ಒಡಿಶಾ: ಇಲ್ಲಿನ ಚೌಡಾವಾರ್ ಬಳಿಯಲ್ಲಿ ಬೆಂಗಳೂರಿನಿಂದ ಗುವಾಹಟಿಗೆ ಹೊರಟಿದ್ದಂತ ಕಾಮಾಕ್ಯ ರೈಲು ಹಳಿ ತಪ್ಪಿದೆ. ಈ ಪರಿಣಾಮ ಓರ್ವ ಪ್ರಯಾಣಿಕ ಸಾವನ್ನಪ್ಪಿ ಹಲವರು ಗಾಯಗೊಂಡಿರುವಂತ ಘಟನೆ ನಡೆದಿದೆ.
ಒಡಿಶಾದಲ್ಲಿನ ಚೌಡಾವಾರ್ ನಲ್ಲಿ ಕಾಮಾಕ್ಯ ರೈಲು ಹಳಿ ತಪ್ಪಿದೆ. ಈ ಪರಿಣಾಮ 11 ಬೋಗಿಗಳು ಅಪಘಾತಗೊಂಡಿದ್ದಾರೆ. ಬೆಂಗಳೂರಿನಿಂದ ಗುವಾಹಟಿಗೆ ಕಾಮಾಕ್ಯ ರೈಲು ತೆರಳುತ್ತಿತ್ತು. ಇಂತಹ ರೈಲು ಅಪಘಾತಕ್ಕೀಡಾಗಿದೆ.
ಪ್ರಾಥಮಿಕ ಮಾಹಿತಿಯಂತೆ 11 ಕೋಚ್ ಗಳು ಹಳಿ ತಪ್ಪಿರುವ ಮಾಹಿತಿ ಇದೆ. ಈ ರೈಲು ಅಪಘಾತದಲ್ಲಿ ಓರ್ವ ಪ್ರಯಾಣಿಕ ಸಾವನ್ನಪ್ಪಿದ್ದು, ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.