Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING: ಹಾಸನದಲ್ಲಿ ಮಲಗಿದ್ದ ವೇಳೆಯೇ ಹೃದಯಾಘಾತ; ಆರೋಗ್ಯ ಇಲಾಖೆ ನೌಕರ ಸಾವು

08/03/2026 3:32 PM

ALERT : `WhatsApp’ ಬಳಕೆದಾರರೇ ಎಚ್ಚರ : ಈ `ಮೆಸೇಜ್’ ಕ್ಲಿಕ್ ಮಾಡಿದ್ರೆ ನಿಮ್ಮ ಬ್ಯಾಂಕ್ ಅಕೌಂಟ್ ಖಾಲಿ !

08/03/2026 3:30 PM

ರಾಜ್ಯ ಬಜೆಟ್‌ನಲ್ಲಿ ಕ್ವಾಂಟಮ್‌ ರೋಡ್‌ಮ್ಯಾಪ್‌ ಗೆ 10 ಕೋಟಿ ರೂ ಘೋಷಣೆ: ಸಮಗ್ರ ಅಭಿವೃದ್ದಿಯ ಐತಿಹಾಸಿಕ ಹೆಜ್ಜೆ: ಸಚಿವ ಎನ್‌ ಎಸ್‌ ಭೋಸರಾಜು

08/03/2026 3:23 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » Good News: ಬೆಂಗಳೂರು-ಗ್ವಾಲಿಯರ್ ನಡುವೆ ‘ಹೊಸ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು’ ಸಂಚಾರ
KARNATAKA

Good News: ಬೆಂಗಳೂರು-ಗ್ವಾಲಿಯರ್ ನಡುವೆ ‘ಹೊಸ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು’ ಸಂಚಾರ

By kannadanewsnow0926/06/2025 3:21 PM

ಹುಬ್ಬಳ್ಳಿ: ಕರ್ನಾಟಕ ಮತ್ತು ಮಧ್ಯಪ್ರದೇಶದ ನಡುವೆ ನೇರ ರೈಲು ಸಂಪರ್ಕವನ್ನು ಹೆಚ್ಚಿಸುವ ಉದ್ದೇಶದಿಂದ, ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಮಧ್ಯಪ್ರದೇಶದ ಗ್ವಾಲಿಯರ್ ನಿಲ್ದಾಣಗಳ ನಡುವೆ ಹೊಸ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ರೈಲ್ವೆ ಮಂಡಳಿ ಸಂಚರಿಸಲು ಘೋಷಿಸಿದೆ. ಈ ಸೇವೆಯು ರೈಲು ಸಂಖ್ಯೆ 11085/11086 ಎಸ್‌ಎಂವಿಟಿ ಬೆಂಗಳೂರು – ಗ್ವಾಲಿಯರ್ – ಎಸ್‌ಎಂವಿಟಿ ಬೆಂಗಳೂರು ಸಾಪ್ತಾಹಿಕ ಎಕ್ಸ್‌ಪ್ರೆಸ್ ಆಗಿ ಕಾರ್ಯನಿರ್ವಹಿಸಲಿದೆ.

ರೈಲು ಸಂಖ್ಯೆ 11085 ಎಸ್‌ಎಂವಿಟಿ ಬೆಂಗಳೂರು – ಗ್ವಾಲಿಯರ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ಜೂನ್ 29, 2025 ರಿಂದ ಪ್ರತಿ ಭಾನುವಾರ ಮಧ್ಯಾಹ್ನ 3:50ಕ್ಕೆ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಹೊರಟು ಮಂಗಳವಾರ ಬೆಳಿಗ್ಗೆ 10:25ಕ್ಕೆ ಗ್ವಾಲಿಯರ್ ಜಂಕ್ಷನ್‌ಗೆ ತಲುಪಲಿದೆ. ಮರಳಿ, ರೈಲು ಸಂಖ್ಯೆ 11086 ಗ್ವಾಲಿಯರ್ – ಎಸ್‌ಎಂವಿಟಿ ಬೆಂಗಳೂರು ಸಾಪ್ತಾಹಿಕ ಎಕ್ಸ್‌ಪ್ರೆಸ್ ಜುಲೈ 4, 2025 ರಿಂದ ಪ್ರತಿ ಶುಕ್ರವಾರ ಮಧ್ಯಾಹ್ನ 3:00ಕ್ಕೆ ಗ್ವಾಲಿಯರ್‌ನಿಂದ ಹೊರಟು ಭಾನುವಾರ ಬೆಳಿಗ್ಗೆ 07:35ಕ್ಕೆ ಎಸ್‌ಎಂವಿಟಿ ಬೆಂಗಳೂರಿಗೆ ಆಗಮಿಸಲಿದೆ.

ಈ ರೈಲು ಸೇವೆಯು 22 ಆಧುನಿಕ ಎಲ್‌ಎಚ್‌ಬಿ ಬೋಗಿಗಳನ್ನು ಒಳಗೊಂಡಿರಲಿದೆ. ಇವುಗಳಲ್ಲಿ 2 ಎಸಿ ಟು ಟೈರ್, 4 ಎಸಿ ತ್ರೀ ಟೈರ್, 3 ಎಸಿ ತ್ರೀ ಟೈರ್ ಎಕಾನಮಿ, 7 ಸ್ಲೀಪರ್ ಕ್ಲಾಸ್, 4 ಜನರಲ್ ಸೆಕೆಂಡ್ ಕ್ಲಾಸ್, 1 ಸೆಕೆಂಡ್ ಕ್ಲಾಸ್ ಲಗೇಜ್ ಕಮ್ ಅಂಗವಿಕಲ ಸ್ನೇಹಿ ಕಂಪಾರ್ಟ್‌ಮೆಂಟ್, ಮತ್ತು 1 ಲಗೇಜ್, ಜನರೇಟರ್ ಮತ್ತು ಬ್ರೇಕ್ ವ್ಯಾನ್ ಕೋಚ್ ಸೇರಿವೆ.

ಈ ರೈಲು ಎರಡೂ ಮಾರ್ಗಮಧ್ಯದಲ್ಲಿ, ಯಲಹಂಕ ಜಂಕ್ಷನ್, ಹಿಂದೂಪುರ, ಧರ್ಮಾವರಂ ಜಂಕ್ಷನ್, ಅನಂತಪುರ, ಧೋನೆ ಜಂಕ್ಷನ್, ಕರ್ನೂಲ್ ಸಿಟಿ, ಗದ್ವಾಲ್ ಜಂಕ್ಷನ್, ಮಹಬೂಬ್‌ನಗರ, ಕಾಚೆಗುಡ, ಕಾಜಿಪೇಟ್ ಜಂಕ್ಷನ್, ಬೆಲ್ಲಂಪಳ್ಳಿ, ಸಿರ್ಪುರ್ ಕಾಘಜ್‌ನಗರ, ಬಲ್ಹರ್ಷಾ, ಚಂದ್ರಪುರ್, ಸೇವಾಗ್ರಾಮ್, ನಾಗ್ಪುರ, ಬೇತುಲ್, ಭೋಪಾಲ್ ಜಂಕ್ಷನ್, ವಿದಿಶಾ, ಬೀನಾ ಜಂಕ್ಷನ್, ಅಶೋಕ್ ನಗರ, ಗುಣ, ಮತ್ತು ಶಿವಪುರಿ ನಿಲ್ದಾಣಗಳಲ್ಲಿ ನಿಲುಗಡೆ ಮಾಡಲಿದೆ.

ಈ ಹೊಸ ರೈಲು ಸೇವೆಯು ದಕ್ಷಿಣ ಮತ್ತು ಮಧ್ಯ ಭಾರತದ ನಡುವೆ ಪ್ರಯಾಣದ ಅನುಕೂಲತೆಯನ್ನು ಗಣನೀಯವಾಗಿ ಸುಧಾರಿಸುವ ನಿರೀಕ್ಷೆಯಿದೆ ಮತ್ತು ಪ್ರಾದೇಶಿಕ ಸಂಪರ್ಕವನ್ನು ಬಲಪಡಿಸುತ್ತದೆ.

ವಿವರವಾದ ಆಗಮನ ಮತ್ತು ನಿರ್ಗಮನದ ಸಮಯಗಳು, ದರ, ಸೀಟುಗಳ ಲಭ್ಯತೆ ಮತ್ತು ಇತರ ಬುಕಿಂಗ್-ಸಂಬಂಧಿತ ಮಾಹಿತಿಗಾಗಿ, ಪ್ರಯಾಣಿಕರು ಭಾರತೀಯ ರೈಲ್ವೆಯ ಅಧಿಕೃತ ವೆಬ್‌ಸೈಟ್ www.irctc.co.in ಗೆ ಭೇಟಿ ನೀಡಬಹುದು ಅಥವಾ NTES/ಮೊಬೈಲ್ ಅಪ್ಲಿಕೇಶನ್‌ಗಳನ್ನು ಬಳಸಬಹುದು.

ಮಂಗಳೂರಿನಲ್ಲಿ ಅತ್ಯಾಧುನಿಕ ಟ್ಯಾಂಕರ್‌ ಮಾಪನಾಂಕ ನಿರ್ಣಯ ಘಟಕ ಕಾರ್ಯಾರಂಭ

ಉದ್ಯೋಗಿಗಳೇ ಗಮನಿಸಿ : ಪ್ರತಿ ತಿಂಗಳು ನಿಮ್ಮ ಸಂಬಳದಿಂದ `PF’ ಕಡಿತಗೊಂಡರೆ ಸಿಗಲಿವೆ ಈ 7 ಪ್ರಯೋಜನಗಳು.!

Share. Facebook Twitter LinkedIn WhatsApp Email

Related Posts

SHOCKING: ಹಾಸನದಲ್ಲಿ ಮಲಗಿದ್ದ ವೇಳೆಯೇ ಹೃದಯಾಘಾತ; ಆರೋಗ್ಯ ಇಲಾಖೆ ನೌಕರ ಸಾವು

08/03/2026 3:32 PM1 Min Read

ALERT : `WhatsApp’ ಬಳಕೆದಾರರೇ ಎಚ್ಚರ : ಈ `ಮೆಸೇಜ್’ ಕ್ಲಿಕ್ ಮಾಡಿದ್ರೆ ನಿಮ್ಮ ಬ್ಯಾಂಕ್ ಅಕೌಂಟ್ ಖಾಲಿ !

08/03/2026 3:30 PM2 Mins Read

ರಾಜ್ಯ ಬಜೆಟ್‌ನಲ್ಲಿ ಕ್ವಾಂಟಮ್‌ ರೋಡ್‌ಮ್ಯಾಪ್‌ ಗೆ 10 ಕೋಟಿ ರೂ ಘೋಷಣೆ: ಸಮಗ್ರ ಅಭಿವೃದ್ದಿಯ ಐತಿಹಾಸಿಕ ಹೆಜ್ಜೆ: ಸಚಿವ ಎನ್‌ ಎಸ್‌ ಭೋಸರಾಜು

08/03/2026 3:23 PM2 Mins Read
Recent News

SHOCKING: ಹಾಸನದಲ್ಲಿ ಮಲಗಿದ್ದ ವೇಳೆಯೇ ಹೃದಯಾಘಾತ; ಆರೋಗ್ಯ ಇಲಾಖೆ ನೌಕರ ಸಾವು

08/03/2026 3:32 PM

ALERT : `WhatsApp’ ಬಳಕೆದಾರರೇ ಎಚ್ಚರ : ಈ `ಮೆಸೇಜ್’ ಕ್ಲಿಕ್ ಮಾಡಿದ್ರೆ ನಿಮ್ಮ ಬ್ಯಾಂಕ್ ಅಕೌಂಟ್ ಖಾಲಿ !

08/03/2026 3:30 PM

ರಾಜ್ಯ ಬಜೆಟ್‌ನಲ್ಲಿ ಕ್ವಾಂಟಮ್‌ ರೋಡ್‌ಮ್ಯಾಪ್‌ ಗೆ 10 ಕೋಟಿ ರೂ ಘೋಷಣೆ: ಸಮಗ್ರ ಅಭಿವೃದ್ದಿಯ ಐತಿಹಾಸಿಕ ಹೆಜ್ಜೆ: ಸಚಿವ ಎನ್‌ ಎಸ್‌ ಭೋಸರಾಜು

08/03/2026 3:23 PM

ALERT : ವಯಸ್ಸಿಗೆ ಅನುಗುಣವಾಗಿ ತಿಂಗಳಿಗೆ ಯಾರು ಎಷ್ಟು ಬಾರಿ `ಸೆಕ್ಸ್’ ಮಾಡುವುದು ಸೂಕ್ತ? ಇಲ್ಲಿದೆ ಮಾಹಿತಿ

08/03/2026 3:02 PM
State News
KARNATAKA

SHOCKING: ಹಾಸನದಲ್ಲಿ ಮಲಗಿದ್ದ ವೇಳೆಯೇ ಹೃದಯಾಘಾತ; ಆರೋಗ್ಯ ಇಲಾಖೆ ನೌಕರ ಸಾವು

By kannadanewsnow0908/03/2026 3:32 PM KARNATAKA 1 Min Read

ಹಾಸನ: ಜಿಲ್ಲೆಯ ಆರೋಗ್ಯ ಇಲಾಖೆಯಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನೌಕರರೊಬ್ಬರು ಹೃದಯಾಘಾತದಿಂದ ಅಕಾಲಿಕ ಮರಣ ಹೊಂದಿರುವ ಘಟನೆ ಹಾಸನ ಹೊರವಲಯದ…

ALERT : `WhatsApp’ ಬಳಕೆದಾರರೇ ಎಚ್ಚರ : ಈ `ಮೆಸೇಜ್’ ಕ್ಲಿಕ್ ಮಾಡಿದ್ರೆ ನಿಮ್ಮ ಬ್ಯಾಂಕ್ ಅಕೌಂಟ್ ಖಾಲಿ !

08/03/2026 3:30 PM

ರಾಜ್ಯ ಬಜೆಟ್‌ನಲ್ಲಿ ಕ್ವಾಂಟಮ್‌ ರೋಡ್‌ಮ್ಯಾಪ್‌ ಗೆ 10 ಕೋಟಿ ರೂ ಘೋಷಣೆ: ಸಮಗ್ರ ಅಭಿವೃದ್ದಿಯ ಐತಿಹಾಸಿಕ ಹೆಜ್ಜೆ: ಸಚಿವ ಎನ್‌ ಎಸ್‌ ಭೋಸರಾಜು

08/03/2026 3:23 PM

ALERT : ವಯಸ್ಸಿಗೆ ಅನುಗುಣವಾಗಿ ತಿಂಗಳಿಗೆ ಯಾರು ಎಷ್ಟು ಬಾರಿ `ಸೆಕ್ಸ್’ ಮಾಡುವುದು ಸೂಕ್ತ? ಇಲ್ಲಿದೆ ಮಾಹಿತಿ

08/03/2026 3:02 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.