Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ : 1,900 ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್.!

31/07/2025 7:23 PM

BREAKING : ರಾಜ್ಯದ `ಆರೋಗ್ಯ ಇಲಾಖೆ’ಯಲ್ಲಿ ಖಾಲಿ ಇರುವ 1900 ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗೆ ಸರ್ಕಾರದಿಂದ ಗ್ರೀನ್ ಸಿಗ್ನಲ್.!

31/07/2025 7:20 PM

ನಿಮ್ಮ ಮನೆಯ ವಾಸ್ತು ದೋಷ ನಿವಾರಿಸಲು ಜಸ್ಟ್ ಹೀಗೆ ಮಾಡಿ ಸಾಕು

31/07/2025 7:18 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ‘ದಿ ರಾಮೇಶ್ವರಂ ಕೆಫೆ’ಯಿಂದ ಉತ್ತರ ಭಾರತದ ಶೈಲಿಯ ‘ತೀರ್ಥ’ ಕೆಫೆ ಆರಂಭ
KARNATAKA

ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ‘ದಿ ರಾಮೇಶ್ವರಂ ಕೆಫೆ’ಯಿಂದ ಉತ್ತರ ಭಾರತದ ಶೈಲಿಯ ‘ತೀರ್ಥ’ ಕೆಫೆ ಆರಂಭ

By kannadanewsnow0930/07/2025 4:55 PM

ಬೆಂಗಳೂರು: ದಕ್ಷಿಣ ಭಾರತ ಪಾಕಪದ್ಧತಿಗೆ ಹೆಸರುವಾಸಿಯಾಗಿರುವ ದಿ ರಾಮೇಶ್ವರಂ ಕೆಫೆ ಇದೀಗ ಉತ್ತರ ಭಾರತದ ಶೈಲಿ ಆಹಾರಪದ್ಧತಿ ಪರಿಚಯಿಸುತ್ತಿದ್ದು, ಕನ್ನಿಂಗ್‌ಹ್ಯಾಮ್‌ ರಸ್ತೆಯಲ್ಲಿ ನೂತನವಾಗಿ “ತೀರ್ಥ” ಶೀರ್ಷಿಕೆಯ ಶಾಖೆ ತೆರೆದಿದೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಮೇಶ್ವರಂ ಕೆಫೆ”ಯ ಸಹ-ಸಂಸ್ಥಾಪಕ , ಸಿಇಒ ರಾಘವೇಂದ್ರ ರಾವ್, ದಕ್ಷಿಣ ಭಾರತದ ಸಾಂಪ್ರದಾಯಿಕ ಭೋಜನವನ್ನು ಜನಸಾಮಾನ್ಯರಿಗೆ ಉಣಬಡಿಸಿದ ಬಳಿಕ ಉತ್ತರ ಭಾರತದ ಆಹಾರಪದ್ಧತಿಯನ್ನೂ ಸಹ ಜನರಿಗೆ ಪರಿಚಯಿಸಬೇಕೆಂಬ ಆಶಯದಡಿ ನೂತನವಾಗಿ ಮೊದಲ “ತೀರ್ಥ” ಶೀರ್ಷಿಕೆಯಡಿ ಶಾಖೆ ತೆರೆಯಲಾಗಿದ್ದು, ಆಗಸ್ಟ್‌ ೧ ರಿಂದ ಜನಸಾಮಾನ್ಯರಿಗೆ ಲಭ್ಯವಿರಲಿದೆ. ಈ ಶಾಖೆಯನ್ನು ನಟ ಶಿವರಾಜ್‌ಕುಮಾರ್‌ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಜು.೩೧ರಂದು ಚಾಲನೆ ನೀಡಲಿದ್ದಾರೆ ಎಂದರು.

ದಿ ರಾಮೇಶ್ವರಂ ಕೆಫೆ ಸಹ-ಸಂಸ್ಥಾಪಕಿ ಮತ್ತು ವ್ಯವಸ್ಥಾಪಕ ನಿರ್ದೇಶಕಿ ದಿವ್ಯಾ ರಾಘವೇಂದ್ರ ರಾವ್ ಮಾತನಾಡಿ, “ ರಾಮೇಶ್ವರಂ ಕೆಫೆ ಪ್ರಾರಂಭದ ಸಂದರ್ಭದಲ್ಲಿ ಇದ್ದ ಉತ್ಸಾಹದಿಂದಲೇ ತೀರ್ಥ ವನ್ನು ಪ್ರಾರಂಭಿಸಿದ್ದೇವೆ.ಆಧುನಿಕ ವಿನ್ಯಾಸದೊಂದಿಗೆ ನಮ್ಮ ಸಂಪ್ರದಾಯವನ್ನು ಗೌರವಿಸುವ ನಿಟ್ಟಿನಲ್ಲಿ ದೇವಸ್ಥಾನದ ಅನುಭವ ನೀಡುವ ವಿನ್ಯಾಸಕ್ಕೆ ಆದ್ಯತೆ ನೀಡಲಾಗಿದೆ. ಸುಮಾರು 150 ಜನರು ಕೂರಬಹುದಾದ ವಿಶಾಲ ಸ್ಥಳವನ್ನು ಹೊಂದಿದೆ, ಮುಂದಿನ ದಿನಗಳಲ್ಲಿ ತೀರ್ಥ ವನ್ನು ನಗರಾಧ್ಯಂತ ತೆರೆಯಲು ತಯಾರಿ ನಡೆಸುತ್ತಿದ್ದು, ಹಿಂದೂಸ್ತಾನಿ ಪಾಕಶಾಲೆಯ ತತ್ವಶಾಸ್ತ್ರವನ್ನು ದಕ್ಷಿಣ ಭಾರತದ ಪೂರ್ವವರ್ತಿಯಂತೆ ವಿಸ್ತರಿಸಲಾಗುತ್ತದೆ ಎಂದರು.

ಏರ್‌ಪೋರ್ಟ್‌ನಲ್ಲೇ ಅಂತಹ ಕೀಟ ಇಲ್ಲ ಎಂದು ಏರ್‌ಪೋರ್ಟ್‌ ಎಫ್‌ಐಸಿಸಿ ಅಧಿಕಾರಿಗಳೇ ಸ್ಪಷ್ಟಪಡಿಸಿದ್ದಾರೆ: ದಿವ್ಯಾ ರಾಘವೇಂದ್ರ

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಕೀಟ ಸಿಕ್ಕಿರುವ ಕುರಿತು ಪ್ರತಿಕ್ರಿಸಿದ ದಿವ್ಯಾ, ಈಗಾಗಲೇ ಈ ವಿಚಾರದ ಬಗ್ಗೆ ದೂರು ದಾಖಲಿಸಿದ್ದೇವೆ. ಈ ಘಟನೆ ನಡೆದ ಕೂಡಲೇ ಏರ್‌ಪೋರ್ಟ್‌ನಲ್ಲಿರುವ ಎಫ್‌ಎಸ್‌ಎಸ್‌ಐ ತಂಡ ಆಗಮಿಸಿ, ಸಂಪೂರ್ಣ ತಪಾಸಣೆ ನಡೆಸಿದರು, ಆ ಕೀಟವನ್ನು ಪರಿಶೀಲಿಸಿದದಾರೆ, ಅವರು ಸ್ಪಷ್ಟನೆ ನೀಡುತ್ತಿರುವ ಪ್ರಕಾರ, ಆ ರೀತಿಯ ಕೀಟ ಏರ್‌ಪೋರ್ಟ್‌ನಲ್ಲಿಯೇ ಇಲ್ಲ ಎಂದು ಹೇಳುತ್ತಿದ್ದಾರೆ. ಹಾಗಿದ್ದರೆ, ನಮ್ಮ ಕೆಫೆಯಲ್ಲಿ ಹೇಗೆ ಸಿಗಲು ಸಾಧ್ಯ? ಹೀಗಾಗಿ ಇದರ ಬಗ್ಗೆ ಸೂಕ್ತ ತನಿಖೆಯಾಗುವಂತೆಯೂ ಒತ್ತಾಯಿಸಿದ್ದೇವೆ ಎಂದು ಹೇಳಿದರು. ನಮ್ಮ ತಪ್ಪಿದ್ದರೆ ಖಂಡಿತ ತಲೆ ಬಾಗುತ್ತೇವೆ, ಗ್ರಾಹಕರು ನಮಗೆ ದೇವರಿದ್ದಂತೆ, ಅವರಿಗೆ ಯಾವುದೇ ಅನಾನುಕೂಲತೆ ಆಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ, ಆದರೆ ನಮ್ಮ ತಪ್ಪಿಲ್ಲವೆಂದಾಗ ಸುಮ್ಮನಿರಲಾಗುವುದಿಲ್ಲ, ಸೂಕ್ತ ತನಿಖೆ ಬಳಿಕ ಸತ್ಯ ಹೊರಬರಲಿದೆ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.

BREAKING: ಆ.1ರಿಂದ ಬೆಸ್ಕಾಂ ‘ಎನಿ ಟೈಮ್ ಪೇಮೆಂಟ್'(ATP) ಪಾವತಿ ಯಂತ್ರದ ಸೇವೆ ಸ್ಥಗಿತ

ಆ.3ಕ್ಕೆ ಸಾಗರದಲ್ಲಿ ‘ಎಸ್.ವೆಂಕಟರಮಣ ಆಚಾರ್ ಪ್ರಾಮಾಣಿಕ ಸರ್ಕಾರಿ ಸೇವಾ ಪ್ರಶಸ್ತಿ’ ಪ್ರದಾನ: ಮ.ಸ.ನಂಜುಂಡಸ್ವಾಮಿ

Share. Facebook Twitter LinkedIn WhatsApp Email

Related Posts

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ : 1,900 ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್.!

31/07/2025 7:23 PM1 Min Read

BREAKING : ರಾಜ್ಯದ `ಆರೋಗ್ಯ ಇಲಾಖೆ’ಯಲ್ಲಿ ಖಾಲಿ ಇರುವ 1900 ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗೆ ಸರ್ಕಾರದಿಂದ ಗ್ರೀನ್ ಸಿಗ್ನಲ್.!

31/07/2025 7:20 PM1 Min Read

ನಿಮ್ಮ ಮನೆಯ ವಾಸ್ತು ದೋಷ ನಿವಾರಿಸಲು ಜಸ್ಟ್ ಹೀಗೆ ಮಾಡಿ ಸಾಕು

31/07/2025 7:18 PM3 Mins Read
Recent News

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ : 1,900 ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್.!

31/07/2025 7:23 PM

BREAKING : ರಾಜ್ಯದ `ಆರೋಗ್ಯ ಇಲಾಖೆ’ಯಲ್ಲಿ ಖಾಲಿ ಇರುವ 1900 ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗೆ ಸರ್ಕಾರದಿಂದ ಗ್ರೀನ್ ಸಿಗ್ನಲ್.!

31/07/2025 7:20 PM

ನಿಮ್ಮ ಮನೆಯ ವಾಸ್ತು ದೋಷ ನಿವಾರಿಸಲು ಜಸ್ಟ್ ಹೀಗೆ ಮಾಡಿ ಸಾಕು

31/07/2025 7:18 PM

ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ‘ಜನರೇಟರ್ ಕಳ್ಳತನ’: ಬಿಜೆಪಿ ಪ್ರತಿಭಟನೆ, ತನಿಖೆಗೆ ಒತ್ತಾಯ

31/07/2025 7:15 PM
State News
KARNATAKA

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ : 1,900 ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್.!

By kannadanewsnow5731/07/2025 7:23 PM KARNATAKA 1 Min Read

ಬೆಂಗಳೂರು : ರಾಜ್ಯದಲ್ಲಿ ಖಾಲಿ ಇರುವ 223 ವೈದ್ಯರು, 400 ಫಾರ್ಮಸಿಸ್ಟ್ ಟೆಕ್ನಿಷಿಯನ್ಸ್, 1300 ಪಿಎಚ್ಸಿಒ, ಆರೋಗ್ಯ ನಿರೀಕ್ಷಕರ ನೇಮಕಕ್ಕೆ…

BREAKING : ರಾಜ್ಯದ `ಆರೋಗ್ಯ ಇಲಾಖೆ’ಯಲ್ಲಿ ಖಾಲಿ ಇರುವ 1900 ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗೆ ಸರ್ಕಾರದಿಂದ ಗ್ರೀನ್ ಸಿಗ್ನಲ್.!

31/07/2025 7:20 PM

ನಿಮ್ಮ ಮನೆಯ ವಾಸ್ತು ದೋಷ ನಿವಾರಿಸಲು ಜಸ್ಟ್ ಹೀಗೆ ಮಾಡಿ ಸಾಕು

31/07/2025 7:18 PM

ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ‘ಜನರೇಟರ್ ಕಳ್ಳತನ’: ಬಿಜೆಪಿ ಪ್ರತಿಭಟನೆ, ತನಿಖೆಗೆ ಒತ್ತಾಯ

31/07/2025 7:15 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.