Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Rain Alert : ರಾಜ್ಯದಲ್ಲಿ ಇಂದು, ನಾಳೆ ಭಾರೀ `ಮಳೆ’ ಸಾಧ್ಯತೆ : ಹವಾಮಾನ ಇಲಾಖೆ ಮುನ್ಸೂಚನೆ.!

11/05/2025 9:50 AM

‘ಕದನ ವಿರಾಮ’ ಉಲ್ಲಂಘನೆಯ ನಂತರ ಪಾಕ್ ವಿರುದ್ಧ ಶಶಿ ತರೂರ್ ಕಾವ್ಯಾತ್ಮಕ ವ್ಯಂಗ್ಯ | Shashi Taroor

11/05/2025 9:37 AM

BIG NEWS : ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : `HRMS’ ತಂತ್ರಾಂಶದ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ.!

11/05/2025 9:36 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಕನ್ನಡ ಖ್ಯಾತ ಹಿರಿಯ ಸಾಹಿತಿ, ಸಂಶೋಧಕ ಜಿ.ಕೃಷ್ಣಪ್ಪ ಇನ್ನಿಲ್ಲ
KARNATAKA

BREAKING: ಕನ್ನಡ ಖ್ಯಾತ ಹಿರಿಯ ಸಾಹಿತಿ, ಸಂಶೋಧಕ ಜಿ.ಕೃಷ್ಣಪ್ಪ ಇನ್ನಿಲ್ಲ

By kannadanewsnow0928/01/2025 2:19 PM

ಬೆಂಗಳೂರು: ಕನ್ನಡದ ಖ್ಯಾತ ಹಿರಿಯ ಸಾಹಿತಿ, ಸಂಶೋಧಕ ಜಿ.ಕೃಷ್ಣಪ್ಪ ಅವರು ನಿಧನರಾಗುವ ಮೂಲಕ, ಇನ್ನಿಲ್ಲವಾಗಿದ್ದಾರೆ. 

ಬೇಂದ್ರೆ ಕೃಷ್ಣಪ್ಪ ಎಂದೆ ಚಿರಪರಿಚಿತರಾಗಿದ್ದ ಜಿ ಕೃಷ್ಣಪ್ಪ ದ. ರಾ ಬೇಂದ್ರೆ ಅವರ ಗಾಢ ಪ್ರಭಾವಕ್ಕೆ ಒಳಗಾಗಿದ್ದವರು. ಅವರ ಸಾಹಿತ್ಯ ಅಧ್ಯಯನವೇ ಕೃಷ್ಣಪ್ಪ ಅವರ ಜೀವನದ ಬಹುಮುಖ್ಯ ಅಧ್ಯಾಯವಾಗಿತ್ತು. ಮಕ್ಕಳ ಸಾಹಿತ್ಯ, ವಿಮರ್ಶೆ, ಬೇಂದ್ರೆ ಕೃತಿಗಳ ವಿವಿಧ ಆಯಾಮಗಳ ಕೃತಿ ರಚನೆ ಹೀಗೆ ಜಿ ಕೃಷ್ಣಪ್ಪ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಕೊಡುಗೆಗಳ ಮೂಲಕ ಹೆಸರಾಗಿದ್ದವರು. ರಾಜ್ಯಾದ್ಯಂತ ಶಾಲಾ ,ಕಾಲೇಜುಗಳಲ್ಲಿ ಬೇಂದ್ರೆ ಕಾವ್ಯ ಗಾಯನ ಸ್ಪರ್ಧೆ ಏರ್ಪಡಿಸಿ ಬಹುಮಾನ ನೀಡುತ್ತಾ ಬೇಂದ್ರೆ ಕಾವ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಒಲವು ಮೂಡಿಸುವಲ್ಲಿ ಮುಖ್ಯ ಪಾತ್ರವಹಿಸಿದ್ದರು.

ಕನ್ನಡ ಪುಸ್ತಕ ಪ್ರಾಧಿಕಾರದ ಜಿ ಪಿ ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಹಾಗೂ ಹಂಪಿ ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದಿದ್ದರು.

ಕನ್ನಡದ ಹಿರಿಯ ಸಾಹಿತಿ, ಸಂಶೋಧಕ ಜಿ ಕೃಷ್ಣಪ್ಪ ಅವರ ನಿಧನಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಕನ್ನಡ ಹಾಗೂ ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಶೋಕ ವ್ಯಕ್ತಪಡಿಸಿದ್ದಾರೆ. ಅಲ್ಲದೇ  ಜಿ ಕೃಷ್ಣಪ್ಪ ನವರ ನಿಧನ ಸಾಹಿತ್ಯ ಲೋಕಕ್ಕೆ ದೊಡ್ಡ ನಷ್ಟ ಎಂದು ಸಚಿವ ಶಿವರಾಜ ತಂಗಡಗಿ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

ಕನ್ನಡದ ಖ್ಯಾತ ಹಿರಿಯ ಸಾಹಿತಿ, ಸಂಶೋಧಕ ಜಿ.ಕೃಷ್ಣಪ್ಪ ಪರಿಚಯ

ಡಾ. ಜಿ ಕೃಷ್ಣಪ್ಪನವರು ಬೇಂದ್ರೆ ಕೃಷ್ಣಪ್ಪ ಎಂದು ಪರಿಚಿತರು. ಕನ್ನಡದ ವಿಮರ್ಶಕರು. ಇವರು ಪ್ರಸ್ತುತ ಬೆಂಗಳೂರಿನವರು ರಾಜ್ಯ ಪ್ರಾದೇಶಿಕ ಸಾರಿಗೆ ಕಛೇರಿಯಲ್ಲಿ ವಾಹನಗಳ ನಿರೀಕ್ಷಕರಾಗಿ, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ವೃತ್ತಿಯೊಂದಿಗೆ ಅಭಿರುಚಿಯಾಗಿ ಸಾಹಿತ್ಯ ಅಧ್ಯಯನದಲ್ಲಿ ತೊಡಗಿದ್ದರು. ಸಾಹಿತ್ಯ ಪರಿಚಾರಿಕೆಯೊಂದಿಗೆ ನಾಡಿನಾದ್ಯಂತ ಬೇಂದ್ರೆ ಸಾಹಿತ್ಯವನ್ನು ನೀಡಿದ್ದಾರೆ. ಕನ್ನಡದ ಸಾಹಿತಿಗಳಾದ ಬೇಂದ್ರೆ ಹಾಗೂ ಕುವೆಂಪು ಅವರ ಸಾಹಿತ್ಯವನ್ನು ಅಧ್ಯಯನ ಮಾಡಿದವರು.

ಪ್ರಾಚೀನ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿ ಓದುಗರಿಗೆ ಸರಳವಾಗಿ ಕೆಲವು ಕೃತಿಗಳನ್ನು ಪರಿಚಯಿಸಿದರು. ಬೇಂದ್ರೆ ಸಾಹಿತ್ಯದ ಮೇಲೆ ಸಂಶೋಧನೆ ಮಾಡಿ ಕವಿಯ ಸಾಕಷ್ಟು ಕವಿತೆಗಳ ಕುರಿತ ವಿಮರ್ಶೆಗಳೊಂದಿಗೆ ಕೆಲವು ಕೃತಿಗಳನ್ನು ರಚಿಸಿದ್ದಾರೆ. 1988ರಿಂದ ನಾಡಿನಾದ್ಯಂತ ಶಾಲಾ ಕಾಲೇಜುಗಳಲ್ಲಿ ‘ದ.ರಾ ಬೇಂದ್ರೆ ಕವನ ಗಾಯನ ಸ್ಪರ್ಧೆ ಏರ್ಪಡಿಸಿ ದ.ರಾ ಬೇಂದ್ರೆ ಅವರ ಕೃತಿಗಳನ್ನು ಬಹುಮಾನದ ರೂಪದಲ್ಲಿ ನೀಡುವುದು. 2007ರಲ್ಲಿ ಬೆಂಗಳೂರಿನಲ್ಲಿ ‘ದ.ರಾ ಬೇಂದ್ರೆ ಕಾವ್ಯ ಕೂಟ’ ಸ್ಥಾಪನೆ ಮಾಡಿ ಅದರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರತಿವರ್ಷ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬೇಂದ್ರೆ ಕಾವ್ಯ ಕುರಿತು ರಾಜ್ಯ ಮಟ್ಟದ ವಿಮರ್ಶಾ ಸ್ಪರ್ಧೆ ನಡೆಸಿ, ಬಹುಮಾನ ನೀಡುತ್ತಿದ್ದರು.

ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ: ಹಕ್ಕು ಬದಲಾವಣೆ, ನೀರಿನ ಸಂಪರ್ಕ, ಕಟ್ಟಡ ಪರವಾನಿಗೆಗೆ ಈ ದಾಖಲೆ ಕಡ್ಡಾಯ

BREAKING : ರಾಜ್ಯದಲ್ಲಿ ನಿಲ್ಲದ `ಮೈಕ್ರೋ ಫೈನಾನ್ಸ್’ ಕಿರುಕುಳ : ಮಂಡ್ಯದಲ್ಲಿ ಮಾತ್ರೆ ನುಂಗಿ ಮಹಿಳೆ ಆತ್ಮಹತ್ಯೆಗೆ ಯತ್ನ.!

Share. Facebook Twitter LinkedIn WhatsApp Email

Related Posts

Rain Alert : ರಾಜ್ಯದಲ್ಲಿ ಇಂದು, ನಾಳೆ ಭಾರೀ `ಮಳೆ’ ಸಾಧ್ಯತೆ : ಹವಾಮಾನ ಇಲಾಖೆ ಮುನ್ಸೂಚನೆ.!

11/05/2025 9:50 AM1 Min Read

BIG NEWS : ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : `HRMS’ ತಂತ್ರಾಂಶದ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ.!

11/05/2025 9:36 AM1 Min Read

ರಾಜ್ಯ ಸರ್ಕಾರದಿಂದ ರೈತರಿಗೆ ಗುಡ್ ನ್ಯೂಸ್ : ವಾರಸುದಾರರ ಹೆಸರಿಗೆ ಪಹಣಿ ನೋಂದಣಿಗೆ ಮನೆ ಬಾಗಿಲಿಗೇ `ಪೌತಿ ಖಾತೆ’ ಆಂದೋಲನ.!

11/05/2025 9:24 AM1 Min Read
Recent News

Rain Alert : ರಾಜ್ಯದಲ್ಲಿ ಇಂದು, ನಾಳೆ ಭಾರೀ `ಮಳೆ’ ಸಾಧ್ಯತೆ : ಹವಾಮಾನ ಇಲಾಖೆ ಮುನ್ಸೂಚನೆ.!

11/05/2025 9:50 AM

‘ಕದನ ವಿರಾಮ’ ಉಲ್ಲಂಘನೆಯ ನಂತರ ಪಾಕ್ ವಿರುದ್ಧ ಶಶಿ ತರೂರ್ ಕಾವ್ಯಾತ್ಮಕ ವ್ಯಂಗ್ಯ | Shashi Taroor

11/05/2025 9:37 AM

BIG NEWS : ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : `HRMS’ ತಂತ್ರಾಂಶದ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ.!

11/05/2025 9:36 AM

ಮೇ 15 ರಂದು ಉಕ್ರೇನ್ ನೊಂದಿಗೆ ‘ಪೂರ್ವ ಷರತ್ತುಗಳಿಲ್ಲದೆ’ ನೇರ ಮಾತುಕತೆಯನ್ನು ಪ್ರಸ್ತಾಪಿಸಿದ ಪುಟಿನ್ | Russia-Ukraine war

11/05/2025 9:26 AM
State News
KARNATAKA

Rain Alert : ರಾಜ್ಯದಲ್ಲಿ ಇಂದು, ನಾಳೆ ಭಾರೀ `ಮಳೆ’ ಸಾಧ್ಯತೆ : ಹವಾಮಾನ ಇಲಾಖೆ ಮುನ್ಸೂಚನೆ.!

By kannadanewsnow5711/05/2025 9:50 AM KARNATAKA 1 Min Read

ಬೆಂಗಳೂರು : ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು, ನಾಳೆ ಎರಡು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ…

BIG NEWS : ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : `HRMS’ ತಂತ್ರಾಂಶದ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ.!

11/05/2025 9:36 AM

ರಾಜ್ಯ ಸರ್ಕಾರದಿಂದ ರೈತರಿಗೆ ಗುಡ್ ನ್ಯೂಸ್ : ವಾರಸುದಾರರ ಹೆಸರಿಗೆ ಪಹಣಿ ನೋಂದಣಿಗೆ ಮನೆ ಬಾಗಿಲಿಗೇ `ಪೌತಿ ಖಾತೆ’ ಆಂದೋಲನ.!

11/05/2025 9:24 AM

ಮಲಯಾಳಂ ಶತ್ರುನಾಶ ತಂತ್ರ ಭಾನುವಾರದ ದಿನ ಮಾಡಿ ಐದು ದಿನಗಳಲ್ಲಿ ಕೆಲಸ ಆಗುತ್ತದೆ

11/05/2025 8:42 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.