ಬೆಂಗಳೂರು: ಬಿಜೆಪಿ ಸರ್ಕಾರವೇ ನಿವೇಶನ ಹಂಚಿಕೆ ಮಾಡಿ ಈಗ ಅವರೇ ಆರೋಪ ಮಾಡುತ್ತಿದ್ದಾರೆ. ಮೂಡ ಪ್ರಕರಣದಲ್ಲಿ ಸಿದ್ದರಾಮಯ್ಯನವರ ಕೈವಾಡ ಇಲ್ಲ ಎನ್ನುವುದಕ್ಕೆ ಅನೇಕ ಸಾಕ್ಷಿಗಳಿವೆ. ಭೂಮಿ ಡಿ ನೋಟಿಫೈ ಆಗಿದ್ದು 1998 ರಲ್ಲಿ. ಅಂದರೆ 26 ವರ್ಷಗಳಾಗಿವೆ. ಸಿದ್ದರಾಮಯ್ಯನವರ ಕೈವಾಡ ಇದ್ದಿದ್ದರೆ ಈ ಹಿಂದೆಯೇ ವಿರೋಧ ಪಕ್ಷದವರು ದನಿ ಎತ್ತಬೇಕಾಗಿತ್ತು. ಈ ಭೂಮಿ ಮಾರಾಟವಾಗಿದ್ದು 2004ರಲ್ಲಿ ಅಂದರೆ ಭೂಮಿ ಮಾರಾಟವಾಗಿ 20 ವರ್ಷಗಳಾಯಿತು ಆಗಲು ಸಹ ಯಾರು ಕೂಡ ಭೂಮಿ ಮಾರಾಟ ಅಕ್ರಮ ಎಂದು ಪ್ರಶ್ನಿಸಲಿಲ್ಲ ಎಂಬುದಾಗಿ ವಿಧಾನ ಪರಿಷತ್ ಮಾಜಿ ಸದಸ್ಯರಾದ ಉಗ್ರಪ್ಪ ಅವರು ಕಿಡಿಕಾರಿದ್ದಾರೆ.
ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಸಿದ್ದರಾಮಯ್ಯನವರ ಪತ್ನಿ ಪಾರ್ವತಿಯವರಿಗೆ ಈ ಭೂಮಿಯನ್ನ ಉಡುಗೊರೆಯಾಗಿ ನೀಡಿರುವುದು 2010ರಲ್ಲಿ ಆಗಲು ಸಹ ಯಾರು ಕೂಡ ಈ ಉಡುಗೊರೆ ಕೊಟ್ಟಿರೋದು ಅಕ್ರಮ ಎಂದು ಪ್ರಕರಣ ದಾಖಲಿಸಿಲ್ಲ. 14 ವರ್ಷದ ಆದರು ಯಾರು ಪ್ರಶ್ನೆ ಮಾಡಿಲ್ಲ ಎಂದರು.
ಮೂಡ ನಮ್ಮ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಂಡಿದೆ ಎಂದು ಪಾರ್ವತಿಯವರು 2015, 2017 ಮತ್ತು 2021 ರಲ್ಲಿ ಅರ್ಜಿ ನೀಡುತ್ತಾರೆ. 2018 ಮತ್ತು 17ರಲ್ಲಿ ಸ್ವತಃ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಆಗಿರುತ್ತಾರೆ. ಸಿದ್ದರಾಮಯ್ಯನವರಿಗೆ ಆಸ್ತಿ ಕಬಳಿಸಬೇಕು ಎನ್ನುವ ಇರದೆ ಇದ್ದಿದ್ದರೆ ಅವರು ಅಧಿಕಾರಿಗಳಿಗೆ ಸೂಚನೆ ಕೊಡುತ್ತಿದ್ದರು. ಆದರೆ ಅವರು ಈ ರೀತಿ ಮಾಡಲಿಲ್ಲ ಏಕೆಂದರೆ ಅವರು ಪ್ರಾಮಾಣಿಕರು ಎಂದು ಹೇಳಿದರು.
2021 ರಲ್ಲಿ ಮೂಡ ಸಭೆಯಲ್ಲಿ ಅವರೇ ಈ ರೀತಿಯ ಭೂಮಿಯನ್ನು ಅತಿಕ್ರಮಿಸಿಕೊಂಡಿರುವ ಪ್ರಕಾರಗಳಿಗೆ 50:50 ಆಧಾರದಲ್ಲಿ ಪರಿಹಾರವಾಗಿ ನಿವೇಶನವನ್ನು ನೀಡುತ್ತಾರೆ. ಆಗ ಸರ್ಕಾರ ಇದ್ದಿದ್ದು ಬೊಮ್ಮಾಯಿ ಅವರದು. ಬಿಜೆಪಿ ಸರ್ಕಾರವೇ ನಿವೇಶನ ಹಂಚಿಕೆ ಮಾಡಿ ಈಗ ಅವರೇ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಆಗಲೇ ಈ ಪ್ರಕರಣದ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್ ಪ್ರಶ್ನೆ ಮಾಡಬಹುದಿತ್ತು. ಆದರೆ ಏಕೆ ಮಾಡಲಿಲ್ಲ ಏಕೆಂದರೆ ಇದರಲ್ಲಿ ಸಿದ್ದರಾಮಯ್ಯನವರ ಹಸ್ತಕ್ಷೇಪ ಕಿಂಚಿತ್ತು ಇರಲಿಲ್ಲ. ಆದ ಕಾರಣಕ್ಕೆ ಯಾರೂ ಕೂಡ ಧ್ವನಿಯೆತ್ತಲಿಲ್ಲ. ಆದರೆ ಈಗ ಬಹುಮತ ಪಡೆದು ಅಧಿಕಾರ ಹಿಡಿದಿರುವ ಕಾರಣ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಗುಡುಗಿದರು.
ಸಿದ್ದರಾಮಯ್ಯನವರ ಮುಖಕ್ಕೆ ಕೆಸರು ಎರಚುವ ಅಪ್ರಮಾಣಿಕವಾದ ಕೆಲಸವನ್ನು ಬಿಜೆಪಿ ಮಾಡಲು ಹೊರಟಿದೆ. ರಾಜ್ಯಪಾಲರ ಭವನ ದುರ್ಬಳಕೆ ಮಾಡಿಕೊಂಡು ಟಿ ಜೆ ಅಬ್ರಾಹಂ ಹೆಸರಿನಲ್ಲಿ ಬಿಜೆಪಿ ಕಳ್ಳಾಟ ನಡೆಸುತ್ತಿದೆ. ಈ ರಾಜ್ಯದ ಜನ ಈ ನಾಟಕವನ್ನು ಅರ್ಥ ಮಾಡಿಕೊಳ್ಳುತ್ತಾರೆ. ಬಿಜೆಪಿಗೆ ಮತ್ತೊಮ್ಮೆ ಬುದ್ಧಿ ಕಲಿಸುತ್ತಾರೆ ಎಂದು ಹೇಳಿದರು.
ಸಿದ್ಧರಾಮಯ್ಯ ತೇಜೋವಧೆ ಮಾಡೋದಕ್ಕೆ ಬಿಜೆಪಿ ಇಳಿದಿದೆ, ಅದು ಎಂದೂ ಸಾಧ್ಯವಿಲ್ಲ: ಎಲ್.ಹನುಮಂತಯ್ಯ
BIG UPDATE: ಬೆಂಗಳೂರಲ್ಲಿ ಮೆಟ್ರೋ ರೈಲು ಹಳಿಗಳ ಮೇಲೆ ಹಾರಿ ಆತ್ಮಹತ್ಯೆಗೆ ಮಾಡಿಕೊಂಡ ವ್ಯಕ್ತಿ ಗುರುತು ಪತ್ತೆ