Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ ಜ್ಯೋತಿ ಮಲ್ಹೋತ್ರಾ ಪಾಕ್ ಕಾರ್ಯಕರ್ತರೊಂದಿಗೆ ಸಂಪರ್ಕದಲ್ಲಿದ್ದರು. ಭಯೋತ್ಪಾದನೆ ಜೊತೆ ಇಲ್ಲ’: ಪೊಲೀಸರು

22/05/2025 11:33 AM

BREAKING : ಕನ್ನಡ ಸಿನಿಮಾಗಳನ್ನು ಹಿಂದಿ ಭಾಷೆಯಲ್ಲಿ ಡಬ್ ಮಾಡಬೇಡಿ : ಕನ್ನಡದ ಬಗ್ಗೆ ಮತ್ತೆ ನಾಲಗೆ ಹರಿಬಿಟ್ಟ ಗಾಯಕ ಸೋನು ನಿಗಮ್.!

22/05/2025 11:25 AM

ಆಪರೇಷನ್ ಸಿಂಧೂರ್ ವೇಳೆ 3,000 ಅಗ್ನಿವೀರರು ಭಾಗಿ | Agniveer

22/05/2025 11:25 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ದಲಿತರ ಹಣ’ ಗ್ಯಾರಂಟಿ ಯೋಜನೆಗಳಿಗೆ ಬಳಸಿದ್ದಕ್ಕೆ ‘ಛಲವಾದಿ ನಾರಾಯಣಸ್ವಾಮಿ’ ಆಕ್ಷೇಪ
KARNATAKA

‘ದಲಿತರ ಹಣ’ ಗ್ಯಾರಂಟಿ ಯೋಜನೆಗಳಿಗೆ ಬಳಸಿದ್ದಕ್ಕೆ ‘ಛಲವಾದಿ ನಾರಾಯಣಸ್ವಾಮಿ’ ಆಕ್ಷೇಪ

By kannadanewsnow0928/02/2025 4:14 PM

ಬಳ್ಳಾರಿ: ಒಂದು ಕೈಯಲ್ಲಿ ಕೊಟ್ಟಂತೆ ಮಾಡಿ ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುವುದು ಈ ಕಾಂಗ್ರೆಸ್ ಪಕ್ಷದ ಜಾಯಮಾನ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದ್ದಾರೆ. ಸಿದ್ದರಾಮಯ್ಯನವರು ಜನತಾದಳದಿಂದ ಬಂದು ಆ ವೃತ್ತಿಯನ್ನು ಇಲ್ಲಿ ಕಲಿತಿದ್ದಾರೆ ಎಂದು ಟೀಕಿಸಿದ್ದಾರೆ.

ಎಸ್‍ಸಿಎಸ್‍ಪಿ, ಟಿಎಸ್‍ಪಿ ಯೋಜನೆಯ ಸುಮಾರು ರೂ. 25,000 ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿದ ಕಾಂಗ್ರೆಸ್ ಸರ್ಕಾರದ ನಡೆಯನ್ನು ಖಂಡಿಸಿ ಬಳ್ಳಾರಿಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. ದಲಿತರ ಹಣವನ್ನು ಸರಕಾರ ಅನ್ಯ ಉದ್ದೇಶಕ್ಕೆ ಬಳಸಿ ಅನ್ಯಾಯ ಮಾಡಿದ ವಿಚಾರವನ್ನು ಮನೆಮನೆಗೆ ತಲುಪಿಸಲು ಅವರು ಮನವಿ ಮಾಡಿದರು.

ಮೊದಲ ವರ್ಷ 34 ಸಾವಿರ ಕೋಟಿ ದಲಿತರಿಗೆ ಮೀಸಲಿಟ್ಟಿದ್ದಾಗಿ ಮುಖ್ಯಮಂತ್ರಿಗಳು ಭಾಷಣ ಮಾಡಿದ್ದರು. ಇದು ಸುಳ್ಳು; ಹೇಳಿದ್ದು ಮಾತ್ರ. ಅದರಲ್ಲಿ 11,144 ಕೋಟಿ ಮೊತ್ತವನ್ನು ಗ್ಯಾರಂಟಿಗೆ ಕೊಟ್ಟಿದ್ದಾರೆ. ಎರಡನೇ ವರ್ಷದಲ್ಲಿ ಇಲ್ಲಿಂದ 14,366 ಕೋಟಿಯನ್ನು ಗ್ಯಾರಂಟಿಗಳಿಗೆ ಕೊಟ್ಟರು ಎಂದು ದೂರಿದರು.

ದಲಿತರ ಹಣವನ್ನು ಈ ಸರಕಾರ ದುರುಪಯೋಗ ಮಾಡುತ್ತಿದೆ ಎಂಬ ವಿಚಾರವನ್ನು ತಿಳಿಸಲು ಮಾನ್ಯ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು 14 ತಂಡಗಳನ್ನು ರಚಿಸಿದ್ದಾರೆ. 28 ಸಂಸದೀಯ ಕ್ಷೇತ್ರಗಳಿದ್ದು, ಒಂದೊಂದು ತಂಡವು 2 ಕ್ಷೇತ್ರಗಳಲ್ಲಿ ಪ್ರವಾಸ ಮಾಡುತ್ತಿದೆ ಎಂದು ವಿವರ ನೀಡಿದರು. ನಮ್ಮ ತಂಡವು ಬಳ್ಳಾರಿ- ಕೊಪ್ಪಳ ಕ್ಷೇತ್ರಗಳಲ್ಲಿ ಜನಜಾಗೃತಿ ಮೂಡಿಸುತ್ತಿದೆ ಎಂದರು.

ಕಾಂಗ್ರೆಸ್ ಸರಕಾರವು ದಲಿತರ ಅಭ್ಯುದಯಕ್ಕಾಗಿ ಇರುವ ಎಸ್‍ಸಿಎಸ್‍ಪಿ, ಟಿಎಸ್‍ಪಿ ಹಣವನ್ನು ದುರುಪಯೋಗ ಮಾಡಿಕೊಂಡಿದೆ. ಎಸ್‍ಸಿ, ಎಸ್‍ಟಿಗಳಿಗೆ ಅನ್ಯಾಯ ಆಗಿದೆ. ಅದಕ್ಕೆ ಇವತ್ತು ಜನಾರ್ದನ ರೆಡ್ಡಿ, ಸೋಮಶೇಖರ ರೆಡ್ಡಿ, ಜಿಲ್ಲಾಧ್ಯಕ್ಷರು ಸೇರಿ ಎಲ್ಲರೂ ಬಂದಿದ್ದಾರೆ ಎಂದರು.

ನಿರುದ್ಯೋಗಿಗಳಿಗೆ ಸ್ವ ಉದ್ಯೋಗ ಸೃಷ್ಟಿ ಸೇರಿದಂತೆ ಶೇ 60 ರಷ್ಟು ಮೊತ್ತವನ್ನು ಅಸೆಟ್ ಕ್ರಿಯೇಷನ್‍ಗೆ ಬಳಸಬೇಕಿತ್ತು. ಭೂರಹಿತರಿಗೆ ಭೂಮಿ ಕೊಡಬೇಕಿತ್ತು. ಭೂಮಿ ಇದ್ದವರಿಗೆ ಕೊಳವೆಬಾವಿ ಹಾಕಿಸಿ ಕೊಡಬೇಕಿತ್ತು ಎಂದರು.

ಯಾರೇ ಎಸ್‍ಸಿ, ಎಸ್‍ಟಿಗಳಿಗೆ ಅನ್ಯಾಯ ಆದರೂ, ಹಿಂದುಳಿದವರು, ಅಲ್ಪಸಂಖ್ಯಾತರಿಗೆ ಅನ್ಯಾಯ ಆದರೆ, ಯಾರಿಗೇ ಅನ್ಯಾಯ ಆದರೂ ನಮ್ಮ ಪಕ್ಷ ಹೋರಾಟ ಮಾಡುತ್ತದೆ ಎಂದು ತಿಳಿಸಿದರು. ಕಾಂಗ್ರೆಸ್ ಸರಕಾರವು ಗ್ಯಾರಂಟಿ ವಿಚಾರದಲ್ಲಿ ಮೂರು ನಾಮ ಹಾಕಿದೆ ಎಂದು ಜನರೇ ಈಗ ಹೇಳುತ್ತಿದ್ದಾರೆ ಎಂದು ಆರೋಪಿಸಿದರು.

ಇಂಥ ಗ್ಯಾರಂಟಿಗಳನ್ನು ಕೊಟ್ಟು ಚುನಾವಣೆಯಲ್ಲಿ ಕಾಂಗ್ರೆಸ್ಸಿಗರು ಗೆದ್ದಿದ್ದರು ಎಂದು ಆಕ್ಷೇಪಿಸಿದರು.

ವಾಲ್ಮೀಕಿ ನಿಗಮದ 87 ಕೋಟಿ ಹಣದ ಅವ್ಯವಹಾರವನ್ನು ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ ಎಂದು ಗಮನ ಸೆಳೆದರು. ಆದರೆ, ಸರಕಾರದ ಎಸ್‍ಐಟಿ ಈ ವಿಚಾರದಲ್ಲಿ ಆರೋಪಿಗಳ ಹೆಸರನ್ನು ಬಿಟ್ಟು ಕ್ಲೀನ್ ಚಿಟ್ ಕೊಟ್ಟಿದೆ ಎಂದು ಟೀಕಿಸಿದರು. ಈ ನಿಗಮದ ದುಡ್ಡು ಹೊಡೆದವರು ಜಮೀನು ಖರೀದಿಸಿದ್ದಲ್ಲದೇ ಲ್ಯಾಂಬೊರ್ಗಿನಿ ಕಾರು ಖರೀದಿಸಿ ದಲಿತರಿಗೆ ಮೋಸ ಮಾಡಿದ್ದಾರೆ ಎಂದು ಖಂಡಿಸಿದರು. ಕದ್ದ ಮಾಲು ವಾಪಸ್ ಕೊಟ್ಟರೆ ಅವರ ಮೇಲೆ ಕೇಸಿಲ್ಲ ಎಂಬ ನೀತಿ ಇವರದು ಎಂದು ಟೀಕಿಸಿದರು.

ಬದ್ಧತೆ, ಶಿಸ್ತಿನಿಂದ ಕಲಿತರೆ ನೀವೂ ಸಿ.ವಿ ರಾಮನ್, ಕಲ್ಪನಾ ಚಾವ್ಲಾರಂತೆ ಸಾಧನೆ ಮಾಡಬಹುದು: ಮಕ್ಕಳಿಗೆ DKS ಕಿವಿಮಾತು

BREAKING: ಪಾಕಿಸ್ತಾನದಲ್ಲಿ ಪ್ರಬಲ ಬಾಂಬ್ ಸ್ಪೋಟ: ಐವರು ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

Share. Facebook Twitter LinkedIn WhatsApp Email

Related Posts

BREAKING : ಕನ್ನಡ ಸಿನಿಮಾಗಳನ್ನು ಹಿಂದಿ ಭಾಷೆಯಲ್ಲಿ ಡಬ್ ಮಾಡಬೇಡಿ : ಕನ್ನಡದ ಬಗ್ಗೆ ಮತ್ತೆ ನಾಲಗೆ ಹರಿಬಿಟ್ಟ ಗಾಯಕ ಸೋನು ನಿಗಮ್.!

22/05/2025 11:25 AM2 Mins Read

Monsoon Alert: ರೈತರಿಗೆ ಗುಡ್ ನ್ಯೂಸ್: ಮೇ 27ರಂದೇ ರಾಜ್ಯಕ್ಕೆ ‘ಮುಂಗಾರು’ ಪ್ರವೇಶ ಸಾಧ್ಯತೆ

22/05/2025 11:19 AM2 Mins Read

ALERT : ಸಾರ್ವಜನಿಕರೇ ಎಚ್ಚರ : `ಆಧಾರ್ ಕಾರ್ಡ್’ ನಲ್ಲಿ ಈ ತಪ್ಪು ಮಾಡಿದ್ರೆ 3 ವರ್ಷ ಜೈಲು, 1 ಲಕ್ಷ ರೂ.ದಂಡ ಫಿಕ್ಸ್.!

22/05/2025 10:47 AM2 Mins Read
Recent News

‘ ಜ್ಯೋತಿ ಮಲ್ಹೋತ್ರಾ ಪಾಕ್ ಕಾರ್ಯಕರ್ತರೊಂದಿಗೆ ಸಂಪರ್ಕದಲ್ಲಿದ್ದರು. ಭಯೋತ್ಪಾದನೆ ಜೊತೆ ಇಲ್ಲ’: ಪೊಲೀಸರು

22/05/2025 11:33 AM

BREAKING : ಕನ್ನಡ ಸಿನಿಮಾಗಳನ್ನು ಹಿಂದಿ ಭಾಷೆಯಲ್ಲಿ ಡಬ್ ಮಾಡಬೇಡಿ : ಕನ್ನಡದ ಬಗ್ಗೆ ಮತ್ತೆ ನಾಲಗೆ ಹರಿಬಿಟ್ಟ ಗಾಯಕ ಸೋನು ನಿಗಮ್.!

22/05/2025 11:25 AM

ಆಪರೇಷನ್ ಸಿಂಧೂರ್ ವೇಳೆ 3,000 ಅಗ್ನಿವೀರರು ಭಾಗಿ | Agniveer

22/05/2025 11:25 AM

BREAKING: ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ ಬಿಟ್ ಕಾಯಿನ್ | Bit Coin

22/05/2025 11:20 AM
State News
KARNATAKA

BREAKING : ಕನ್ನಡ ಸಿನಿಮಾಗಳನ್ನು ಹಿಂದಿ ಭಾಷೆಯಲ್ಲಿ ಡಬ್ ಮಾಡಬೇಡಿ : ಕನ್ನಡದ ಬಗ್ಗೆ ಮತ್ತೆ ನಾಲಗೆ ಹರಿಬಿಟ್ಟ ಗಾಯಕ ಸೋನು ನಿಗಮ್.!

By kannadanewsnow5722/05/2025 11:25 AM KARNATAKA 2 Mins Read

ಮುಂಬೈ : ಕನ್ನಡಿಗರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೇ ಇದೀಗ ಗಾಯಕ ಸೋನು ನಿಗಮ್ ಅವರು ಮತ್ತೊಮ್ಮೆ ನಾಲಿಗೆ…

Monsoon Alert: ರೈತರಿಗೆ ಗುಡ್ ನ್ಯೂಸ್: ಮೇ 27ರಂದೇ ರಾಜ್ಯಕ್ಕೆ ‘ಮುಂಗಾರು’ ಪ್ರವೇಶ ಸಾಧ್ಯತೆ

22/05/2025 11:19 AM

ALERT : ಸಾರ್ವಜನಿಕರೇ ಎಚ್ಚರ : `ಆಧಾರ್ ಕಾರ್ಡ್’ ನಲ್ಲಿ ಈ ತಪ್ಪು ಮಾಡಿದ್ರೆ 3 ವರ್ಷ ಜೈಲು, 1 ಲಕ್ಷ ರೂ.ದಂಡ ಫಿಕ್ಸ್.!

22/05/2025 10:47 AM

BREAKING : ತುಮಕೂರಿನ `ಸಿದ್ಧಾರ್ಥ ಶಿಕ್ಷಣ ಸಂಸ್ಥೆ’ ಮೇಲೆ `ED’ ದಾಳಿ : ಗೃಹ ಸಚಿವ ಡಾ.ಜಿ.ಪರಮೇಶ್ವರ್ ಫಸ್ಟ್ ರಿಯಾಕ್ಷನ್.!

22/05/2025 10:06 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.