Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪಿಎಂ ಕಿಸಾನ್ 22ನೇ ಕಂತಿನ ಹಣ ಬಿಡುಗಡೆ: ನಿಮ್ಮ ಖಾತೆಗೆ ಬಂದಿದ್ಯಾ ಅಂತ ಹೀಗೆ ಚೆಕ್ ಮಾಡಿ

14/03/2026 6:15 AM

ಇದು ‘ಕ್ಯಾನ್ಸರ್ ಪೀಡಿತ ಜರೀನಾ ಬೇಗಂ’ ಎಂಬ ಸಂತ್ರಸ್ತೆಯ ಹೋರಾಟದ ಕಣ್ಣೀರಿನ ಕತೆ

14/03/2026 6:14 AM

ಮಾ.18ರಿಂದ SSLC ಪರೀಕ್ಷೆ-1 ಆರಂಭ: ಬೆಂಗಳೂರಿನ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ ಜಾರಿ

14/03/2026 6:08 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಾಳೆ ಸಂಜೆ 6.30ಕ್ಕೆ ಸಾಗರದ ಎಲ್ ಬಿ ಕಾಲೇಜಿನಲ್ಲಿ ‘ನಮ್ಮೊಳಗೊಬ್ಬ ಗಾಂಧಿ’ ನಾಟಕ ಪ್ರದರ್ಶನ
KARNATAKA

ನಾಳೆ ಸಂಜೆ 6.30ಕ್ಕೆ ಸಾಗರದ ಎಲ್ ಬಿ ಕಾಲೇಜಿನಲ್ಲಿ ‘ನಮ್ಮೊಳಗೊಬ್ಬ ಗಾಂಧಿ’ ನಾಟಕ ಪ್ರದರ್ಶನ

By kannadanewsnow0928/01/2026 6:29 PM

ಶಿವಮೊಗ್ಗ : ಜನವರಿ.29, 2026ರ ನಾಳೆ ಸಂಜೆ 6.30ಕ್ಕೆ ಶಿವಮೊಗ್ಗ ರಂಗಾಯಣ ವತಿಯಿಂದ ಸಾಗರದ ಎಲ್.ಬಿ.ಕಾಲೇಜಿನ ದೇವರಾಜ ಅರಸು ಕಲಾಭವನದಲ್ಲಿ ‘ನಮ್ಮೊಳಗೊಬ್ಬ ಗಾಂಧಿ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಪ್ರಜ್ಞಾರಂಗ ತಂಡದ ಎಚ್.ಬಿ.ರಾಘವೇಂದ್ರ ತಿಳಿಸಿದ್ದಾರೆ. ನಾಟಕ ಪ್ರಿಯರು ತಪ್ಪದೇ ಆಗಮಿಸಿ, ವೀಕ್ಷಿಸುವಂತೆ ಅವರು ಮನವಿ ಮಾಡಿದ್ದಾರೆ.

ಮಂಗಳವಾರದಂದು ಶಿವಮೊಗ್ಗದ ಸಾಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ರಂಗಾಯಣ ನೇತೃತ್ವದಲ್ಲಿ ಪ್ರಜ್ಞಾರಂಗ ತಂಡ, ಮಲೆನಾಡು ಅಭಿವೃದ್ದಿ ಪ್ರತಿಷ್ಟಾನ, ರೈತ ಸಂಘದ ಸಹಯೋಗದಲ್ಲಿ ನಾಳೆ ನಮ್ಮೊಳಗೊಬ್ಬ ಗಾಂಧಿ ಉಚಿತ ನಾಟಕ ಪ್ರದರ್ಶನವಾಗುತ್ತಿದೆ. ಡಾ. ಡಿ.ಎಸ್.ಚೌಗಲೆ ರಚಿಸಿರುವ ನಾಟಕವನ್ನು ಚಿದಂಬರ ರಾವ್ ಜಂಬೆ ವಿನ್ಯಾಸ ಮತ್ತು ನಿರ್ದೇಶನ ಮಾಡಿದ್ದು, ಓಂಕಾರ್ ಮೇಗಳಾಪುರ ಸಹ ನಿರ್ದೇಶನ ಮಾಡಿದ್ದಾರೆ. ಮಹಾತ್ಮಾ ಗಾಂಧೀಜಿಯವರು ಹಿಂಸೆಯನ್ನು ವಿರೋಧಿಸಿ ಅಹಿಂಸೆ ಮೂಲಕ ದೇಶಕ್ಕೆ ಸ್ವಾತಂತ್ರ್ಯ  ತಂದು ಕೊಡುವಲ್ಲಿ ಪ್ರಮುಖಪಾತ್ರ ವಹಿಸಿದವರು ಎಂದರು.

ಇತ್ತೀಚಿನ ವರ್ಷಗಳಲ್ಲಿ ಗಾಂಧೀಜಿಯವರ ಬಗ್ಗೆ ಸುಳ್ಳನ್ನು ಸೃಷ್ಟಿ ಮಾಡಿ ಗಾಂಧಿ ಅವರ ಕೊಡುಗೆಯನ್ನು ನೇಪಥ್ಯಕ್ಕೆ ಸರಿಯುವ ಪ್ರಯತ್ನ ನಡೆಯುತ್ತಿದೆ. ಯುವ ತಲೆಮಾರು ಗಾಂಧೀಜಿವರ ಕೊಡುಗೆಯನ್ನು ಅರ್ಥ ಮಾಡಿಕೊಳ್ಳಲೇ ಬೇಕಾದ ತುರ್ತು ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ನಮ್ಮೊಳಗೊಬ್ಬ ಗಾಂಧಿ ಬೆಳಕು ಚೆಲ್ಲುವ ಕೆಲಸ ಮಾಡುತ್ತದೆ. ಸುಮಾರು  10 ವರ್ಷಗಳ ಕಾಲ ಬ್ರಿಟೀಷರ ಸೆರೆವಾಸದಲ್ಲಿದ್ದು, ಉಪವಾಸ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳುವಳಿ, ದಂಡಿ ಸತ್ಯಾಗ್ರಹದಂತಹವನ್ನು ನಡೆಸಿ ನಾಡನ್ನು ಸ್ವಾತಂತ್ರ್ಯಕ್ಕೆ ಸಜ್ಜಗೊಳಿಸಿದ ಮಹಾತ್ಮಾ ಗಾಂಧಿ ಅವರ ಕುರಿತು ಡಿ.ಎಸ್.ಚೌಗಲೆ ವಿಶೇಷವಾದ ಕೃತಿ ರಚಿಸಿದ್ದು, ಅದು ರಂಗಭೂಮಿ ಪ್ರದರ್ಶನ ಮೂಲಕ ಎಲ್ಲರನ್ನೂ ತಲುಪಬೇಕು ಎಂದರು

ರಂಗಾಯಣ ನಿರ್ದೇಶಕ ಪ್ರಸನ್ನ ಡಿ. ಮಾತನಾಡಿ, ನಮ್ಮೊಳಗೊಬ್ಬ ಗಾಂಧಿ 10-15 ಅಕರಗಳಿಂದ ಹೆಕ್ಕಿ ತೆಗೆದು ಅಕ್ಷರ ರೂಪ ನೀಡಲಾಗಿದೆ. ಡಾ. ಡಿ.ಎಸ್.ಚೌಗಲೆ ಅವರು ಗಾಂಧಿ ಅವರ ಹೆಜ್ಜೆಗುರುತು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಿಂಸೆಗೆ ಅಹಿಂಸಾತ್ಮಕ ಹೋರಾಟದ ಮಾರ್ಗ ತೋರಿಸಿದ್ದು ಮಹಾತ್ಮ ಗಾಂಧಿಯವರು. ಮಹಾತ್ಮಾ ಗಾಂಧಿ ಎನ್ನುವುದು ಮೂರ್ತರೂಪ. ಅದನ್ನು ಯುವ ಪೀಳಿಗೆಗೆ ತಿಳಿಸಿ ಕೊಡಬೇಕಾಗಿದೆ. ನಮ್ಮೊಳಗೊಬ್ಬ ಗಾಂಧಿ ರಾಜ್ಯದ ಬೇರೆಬೇರೆ ಭಾಗದಲ್ಲಿ ೨೦ಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ ಎಂದು ತಿಳಿಸಿದರು.

ನಾಳೆ ಸಂಜೆ 6.30ಕ್ಕೆ ನಮ್ಮೊಳಗೊಬ್ಬ ಗಾಂಧಿ ನಾಟಕ ಪ್ರದರ್ಶನ ಸಾಗರದ ಎಲ್ ಬಿ ಕಾಲೇಜಿನ ದೇವರಾಜ ಅರಸು ಕಲಾಕ್ಷೇತ್ರದಲ್ಲಿ ಶುರುವಾಗಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕಲಾಸಕ್ತರು, ಗಾಂಧಿ ಅನುಯಾಯಿಗಳು ಆಗಮಿಸಿ, ನಾಟಕ ಪ್ರದರ್ಶನ ವೀಕ್ಷಿಸಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದ್ದಾರೆ.

ಈ ಗೋಷ್ಟಿಯಲ್ಲಿ ನಿರ್ದೇಶಕ ಚಿದಂಬರ ರಾವ್ ಜಂಬೆ, ಪ್ರಮುಖರಾದ ಶಿವಾನಂದ ಕುಗ್ವೆ, ಮನೋಜ್ ಕುಗ್ವೆ, ಸಂದೀಪ್, ಅಣ್ಣಪ್ಪ ಹಾಜರಿದ್ದರು.

BREAKING: ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಆಡಿಯೋ ಸ್ಪೋಟ: ಮಾಜಿ MLC ನಟ ಅಂಬರೀಶ್, HDK ವಿರುದ್ಧ ಅಶ್ಲೀಲ ಪದ ಬಳಕೆ

ಅಜಿತ್ ಪವಾರ್ ಇದ್ದ ವಿಮಾನ ಪಥನದ ಹಿಂದಿನ ಕಾರಣ ಬಿಚ್ಚಿಟ್ಟ DGCA: ಅದೇನು ಗೊತ್ತಾ? | Ajit Pawar plane crash

ನಾಳೆ ಬೆಳಗ್ಗೆ 11 ಗಂಟೆಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಜಿತ್ ಪವಾರ್ ಅಂತ್ಯಕ್ರಿಯೆ | Ajit Pawar plane crash

Share. Facebook Twitter LinkedIn WhatsApp Email

Related Posts

ಇದು ‘ಕ್ಯಾನ್ಸರ್ ಪೀಡಿತ ಜರೀನಾ ಬೇಗಂ’ ಎಂಬ ಸಂತ್ರಸ್ತೆಯ ಹೋರಾಟದ ಕಣ್ಣೀರಿನ ಕತೆ

14/03/2026 6:14 AM2 Mins Read

ಮಾ.18ರಿಂದ SSLC ಪರೀಕ್ಷೆ-1 ಆರಂಭ: ಬೆಂಗಳೂರಿನ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ ಜಾರಿ

14/03/2026 6:08 AM2 Mins Read

BREAKING : ಸಾರಿಗೆ ಪ್ರಯಾಣಿಕರಿಗೆ ಗುಡ್ ನ್ಯೂಸ್ : 115 ‘KSRTC’ ಬಸ್ ಗಳಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ!

14/03/2026 5:52 AM1 Min Read
Recent News

ಪಿಎಂ ಕಿಸಾನ್ 22ನೇ ಕಂತಿನ ಹಣ ಬಿಡುಗಡೆ: ನಿಮ್ಮ ಖಾತೆಗೆ ಬಂದಿದ್ಯಾ ಅಂತ ಹೀಗೆ ಚೆಕ್ ಮಾಡಿ

14/03/2026 6:15 AM

ಇದು ‘ಕ್ಯಾನ್ಸರ್ ಪೀಡಿತ ಜರೀನಾ ಬೇಗಂ’ ಎಂಬ ಸಂತ್ರಸ್ತೆಯ ಹೋರಾಟದ ಕಣ್ಣೀರಿನ ಕತೆ

14/03/2026 6:14 AM

ಮಾ.18ರಿಂದ SSLC ಪರೀಕ್ಷೆ-1 ಆರಂಭ: ಬೆಂಗಳೂರಿನ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ ಜಾರಿ

14/03/2026 6:08 AM

BREAKING : ಸಾರಿಗೆ ಪ್ರಯಾಣಿಕರಿಗೆ ಗುಡ್ ನ್ಯೂಸ್ : 115 ‘KSRTC’ ಬಸ್ ಗಳಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ!

14/03/2026 5:52 AM
State News
KARNATAKA

ಇದು ‘ಕ್ಯಾನ್ಸರ್ ಪೀಡಿತ ಜರೀನಾ ಬೇಗಂ’ ಎಂಬ ಸಂತ್ರಸ್ತೆಯ ಹೋರಾಟದ ಕಣ್ಣೀರಿನ ಕತೆ

By kannadanewsnow0914/03/2026 6:14 AM KARNATAKA 2 Mins Read

ಶಿವಮೊಗ್ಗ: ನಮ್ಮ ಸಮಾಜದಲ್ಲಿ ಮನುಷ್ಯ ಬದುಕಿರುವಾಗ ಬೇಕಾಗುವ ಗೌರವಕ್ಕಿಂತ, ಅವನ ಸಾವಿನ ನಂತರ ತೋರಿಸುವ ಅನುಕಂಪವೇ ಹೆಚ್ಚು ಎಂಬ ಮಾತಿದೆ. ಇದಕ್ಕೆ…

ಮಾ.18ರಿಂದ SSLC ಪರೀಕ್ಷೆ-1 ಆರಂಭ: ಬೆಂಗಳೂರಿನ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ ಜಾರಿ

14/03/2026 6:08 AM

BREAKING : ಸಾರಿಗೆ ಪ್ರಯಾಣಿಕರಿಗೆ ಗುಡ್ ನ್ಯೂಸ್ : 115 ‘KSRTC’ ಬಸ್ ಗಳಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ!

14/03/2026 5:52 AM

ಯುಗಾದಿ ಹಬ್ಬಕ್ಕೆ ಊರಿಗೆ ಹೊರಟವರಿಗೆ ಗುಡ್ ನ್ಯೂಸ್: ನೈರುತ್ಯ ರೈಲ್ವೆಯಿಂದ ಈ ವಿಶೇಷ ರೈಲುಗಳ ಸಂಚಾರದ ವ್ಯವಸ್ಥೆ

14/03/2026 5:43 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.