ಬೆಂಗಳೂರು: ಮಿಸ್ಟರ್ ತೇಜಸ್ವಿ ಸೂರ್ಯ ( Tejasvi Surya ), ದೇಶ ಅಂದ್ರೆ ದೋಸೆ ಅಲ್ಲ… ಕನ್‌ಫ್ಯೂಸ್ ಆಗ್ಬೇಡಿ! ಹಾಗೆಯೇ ತಮಗಿರುವ ಮಾನಸಿಕ ದೋಷವನ್ನು ಚಿಕಿತ್ಸೆ ಪಡೆದು ಸರಿಪಡಿಸಿಕೊಳ್ಳಿ. ಶೀಘ್ರ ಗುಣಮುಖರಾಗಿ ಎಂದು ಹಾರೈಸುತ್ತೇವೆ ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ( Karnataka Congres ) ಕಿಡಿಕಾರಿದೆ.

https://twitter.com/INCKarnataka/status/1576866144257982465

ಆರೋಗ್ಯ ಇಲಾಖೆಯ ಅನಾರೋಗ್ಯದ ಸೋಂಕು ಬೈಕ್ ಆಂಬುಲೆನ್ಸ್‌ಗಳಿಗೂ ತಗುಲಿದೆ! #40percentsarkara ದ ರಸ್ತೆಗುಂಡಿಗೆ ಬೀಳುವವರನ್ನು ಸಾಗಿಸಲು ಅನುಕೂಲಕರವಾಗಿದ್ದ ಬೈಕ್ ಆಂಬುಲೆನ್ಸ್‌ಗಳು ನಿರ್ವಹಣೆ ಇಲ್ಲದೆ ಮೂಲೆಗೆ ಬಿದ್ದಿರುವುದು ಶೋಚನೀಯ. ನಿರ್ವಹಣೆ ಮಾಡದೆ ಈ ಸೇವೆ ಕೈಬಿಡಲು ಮುಂದಾಗಿದ್ದು ಸರ್ಕಾರದ ಅಯೋಗ್ಯತನವನ್ನು ಪುಷ್ಠಿಕರಿಸುತ್ತದೆ ಎಂದು ಟ್ವಿಟ್ಟರ್ ನಲ್ಲಿ ಕಿಡಿಕಾರಿದೆ.

ಭಾರತ ಐಕ್ಯತಾ ಯಾತ್ರೆಯಿಂದ ಬಿಜೆಪಿಯ ಬುಡ ಅಲ್ಲಾಡುತ್ತಿದೆ, ಭಯ, ಹತಾಶೆಯಿಂದ ಕಂಗೆಟ್ಟಿದೆ ಎಂಬುದು ಆರ್. ಅಶೋಕ್ ಅವರ ಪತ್ರಿಕಾಗೋಷ್ಟಿಯೇ ಸಾಕ್ಷಿ! ಅಶೋಕ್ ಅವರೇ, ಈ ಚಿತ್ರವಿರುವ ಪೋಸ್ಟರ್ ಯಾವಾಗ ಬಿಡುಗಡೆ ಮಾಡ್ತೀರಿ? ಎಂದು ಪ್ರಶ್ನಿಸಿದೆ.

Share.
Exit mobile version