Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸುಡಾನ್ ನ ಮಾರಾ ಪರ್ವತದಲ್ಲಿ ಭೂಕುಸಿತ: 1,000ಕ್ಕೂ ಹೆಚ್ಚು ಮಂದಿ ಸಾವು

02/09/2025 7:35 AM

BREAKING : ಮಂಡ್ಯದಲ್ಲಿ ಘೋರ ಘಟನೆ : ಗಣೇಶ ವಿಸರ್ಜನೆ ವೇಳೆ ವ್ಯಕ್ತಿ ನೀರು ಪಾಲು!

02/09/2025 7:33 AM

ಬಿಹಾರದಲ್ಲಿ ಸೆ. 1ರ ನಂತರ SIR ಅರ್ಜಿ ಸಲ್ಲಿಸಬಹುದು: ಸುಪ್ರೀಂ ಕೋರ್ಟ್ ಗೆ ಚುನಾವಣಾ ಆಯೋಗ

02/09/2025 7:26 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾಗರ ಕ್ಷೇತ್ರದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯಲ್ಲಿ ಸಂಸದ ಹಸ್ತಕ್ಷೇಪ ಸಹಿಸುವುದಿಲ್ಲ: ಶಾಸಕ ಗೋಪಾಲಕೃಷ್ಣ ಬೇಳೂರು
KARNATAKA

ಸಾಗರ ಕ್ಷೇತ್ರದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯಲ್ಲಿ ಸಂಸದ ಹಸ್ತಕ್ಷೇಪ ಸಹಿಸುವುದಿಲ್ಲ: ಶಾಸಕ ಗೋಪಾಲಕೃಷ್ಣ ಬೇಳೂರು

By kannadanewsnow0902/07/2025 7:40 PM

ಶಿವಮೊಗ್ಗ: ಸಾಗರ ಕ್ಷೇತ್ರದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿಯಲ್ಲಿ ಸಂಸದರ ಹಸ್ತಕ್ಷೇಪ ಸಹಿಸುವುದಿಲ್ಲ. ನಿಯಮದಂತೆ ನಗರವ್ಯಾಪ್ತಿಯಲ್ಲಿ ರಸ್ತೆ, ಚರಂಡಿ ಕಾಮಗಾರಿಯನ್ನು ಅತಿಶೀಘ್ರವಾಗಿ ಮುಗಿಸಿ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಎಂಬುದಾಗಿ ಒತ್ತಾಯಿಸಿದ್ದಾರೆ.

ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಉಪವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹೆದ್ದಾರಿ 206 ಅಗಲೀಕರಣಕ್ಕೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದಂತ ಅವರು, ಕೆಲವರು ಸಂಸದರ ಬಳಿ ಹೋಗಿ ತಮ್ಮ ಜಾಗ ಉಳಿಸಿಕೊಳ್ಳಲು ಮನವಿ ಮಾಡಿದ್ದು ನನ್ನ ಗಮನಕ್ಕೆ ಬಂದಿದೆ. ಇಂತಹ ಶಾಶ್ವತವಾದ ಯೋಜನೆ ಮಾಡುವಾಗ ಯಾರನ್ನೋ ಉಳಿಸಲು ಹೋಗಿ ಊರಿನ ಅಂದ ಹಾಳಾಗುವುದನ್ನು ನಾನು ಸಹಿಸುವುದಿಲ್ಲ ಎಂದರು.

ಕಾಮಗಾರಿ ಪ್ರಾರಂಭವಾಗಿ ಮರ‍್ನಾಲ್ಕು ವರ್ಷ ಕಳೆದಿದೆ. ಜುಲೈ 10ರೊಳಗೆ ಕಾಮಗಾರಿ ಮುಗಿಸುವ ಆದೇಶವಿದ್ದರೂ ನೀವು ವಿಳಂಬ ಮಾಡುತ್ತಿದ್ದೀರಿ. ಅಗಲೀಕರಣ ಕಾಮಗಾರಿಯಲ್ಲಿ ರಸ್ತೆ, ಡ್ರೈನೇಜ್ ಬಗ್ಗೆ ಸಾಕಷ್ಟು ದೂರುಗಳಿವೆ. ನಿಮ್ಮ ಲೋಪದಿಂದ ನಾನು ಕೆಟ್ಟ ಹೆಸರು ತೆಗೆದುಕೊಳ್ಳಬೇಕಾ ಎಂದು ಪ್ರಶ್ನಿಸಿದ ಶಾಸಕರು, ಎಲ್ಲಿಯವರೆಗೆ ಪರಿಹಾರ ಕೊಟ್ಟಿದ್ದೀರೋ ಅಲ್ಲಿಯವರೆಗೆ ಒಡೆದು ರಸ್ತೆ ಅಗಲೀಕರಣ ಮಾಡಿ. ಇನ್ನು ಯರ‍್ಯಾರಿಗೆ ಪರಿಹಾರ ಬಾಕಿ ಉಳಿಸಿ ಕೊಂಡಿದ್ದೀರೋ ಅವರಿಗೆ ತಕ್ಷಣ ಪರಿಹಾರ ನೀಡಿ. ಒಂದೆರಡು ಕಡೆ ದೇವರ ಮರ ಎಂದು ಬಿಟ್ಟಿದ್ದೀರಿ. ಮರದಲ್ಲಿರುವ ದೇವರಿಗೆ ಪಕ್ಕದಲ್ಲಿರುವ ಯಾವುದಾದರೂ ಮರದಲ್ಲಿ ಚಿಕ್ಕ ಗುಡಿ ಕಟ್ಟಿಸಿ, ಪ್ರತಿಷ್ಠಾಪನೆ ಮಾಡಿ, ಮರ ಕಡಿತಲೆ ಮಾಡಿ ಎಂದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಗಲೀಕರಣ ಕಾಮಗಾರಿಗೆ ಅರಣ್ಯ ಇಲಾಖೆ, ಮೆಸ್ಕಾಂ ಸಹಕಾರ ನೀಡಬೇಕು. ವಿದ್ಯುತ್ ಕಂಬ ಸ್ಥಳಾಂತರ, ಮರ ಕಡಿತಲೆ ತಕ್ಷಣ ಮುಗಿಸಿ ಕೊಡಿ. ಎಲ್ಲೆಲ್ಲಿ ಸರ್ಕಾರಿ ಕಚೇರಿಗಳ ಕಾಂಪೌಂಡ್ ಒಡೆದಿದ್ದೀರೋ ಅದನ್ನು ರಿಪೇರಿ ಮಾಡಿ ಬಣ್ಣ ಹೊಡೆದು ಕೊಡಿ. ಗ್ರಾಮೀಣ ಭಾಗದಲ್ಲಿ ರಸ್ತೆ ಅಗಲೀಕರಣ ಮಾಡಿದ ನಂತರ ಊರಿನ ಹೆಸರಿನ ನಾಮಫಲಕ, ಪ್ರವಾಸಿ ತಾಣದ ನಾಮಫಲಕ ಕಡ್ಡಾಯವಾಗಿ ಹಾಕಬೇಕು. ಹೆದ್ದಾರಿ ಪ್ರಾಧಿಕಾರ ಮತ್ತು ಅರಣ್ಯ ಇಲಾಖೆ ಎಲ್ಲೆಲ್ಲಿ ಹಸರೀಕರಣಕ್ಕೆ ಅವಕಾಶ ಇದೆಯೋ ಅಲ್ಲಿ ಗಿಡ ನೆಟ್ಟು ಬೆಳೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು.

ಮುಂದಿನ ಹತ್ತಿಪ್ಪತ್ತು ದಿನಗಳಲ್ಲಿ ಮಾರ್ಕೇಟ್ ರಸ್ತೆ ಅಗಲೀಕರಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ಕೈಗೆತ್ತಿಕೊಳ್ಳಲಾಗುತ್ತದೆ. ಮಾರ್ಕೇಟ್ ರಸ್ತೆ, ಬಿ.ಎಚ್.ರಸ್ತೆಯಿಂದಾಗಿ ಊರಿನ ಅಂದ ಕೆಟ್ಟಿದೆ. ತಕ್ಷಣ ಎರಡೂ ರಸ್ತೆ ಅಭಿವೃದ್ದಿಪಡಿಸಬೇಕು. ಈಗಾಗಲೆ ಮಾರ್ಕೇಟ್ ರಸ್ತೆಯಲ್ಲಿ ಜಾಗ ಬಿಟ್ಟುಕೊಡಲು ಸ್ಥಳೀಯರು ಒಪ್ಪಿದ್ದಾರೆ. ಕೆಳದಿ ವೃತ್ತದಲ್ಲಿ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಕೆಳದಿ ರಾಣಿ ಚೆನ್ನಮ್ಮಾಜಿ ಪುತ್ಥಳಿ ನಿರ್ಮಿಸಲು ಯೋಜನೆ ರೂಪಿಸಿದೆ ಎಂದು ಹೇಳಿದರು.

ಈ ಸಭೆಯಲ್ಲಿ ಉಪವಿಭಾಗಾಧಿಕಾರಿ ವಿರೇಶ್ ಕುಮಾರ್, ತಹಸೀಲ್ದಾರ್ ಚಂದ್ರಶೇಖರ್ ನಾಯ್ಕ್, ರಶ್ಮಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಕುಮಾರ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಲೋಕೇಶ್, ಮಮತಾ, ರಾಕೇಶ್, ಪಿಡಬ್ಲ್ಯೂಡಿಯ ಅನಿಲಕುಮಾರ್, ಶಾಸಕರ ವಿಶೇಷಾಧಿಕಾರಿ ಟಿ.ಪಿ.ರಮೇಶ್, ಪೌರಾಯುಕ್ತ ಎಚ್.ಕೆ.ನಾಗಪ್ಪ ಸೇರಿದಂತೆ ಇತರೆ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಅಕ್ಟೋಬರ್‌ ಅಥವಾ ನವೆಂಬರ್‌ನಲ್ಲಿ ಸಿಎಂ ಬದಲಾವಣೆ ಖಚಿತ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಭವಿಷ್ಯ

BIG NEWS: ‘KPTCL’ಗೆ ಷರತ್ತು, ಸೂಚನೆಯಲ್ಲಿ ಇರುವ ಸ್ಪಷ್ಟತೆ ಆದೇಶದಲ್ಲಿಲ್ಲ: ಈ ವರ್ಷವೂ ‘JE ವರ್ಗಾವಣೆ’ ಗೊಂದಲ | JE Transfer

Share. Facebook Twitter LinkedIn WhatsApp Email

Related Posts

BREAKING : ಮಂಡ್ಯದಲ್ಲಿ ಘೋರ ಘಟನೆ : ಗಣೇಶ ವಿಸರ್ಜನೆ ವೇಳೆ ವ್ಯಕ್ತಿ ನೀರು ಪಾಲು!

02/09/2025 7:33 AM1 Min Read

ಚಾಮರಾಜನಗರ : ಬಿಳಿಗಿರಿರಂಗನ ಬೆಟ್ಟದಲ್ಲಿ ಮತ್ತೆ ಹುಲಿ ಪ್ರತ್ಯಕ್ಷ : ಸ್ಥಳೀಯರಲ್ಲಿ ಹೆಚ್ಚಿದ ಆತಂಕ

02/09/2025 7:11 AM1 Min Read

SHOCKING : ರಾಯಚೂರಲ್ಲಿ ಗಣೇಶ ವಿಸರ್ಜನೆ ವೇಳೆ ಡಾನ್ಸ್ ಮಾಡುತ್ತಲೇ ‘ಹೃದಯಾಘಾತ’ದಿಂದ ಯುವಕ ಸಾವು!

02/09/2025 6:18 AM1 Min Read
Recent News

ಸುಡಾನ್ ನ ಮಾರಾ ಪರ್ವತದಲ್ಲಿ ಭೂಕುಸಿತ: 1,000ಕ್ಕೂ ಹೆಚ್ಚು ಮಂದಿ ಸಾವು

02/09/2025 7:35 AM

BREAKING : ಮಂಡ್ಯದಲ್ಲಿ ಘೋರ ಘಟನೆ : ಗಣೇಶ ವಿಸರ್ಜನೆ ವೇಳೆ ವ್ಯಕ್ತಿ ನೀರು ಪಾಲು!

02/09/2025 7:33 AM

ಬಿಹಾರದಲ್ಲಿ ಸೆ. 1ರ ನಂತರ SIR ಅರ್ಜಿ ಸಲ್ಲಿಸಬಹುದು: ಸುಪ್ರೀಂ ಕೋರ್ಟ್ ಗೆ ಚುನಾವಣಾ ಆಯೋಗ

02/09/2025 7:26 AM

BREAKING: ವಿಶ್ವಕಪ್‌ಗೂ ಮುನ್ನ ಟಿ20 ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಆಸ್ಟ್ರೇಲಿಯಾದ ಬೌಲರ್ ಮಿಚೆಲ್ ಸ್ಟಾರ್ಕ್

02/09/2025 7:17 AM
State News
KARNATAKA

BREAKING : ಮಂಡ್ಯದಲ್ಲಿ ಘೋರ ಘಟನೆ : ಗಣೇಶ ವಿಸರ್ಜನೆ ವೇಳೆ ವ್ಯಕ್ತಿ ನೀರು ಪಾಲು!

By kannadanewsnow0502/09/2025 7:33 AM KARNATAKA 1 Min Read

ಮಂಡ್ಯ : ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡುವ ವೇಳೆ ವ್ಯಕ್ತಿಯೊಬ್ಬ ನೀರು ಪಾಲಾಗಿರುವ ಘಟನೆ ಮದ್ದೂರು ತಾಲೂಕಿನ ಕಾರ್ಕಳ್ಳಿ ಗ್ರಾಮದಲ್ಲಿ…

ಚಾಮರಾಜನಗರ : ಬಿಳಿಗಿರಿರಂಗನ ಬೆಟ್ಟದಲ್ಲಿ ಮತ್ತೆ ಹುಲಿ ಪ್ರತ್ಯಕ್ಷ : ಸ್ಥಳೀಯರಲ್ಲಿ ಹೆಚ್ಚಿದ ಆತಂಕ

02/09/2025 7:11 AM

SHOCKING : ರಾಯಚೂರಲ್ಲಿ ಗಣೇಶ ವಿಸರ್ಜನೆ ವೇಳೆ ಡಾನ್ಸ್ ಮಾಡುತ್ತಲೇ ‘ಹೃದಯಾಘಾತ’ದಿಂದ ಯುವಕ ಸಾವು!

02/09/2025 6:18 AM

ಮುಸ್ಲಿಂ ಮದುವೆಯಾದರೆ 5 ಲಕ್ಷ ಗಿಫ್ಟ್ ಪ್ರಕರಣ : ‘FIR’ ರದ್ದತಿಗೆ ಹೈಕೋರ್ಟ್ ಗೆ ಶಾಸಕ ಯತ್ನಾಳ್ ಅರ್ಜಿ

02/09/2025 6:11 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.