ಮಂಗಳೂರು: ಪಿಎಫ್​ಐ, ಎಸ್​ಡಿಪಿಐ ಕಚೇರಿ ಮೇಲೆ ಎನ್​ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದ್ರೆ ಈ ವೇಳೆ ಎನ್​ಐಎ ಅಧಿಕಾರಿಗಳು ಎಸ್​ಡಿಪಿಐ ಕಚೇರಿಯ ಬಾಗಿಲು ಗಾಜುಗಳನ್ನು ಪುಡಿ ಪುಡಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

BIGG BREAKING NEWS : ದೇಶಾದ್ಯಂತ `NIA’ ದಾಳಿ : ಕರ್ನಾಟಕದ 20 ಮಂದಿ ಸೇರಿ 106 `PFI’ ಕಾರ್ಯಕರ್ತರ ಬಂಧನ

ಈ ಕುರಿತು ಎಸ್​ಡಿಪಿಐ ಮುಖಂಡ ಅಥಾವುಲ್ಲ ಜೋಕಟ್ಟೆ ಮಾತನಾಡಿ, ನಮ್ಮ ಕಚೇರಿ ಮೇಲೆ ದಾಳಿ ಮಾಡುವ ವೇಳೆ ಎನ್​ಐಎ ಅಧಿಕಾರಿಗಳು ಅನಾಗರಿಕರಾಗಿ ವರ್ತಿಸಿದ್ದಾರೆ ಎಂದು ಆರೋಪ ಮಾಡಿದರು.

BIGG BREAKING NEWS : ದೇಶಾದ್ಯಂತ `NIA’ ದಾಳಿ : ಕರ್ನಾಟಕದ 20 ಮಂದಿ ಸೇರಿ 106 `PFI’ ಕಾರ್ಯಕರ್ತರ ಬಂಧನ

ಎನ್​ಐಎ ಇನ್ಸ್​ಪೆಕ್ಟರ್ ಷಣ್ಮುಗಂ ಅವರ ತಂಡ ದಾಳಿ ನಡೆಸಲು ಬಂದಾಗ ಕಚೇರಿಯ ಬಾಗಿಲುಗಳ ಗಾಜನ್ನು ಒಡೆದುಹಾಕಿದ್ದಾರೆ. ಕಚೇರಿಯಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಎನ್​ಐಎ ಅಧಿಕಾರಿಗಳು ಸರ್ಚ್ ವಾರಂಟ್ ಇಲ್ಲದೆ ಎಸ್​ಡಿಪಿಐ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಈ ಬಗ್ಗೆ ನಾವು ಕಾನೂನು ಹೋರಾಟ ಮಾಡಲಿದ್ದೇವೆ ಎಂದು ಹೇಳಿದರು.

Share.
Exit mobile version