Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾಗರ ಎಪಿಎಂಸಿ ಕಾಂಪೌಂಡ್ ನಿರ್ಮಾಣದಲ್ಲಿ ಅಕ್ರಮ ಶಂಕೆ: ಲೋಕಾಯುಕ್ತ ತನಿಖೆಗೆ ಹರತಾಳು ಹಾಲಪ್ಪ ಆಗ್ರಹ

Jio IPO: ಬಹು ನಿರೀಕ್ಷಿತ ಜಿಯೋ ಐಪಿಒ ಘೋಷಿಸಿದ ಮುಖೇಶ್‌ ಅಂಬಾನಿ, 27 ಕೋಟಿ ಷೇರುಗಳ ಬಿಡುಗಡೆಗೆ ಸಿದ್ಧತೆ

ರಿಲಯನ್ಸ್ ವಾರ್ಷಿಕ ಮಹಾಸಭೆ: ಭಾರತದ ಭವಿಷ್ಯಕ್ಕೆ ಜಿಯೋ AI ಮಾರ್ಗನಕ್ಷೆಯನ್ನು ತೆರೆದಿಟ್ಟ ಆಕಾಶ್ ಅಂಬಾನಿ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘MRF’ : ಅಂದು 11 ಸಾವಿರ ರೂ., ಈಗ 15 ಕೋಟಿ ರೂಪಾಯಿ! ಷೇರುದಾರರಿಗೆ ಭರ್ಜರಿ ಲಾಭ
BUSINESS

‘MRF’ : ಅಂದು 11 ಸಾವಿರ ರೂ., ಈಗ 15 ಕೋಟಿ ರೂಪಾಯಿ! ಷೇರುದಾರರಿಗೆ ಭರ್ಜರಿ ಲಾಭ

By ಅವಿನಾಶ್‌ ಆರ್‌ ಭೀಮಸಂದ್ರ

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಯಾರೂ ತಾಳ್ಮೆ ಕಳೆದುಕೊಳ್ಳಬಾರದು. ತಾಳ್ಮೆ ಮತ್ತು ಸಹಿಷ್ಣುತೆ ಬಹಳ ಅವಶ್ಯಕ. ಏಪ್ರಿಲ್ 1993ರಲ್ಲಿ MRF ಷೇರುಗಳಲ್ಲಿ ಹೂಡಿಕೆ ಮಾಡಿದ ವ್ಯಕ್ತಿ, ಈಗ ಕೋಟ್ಯಾಧಿಪತಿಯಾಗಿದ್ದಾರೆ. MRF (ಮದ್ರಾಸ್ ರಬ್ಬರ್ ಫ್ಯಾಕ್ಟರಿ) 1993 ರಲ್ಲಿ ಪ್ರತಿ ಷೇರಿಗೆ 10 ರೂ. ಮುಖಬೆಲೆಯೊಂದಿಗೆ ಸಾರ್ವಜನಿಕವಾಗಿ ಪಟ್ಟಿ ಮಾಡಲ್ಪಟ್ಟಿತು. ಕಳೆದ 25 ವರ್ಷಗಳಲ್ಲಿ, ಇದು ಹೂಡಿಕೆದಾರರಿಗೆ ಶೇಕಡಾ 7,40,109ಕ್ಕಿಂತ ಹೆಚ್ಚು ಲಾಭವನ್ನು ನೀಡಿದೆ.

ಏಪ್ರಿಲ್ 27, 1993ರಂದು, ಕಂಪನಿಯ ಷೇರುಗಳು BSEನಲ್ಲಿ 11 ರೂಪಾಯಿಗೆ ಮುಕ್ತಾಯಗೊಂಡವು. ಈಗ, ಕೊನೆಯ ವಹಿವಾಟಿನ ಅವಧಿಯಲ್ಲಿ, ಈ ಕಂಪನಿಯ ಷೇರುಗಳು 1,55,510ರೂಪಾಯಿಗೆ ಮುಕ್ತಾಯಗೊಂಡವು. ಕಳೆದ ಕೆಲವು ವರ್ಷಗಳಿಂದ MRF ಷೇರುಗಳು ಹೂಡಿಕೆದಾರರಿಗೆ ಭಾರಿ ಲಾಭವನ್ನ ನೀಡುತ್ತಿವೆ. ಪಟ್ಟಿ ಮಾಡುವ ಸಮಯದಲ್ಲಿ, ಒಬ್ಬ ವ್ಯಕ್ತಿಯ ಕೈಯಲ್ಲಿ 1000 ಷೇರುಗಳು ಇದ್ದವು. ಅಂದರೆ, ಅಂದಿನ ದರದಲ್ಲಿ ನೀವು 11 ಸಾವಿರ ರೂಪಾಯಿ ಖರ್ಚು ಮಾಡಿದರೆ, ಆ ಹೂಡಿಕೆ ಈಗ ಅಕ್ಷರಶಃ 15,50,00,000 ರೂಪಾಯಿ ಆಗುತ್ತದೆ.

ಬಿಎಸ್‌ಇ ದತ್ತಾಂಶದ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಎಂಆರ್‌ಎಫ್ ಷೇರುಗಳು ಸಾರ್ವಕಾಲಿಕ ಶೇ. 8,000ಕ್ಕೂ ಹೆಚ್ಚು ಮತ್ತು ಶೇ.168.06ರಷ್ಟು ಲಾಭವನ್ನು ನೀಡಿವೆ. ಕಳೆದ ಒಂದು ವರ್ಷದಲ್ಲಿ ಶೇ.17.89ರಷ್ಟು ಲಾಭವನ್ನು ನೀಡಿದ್ದು ಮಾತ್ರವಲ್ಲದೆ, ಆರು ತಿಂಗಳಲ್ಲಿ ಹೂಡಿಕೆದಾರರಿಗೆ ಶೇ. 26.53ರಷ್ಟು ಲಾಭವನ್ನ ನೀಡಿದೆ. ಇದರ ಆಧಾರದ ಮೇಲೆ, ಷೇರು ಮಾರುಕಟ್ಟೆ ಹೂಡಿಕೆಗಳನ್ನು ಅಲ್ಪಾವಧಿಗಿಂತ ದೀರ್ಘಾವಧಿಯಲ್ಲಿ ಉತ್ತಮವಾಗಿ ನೋಡಲಾಗುತ್ತದೆ ಎಂದು ವ್ಯಾಪಾರ ವಿಶ್ಲೇಷಕರು ಹೇಳುತ್ತಾರೆ.

ಈ ಕಂಪನಿಯನ್ನ 1946ರಲ್ಲಿ ಮದ್ರಾಸ್‌’ನ ತಿರುವೊಟ್ಟಿಯೂರಿನಲ್ಲಿ ಕೆ.ಎಂ. ಮಾಮ್ಮೆನ್ ಮಾಪ್ಪಿಲ್ಲೈ ಅವರು ಆಟಿಕೆ ಬಲೂನ್ ಉತ್ಪಾದನಾ ಘಟಕವಾಗಿ ಪ್ರಾರಂಭಿಸಿದರು. 1952 ರಲ್ಲಿ, ಕಂಪನಿಯು ಟ್ರೆಡ್ ರಬ್ಬರ್ ತಯಾರಿಕೆಯನ್ನ ಪ್ರವೇಶಿಸಿತು. ಮದ್ರಾಸ್ ರಬ್ಬರ್ ಫ್ಯಾಕ್ಟರಿ ಲಿಮಿಟೆಡ್’ನ್ನು ನವೆಂಬರ್ 1960ರಲ್ಲಿ ಖಾಸಗಿ ಕಂಪನಿಯಾಗಿ ಸಂಯೋಜಿಸಲಾಯಿತು ಮತ್ತು ಯುನೈಟೆಡ್ ಸ್ಟೇಟ್ಸ್‌’ನ ಮ್ಯಾನ್ಸ್‌ಫೀಲ್ಡ್ ಟೈರ್ ಮತ್ತು ರಬ್ಬರ್ ಕಂಪನಿಯೊಂದಿಗೆ ಪಾಲುದಾರಿಕೆಯಲ್ಲಿ ಟೈರ್‌’ಗಳ ತಯಾರಿಕೆಯನ್ನ ಪ್ರಾರಂಭಿಸಿತು. 1967ರಲ್ಲಿ, ಇದು ಯುಎಸ್‌ಗೆ ಟೈರ್‌’ಗಳನ್ನು ರಫ್ತು ಮಾಡಿದ ಮೊದಲ ಭಾರತೀಯ ಕಂಪನಿಯಾಯಿತು. ಇಂದು, ಕಂಪನಿಯು ಟೈರ್‌’ಗಳು, ಟ್ರೆಡ್‌’ಗಳು, ಟ್ಯೂಬ್‌’ಗಳು, ಕನ್ವೇಯರ್ ಬೆಲ್ಟ್‌’ಗಳು, ಕ್ರಿಕೆಟ್ ಬ್ಯಾಟ್‌’ಗಳು ಮುಂತಾದ ರಬ್ಬರ್ ಉತ್ಪನ್ನಗಳನ್ನು ತಯಾರಿಸುತ್ತದೆ.

 

 

BREAKING: ನಟ, ರಂಗಕರ್ಮಿ ರಾಜು ತಾಳಿಕೋಟೆ ಹೃದಯಾಘಾತದಿಂದ ನಿಧನ | Raju Talikote No More

BREAKING: ನಟ, ರಂಗಕರ್ಮಿ ರಾಜು ತಾಳಿಕೋಟೆ ಹೃದಯಾಘಾತದಿಂದ ನಿಧನ | Raju Talikote No More

BREAKING : ಖ್ಯಾತ ಪೋಷಕ ನಟ ‘ರಾಜು ತಾಳಿಕೋಟೆ’ ಇನ್ನಿಲ್ಲ |Raju Talikote No more

Share. Facebook Twitter LinkedIn WhatsApp Email

Related Posts

Jio IPO: ಬಹು ನಿರೀಕ್ಷಿತ ಜಿಯೋ ಐಪಿಒ ಘೋಷಿಸಿದ ಮುಖೇಶ್‌ ಅಂಬಾನಿ, 27 ಕೋಟಿ ಷೇರುಗಳ ಬಿಡುಗಡೆಗೆ ಸಿದ್ಧತೆ

2 Mins Read

ರಿಲಯನ್ಸ್ ವಾರ್ಷಿಕ ಮಹಾಸಭೆ: ಭಾರತದ ಭವಿಷ್ಯಕ್ಕೆ ಜಿಯೋ AI ಮಾರ್ಗನಕ್ಷೆಯನ್ನು ತೆರೆದಿಟ್ಟ ಆಕಾಶ್ ಅಂಬಾನಿ

2 Mins Read

BREAKING: ಭಾರತೀಯ ಮಾರುಕಟ್ಟೆ ಇತಿಹಾಸದಲ್ಲೇ ಅತಿ ದೊಡ್ಡ ಕ್ರಾಂತಿ: ಜಿಯೋ ಐಪಿಒ ಘೋಷಿಸಿದ ಮುಕೇಶ್ ಅಂಬಾನಿ! | Jio IPO

2 Mins Read
Recent News

ಸಾಗರ ಎಪಿಎಂಸಿ ಕಾಂಪೌಂಡ್ ನಿರ್ಮಾಣದಲ್ಲಿ ಅಕ್ರಮ ಶಂಕೆ: ಲೋಕಾಯುಕ್ತ ತನಿಖೆಗೆ ಹರತಾಳು ಹಾಲಪ್ಪ ಆಗ್ರಹ

Jio IPO: ಬಹು ನಿರೀಕ್ಷಿತ ಜಿಯೋ ಐಪಿಒ ಘೋಷಿಸಿದ ಮುಖೇಶ್‌ ಅಂಬಾನಿ, 27 ಕೋಟಿ ಷೇರುಗಳ ಬಿಡುಗಡೆಗೆ ಸಿದ್ಧತೆ

ರಿಲಯನ್ಸ್ ವಾರ್ಷಿಕ ಮಹಾಸಭೆ: ಭಾರತದ ಭವಿಷ್ಯಕ್ಕೆ ಜಿಯೋ AI ಮಾರ್ಗನಕ್ಷೆಯನ್ನು ತೆರೆದಿಟ್ಟ ಆಕಾಶ್ ಅಂಬಾನಿ

BREAKING: ಭಾರತೀಯ ಮಾರುಕಟ್ಟೆ ಇತಿಹಾಸದಲ್ಲೇ ಅತಿ ದೊಡ್ಡ ಕ್ರಾಂತಿ: ಜಿಯೋ ಐಪಿಒ ಘೋಷಿಸಿದ ಮುಕೇಶ್ ಅಂಬಾನಿ! | Jio IPO

State News
KARNATAKA

ಸಾಗರ ಎಪಿಎಂಸಿ ಕಾಂಪೌಂಡ್ ನಿರ್ಮಾಣದಲ್ಲಿ ಅಕ್ರಮ ಶಂಕೆ: ಲೋಕಾಯುಕ್ತ ತನಿಖೆಗೆ ಹರತಾಳು ಹಾಲಪ್ಪ ಆಗ್ರಹ

By ವಸಂತ ಬಿ ಈಶ್ವರಗೆರೆ KARNATAKA 1 Min Read

ಶಿವಮೊಗ್ಗ: ಜಿಲ್ಲೆಯ ಸಾಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (APMC) 56 ಎಕರೆ ಪ್ರದೇಶದಲ್ಲಿ ಸುಮಾರು ₹2.25 ಕೋಟಿ ವೆಚ್ಚದಲ್ಲಿ…

ಕಾಂಗ್ರೆಸ್‌ನದ್ದು ಸಂಪೂರ್ಣ ಹಿಂದೂ ವಿರೋಧಿ ನೀತಿ: ಸಾಗರದಲ್ಲಿ ಬಿಜೆಪಿ ನಗರ ಮಂಡಲದ ಅಧ್ಯಕ್ಷ ಗಣೇಶ್ ಪ್ರಸಾದ್ ವಾಗ್ದಾಳಿ

ಬಗರ್ ಹುಕುಂ ಜಮೀನು ಮಂಜೂರಾತಿ ಹಗರಣ: JDS ಮಾಜಿ ಶಾಸಕ ಕೆ.ಎಸ್.ಲಿಂಗೇಶ್ CID ವಶಕ್ಕೆ

ಶೀಘ್ರದಲ್ಲೇ ಜೋಗ್ ಫಾಲ್ಸ್‌ನಲ್ಲಿ ‘ರೋಪ್ ವೇ – ಕೇಬಲ್ ಕಾರ್’ ಸಂಚಾರ: ಸಾಗರ ತಹಶೀಲ್ದಾರ್ ಡಾ. ಪ್ರತಿಭಾ ನೇತೃತ್ವದಲ್ಲಿ ಸರ್ವೆ ಚುರುಕು

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.