ಹಾವೇರಿ: ರಾಜ್ಯದಲ್ಲಿ ಉಂಟಾಗಿರುವ ಅತಿವೃಷ್ಟಿಗೆ ರಾಜ್ಯ ಸರ್ಕಾರ ಗ್ರಾಮ ಪಂಚಾಯತಿ ಮಟ್ಟದಲ್ಲಿ ಬೆಳೆ ಹಾನಿ ಸಮೀಕ್ಷೆ ಮಾಡಿ, ಮಧ್ಯಂತರ ಪರಿಹಾರ ಕೊಡಬೇಕು. ಕೇಂದಕ್ಕೆ ಬೆಳೆ ನಷ್ಟದ ವರದಿ ಕಳುಹಿಸಿ ಎನ್ಡಿಆರ್ಎಫ್ ಹಾಗೂ ಎಸ್ಡಿಆರ್ಎಫ್ ನಿಯಮಗಳ ಪ್ರಕಾರ ಪರಿಹಾರ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗಹಿಸಿದ್ದಾರೆ.
ಹಾವೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಷ ವಾಡಿಕೆಗಿಂತ ಅತಿ ಹೆಚ್ಚು ಮಳೆಯಾಗಿದೆ. ಎರಡು ವರ್ಷವೂ ಕೂಡ ರೈತರ ಬೆಳೆ ನಷ್ಟವಾಗಿದೆ. ಬಡವರ ಮನೆ ಬಿದ್ದಿವೆ. ಎಷ್ಟೊ ಮನೆಗಳಲ್ಲಿ ನೀರು ಒಳಗಡೆ ಹೋಗಿ ತೊಂದರೆ ಕೊಟ್ಟಿದೆ. ಇಷ್ಟೆಲ್ಲ ಆದರೂ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ. ರೈತರು ಮತ್ತು ರೈತ ಸಂಘಟನೆಗಳು ಕೂಗು ಹಾಕಿದ ಮೇಲೆ ಸಿಎಂ ಕಾಟಾಚಾರದ ಮೀಟಿಂಗ್ ಮಾಡಿದ್ದಾರೆ. ಇದುವರೆಗೂ ಪರಿಹಾರ ಸಿಕ್ಕಿಲ್ಲ. ರಾಜ್ಯ ಸಕಾರದ ಸೂಚನೆ ಇದೆಯೊ ಗೊತ್ತಿಲ್ಲ. ಬೆಳೆ ನಷ್ಟದ ಕ್ಷೇತವನ್ನು ಪ್ರಾಥಮಿಕ ಸಮೀಕ್ಷೆ ಮಾಡಬೇಕು ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಎಷ್ಟು ಬೆಳೆ ನಷ್ಟವಾಗಿದೆ ಎಂದು ಗ್ರಾಮ ಲೆಕ್ಕಾಧಿಕಾರಿ, ಪಿಡಿಒ, ಸರ್ವೆ ಮಾಡಿ ತಾಲೂಕು ಎಡಿ ಸಮೀಕ್ಷೆ ಮಾಡಿ ಜಿಲ್ಲಾ ಮಟ್ಟಕ್ಕೆ ತೆಗೆದುಕೊಂಡು ಬಂದು ಬೆಳೆ ನಷ್ಟ ತಿಳಿಯಬೇಕು. ಕೇವಲ ಅರ್ಜಿ ಕೊಟ್ಟಲ್ಲಿ ಮಾತ್ರ ಭೇಟಿ ನೀಡಿ ಸಮೀಕ್ಷೆ ಮಾಡಿದ್ದಾರೆ. ಇಡೀ ರಾಜ್ಯದಲ್ಲಿ ಬೆಳೆ ಹಾನಿಯಾಗಿರುವುದರಿಂದ ವೈಜ್ಞಾನಿಕವಾಗಿ ಸಮೀಕ್ಷೆ ಮಾಡಬೇಕಿತ್ತು. ಅದನ್ನು ಮಾಡಿಲ್ಲ. ಹಾವೇರಿ ಜಿಲ್ಲೆಯಲ್ಲಿ 23,556 ಹೆಕ್ಟೇರ್ ಪ್ರದೇಶ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಿದ್ದಾರೆ. ಆದರೆ, ಇದಕ್ಕಿಂತ ಹೆಚ್ಚು ಬೆಳೆ ಹಾನಿಯಾಗಿದೆ. ಬಿತ್ತಿದ ಮೇಲೆ ಹೊಲಕ್ಕೆ ಕಾಲಿಡದ ಸ್ಥಿತಿ ಉಂಟಾಗಿದೆ. ಕೃಷಿ ಇಲಾಖೆ ರೈತರ ಸಮಸ್ಯೆಗೆ ಸಂಧಿಸುತ್ತಿಲ್ಲ. ರೈತರ ಬಗ್ಗೆ ಯಾವುದೇ ಕಳಕಳಿ ಇಲ್ಲ. ಸರಿಯಾದ ಸಮೀಕ್ಷೆ ಮಾಡಿ ನಷ್ಟವನ್ನು ಕೂಡಲೆ ಮೊದಲ ಕಂತಿನಲ್ಲಿ ಮಧ್ಯಂತರ ಪರಿಹಾರ ನೀಡಬೇಕು ನಂತರ ಎನ್ಡಿಆರ್ಎಫ್, ಎಸ್ಡಿಆರ್ಎಫ್ ನಿಯಮದ ಪ್ರಕಾರ ಪರಿಹಾರ ನಿಡಬೇಕು. ರಾಜ್ಯ ಸರ್ಕಾರ ಆದಷ್ಟು ಬೇಗ ಸಮೀಕ್ಷೆ ಮಾಡಿ ಕೇಂದ್ರಕ್ಕೆ ವರದಿ ಕಳುಹಿಸಿದರೆ ಕೇಂದ್ರದಿಂದ ಪರಿಹಾರ ಕೊಡಿಸುವ ಕೆಲಸ ಮಾಡುತ್ತೇವೆ. ಇಲ್ಲದಿದ್ದರೆ ರಾಜ್ಯದ ರೈತರಿಗೆ ಅನ್ವಯವಾಗಲಿದೆ ಎಂದು ಹೇಳಿದರು.
ಅಪಾರ ಮಳೆಯಿಂದ ಸಾಕಷ್ಟು ಮನೆಗಳು ಬಿದ್ದಿವೆ ಅದನ್ನು ಪರಿಗಣಿಸುತ್ತಿಲ್ಲ. ನಮ್ಮ ಅವಧಿಯಲ್ಲಿ ಮನೆ ಬಿದ್ದಾಗ ಐದು ಲಕ್ಷ ಕೊಡುತ್ತಿದ್ದವು. ಇವರು ಬಂದ ಮೇಲೆ ಅದನ್ನು ನಿಲ್ಲಿಸಿದ್ದಾರೆ. ಕೂಡಲೇ 10 ಸಾವಿರ ರೂ. ತಕ್ಷಣದ ಪರಿಹಾರ ನೀಡಬೇಕಿತ್ತು. ಅದನ್ನು ಮಾಡುತ್ತಿಲ್ಲ. ಹೀಗಾಗಿ ಈ ಸರ್ಕಾರ ಇದ್ದೂ ಸತ್ತಂತೆ. ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಮೀಕ್ಷೆಯಾಗಬೇಕು. ಈಗಾಗಲೇ ರೈತರು ಬೀಜ ಮತ್ತು ಗೊಬ್ಬರಕ್ಕೆ ಬಹಳ ನಷ್ಟ ಮಾಡಿಕೊಂಡಿದ್ದಾರೆ. ಈ ವರ್ಷ ಯೂರಿಯಾಕ್ಕೆ ಬಹಳ ಬೇಡಿಕೆ ಬಂದಿತ್ತು ರೈತರು ಎರಡು ಮೂರು ಸಾರಿ ಬಿತ್ತನೆ ಮಾಡಿದ್ದರಿಂದ ಗೊಬ್ಬರ ಮತ್ತು ಬೀಜದ ನಷ್ಟ ಉಂಟಾಗಿತ್ತು ಈಗ ಬೆಳೆ ನಷ್ಟಕೂಡ ಉಂಟಾಗಿದೆ. ಅವರು ಕಾಟಾಚಾರಕ್ಕೆ ಸಮೀಕ್ಷೆ ನಡೆಸುತ್ತಿದ್ದಾರೆ. ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಸಮೀಕ್ಷೆ ನಡೆಸಿ ವರದಿ ನೀಡಬೇಕು ಎಂದು ಆಗ್ರಹಿಸಿದರು.
ಯೋಜನೆ ಸ್ಥಗಿತ
ಈ ಸರ್ಕಾರ ಕೃಷಿ ಬಗ್ಗೆ ರೈತರ ಬಗ್ಗೆ ಮೊದಲಿನಿಂದಲೂ ಅತ್ಯಂತ ನಿರ್ಲಕ್ಷ್ಯ ಮತ್ತು ನಿಷ್ಕಾಳಜಿ ತಾತ್ಕಾರ ಮನೋಭಾವದಿಂದ ನೋಡುತ್ತಿದೆ. ರೈತರಿಗೆ ನಾವು ನೀಡಿರುವ ಹಲವಾರು ಕಾರ್ಯಕ್ರಮ ಸ್ಥಗಿತಗೊಳಿಸಿದ್ದಾರೆ. ರೈತರ ಮಕ್ಕಳಿಗೆ ವಿದ್ಯಾನಿಧಿ ನೀಡುತ್ತಿದ್ದೇವು, ಸಬ್ಸಿಡಿ ದರದಲ್ಲಿ ಡಿಸೇಲ್ ನೀಡುತ್ತಿದ್ದೆವು. ಬೀಜ ಗೊಬ್ಬರಕ್ಕೆ ಪೋತಾಹಧನ ನೀಡುತ್ತಿದ್ದೇವು ಅವೆಲ್ಲವನ್ನೂ ನಿಲ್ಲಿಸಿದ್ದಾರೆ. ಇದಲ್ಲದೇ ನ್ಯಾಯ ಸಮ್ಮತವಾಗಿ ಗೊಬ್ಬರ ಬೀಜ ಕೊಡುವಲ್ಲಿಯೂ ವಿಫಲವಾಗಿದ್ದಾರೆ. ಬ್ಲಾಕ್ ಮಾರುಕಟ್ಟೆಯಲ್ಲಿ ದೊಡ್ಡ ರೈತರಿಗೆ ಗೊಬ್ಬರ ಬೀಜ ಸಿಗುತ್ತಿದೆ. ಸಣ್ಣ ರೈತರಿಗೆ ಸಿಗುತ್ತಿಲ್ಲ ಎಂದು ಆರೋಪಿಸಿದರು.
BREAKING: ನೇಪಾಳದ ಮಧ್ಯಂತರ ಸರ್ಕಾರದ ಜನರಲ್-ಝಡ್ ಆಗಿ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ನೇಮಕ
BREAKING: ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಯ ನೂತನ ನಿರ್ದೇಶಕರಾಗಿ ಡಾ.ದಿನೇಶ್ ನೇಮಕ







