Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಹರಿಯಾಣದಲ್ಲಿ ಘೋರ ದುರಂತ : ನಿರ್ಮಾಣ ಹಂತದ ಕಟ್ಟಡ ಕುಸಿದು ಇಬ್ಬರು ಮಹಿಳಾ ಕಾರ್ಮಿಕರು ಸಾವು!

23/05/2025 6:38 PM

ಕಾಂಗ್ರೆಸ್ ನಾಯಕರನ್ನು ಟೀಕೆ ಮಾಡುವುದಕ್ಕೆ MLC ಸ್ಥಾನ ಪಡೆದ ದೊಡ್ಡ ಗಿರಾಕಿ ಛಲವಾದಿ ನಾರಾಯಣಸ್ವಾಮಿ: ರಮೇಶ್ ಬಾಬು

23/05/2025 6:31 PM

BREAKING : ಸಾಂಗ್ಲಿಯಲ್ಲಿ ಬೆಳಗಾವಿ ಮೂಲದ ‘MBBS’ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ!

23/05/2025 6:26 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕಾಂಗ್ರೆಸ್ ನಾಯಕರನ್ನು ಟೀಕೆ ಮಾಡುವುದಕ್ಕೆ MLC ಸ್ಥಾನ ಪಡೆದ ದೊಡ್ಡ ಗಿರಾಕಿ ಛಲವಾದಿ ನಾರಾಯಣಸ್ವಾಮಿ: ರಮೇಶ್ ಬಾಬು
KARNATAKA

ಕಾಂಗ್ರೆಸ್ ನಾಯಕರನ್ನು ಟೀಕೆ ಮಾಡುವುದಕ್ಕೆ MLC ಸ್ಥಾನ ಪಡೆದ ದೊಡ್ಡ ಗಿರಾಕಿ ಛಲವಾದಿ ನಾರಾಯಣಸ್ವಾಮಿ: ರಮೇಶ್ ಬಾಬು

By kannadanewsnow0923/05/2025 6:31 PM

ಬೆಂಗಳೂರು: ಕಾಂಗ್ರೆಸ್ ‌ಪಕ್ಷದ ನಾಯಕರನ್ನು ಕೇವಲ ಟೀಕೆ ಮಾಡುವುದಕ್ಕೆ ವಿಧಾನ ಪರಿಷತ್ತಿನ ಸದಸ್ಯ ಸ್ಥಾನವನ್ನು ಪಡೆದ ದೊಡ್ಡ ಗಿರಾಕಿ.‌ ಈ ಪದ ಬಳಸಬಾರದು ಆದರೆ ಕಳೆದ ಎರಡು ದಿನಗಳಿಂದ ನಡೆದ ರಾಜಕಯ ಬೆಳವಣಿಗೆ ಕಾರಣಕ್ಕೆ ಹೇಳಬೇಕಾಗಿದೆ ಅಂತ ಮಾಜಿ ಪರಿಷತ್ ಸದಸ್ಯ, ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ವಾಗ್ಧಾಳಿ ನಡೆಸಿದ್ದಾರೆ.

ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು,  ಇವರಿಗೆ ನಾಯಿ ಎನ್ನುವ ಪದದ ಮೇಲೆ ಸಾಕಷ್ಟು ಒಲವಿದೆ ಅನ್ನಿಸುತ್ತದೆ. ಅವರು ಆರ್ ಎಸ್ ಎಸ್ ನ ಬುಲ್‌ಡಾಗ್ ಇರಬಹುದು. ಸಂಘ ಪರಿವಾರದವರು ಅವರನ್ನು ಬುಲ್ ಡಾಗ್ ರೀತಿ ಬೆಳೆಸಿದ್ದಾರಾ ಎಂದು ಹೇಳಬೇಕು. ಈ ಪದವನ್ನು ಇಟ್ಟುಕೊಂಡು ಅವರನ್ನು ನಾನು ಟೀಕೆ ಮಾಡಲು ಹೋಗುವುದಿಲ್ಲ ಎಂದರು.

ಯಾವುದೇ ಪಕ್ಷವಾದರೂ ಎಲ್ಲೆಯನ್ನು ಮೀರಿ ಭಾಷೆಯನ್ನು ಬಳಸಿ ಟೀಕೆ ಮಾಡುವ ಸಂಪ್ರದಾಯ ನಮ್ಮ‌ ರಾಜ್ಯದಲ್ಲಿ ಇಲ್ಲ. ಆದರೆ ಕಳೆದ ಐದಾರು ವರ್ಷಗಳಿಂದ ಭಾರತೀಯ ಜನತಾ ಪಕ್ಷದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಳವಾಗಿದೆ. ಟೀಕೆ ಮಾಡಿದರೆ ರಾತ್ರೋರಾತ್ರಿ ನಾಯಕರಾಗಬಹುದು ಎಂದು ತರಬೇತಿ ಪಡೆಯುತ್ತಿದ್ದಾರೆ. ಈ ತರಬೇತಿಯನ್ನು ಕೇಶವ ಕೃಪಾ, ಬೈಠಕ್ ಹೀಗೆ ಎಲ್ಲಿ ನೀಡಲಾಗುತ್ತಿದೆ ಎಂದು ಸಂಘ- ಪರಿವಾರದವರೇ ಹೇಳಬೇಕು ಎಂದರು.

ಸದಾ ವತ್ಸಲೇ ಮಾತೃಭೂಮಿ ಎಂದು ರಾಜಕೀಯ ಮಾಡುತ್ತಿದ್ದವರು ಈಗ ಸದಾ ಬೈಯುವುದೇ ರಾಜಕೀಯ ಎಂದು ಕೊಂಡಿದ್ದಾರೆ. ಇದಲ್ಲೆ ಛಲವಾದಿ ನಾರಾಯಣಸ್ವಾಮಿ ಅವರೇ ಉದಾಹರಣೆ. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ದುರ್ಬಲ ವಿರೋಧ ಪಕ್ಷ ಎಂದರೆ ಅದು ಬಿಜೆಪಿ. ಎರಡೂ ಮನೆಗಳಲ್ಲಿ ಅತ್ಯಂತ ಬೌದ್ದಿಕ ಹೀನರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಗುಡುಗಿದರು.

ಆರ್.ಅಶೋಕ್ ಅವರಿಗೆ ಪ್ರೆಸ್ ಮೀಟ್ ಮಾಡುವುದು ಬಿಟ್ಟು ಬೇರೆ ಏನೂ ಗೊತ್ತಿಲ್ಲ ಜೊತೆಗೆ ಪದಬಳಕೆಯೂ ತಿಳಿದಿಲ್ಲ. ದಿನಬೆಳಗಾದರೆ ಆಡಳಿತ ಪಕ್ಷವನ್ನು ಬೈಯ್ಯುವುದು, ಮಾಧ್ಯಮ ಗೋಷ್ಟಿ ಮಾಡುವುದು ಇಷ್ಟಕ್ಕೆ ನಾಯಕ ಎಂದು ಕೊಂಡಿದ್ದಾರೆ. ಈ ಛಲವಾದಿ ನಾರಾಯಣಸ್ವಾಮಿ ಅವರು ಜನತಾ ಪರಿವಾರದಿಂದ ರಾಜಕೀಯ ಪ್ರಾರಂಭ ಮಾಡಿ ಜೀವರಾಜ ಆಳ್ವ ಅವರಿಂದ ರಾಜಕೀಯ ನೆಲೆ ಪಡೆದು. ಸೈಕಲ್ ನಾರಾಯಣ ಸ್ವಾಮಿ ಎಂದು ಪ್ರಸಿದ್ದರಾಗಿ. ಬಂಗಾರಪ್ಪ, ಮಲ್ಲಿಕಾರ್ಜುನ ಖರ್ಗೆ ಅವರ ಬಳಿ ರಾಜಕೀಯ ಆಶ್ರಯ ಪಡೆದು, ಕಾಂಗ್ರೆಸ್ ಪಕ್ಷದಿಂದ ಎಲ್ಲಾ ಅನುಕೂಲ ಪಡೆದು ಈಗ ಪಕ್ಷ ಹಾಗೂ ನಾಯಕರನ್ನು ಟೀಕೆ ಮಾಡುವ ವಿಶ್ವವಿಖ್ಯಾತ ರಾಜಕಾರಣಿ ಛಲವಾದಿ ನಾರಾಯಣಸ್ವಾಮಿ ಎಂದು ಕಿಡಿಕಾರಿದರು.

ಸಂಘ ಪರಿವಾರದವರು ವಾರಕ್ಕೊಮ್ಮೆ ಬೈಠಕ್ ಮಾಡಿ ಖರ್ಗೆ ಕುಟುಂಬದ ವಿರುದ್ದ, ಕಾಂಗ್ರೆಸ್ ವಿರುದ್ದ ಯಾವ ಪದ ಬಳಕೆ ಮಾಡಬೇಕು ಎಂದು ತರಬೇತಿ ನೀಡುತ್ತಿದ್ದಾರೆ. ಚಿತ್ತಾಪುರ ಸೇರಿದಂತೆ ಇತರೆಡೆ ಅವರು ಬಳಕೆ ಮಾಡಿರುವ ಪದವನ್ನು ಇಡೀ ರಾಜ್ಯ ನೋಡುತ್ತಿದೆ ಎಂದರು.

ಬಿಜೆಪಿಯಿಂದ ಉಚ್ಚಾಟಿತರಾದಂತಹ ಈಶ್ವರಪ್ಪ, ಯತ್ನಾಳ್ ಅವರು, ರಾಜಕೀಯ ನಿರುದ್ಯೋಗಿ ಪ್ರತಾಪ್ ಸಿಂಹ ಅವರು, ಅಶೋಕ್, ಶಾಸಕ ರಘು ಹೀಗೆ ಇಂತಹವರದ್ದೇ ಒಂದು ತಂಡವಿದೆ. ಈ ತಂಡದ ನಾಯಕ ನಾರಾಯಣಸ್ವಾಮಿ ಅವರು. ಇವರು ಆರ್ ಎಸ್ ಎಸ್ ನ ಚಡ್ಡಿ ಹೊತ್ತಂತಹ ವೀರ. ಸ್ವಾಭಿಮಾನ ಅಡವಿಟ್ಟಿದ್ದಾರೆ. ರಾತ್ರೋರಾತ್ರಿ ನಾಯಕರಾಗಬೇಕು ಎಂದು ಹೊರಟಿರುವ ಎಂಎಲ್ ಸಿಗಳು ವಿಧಾನಸೌಧದಲ್ಲಿ ಮಾಧ್ಯಮ ಗೋಷ್ಟಿ ‌ಮಾಡಿದ್ದಾರೆ ಎಂದರು.

ಕಾಂಗ್ರೆಸ್ ನಾಯಕರನ್ನು ಸದಾ ಟೀಕೆ ಮಾಡಿ ಎಂದು ನಾಗಪುರದಿಂದ ನಿರ್ಸೇಶನ ಬಂದಿರಬೇಕು ಎಂದು ಕೊಂಡಿದ್ದೇನೆ. ಅರಗ ಜ್ಞಾನೇಂದ್ರ ಅವರು ಖರ್ಗೆ ಅವರ ಬಣ್ಣವನ್ನು ಇಟ್ಟುಕೊಂಡು ಹೀಯಾಳಿಸಿದ್ದರು. ಇವರಿಗೆ ಇನ್ನೂ ನಾಚಿಕೆ, ಮಾನ ಮರ್ಯಾದೆ ಬಂದಿಲ್ಲ. ಇಂದು ಮತ್ತೆ ಖರ್ಗೆ ಕುಟುಂಬದ ಮೇಲೆ ಮತ್ತೊಂದು ಪದ ಬಳಕೆ ಮಾಡಿದ್ದಾರೆ. ಅವರಿಗೆ ನಾವು ಹೆದರುವುದಿಲ್ಲ. ಜನರೇ ಇವರಿಗೆ ಬುದ್ದಿ ಕಲಿಸುತ್ತಾರೆ ಎಂದು ನಂಬಿದ್ದೇನೆ. ನಮ್ಮ ಪಕ್ಷ ನಿಮ್ಮನ್ನು ಹೆಸರಿಸುವ ಬೆದರಿಸುವ ಕೆಲಸ ಮಾಡುವುದಿಲ್ಲ. ನಮಗೆ ಇದು ಅವಶ್ಯಕತೆಯೂ ಇಲ್ಲ ಎಂದು ಹೇಳಿದರು.

ಉದ್ಯೋಗವಾರ್ತೆ: 51,000 ಅತಿಥಿ ಶಿಕ್ಷಕರ ನೇಮಕಕ್ಕೆ ರಾಜ್ಯ ಸರ್ಕಾರದಿಂದ ಆದೇಶ , ಇಲ್ಲಿದೆ ಸಂಪೂರ್ಣ ಮಾಹಿತಿ..!

BREAKING: ನಾಳೆ ಮಧ್ಯಾಹ್ನ 2 ಗಂಟೆಗೆ KCET-2025ರ ಫಲಿತಾಂಶ ಪ್ರಕಟ: ರಿಸಲ್ಟ್ ಈ ರೀತಿ ಚೆಕ್ ಮಾಡಿ | KCET Result 2025

Share. Facebook Twitter LinkedIn WhatsApp Email

Related Posts

BREAKING : ಸಾಂಗ್ಲಿಯಲ್ಲಿ ಬೆಳಗಾವಿ ಮೂಲದ ‘MBBS’ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ!

23/05/2025 6:26 PM1 Min Read

ಮದ್ದೂರು ನಗರಸಭೆಯಾಗಿ ಮೇಲ್ದರ್ಜೆಗೆ: ಸಿಎಂ, ಡಿಸಿಎಂ ಗೆ ಅಭಿನಂದನೆ ಸಲ್ಲಿಸಿದ ಶಾಸಕ ಕೆ.ಎಂ.ಉದಯ್

23/05/2025 6:15 PM2 Mins Read

ಮೇ.25ರಂದು ಬೆಂಗಳೂರಲ್ಲಿ UPSC ಪ್ರಿಲಿಮಿನರಿ ಪರೀಕ್ಷೆ: ಬೆಳಗ್ಗೆ 6 ಗಂಟೆಗೆ ಮೆಟ್ರೋ ಸಂಚಾರ ಆರಂಭ | Namma Metro

23/05/2025 6:04 PM1 Min Read
Recent News

BIG NEWS : ಹರಿಯಾಣದಲ್ಲಿ ಘೋರ ದುರಂತ : ನಿರ್ಮಾಣ ಹಂತದ ಕಟ್ಟಡ ಕುಸಿದು ಇಬ್ಬರು ಮಹಿಳಾ ಕಾರ್ಮಿಕರು ಸಾವು!

23/05/2025 6:38 PM

ಕಾಂಗ್ರೆಸ್ ನಾಯಕರನ್ನು ಟೀಕೆ ಮಾಡುವುದಕ್ಕೆ MLC ಸ್ಥಾನ ಪಡೆದ ದೊಡ್ಡ ಗಿರಾಕಿ ಛಲವಾದಿ ನಾರಾಯಣಸ್ವಾಮಿ: ರಮೇಶ್ ಬಾಬು

23/05/2025 6:31 PM

BREAKING : ಸಾಂಗ್ಲಿಯಲ್ಲಿ ಬೆಳಗಾವಿ ಮೂಲದ ‘MBBS’ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ!

23/05/2025 6:26 PM

ಮದ್ದೂರು ನಗರಸಭೆಯಾಗಿ ಮೇಲ್ದರ್ಜೆಗೆ: ಸಿಎಂ, ಡಿಸಿಎಂ ಗೆ ಅಭಿನಂದನೆ ಸಲ್ಲಿಸಿದ ಶಾಸಕ ಕೆ.ಎಂ.ಉದಯ್

23/05/2025 6:15 PM
State News
KARNATAKA

ಕಾಂಗ್ರೆಸ್ ನಾಯಕರನ್ನು ಟೀಕೆ ಮಾಡುವುದಕ್ಕೆ MLC ಸ್ಥಾನ ಪಡೆದ ದೊಡ್ಡ ಗಿರಾಕಿ ಛಲವಾದಿ ನಾರಾಯಣಸ್ವಾಮಿ: ರಮೇಶ್ ಬಾಬು

By kannadanewsnow0923/05/2025 6:31 PM KARNATAKA 2 Mins Read

ಬೆಂಗಳೂರು: ಕಾಂಗ್ರೆಸ್ ‌ಪಕ್ಷದ ನಾಯಕರನ್ನು ಕೇವಲ ಟೀಕೆ ಮಾಡುವುದಕ್ಕೆ ವಿಧಾನ ಪರಿಷತ್ತಿನ ಸದಸ್ಯ ಸ್ಥಾನವನ್ನು ಪಡೆದ ದೊಡ್ಡ ಗಿರಾಕಿ.‌ ಈ…

BREAKING : ಸಾಂಗ್ಲಿಯಲ್ಲಿ ಬೆಳಗಾವಿ ಮೂಲದ ‘MBBS’ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ!

23/05/2025 6:26 PM

ಮದ್ದೂರು ನಗರಸಭೆಯಾಗಿ ಮೇಲ್ದರ್ಜೆಗೆ: ಸಿಎಂ, ಡಿಸಿಎಂ ಗೆ ಅಭಿನಂದನೆ ಸಲ್ಲಿಸಿದ ಶಾಸಕ ಕೆ.ಎಂ.ಉದಯ್

23/05/2025 6:15 PM

ಮೇ.25ರಂದು ಬೆಂಗಳೂರಲ್ಲಿ UPSC ಪ್ರಿಲಿಮಿನರಿ ಪರೀಕ್ಷೆ: ಬೆಳಗ್ಗೆ 6 ಗಂಟೆಗೆ ಮೆಟ್ರೋ ಸಂಚಾರ ಆರಂಭ | Namma Metro

23/05/2025 6:04 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.