Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಡಿಸಿಎಂ ಡಿ.ಕೆ.ಶಿವಕುಮಾರ್ ಜನ್ಮದಿನ; ಆಫ್ರಿಕನ್ ಸಿಂಹ ದತ್ತು ಪಡೆದ ರಾಜ್ಯ ಯುವ ಕಾಂಗ್ರೆಸ್

15/05/2025 6:54 PM

ಸಿದ್ಧರಾಮಯ್ಯಗೆ ಜನರ ಆಶೀರ್ವಾದ ಇರುವವರೆಗೆ ಏನೂ ಮಾಡಲು ಸಾಧ್ಯವಿಲ್ಲ: ಸಚಿವ ಬೈರತಿ ಸುರೇಶ್

15/05/2025 6:49 PM

BREAKING : ‘ಮುಂಗಾರಿ ಹಿಂಗಾರಿ ತಕ್ಕಸ್ಟ ಮಸನ’: ಈ ಬಾರಿ ಮಳೆ -ಬೆಳೆ ಚನ್ನಾಗಿದೆ ಎಂದು ಭವಿಷ್ಯ ನುಡಿದ ಮಳಿಯಪ್ಪಜ್ಜ

15/05/2025 6:45 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಿದ್ಧರಾಮಯ್ಯಗೆ ಜನರ ಆಶೀರ್ವಾದ ಇರುವವರೆಗೆ ಏನೂ ಮಾಡಲು ಸಾಧ್ಯವಿಲ್ಲ: ಸಚಿವ ಬೈರತಿ ಸುರೇಶ್
KARNATAKA

ಸಿದ್ಧರಾಮಯ್ಯಗೆ ಜನರ ಆಶೀರ್ವಾದ ಇರುವವರೆಗೆ ಏನೂ ಮಾಡಲು ಸಾಧ್ಯವಿಲ್ಲ: ಸಚಿವ ಬೈರತಿ ಸುರೇಶ್

By kannadanewsnow0915/05/2025 6:49 PM

ವಿಜಯಪುರ: ರಾಜ್ಯದಲ್ಲಿ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ವರ್ಗದ ಜನರ ಆಶೀರ್ವಾದ ಇರುವವರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.

ವಿಜಯಪುರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಸೇರಿದಂತೆ ಕೆಲವು ಸುಳ್ಳು ಪ್ರಕರಣಗಳನ್ನು ಮುಂದಿಟ್ಟುಕೊಂಡು ಬಿಜೆಪಿ ನಾಯಕರು ಮತ್ತು ಇತರರು ಸಿದ್ದರಾಮಯ್ಯ ಅವರ ರಾಜಕೀಯ ಜೀವನಕ್ಕೆ ಕಪ್ಪು ಮಸಿ ಬಳಿಯುವ ಪ್ರಯತ್ನ ನಡೆಸಿದರು. ಆದರೆ, ಅದು ಸಾಕಾರಗೊಳ್ಳಲಿಲ್ಲ ಎಂದು ತಿರುಗೇಟು ನೀಡಿದರು.

ಸಿದ್ದರಾಮಯ್ಯ ಅವರು ರಾಜ್ಯವಷ್ಟೇ ಅಲ್ಲ, ಇಡೀ ದೇಶ ಕಂಡ ಅತ್ಯಂತ ಪ್ರಾಮಾಣಿಕ ರಾಜಕೀಯ ನೇತಾರರಾಗಿದ್ದಾರೆ. ರಾಜ್ಯದಲ್ಲಿ ಒಟ್ಟು 16 ಬಾರಿ ಬಜೆಟ್ ಅನ್ನು ಮಂಡಿಸುವ ಮೂಲಕ ತಳ ವರ್ಗದ ಸಮುದಾಯಗಳೂ ಸೇರಿದಂತೆ ಎಲ್ಲಾ ವರ್ಗಗಳ ಶ್ರೇಯೋಭಿವೃದ್ಧಿಗಾಗಿ ಅನೇಕ ಕೊಡುಗೆ ನೀಡಿದ್ದಾರೆ. ಅವರ ಈ ಸೇವೆ ಅನನ್ಯವಾಗಿದೆ. ಆದರೆ, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಿದ್ದರಾಮಯ್ಯ ಅವರ ವರ್ಚಸ್ಸಿಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಗಳೂ ಆಗಿರುವ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಯಶಸ್ವಿಯಾಗಿ ಎರಡು ವರ್ಷಗಳನ್ನು ಪೂರ್ಣಗೊಳಿಸುತ್ತಿದೆ. ಇದರರ್ಥ ¸ನಮ್ಮ ಕಾಂಗ್ರೆಸ್ ಸರ್ಕಾರ ಜನಪರ ಯೋಜನೆಗಳನ್ನು ನೀಡಿ ಜನರಿಗಾಗಿ ಸೇವೆ ಸಲ್ಲಿಸುತ್ತಿರುವ ಸರ್ಕಾರವಾಗಿದೆ ಎಂದು ಸುರೇಶ್ ತಿಳಿಸಿದರು.

ನಮ್ಮ ಪಕ್ಷಕ್ಕೆ ಹೈಕಮಾಂಡ್ ಇದೆ. ಹೈಕಮಾಂಡ್ ನೀಡುವ ನಿರ್ದೇಶನಗಳಡಿಯಲ್ಲಿ ನಾವೆಲ್ಲರೂ ಮುನ್ನಡೆಯುತ್ತೇವೆ. ಹೀಗಾಗಿ ರಾಜ್ಯದಲ್ಲಿ ಹೈಕಮಾಂಡ್ ಆದೇಶ ಮತ್ತು ದಲಿತರು, ಹಿಂದುಳಿದವರು ಹಾಗೂ ಎಲ್ಲಾ ವರ್ಗದ ಜನರು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರದ ಪರವಾಗಿ ಇರುವವರೆಗೂ ಯಾರೂ ಏನೂ ಮಾಡಲು ಸಾಧ್ಯವಿಲ್ಲ ಎಂದರು.

BREAKING: ಟರ್ಕಿಯ ಸೆಲೆಬಿ ವಿಮಾನ ನಿಲ್ದಾಣ ಸೇವೆಗಳಿಗೆ ಭದ್ರತಾ ಅನುಮತಿ ರದ್ದುಗೊಳಿಸಿದ ಭಾರತ

BIG NEWS : ರಾಜ್ಯದ ಗ್ರಾಮೀಣ ಜನತೆಯ ಗಮನಕ್ಕೆ : `ವಾಟ್ಸಪ್’ನಲ್ಲೇ ಸಿಗಲಿವೆ ಗ್ರಾಮಪಂಚಾಯಿತಿಯ ಈ ಎಲ್ಲಾ ಸೇವೆಗಳು | WATCH VIDEO

BIG NEWS : ರಾಜ್ಯದ ʻಆಸ್ತಿʼ ಮಾಲೀಕರಿಗೆ ಗುಡ್‌ ನ್ಯೂಸ್‌ : ʻಬಿ-ಖಾತಾʼ ನೀಡುವ ಅವಧಿ 3 ತಿಂಗಳು ವಿಸ್ತರಣೆ.!

Share. Facebook Twitter LinkedIn WhatsApp Email

Related Posts

ಡಿಸಿಎಂ ಡಿ.ಕೆ.ಶಿವಕುಮಾರ್ ಜನ್ಮದಿನ; ಆಫ್ರಿಕನ್ ಸಿಂಹ ದತ್ತು ಪಡೆದ ರಾಜ್ಯ ಯುವ ಕಾಂಗ್ರೆಸ್

15/05/2025 6:54 PM1 Min Read

BREAKING : ‘ಮುಂಗಾರಿ ಹಿಂಗಾರಿ ತಕ್ಕಸ್ಟ ಮಸನ’: ಈ ಬಾರಿ ಮಳೆ -ಬೆಳೆ ಚನ್ನಾಗಿದೆ ಎಂದು ಭವಿಷ್ಯ ನುಡಿದ ಮಳಿಯಪ್ಪಜ್ಜ

15/05/2025 6:45 PM1 Min Read

ಉಡುಪಿಯಲ್ಲಿ ಮನಕಲಕುವ ಘಟನೆ: ಬಾವಿಗೆ ಹಾರಿದ ತಂದೆ ರಕ್ಷಣೆಗೆ ಹೋದ ಮಗನೂ ಸಾವು

15/05/2025 6:08 PM1 Min Read
Recent News

ಡಿಸಿಎಂ ಡಿ.ಕೆ.ಶಿವಕುಮಾರ್ ಜನ್ಮದಿನ; ಆಫ್ರಿಕನ್ ಸಿಂಹ ದತ್ತು ಪಡೆದ ರಾಜ್ಯ ಯುವ ಕಾಂಗ್ರೆಸ್

15/05/2025 6:54 PM

ಸಿದ್ಧರಾಮಯ್ಯಗೆ ಜನರ ಆಶೀರ್ವಾದ ಇರುವವರೆಗೆ ಏನೂ ಮಾಡಲು ಸಾಧ್ಯವಿಲ್ಲ: ಸಚಿವ ಬೈರತಿ ಸುರೇಶ್

15/05/2025 6:49 PM

BREAKING : ‘ಮುಂಗಾರಿ ಹಿಂಗಾರಿ ತಕ್ಕಸ್ಟ ಮಸನ’: ಈ ಬಾರಿ ಮಳೆ -ಬೆಳೆ ಚನ್ನಾಗಿದೆ ಎಂದು ಭವಿಷ್ಯ ನುಡಿದ ಮಳಿಯಪ್ಪಜ್ಜ

15/05/2025 6:45 PM

BREAKING: ಟರ್ಕಿಯ ಸೆಲೆಬಿ ವಿಮಾನ ನಿಲ್ದಾಣ ಸೇವೆಗಳಿಗೆ ಭದ್ರತಾ ಅನುಮತಿ ರದ್ದುಗೊಳಿಸಿದ ಭಾರತ

15/05/2025 6:42 PM
State News
KARNATAKA

ಡಿಸಿಎಂ ಡಿ.ಕೆ.ಶಿವಕುಮಾರ್ ಜನ್ಮದಿನ; ಆಫ್ರಿಕನ್ ಸಿಂಹ ದತ್ತು ಪಡೆದ ರಾಜ್ಯ ಯುವ ಕಾಂಗ್ರೆಸ್

By kannadanewsnow0915/05/2025 6:54 PM KARNATAKA 1 Min Read

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಜನ್ಮದಿನದ ಪ್ರಯುಕ್ತ ಯುವ ಕಾಂಗ್ರೆಸ್ ವತಿಯಿಂದ ಮೈಸೂರು ಮೃಗಲಯದಲ್ಲಿ ಆಫ್ರಿಕನ್…

ಸಿದ್ಧರಾಮಯ್ಯಗೆ ಜನರ ಆಶೀರ್ವಾದ ಇರುವವರೆಗೆ ಏನೂ ಮಾಡಲು ಸಾಧ್ಯವಿಲ್ಲ: ಸಚಿವ ಬೈರತಿ ಸುರೇಶ್

15/05/2025 6:49 PM

BREAKING : ‘ಮುಂಗಾರಿ ಹಿಂಗಾರಿ ತಕ್ಕಸ್ಟ ಮಸನ’: ಈ ಬಾರಿ ಮಳೆ -ಬೆಳೆ ಚನ್ನಾಗಿದೆ ಎಂದು ಭವಿಷ್ಯ ನುಡಿದ ಮಳಿಯಪ್ಪಜ್ಜ

15/05/2025 6:45 PM

ಉಡುಪಿಯಲ್ಲಿ ಮನಕಲಕುವ ಘಟನೆ: ಬಾವಿಗೆ ಹಾರಿದ ತಂದೆ ರಕ್ಷಣೆಗೆ ಹೋದ ಮಗನೂ ಸಾವು

15/05/2025 6:08 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.