Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ರಾಜ್ಯದಲ್ಲಿ ಪವರ್ ಫೈಟ್ಗೆ ತೆರೆ ಎಳೆಯಲು ಮುಹೂರ್ತ ಫಿಕ್ಸ್ : ಕುತೂಹಲ ಮೂಡಿಸಿದ ಹೈಕಮಾಂಡ್ ನಡೆ!

05/05/2026 1:41 PM

BREAKING : ಬೀದರ್ ನಲ್ಲಿ ಅಮೃತ ಯೋಜನೆಯ ಗ್ಯಾಸ್‌ ಪೈಪ್‌ಲೈನ್‌ ಲೀಕಾಗಿ ಬೆಂಕಿ : ತಪ್ಪಿದ ಭಾರೀ ದುರಂತ!

05/05/2026 1:37 PM

BREAKING : ಧಾರವಾಡದಲ್ಲಿ ಬೌದ್ಧ ಸನ್ಯಾಸಿ ಕೊಲೆ ಪ್ರಕರಣ : ಮೂವರು ಆರೋಪಿಗಳು ಅರೆಸ್ಟ್!

05/05/2026 1:32 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಿವೃತ್ತಿಗೆ ಹತ್ತು ದಿನ ಬಾಕಿ ಇರುವಾಗಲೇ ಅಧಿಕಾರಿಯ ಆತ್ಮಹತ್ಯೆ; ಸಾವಿಗೂ ಮುನ್ನ ಸೆಲ್ಫಿ ವಿಡಿಯೋದಲ್ಲಿ ಕಟು ಸತ್ಯ ರಿಲೀವ್!
KARNATAKA

ನಿವೃತ್ತಿಗೆ ಹತ್ತು ದಿನ ಬಾಕಿ ಇರುವಾಗಲೇ ಅಧಿಕಾರಿಯ ಆತ್ಮಹತ್ಯೆ; ಸಾವಿಗೂ ಮುನ್ನ ಸೆಲ್ಫಿ ವಿಡಿಯೋದಲ್ಲಿ ಕಟು ಸತ್ಯ ರಿಲೀವ್!

By kannadanewsnow0921/03/2026 6:29 PM

ತುಮಕೂರು: ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರೊಬ್ಬರು ಕಚೇರಿಯಲ್ಲೇ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಜಿಲ್ಲೆಯ ಪಾವಗಡ ಪಟ್ಟಣದಲ್ಲಿ ನಡೆದಿದೆ. ಮೂಲತಃ ಪಾವಗಡದ ಗುಂಡಾರ್ಲಹಳ್ಳಿಯವರಾದ ಮಲ್ಲಿಕಾರ್ಜುನ್ (59) ಮೃತಪಟ್ಟ ಅಧಿಕಾರಿಯಾಗಿದ್ದು, ಇವರು ತಮ್ಮ ಸೇವೆಯಿಂದ ನಿವೃತ್ತಿ ಹೊಂದಲು ಕೇವಲ 10 ದಿನಗಳಷ್ಟೇ ಬಾಕಿ ಇತ್ತು.

ಸಾವಿಗೂ ಮುನ್ನ ಸೆಲ್ಫಿ ವಿಡಿಯೋ:

ಮಲ್ಲಿಕಾರ್ಜುನ್ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸೆಲ್ಫಿ ವಿಡಿಯೋವೊಂದನ್ನು ರೆಕಾರ್ಡ್ ಮಾಡಿದ್ದು, ಅದರಲ್ಲಿ ತಮ್ಮ ಸಾವಿಗೆ ಮೇಲಧಿಕಾರಿಗಳ ಕಿರುಕುಳವೇ ಕಾರಣ ಎಂದು ನೇರವಾಗಿ ಆರೋಪಿಸಿದ್ದಾರೆ.

“ನನ್ನ ಕುಟುಂಬದವರು ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ. ಅವರಿಗಾಗಿ ನಾನು ಏನಾದರೂ ಮಾಡಬೇಕಿತ್ತು, ಆದರೆ ಮಾಡಲು ಸಾಧ್ಯವಾಗುತ್ತಿಲ್ಲ. ಮೇಲಧಿಕಾರಿ ನೀಡಿದ ಕಿರುಕುಳದಿಂದ ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ. ನನ್ನ ಕುಟುಂಬದವರು ಯಾರ ಮೇಲೂ ಸೇಡು ತೀರಿಸಿಕೊಳ್ಳುವುದು ಬೇಡ, ಅವರಿಗೆ ದೇವರು ಮತ್ತು ಕಾನೂನೇ ಶಿಕ್ಷೆ ನೀಡಲಿ,” ಎಂದು ವಿಡಿಯೋದಲ್ಲಿ ನೋವು ತೋಡಿಕೊಂಡಿದ್ದಾರೆ.

ಘಟನೆಯ ಹಿನ್ನೆಲೆ:

ಮಲ್ಲಿಕಾರ್ಜುನ್ ಅವರು ಪಾವಗಡದ ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಅವರ ವಿರುದ್ಧ ಕೆಲವು ದೂರುಗಳು ಬಂದಿದ್ದ ಹಿನ್ನೆಲೆಯಲ್ಲಿ ಜಂಟಿ ನಿರ್ದೇಶಕರು ತನಿಖೆಗೆ ಆದೇಶಿಸಿದ್ದರು ಎನ್ನಲಾಗಿದೆ. ಈ ತನಿಖೆ ಮತ್ತು ಕೆಲಸದ ಒತ್ತಡದ ನಡುವೆ ಉಂಟಾದ ಕಿರುಕುಳವೇ ಅವರನ್ನು ಈ ಹಂತಕ್ಕೆ ತಳ್ಳಿದೆ ಎಂದು ಹೇಳಲಾಗುತ್ತಿದೆ.

ಕುಟುಂಬಸ್ಥರ ಆಕ್ರಂದನ:

ಮಗನ ಸಾವಿನಿಂದ ತಾಯಿ ಕೆಂಚಮ್ಮ ಅವರು ಕಂಗಾಲಾಗಿದ್ದಾರೆ. “ಊಟಕ್ಕೆ ಬರುವಂತೆ ಎಷ್ಟು ಬಾರಿ ಫೋನ್ ಮಾಡಿದರೂ ಮಗ ಕರೆ ಸ್ವೀಕರಿಸಲಿಲ್ಲ. ಅನುಮಾನಗೊಂಡು ಕಚೇರಿಗೆ ಹೋಗಿ ನೋಡಿದಾಗ ಬಾಗಿಲು ಒಳಗಿನಿಂದ ಹಾಕಿಕೊಂಡಿತ್ತು,” ಎಂದು ಅವರು ಕಣ್ಣೀರಿಟ್ಟಿದ್ದಾರೆ. ಮಲ್ಲಿಕಾರ್ಜುನ್ ಅವರು ಪತ್ನಿ ಹಾಗೂ ಮಕ್ಕಳನ್ನು ಅಗಲಿದ್ದಾರೆ.

ಪೊಲೀಸ್ ತನಿಖೆ:

ಮಲ್ಲಿಕಾರ್ಜುನ್ ಅವರ ಕುಟುಂಬಸ್ಥರು ನೀಡಿದ ದೂರು ಮತ್ತು ಸೆಲ್ಫಿ ವಿಡಿಯೋ ಆಧಾರದ ಮೇಲೆ, ಜಂಟಿ ನಿರ್ದೇಶಕರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 108ರ ಅಡಿಯಲ್ಲಿ (ಆತ್ಮಹತ್ಯೆಗೆ ಪ್ರಚೋದನೆ) ಪ್ರಕರಣ ದಾಖಲಿಸಲಾಗಿದೆ. “ಮೃತರ ವಿರುದ್ಧ ಇತ್ತೀಚೆಗೆ ತನಿಖೆ ಆರಂಭಿಸಲಾಗಿತ್ತು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ,” ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

7 ಜನ ವಿದ್ಯಾರ್ಥಿಗಳಿಗೆ ಮನಸೋಇಚ್ಛೆ ಥಳಿಸಿದ ಆರೋಪ: ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ

SHOCKING : ಒಂದೇ ದೇಹಕ್ಕೆ ಅಂಟಿಕೊಂಡಂತೆ ಜನಿಸಿದ ಅವಳಿ ಮಕ್ಕಳು, ಆಘಾತದಿಂದ ತಾಯಿ ಸಾವು

Share. Facebook Twitter LinkedIn WhatsApp Email

Related Posts

BREAKING : ರಾಜ್ಯದಲ್ಲಿ ಪವರ್ ಫೈಟ್ಗೆ ತೆರೆ ಎಳೆಯಲು ಮುಹೂರ್ತ ಫಿಕ್ಸ್ : ಕುತೂಹಲ ಮೂಡಿಸಿದ ಹೈಕಮಾಂಡ್ ನಡೆ!

05/05/2026 1:41 PM1 Min Read

BREAKING : ಬೀದರ್ ನಲ್ಲಿ ಅಮೃತ ಯೋಜನೆಯ ಗ್ಯಾಸ್‌ ಪೈಪ್‌ಲೈನ್‌ ಲೀಕಾಗಿ ಬೆಂಕಿ : ತಪ್ಪಿದ ಭಾರೀ ದುರಂತ!

05/05/2026 1:37 PM1 Min Read

BREAKING : ಧಾರವಾಡದಲ್ಲಿ ಬೌದ್ಧ ಸನ್ಯಾಸಿ ಕೊಲೆ ಪ್ರಕರಣ : ಮೂವರು ಆರೋಪಿಗಳು ಅರೆಸ್ಟ್!

05/05/2026 1:32 PM1 Min Read
Recent News

BREAKING : ರಾಜ್ಯದಲ್ಲಿ ಪವರ್ ಫೈಟ್ಗೆ ತೆರೆ ಎಳೆಯಲು ಮುಹೂರ್ತ ಫಿಕ್ಸ್ : ಕುತೂಹಲ ಮೂಡಿಸಿದ ಹೈಕಮಾಂಡ್ ನಡೆ!

05/05/2026 1:41 PM

BREAKING : ಬೀದರ್ ನಲ್ಲಿ ಅಮೃತ ಯೋಜನೆಯ ಗ್ಯಾಸ್‌ ಪೈಪ್‌ಲೈನ್‌ ಲೀಕಾಗಿ ಬೆಂಕಿ : ತಪ್ಪಿದ ಭಾರೀ ದುರಂತ!

05/05/2026 1:37 PM

BREAKING : ಧಾರವಾಡದಲ್ಲಿ ಬೌದ್ಧ ಸನ್ಯಾಸಿ ಕೊಲೆ ಪ್ರಕರಣ : ಮೂವರು ಆರೋಪಿಗಳು ಅರೆಸ್ಟ್!

05/05/2026 1:32 PM

‘ಇಂದು ನೀವು ನಿಜವಾಗಿಯೂ ರಾಜನಂತೆ ಎದ್ದು ನಿಂತಿದ್ದೀರಿ’ : ದಳಪತಿ ವಿಜಯ್ ಗೆ, ಶಿವರಾಜ್ ಕುಮಾರ್ ಅಭಿನಂದನೆ!

05/05/2026 12:32 PM
State News
KARNATAKA

BREAKING : ರಾಜ್ಯದಲ್ಲಿ ಪವರ್ ಫೈಟ್ಗೆ ತೆರೆ ಎಳೆಯಲು ಮುಹೂರ್ತ ಫಿಕ್ಸ್ : ಕುತೂಹಲ ಮೂಡಿಸಿದ ಹೈಕಮಾಂಡ್ ನಡೆ!

By kannadanewsnow0505/05/2026 1:41 PM KARNATAKA 1 Min Read

ಬೆಂಗಳೂರು : ರಾಜ್ಯ ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಚರ್ಚೆ ನಡೆದಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಇದೀಗ ಪವರ್ ಫೈಟ್…

BREAKING : ಬೀದರ್ ನಲ್ಲಿ ಅಮೃತ ಯೋಜನೆಯ ಗ್ಯಾಸ್‌ ಪೈಪ್‌ಲೈನ್‌ ಲೀಕಾಗಿ ಬೆಂಕಿ : ತಪ್ಪಿದ ಭಾರೀ ದುರಂತ!

05/05/2026 1:37 PM

BREAKING : ಧಾರವಾಡದಲ್ಲಿ ಬೌದ್ಧ ಸನ್ಯಾಸಿ ಕೊಲೆ ಪ್ರಕರಣ : ಮೂವರು ಆರೋಪಿಗಳು ಅರೆಸ್ಟ್!

05/05/2026 1:32 PM

‘ಇಂದು ನೀವು ನಿಜವಾಗಿಯೂ ರಾಜನಂತೆ ಎದ್ದು ನಿಂತಿದ್ದೀರಿ’ : ದಳಪತಿ ವಿಜಯ್ ಗೆ, ಶಿವರಾಜ್ ಕುಮಾರ್ ಅಭಿನಂದನೆ!

05/05/2026 12:32 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.