸಿದ್ದಾರೆ.

ಇಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ರಾಜ್ಯದ 3 ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗೆಲುವು ನೀಡುವ ಮೂಲಕ ಮತದಾರರು ನಮ್ಮ ಪಕ್ಷದ ಗ್ಯಾರಂಟಿ ಯೋಜನೆಗಳಿಗೆ ಅನುಮೋದನೆ ನೀಡಿರುತ್ತಾರೆ. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ದ್ವೇಷಪೂರಿತ ಭಾಷಣಗಳನ್ನು ತಿರಸ್ಕರಿಸಿ, ಸುಳ್ಳು ಪ್ರಚಾರಗಳಿಗೆ ಒಳಗಾಗದೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರ ನಾಯಕತ್ವಕ್ಕೆ ಮನ್ನಣೆ ನೀಡಿರುತ್ತಾರೆ. ಕರ್ನಾಟಕದ ಬಿಜೆಪಿ ಬಾಲಭವನದ ನಾಯಕರಾದ ವಿಜಯೇಂದ್ರ, ಅಸಮರ್ಥ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಮತ್ತು ಅವಕಾಶವಾದದ ನಾಯಕ ಹೆಚ್.ಡಿ.ಕುಮಾರಸ್ವಾಮಿ ರವರ ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರದ ಮೇಲಿನ ಆರೋಪಗಳಿಗೆ ಉಪಚುನಾವಣೆಯ ಫಲಿತಾಂಶದ ಮೂಲಕ ಮತದಾರರು ಉತ್ತರ ನೀಡಿರುತ್ತಾರೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷವು ಮೂರೂ ಕ್ಷೇತ್ರದ ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತದೆ ಎಂದಿದ್ದಾರೆ.

ಕರ್ನಾಟಕದ ಭಾರತೀಯ ಜನತಾ ಪಕ್ಷದಲ್ಲಿ ಗುಂಪುಗಾರಿಕೆಯು ಮಿತಿಮೀರಿದ್ದು, ಉಪಚುನಾವಣೆಯ ಫಲಿತಾಂಶ ಬಂಡಾಯ ನಾಯಕರಿಗೆ ಮತ್ತಷ್ಟು ಶಕ್ತಿಯನ್ನು ನೀಡಿರುತ್ತದೆ! ದೆಹಲಿ ದಂಡಯಾತ್ರೆಯ ಮೂಲಕ ಕುರ್ಚಿಯನ್ನು ಉಳಿಸಿಕೊಳ್ಳುವ ವಿಜಯೇಂದ್ರರವರ ಪ್ರಯತ್ನ ವಿಫಲವಾಗಿದ್ದು, ಬೆಳಗಾವಿ ಅಧಿವೇಶನಕ್ಕೆ ಮುಂಚೆಯೇ ರಾಜೀನಾಮೆ ನೀಡುವ ಅನಿವಾರ್ಯತೆ ಉಂಟಾಗಿರುತ್ತದೆ ಎಂದು ಹೇಳಿದ್ದಾರೆ.

ಉಪಚುನಾವಣೆಯ ಫಲಿತಾಂಶವು ರಾಜ್ಯ ಬಿಜೆಪಿ ಅಧ್ಯಕ್ಷರಾದ ವಿಜಯೇಂದ್ರ ಮತ್ತು ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಹಾಗೂ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ರವರು ತಮ್ಮ ಸ್ಥಾನಗಳನ್ನು ತ್ಯಜಿಸಲು ಮುನ್ನುಡಿ ಬರೆದಿರುತ್ತದೆ. ಚುನಾವಣೆಯಲ್ಲಿ ರಾಜ್ಯದ ಅಭಿವೃದ್ಧಿ ಅಥವಾ ಕ್ಷೇತ್ರದ ಅಭಿವೃದ್ಧಿ ವಿಷಯಗಳನ್ನು ಮುನ್ನೆಲೆಗೆ ತರುವ ಬದಲು ಧಾರ್ಮಿಕ ಮತ್ತು ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ಎಳಸುತನದೊಂದಿಗೆ ಉಪಚುನಾವಣೆಗಳನ್ನು ನಡೆಸಿದ ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಮತ್ತೊಮ್ಮೆ ಮತದಾರರು ತಮ್ಮ ತೀರ್ಪಿನ ಮುಖಾಂತರ ಸರಿಯಾದ ಸಂದೇಶವನ್ನು ನೀಡಿರುತ್ತಾರೆ. ಕರ್ನಾಟಕದ ಪ್ರಗತಿಪಥದ ಮುಂಚೂಣಿಯನ್ನು ವಹಿಸಿಕೊಂಡಿರುವ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇವರ ವಿರುದ್ಧ ವೈಯಕ್ತಿಕ ತೇಜೋವದೆಗಳನ್ನು ಮಾಡಿಕೊಂಡು, ನಿಂದನೆ ಮತ್ತು ಆರೋಪಗಳನ್ನೇ ತಮ್ಮ ಸಾಧನೆ ಎಂದು ಬಿಂಬಿಸಿಕೊಂಡ ವಿಪಕ್ಷ ನಾಯಕರುಗಳಿಗೆ ಉಪಚುನಾವಣೆಯ ಫಲಿತಾಂಶ ಒಂದು ಪಾಠವಾಗಲಿ. ವಿಪಕ್ಷಗಳ ನಾಯಕರು ಈ ಚುನಾವಣಾ ಸೋಲಿನ ನೈತಿಕತೆಯನ್ನು ಒಪ್ಪಿಕೊಂಡು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವುದರ ಮೂಲಕ ಉಪಚುನಾವಣೆಯ ಮತದಾರರ ಆದೇಶಕ್ಕೆ ಗೌರವ ಸಲ್ಲಿಸಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷವು ಒತ್ತಾಯಿಸಿದ್ದಾರೆ.

ತನ್ನ ಆಡಳಿತದಲ್ಲಿ ಕೋವಿಡ್ ಹಗರಣ ಒಳಗೊಂಡಂತೆ ಅನೇಕ ಹಗರಣಗಳಿಗೆ ಒಳಗಾಗಿರುವ ಭಾರತೀಯ ಜನತಾ ಪಕ್ಷವು, ನ್ಯಾಯಾಂಗ ತನಿಖೆಯ ಒಪ್ಪಿಕೊಂಡು ಆರೋಪಿತರ ಮೇಲೆ ಕ್ರಮ ಕೈಗೊಂಡು ರಾಜ್ಯ ಸರ್ಕಾರಕ್ಕೆ ಸಹಕಾರ ನೀಡಲಿ. ಧಾರ್ಮಿಕ ವಿಷಯದ ಮೇಲೆ ಜನರ ದಾರಿ ತಪ್ಪಿಸುವ ಬದಲು ಸರ್ಕಾರದ ಪ್ರಗತಿಪರ ಕಾರ್ಯಕ್ರಮಗಳನ್ನು ಒಪ್ಪಿಕೊಂಡು ರಾಜ್ಯದ ಅಭಿವೃದ್ಧಿಯ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಸಹಕಾರ ನೀಡಲಿ. ರಾಜ್ಯದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಈಗ ಜೆಡಿಎಸ್ ಪಕ್ಷಕ್ಕೆ ಬಂದಿರುತ್ತದೆ. ಇವೆಲ್ಲಕ್ಕಿಂತ ಮೊದಲು ರಾಜ್ಯ ಬಿಜೆಪಿ ತನ್ನ ಗುಂಪುಗಾರಿಕೆಯಿಂದ ಆಚೆ ಬರಲಿ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷವು ಆಶಿಸುತ್ತದೆ ಎಂದಿದ್ದಾರೆ.

ನಾನು 2 ಬಾರಿ ಸಿಎಂ, ಡಿಸಿಎಂ ಆಗಿದ್ದೇನೆ, ಯಾವತ್ತೂ ಸೊಕ್ಕು, ಅಹಂಕಾರ ಮಾಡಿಲ್ಲ: ಸಿಎಂ ಸಿದ್ಧರಾಮಯ್ಯ

ಈ ಉಪಚುನಾವಣೆ ಫಲಿತಾಂಶ, 2028ರ ಚುನಾವಣೆ ಫಲಿತಾಂಶಕ್ಕೆ ರಾಜ್ಯದ ಜನರ ಮುನ್ನುಡಿ: DKS

Share. Facebook Twitter LinkedIn WhatsApp Email

Related Posts

BREAKING : ಕುಡಿಯೋಕೆ ಹಣ ಕೊಡ್ಲಿಲ್ಲ ಎಂದು ತಾಯಿಯನ್ನೇ ಕೊಡಲಿಯಿಂದ ಕೊಚ್ಚಿ ಕೊಂದ ಮಗ : ಆರೋಪಿ ಅರೆಸ್ಟ್

31/07/2025 8:15 AM1 Min Read

BREAKING : ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣ : ಅಸ್ತಿಪಂಜರಿಗಳಿಗಾಗಿ ಇಂದು ಸಹ ಶೋಧ ಕಾರ್ಯ ಮುಂದುವರಿಕೆ

31/07/2025 8:03 AM1 Min Read

ಅನುಮತಿಯಿಲ್ಲದೆ ಪ್ರದರ್ಶನ: ‘ಜರ್ಮನ್ ಇನ್ಫುಲೆನ್ಸರ್’ ನನ್ನು ಚರ್ಚ್ ಸ್ಟ್ರೀಟ್ ನಿಂದ ಹೊರಹೋಗುವಂತೆ ಮಾಡಿದ ಬೆಂಗಳೂರು ಪೊಲೀಸರು

31/07/2025 7:57 AM1 Min Read
Recent News

BREAKING: 2008ರ ಮಾಲೆಗಾಂವ್ ಸ್ಫೋಟ ಪ್ರಕರಣ: ಪ್ರಜ್ಞಾ ಠಾಕೂರ್ ಭವಿಷ್ಯ ಇಂದು ನಿರ್ಧಾರ | Malagaon Blast case

31/07/2025 8:17 AM

BREAKING : ಕುಡಿಯೋಕೆ ಹಣ ಕೊಡ್ಲಿಲ್ಲ ಎಂದು ತಾಯಿಯನ್ನೇ ಕೊಡಲಿಯಿಂದ ಕೊಚ್ಚಿ ಕೊಂದ ಮಗ : ಆರೋಪಿ ಅರೆಸ್ಟ್

31/07/2025 8:15 AM

BREAKING : ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣ : ಅಸ್ತಿಪಂಜರಿಗಳಿಗಾಗಿ ಇಂದು ಸಹ ಶೋಧ ಕಾರ್ಯ ಮುಂದುವರಿಕೆ

31/07/2025 8:03 AM

ಅನುಮತಿಯಿಲ್ಲದೆ ಪ್ರದರ್ಶನ: ‘ಜರ್ಮನ್ ಇನ್ಫುಲೆನ್ಸರ್’ ನನ್ನು ಚರ್ಚ್ ಸ್ಟ್ರೀಟ್ ನಿಂದ ಹೊರಹೋಗುವಂತೆ ಮಾಡಿದ ಬೆಂಗಳೂರು ಪೊಲೀಸರು

31/07/2025 7:57 AM
State News
KARNATAKA

BREAKING : ಕುಡಿಯೋಕೆ ಹಣ ಕೊಡ್ಲಿಲ್ಲ ಎಂದು ತಾಯಿಯನ್ನೇ ಕೊಡಲಿಯಿಂದ ಕೊಚ್ಚಿ ಕೊಂದ ಮಗ : ಆರೋಪಿ ಅರೆಸ್ಟ್

By kannadanewsnow0531/07/2025 8:15 AM KARNATAKA 1 Min Read

ಚಿಕ್ಕಮಗಳೂರು : ಹೆತ್ತ ತಾಯಿಯನ್ನೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಆಲ್ದುರು ಠಾಣೆಯ ಪೊಲೀಸರು ಹಂತಕ…

BREAKING : ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣ : ಅಸ್ತಿಪಂಜರಿಗಳಿಗಾಗಿ ಇಂದು ಸಹ ಶೋಧ ಕಾರ್ಯ ಮುಂದುವರಿಕೆ

31/07/2025 8:03 AM

ಅನುಮತಿಯಿಲ್ಲದೆ ಪ್ರದರ್ಶನ: ‘ಜರ್ಮನ್ ಇನ್ಫುಲೆನ್ಸರ್’ ನನ್ನು ಚರ್ಚ್ ಸ್ಟ್ರೀಟ್ ನಿಂದ ಹೊರಹೋಗುವಂತೆ ಮಾಡಿದ ಬೆಂಗಳೂರು ಪೊಲೀಸರು

31/07/2025 7:57 AM

BREAKING : ಬೆಂಗಳೂರಲ್ಲಿ ಕಿಲ್ಲರ್ ‘BMTC’ ಗೆ ವೃದ್ಧೆ ಬಲಿ : ಒಂದೇ ತಿಂಗಳಲ್ಲಿ ಮೂವರ ಸಾವು

31/07/2025 7:26 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.