ಬೆಂಗಳೂರು: ಹುಬ್ಬಳ್ಳಿಯಲ್ಲಿ ಮಾಜಿ ಕಾರ್ಪೊರೇಟರ್ ಪುತ್ರಿಯ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. ಕೋಮು ಕೋನವನ್ನು ಸೂಚಿಸುವ ಊಹಾಪೋಹಗಳಿಗೆ ವ್ಯತಿರಿಕ್ತವಾಗಿ, ಈ ಘಟನೆಯು ಯಾವುದೇ ಧಾರ್ಮಿಕ ಅಥವಾ ರಾಜಕೀಯ ಉದ್ದೇಶಕ್ಕಿಂತ ಹೆಚ್ಚಾಗಿ ಹದಗೆಟ್ಟ ಸಂಬಂಧದಿಂದ ಉಂಟಾಗಿದೆ ಎಂದು ಪರಮೇಶ್ವರ್ ಹೇಳಿದ್ದಾರೆ.  

ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಪರಮೇಶ್ವರ್, ಇದು ಸಂತ್ರಸ್ತೆ ಮತ್ತು ಅಪರಾಧಿಯ ನಡುವಿನ ಪರಸ್ಪರ ಪ್ರೀತಿಯ ಪ್ರಕರಣ ಎಂದು ಹೇಳಿದ್ದಾರೆ . ಹುಡುಗಿ ಸಂಬಂಧವನ್ನು ಕೊನೆಗೊಳಿಸಿ ದೂರ ಸರಿಯಲು ನಿರ್ಧರಿಸಿದಾಗ, ಆರೋಪಿ ಈ ಕೆಲಸ ಮಾಡಿದ್ದಾರೆ ಅಂಥ ಹೇಳಿದರು. ಘಟನೆಯಲ್ಲಿ ಧಾರ್ಮಿಕ ಪಾತ್ರವಿದೆ ಎಂಬ ಹೇಳಿಕೆಗಳನ್ನು ತಳ್ಳಿಹಾಕಿದರು.

Share.
Exit mobile version