Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS: ಕರ್ನೂಲ್‌ ದುರಂತದ ಬಳಿಕ ಎಚ್ಚೆತ್ತ ‘ಸಾರಿಗೆ ಇಲಾಖೆ’: ಬಸ್‌ಗಳಲ್ಲಿ ಈ ವಸ್ತುಗಳನ್ನ ಕೊಂಡೊಯ್ಯಲು ನಿಷೇಧ!

26/10/2025 2:36 PM

‘ಶಾಲಾ ಪಠ್ಯಪುಸ್ತಕ’ಗಳಲ್ಲಿನ ‘ಇತಿಹಾಸ ನೀರಸ’ವೆಂದು ಭಾವಿಸುವ ಮಕ್ಕಳಿಗೆ ಈಗ ಸುವರ್ಣಾವಕಾಶ

26/10/2025 2:30 PM

ರೈಲ್ವೆ ನಿಲ್ದಾಣದಲ್ಲೇ ಲ್ಯಾಪ್ ಟಾಪ್ ಬಿಟ್ಟೋದ ಪ್ರಯಾಣಿಕ: ಪತ್ತೆ ಹಚ್ಚಿ ಮರಳಿಸಿ ಪ್ರಾಮಾಣಿಕತೆ ಮೆರೆದ ರೈಲ್ವೆ ಸಿಬ್ಬಂದಿ

26/10/2025 2:26 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಶಾಲಾ ಪಠ್ಯಪುಸ್ತಕ’ಗಳಲ್ಲಿನ ‘ಇತಿಹಾಸ ನೀರಸ’ವೆಂದು ಭಾವಿಸುವ ಮಕ್ಕಳಿಗೆ ಈಗ ಸುವರ್ಣಾವಕಾಶ
KARNATAKA

‘ಶಾಲಾ ಪಠ್ಯಪುಸ್ತಕ’ಗಳಲ್ಲಿನ ‘ಇತಿಹಾಸ ನೀರಸ’ವೆಂದು ಭಾವಿಸುವ ಮಕ್ಕಳಿಗೆ ಈಗ ಸುವರ್ಣಾವಕಾಶ

By kannadanewsnow0926/10/2025 2:30 PM

ಬೆಂಗಳೂರು: ಶಾಲಾ ಪಠ್ಯಪುಸ್ತಕಗಳಲ್ಲಿನ ಇತಿಹಾಸವನ್ನು ನೀರಸವೆಂದು ಭಾವಿಸುವ ಮಕ್ಕಳಿಗೆ ಈಗ ಸುವರ್ಣಾವಕಾಶ. ಭಾರತದ ಶ್ರೀಮಂತ ಚರಿತ್ರೆಯ ಒಳಹೊಕ್ಕು, ಅದರೊಂದಿಗೆ ಬೆರೆತು ಜ್ಞಾನ ಸಂಪಾದಿಸಲು ಇದೀಗ ಅತ್ಯಾಕರ್ಷಕ ವೇದಿಕೆಯೊಂದು ಸಜ್ಜಾಗಿದೆ.

ಇತಿಹಾಸವನ್ನು ವ್ಯಕ್ತಿತ್ವ ವಿಕಸನದೊಂದಿಗೆ ಸಮೀಕರಿಸಿ ನಡೆಸುತ್ತಿರುವ ವಿಶಿಷ್ಟ ಶಿಬಿರ ಇದು. ಮಾತುಗಾರಿಕೆ, ವೇದಿಕೆಯಲ್ಲಿ ಹಿಂಜರಿಕೆಯಿಲ್ಲದೇ ಮಾತನಾಡುವುದು, ಕಥನ ಕಲೆಯೊಂದಿಗೆ ವಿಷಯ ಪ್ರಸ್ತುತಿ, ಇತರರೊಂದಿಗೆ ಪರಿಣಾಮಕಾರಿ ಸಂವಹನ ಇವೆಲ್ಲ ಮಗುವು ಭವಿಷ್ಯದಲ್ಲಿ ಯಾವುದೇ ವೃತ್ತಿರಂಗಕ್ಕೆ ಹೋದರೂ ಬೇಕಾಗುವ ಕೌಶಲಗಳು. ಇತಿಹಾಸದ ವಿಷಯಗಳನ್ನು ಬಳಸಿಕೊಂಡು ಈ ಎಲ್ಲ ಕೌಶಲಗಳನ್ನು ಮಕ್ಕಳಲ್ಲಿ ತುಂಬುವ ನಿಟ್ಟಿನಲ್ಲಿ ಈ ಶಿಬಿರ ವಿನ್ಯಾಸಗೊಂಡಿದೆ.

‘ಪರಮ್ ಹಿಸ್ಟರಿ ಸೆಂಟರ್’ ಆಯೋಜಿಸಿರುವ “ಹಿಸ್ಟರಿ ಮೇಕರ್ಸ್” ಎಂಬ ರಂಗಭೂಮಿ ಕಾರ್ಯಾಗಾರವು ಕೇವಲ ಪಾಠಕ್ಕೆ ಸೀಮಿತವಾಗದೆ, ಇತಿಹಾಸದ ಸ್ವ ಅನುಭವನ್ನು ಪಡೆದುಕೊಳ್ಳುವ ಮತ್ತು ಅದನ್ನು ಪ್ರದರ್ಶನ ರೂಪದಲ್ಲಿ ತೋರಿಸುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಮೂಡಿಸಲು ಸಿದ್ಧವಾಗಿದೆ.

ರಂಗಭೂಮಿಯ ಮೂಲಕ ಇತಿಹಾಸದ ಅನಾವರಣ:

8 ರಿಂದ 16 ವರ್ಷ ವಯಸ್ಸಿನ ಮಕ್ಕಳಿಗೆಂದೇ 8 ವಾರಾಂತ್ಯಗಳ ಕಾರ್ಯಾಗಾರವನ್ನು ವಿಶೇಷವಾಗಿ ರೂಪಿಸಲಾಗಿದೆ. ಇಲ್ಲಿ ಮಕ್ಕಳು ನಾಟಕದ ಮೂಲಕ ಭಾರತದ ಇತಿಹಾಸದ ಬಗ್ಗೆ ಆಳವಾಗಿ ಜ್ಞಾನವನ್ನು ಹೊಂದಲಿದ್ದಾರೆ. ಈ ಕಾರ್ಯಾಗಾರದಲ್ಲಿ ಕಥೆ ಹೇಳುವಿಕೆ ಮತ್ತು ಸ್ಕ್ರಿಪ್ಟ್ ಸಿದ್ಧತೆಯಿಂದ ಹಿಡಿದು, ವೇಷಭೂಷಣಗಳ ಅಭ್ಯಾಸ ಮತ್ತು ಫೈನಲ್‌ (ಗ್ರಾಂಡ್‌ ಫಿನಾಲೆ) ಪ್ರದರ್ಶನದವರೆಗೆ ತಜ್ಞ ಮಾರ್ಗದರ್ಶಕರು ಮಕ್ಕಳನ್ನು ಮುನ್ನಡೆಸುತ್ತಾರೆ. ಪ್ರತಿ ವಾರಾಂತ್ಯದಲ್ಲಿ (ಶನಿವಾರ: ಸಂಜೆ 5:30 ರಿಂದ 7 ಗಂಟೆ ಹಾಗೂ ಭಾನುವಾರ ಬೆಳಗ್ಗೆ 10:30 ರಿಂದ 12:00)

ವಿನೂತನ ಕಲಿಕೆಯ ಪ್ರಮುಖಾಂಶಗಳು:

ಐತಿಹಾಸಿಕ ಪಾತ್ರಾಭಿನಯ: ಮಕ್ಕಳು ಕೇವಲ ಭಗತ್ ಸಿಂಗ್, ಸಾವರ್ಕರ್ ಅಥವಾ ಶಿವಾಜಿ ಮಹಾರಾಜ್ ಬಗ್ಗೆ ಓದುವುದಿಲ್ಲ, ಬದಲಿಗೆ ಪಾತ್ರಾಭಿನಯದ ಮೂಲಕ ಅವರ ಮನೋಭಾವನೆಯನ್ನು ಅರ್ಥೈಸಿಕೊಂಡು ಆ ಪಾತ್ರಕ್ಕಿಲ್ಲಿ ಜೀವ ತುಂಬುತ್ತಾರೆ. ಉದಾಹರಣೆಗೆ, “ಲಾಲ್ ಬಾಲ್ ಪಾಲ್ ಅವರು ಇಂದಿನ ಯುಗದಲ್ಲಿದ್ದರೆ ಏನು ಮಾಡುತ್ತಿದ್ದರು?” ಎಂಬಂತಹ ಸೃಜನಾತ್ಮಕ ಚಿಂತನೆಯನ್ನು ಇಲ್ಲಿ ಮಕ್ಕಳು ಅಭಿನಯದ ಮೂಲಕ ಕಣ್ಣಿಗೆ ಕಟ್ಟಿಕೊಡುತ್ತಾರೆ.

ಸ್ವತಃ ರಂಗಪರಿಕರಗಳ ತಯಾರಿಕೆ: ಇಲ್ಲಿ ಮಕ್ಕಳು ಕೇವಲ ರಂಗಾಭಿನಯವನ್ನು ಮಾತ್ರ ಕಲಿಯುವುದಿಲ್ಲ. ಬದಲಾಗಿ ರಂಗಭೂಮಿಯ ಒಟ್ಟಾರೆ ಜ್ಞಾನವನ್ನೂ ಗಳಿಸುತ್ತಾರೆ. ಅಂದರೆ, ಮಕ್ಕಳು ಈಟಿ ಅಥವಾ ಕತ್ತಿಯಂತಹ ಐತಿಹಾಸಿಕ ರಂಗಪರಿಕರಗಳನ್ನು ತಮ್ಮ ಕೈಯಾರೆ ಇಲ್ಲಿ ತಯಾರಿಸುತ್ತಾರೆ. ಇದು ತಾವು ಅಭಿನಯಿಸುವ ಪಾತ್ರಗಳೊಂದಿಗೆ ಅವರ ಒಳಗೊಳ್ಳುವಿಕೆಯನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.

ಅಂತಿಮ ಪ್ರದರ್ಶನದಲ್ಲಿ ಫಲಿತಾಂಶ: ಎಂಟನೇ ವಾರಾಂತ್ಯದಲ್ಲಿ ನಡೆಯುವ ಅಂತಿಮ ‘ಡಿ-ಡೇ’ ಲೈವ್ ಪ್ರದರ್ಶನವು ಕಾರ್ಯಾಗಾರದ ಮುಖ್ಯ ಫಲಿತಾಂಶದ ದಿನವಾಗಿದೆ. ಮಕ್ಕಳು ವೇಷಭೂಷಣ ಮತ್ತು ಸ್ವಂತ ಸ್ಕ್ರಿಪ್ಟ್ ತಯಾರಿಕೆಯ ಮೂಲಕ ಆಯ್ದ ಐತಿಹಾಸಿಕ ಘಟನೆಯ ಕಿರುನಾಟಕವನ್ನು ಸಾರ್ವಜನಿಕವಾಗಿ ಪ್ರದರ್ಶಿಸುತ್ತಾರೆ.

ಬೆಂಗಳೂರಿನಲ್ಲಿ ಆಯೋಜನೆ:

ಬೆಂಗಳೂರಿನ ಜಯನಗರ 7ನೇ ಬ್ಲಾಕ್‌ನ 32ನೇ ಕ್ರಾಸ್‌ನಲ್ಲಿರುವ ಮೇಕರ್ಸ್ ಅಡ್ಡಾದಲ್ಲಿ ನವೆಂಬರ್ 1 ರಿಂದ ಡಿಸೆಂಬರ್ 21 ರವರೆಗೆ ಈ ತರಬೇತಿ ನಡೆಯಲಿದ್ದು, ರಂಗಭೂಮಿಯ ವೃತ್ತಿಪರರು ನಡೆಸಿಕೊಡಲಿದ್ದಾರೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ- 90350 34728 ಹಾಗೂ ಇ-ಮೇಲ್: events@paramexp.org ಗೆ ಮೆಸೇಜ್‌ ಮಾಡಿ.

ALERT : ನೀವು ಸೇವಿಸುವ `ಮಾತ್ರೆಗಳು’ ಅಸಲಿಯೋ ನಕಲಿಯೋ? ಜಸ್ಟ್ ಈ ರೀತಿ ಚೆಕ್ ಮಾಡಿಕೊಳ್ಳಿ.!

BIG NEWS : ಅಕ್ರಮವಾಗಿ `BPL’ ರೇಷನ್ ಕಾರ್ಡ್ ಪಡೆದವರಿಗೆ ಸರ್ಕಾರದಿಂದ ಬಿಗ್ ಶಾಕ್.!

Share. Facebook Twitter LinkedIn WhatsApp Email

Related Posts

BIG NEWS: ಕರ್ನೂಲ್‌ ದುರಂತದ ಬಳಿಕ ಎಚ್ಚೆತ್ತ ‘ಸಾರಿಗೆ ಇಲಾಖೆ’: ಬಸ್‌ಗಳಲ್ಲಿ ಈ ವಸ್ತುಗಳನ್ನ ಕೊಂಡೊಯ್ಯಲು ನಿಷೇಧ!

26/10/2025 2:36 PM2 Mins Read

ರೈಲ್ವೆ ನಿಲ್ದಾಣದಲ್ಲೇ ಲ್ಯಾಪ್ ಟಾಪ್ ಬಿಟ್ಟೋದ ಪ್ರಯಾಣಿಕ: ಪತ್ತೆ ಹಚ್ಚಿ ಮರಳಿಸಿ ಪ್ರಾಮಾಣಿಕತೆ ಮೆರೆದ ರೈಲ್ವೆ ಸಿಬ್ಬಂದಿ

26/10/2025 2:26 PM1 Min Read

BREAKING : ಬೆಂಗಳೂರಿನಲ್ಲಿ ಭೀಕರ ಅಪಘಾತ : ಕಂಟೇನರ್ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಸಾವು.!

26/10/2025 1:42 PM1 Min Read
Recent News

BIG NEWS: ಕರ್ನೂಲ್‌ ದುರಂತದ ಬಳಿಕ ಎಚ್ಚೆತ್ತ ‘ಸಾರಿಗೆ ಇಲಾಖೆ’: ಬಸ್‌ಗಳಲ್ಲಿ ಈ ವಸ್ತುಗಳನ್ನ ಕೊಂಡೊಯ್ಯಲು ನಿಷೇಧ!

26/10/2025 2:36 PM

‘ಶಾಲಾ ಪಠ್ಯಪುಸ್ತಕ’ಗಳಲ್ಲಿನ ‘ಇತಿಹಾಸ ನೀರಸ’ವೆಂದು ಭಾವಿಸುವ ಮಕ್ಕಳಿಗೆ ಈಗ ಸುವರ್ಣಾವಕಾಶ

26/10/2025 2:30 PM

ರೈಲ್ವೆ ನಿಲ್ದಾಣದಲ್ಲೇ ಲ್ಯಾಪ್ ಟಾಪ್ ಬಿಟ್ಟೋದ ಪ್ರಯಾಣಿಕ: ಪತ್ತೆ ಹಚ್ಚಿ ಮರಳಿಸಿ ಪ್ರಾಮಾಣಿಕತೆ ಮೆರೆದ ರೈಲ್ವೆ ಸಿಬ್ಬಂದಿ

26/10/2025 2:26 PM

BREAKING : ಬೆಂಗಳೂರಿನಲ್ಲಿ ಭೀಕರ ಅಪಘಾತ : ಕಂಟೇನರ್ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಸಾವು.!

26/10/2025 1:42 PM
State News
KARNATAKA

BIG NEWS: ಕರ್ನೂಲ್‌ ದುರಂತದ ಬಳಿಕ ಎಚ್ಚೆತ್ತ ‘ಸಾರಿಗೆ ಇಲಾಖೆ’: ಬಸ್‌ಗಳಲ್ಲಿ ಈ ವಸ್ತುಗಳನ್ನ ಕೊಂಡೊಯ್ಯಲು ನಿಷೇಧ!

By kannadanewsnow0926/10/2025 2:36 PM KARNATAKA 2 Mins Read

ಬೆಂಗಳೂರು: ಆಂಧ್ರಪ್ರದೇಶದ ಕರ್ನೂಲ್ ಬಳಿಯಲ್ಲಿ ಖಾಸಗಿ ಬಸ್ ಅಪಘಾತದ ನಂತ್ರ ಬೆಂಕಿ ಹೊತ್ತಿಕೊಂಡು, 20 ಮಂದಿ ಸಜೀವ ದಹನವಾಗಿದ್ದರು. ಈ…

‘ಶಾಲಾ ಪಠ್ಯಪುಸ್ತಕ’ಗಳಲ್ಲಿನ ‘ಇತಿಹಾಸ ನೀರಸ’ವೆಂದು ಭಾವಿಸುವ ಮಕ್ಕಳಿಗೆ ಈಗ ಸುವರ್ಣಾವಕಾಶ

26/10/2025 2:30 PM

ರೈಲ್ವೆ ನಿಲ್ದಾಣದಲ್ಲೇ ಲ್ಯಾಪ್ ಟಾಪ್ ಬಿಟ್ಟೋದ ಪ್ರಯಾಣಿಕ: ಪತ್ತೆ ಹಚ್ಚಿ ಮರಳಿಸಿ ಪ್ರಾಮಾಣಿಕತೆ ಮೆರೆದ ರೈಲ್ವೆ ಸಿಬ್ಬಂದಿ

26/10/2025 2:26 PM

BREAKING : ಬೆಂಗಳೂರಿನಲ್ಲಿ ಭೀಕರ ಅಪಘಾತ : ಕಂಟೇನರ್ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಸಾವು.!

26/10/2025 1:42 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.