Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ತತ್ಕಾಲ್ ಟಿಕೆಟ್ ವಂಚನೆ ತಡೆಗೆ ಮಹತ್ವದ ಕ್ರಮ : 2.5 ಕೋಟಿ `IRCTC’ ಖಾತೆ ನಿಷೇಧ | Taktal fraud

07/06/2025 7:01 AM

Shocking: ಚಾಕೊಲೇಟ್ ಕದ್ದ ಆರೋಪ : ಐವರು ಬಾಲಕರ ಬೆತ್ತಲೆಯಾಗಿ ಮೆರವಣಿಗೆ

07/06/2025 6:56 AM

Alert : ಮೊಬೈಲ್ ಚಾರ್ಜ್‌ ಮಾಡುವಾಗ ಈ ತಪ್ಪು ಮಾಡಿದ್ರೆ ನಿಮ್ಮ `ಫೋನ್’ ಬಾಂಬ್ ನಂತೆ ಬ್ಲ್ಯಾಸ್ಟ್‌ ಆಗಬಹುದು.!

07/06/2025 6:55 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಹಾವೇರಿಯಲ್ಲಿ ನಡೆದ ‘ನೈತಿಕ ಪೊಲೀಸ್ ಗಿರಿ’ ಖಂಡನೀಯ: ಎಲ್ಲ ‘ಗೂಂಡಾ’ಗಳನ್ನು ತಕ್ಷಣ ಬಂಧಿಸಿ – ಬೊಮ್ಮಾಯಿ ಆಗ್ರಹ
KARNATAKA

ಹಾವೇರಿಯಲ್ಲಿ ನಡೆದ ‘ನೈತಿಕ ಪೊಲೀಸ್ ಗಿರಿ’ ಖಂಡನೀಯ: ಎಲ್ಲ ‘ಗೂಂಡಾ’ಗಳನ್ನು ತಕ್ಷಣ ಬಂಧಿಸಿ – ಬೊಮ್ಮಾಯಿ ಆಗ್ರಹ

By kannadanewsnow0911/01/2024 2:28 PM

ಬೆಂಗಳೂರು: ಹಾವೇರಿ ಜಿಲ್ಲೆ ಹಾನಗಲ್ ಪಟ್ಟಣದ ವಸತಿಗೃಹನಲ್ಲಿದ್ದ ಜೋಡಿಯ ಮೇಲೆ ದುಷ್ಕರ್ಮಿಗಳು ನೈತಿಕ ಪೊಲೀಸ್ ಗಿರಿ ನಡೆಸಿರುವುದು ಖಂಡನೀಯ. ಅಮಾಯಕರ ಮೇಲೆ ನೈತಿಕ ಪೋಲಿಸ್ ಗಿರಿ ನಡೆಸಿರುವ ಎಲ್ಲ ಗೂಂಡಾಗಳನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂಬುದಾಗಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.

ಹಾವೇರಿ ಜಿಲ್ಲೆ ಹಾನಗಲ್ ಪಟ್ಟಣದ ವಸತಿಗೃಹನಲ್ಲಿದ್ದ ಜೋಡಿಯ ಮೇಲೆ ದುಷ್ಕರ್ಮಿಗಳು ನೈತಿಕ ಪೊಲೀಸ್ ಗಿರಿ ನಡೆಸಿರುವುದು ಖಂಡನೀಯ. ಅಮಾಯಕರ ಮೇಲೆ ನೈತಿಕ ಪೋಲಿಸ್ ಗಿರಿ ನಡೆಸಿರುವ ಎಲ್ಲ ಗೂಂಡಾಗಳನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು.
1/2

— Basavaraj S Bommai (@BSBommai) January 11, 2024

ಈ ಬಗ್ಗೆ ಇಂದು ಎಕ್ಸ್ ಮಾಡಿರೋ ಅವರು, ನೈತಿಕ ಪೊಲಿಸ್ ಗಿರಿ ಬಗ್ಗೆ ಪುಂಖಾನುಪುಂಕವಾಗಿ ಮಾತನಾಡುತ್ತಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ಇಂತಹ ಹೀನ ಕೃತ್ಯ ನಡೆದರೂ ಮೌನ ವಹಿಸಿರುವುದೇಕೆ. ದೌರ್ಜನ್ಯ ಮಾಡಿರುವ ಕಿರಾತಕರು ಅಲ್ಪ ಸಂಖ್ಯಾತರು ಅನ್ನುವ ಕಾರಣಕ್ಕೆ ದಿವ್ಯ ಮೌನ ವಹಿಸಿದ್ದಾರಾ ? ಈ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂಬುದಾಗಿ ಹೇಳಿದ್ದಾರೆ.

ನೈತಿಕ ಪೊಲಿಸ್ ಗಿರಿ ಬಗ್ಗೆ ಪುಂಖಾನುಪುಂಕವಾಗಿ ಮಾತನಾಡುತ್ತಿದ್ದ ಮುಖ್ಯಮಂತ್ರಿ @siddaramaiah ಇಂತಹ ಹೀನ ಕೃತ್ಯ ನಡೆದರೂ ಮೌನ ವಹಿಸಿರುವುದೇಕೆ. ದೌರ್ಜನ್ಯ ಮಾಡಿರುವ ಕಿರಾತಕರು ಅಲ್ಪ ಸಂಖ್ಯಾತರು ಅನ್ನುವ ಕಾರಣಕ್ಕೆ ದಿವ್ಯ ಮೌನ ವಹಿಸಿದ್ದಾರಾ ? ಈ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಬೇಕು.
3/3

— Basavaraj S Bommai (@BSBommai) January 11, 2024

ಹಾವೇರಿ ‘ನೈತಿಕ ಪೊಲೀಸ್ ಗಿರಿ’ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಗೃಹಿಣಿ ಮೇಲೆ ಯುವಕರಿಂದಲೇ ‘ಗ್ಯಾಂಗ್ ರೇಪ್’.?

ಹಾವೇರಿ: ಕೆಲ ದಿನಗಳ ಹಿಂದೆ ನಡೆದಿದ್ದಂತ ಹಾವೇರಿ ನೈತಿಕ ಪೊಲೀಸ್ ಗಿರಿ ಪ್ರಕರಣ ನಿನ್ನೆಯಷ್ಟೇ ತಡವಾಗಿ ಬೆಳಕಿಗೆ ಬಂದಿತ್ತು. ವೀಡಿಯೋ ವೈರಲ್ ಆದ ಬಳಿಕ, ಸಂತ್ರಸ್ತ ಗೃಹಿಣಿ ಪೊಲೀಸರಿಗೆ ದೂರು ನೀಡಿದ್ದಳು. ಈ ದೂರಿನ ಬೆನ್ನಲ್ಲೇ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅದೇ ಗೃಹಿಣಿಯನ್ನ ಕರೆದೊಯ್ದ ಯುವಕರು, ಆಕೆಯ ಮೇಲೆ ಗ್ಯಾಂಗ್ ರೇಪ್ ಮಾಡಿದ್ದಾರೆ ಎನ್ನಲಾಗುತ್ತಿದೆ.

ಹಾವೇರಿಯಲ್ಲಿ ಜನವರಿ.8ರಂದು ಲಾಡ್ಜ್ ಒಂದಕ್ಕೆ ನುಗ್ಗಿರುವಂತ ಗುಂಪೊಂದು, ಹಿಂದೂ ವ್ಯಕ್ತಿ ಹಾಗೂ ಮುಸ್ಲೀಂ ಮಹಿಳೆಯ ಮೇಲೆ ಹಲ್ಲೆ ನಡೆಸಿರೋ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿದೆ. ಈ ಬಳಿಕ ಮಹಿಳೆ ಹಾನಗಲ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಪೊಲೀಸರು ಓರ್ವ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಮಹಿಳೆ ನೀಡಿದಂತ ದೂರಿನಲ್ಲಿ ನನ್ನ ಖಾಸಗಿ ಅಂಗಾಗ ಮುಟ್ಟಿ ಹಲ್ಲೆ ನಡೆಸಲಾಗಿದೆ. ಮನಸೋ ಇಚ್ಛೆ ಹೋಟೆಲ್ ನಲ್ಲಿ ಥಳಿಸಿದ್ದಾರೆ. ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಅಂದಾಹೇ ಹಾವೇರಿ ಜಿಲ್ಲೆಯಲ್ಲಿ ನಡೆದಂತ ನೈತಿಕ ಪೊಲೀಸ್ ಗಿರಿ ಪ್ರಕರಣದಲ್ಲಿ ಹೋಟೆಲ್ ರೂನಲ್ಲಿ ತಂಗಿದ್ದಂತ ಹಿಂದೂ-ಮುಸ್ಲೀಂ ಜೋಡಿಯ ಮೇಲೆ ಹಲ್ಲೆ ನಡೆಸಲಾಗಿದೆ. ಬುರ್ಕಾ ಹಾಕಿಕೊಂಡು ಮಲಗಿದ್ದೀಯ ಎಂದು ಹಲ್ಲೆ ಮಾಡಲಾಗಿದೆ. ಮುಸ್ಲೀಂ ಮಹಿಳೆಯೊಂದಿಗೆ ಸಿಕ್ಕಿಬಿದ್ದಂತ ಹಿಂದೂ ವ್ಯಕ್ತಿಯನ್ನು ಥಳಿಸಲಾಗಿದೆ.

ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಸಂತ್ರಸ್ತೆ ಪೊಲೀಸರಿಗೆ ನೀಡಿರುವಂತ ದೂರಿನಲ್ಲಿ ನಾನು, ವ್ಯಕ್ತಿಯೊಂದಿಗೆ ಇದ್ದಂತ ವೀಡಿಯೋ ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡಿದ್ದರು. ಅದನ್ನು ತೋರಿಸಿ ಬೆದರಿಸಿದ್ರು. ಲಾಡ್ಜ್ ಕೋಣೆಯಲ್ಲಿ ಇದ್ದಾಗ ಕೆಲವು ಹುಡುಗ್ರು ಬಂದು ನನ್ನ ಕರೆದುಕೊಂಡು ಬೈಕ್ ನಲ್ಲಿ ಕೂರಿಸಿಕೊಂಡು ಕರೆದುಕೊಂಡು ಹೋಗಿ ಹೊಡೆದಿದ್ದಾರೆ.

ಜೀವ ಹೋಗುವ ಹಾಗೆ ಮರಣಂತಿಕ ಹಲ್ಲೆ ನಡೆಸಿದರು. ಅಲ್ಲಿಂದ ಕಾಡಿನಲ್ಲಿ ಕರೆದುಕೊಂಡು ಹೋಗಿ ಒಬ್ಬರಾದ ಮೇಲೆ ಒಬ್ಬರು ಎರಡು ಮೂರು ಕಡೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾರೆ.ಆಮೇಲೆ ಮೂರು ಜನ ಬಂದು ಕಾರಿನಲ್ಲಿ ಹತ್ತಿಸಿ ರೋಡಿನಲ್ಲಿ ತಂದು ಬಿಟ್ಟು ಬಸ್ಸಿಗೆ ಹತ್ತಿಸಿ ಕಳುಹಿಸಿದ್ದಾರೆ ಎಂದು ಶಿರಸಿ ಮೂಲದ ಸಂತ್ರಸ್ಥೆ ಮಹಿಳೆ ಆರೋಪಿಸಿದ್ದಾಳೆ.

ಜ.31ರಿಂದ ‘ಸಂಸತ್ತಿನ ಬಜೆಟ್’ ಅಧಿವೇಶನ ಆರಂಭ, ಫೆ.1ರಂದು ‘ಮಧ್ಯಂತರ’ ಬಜೆಟ್ ಮಂಡನೆ

ಜ.14 ರಿಂದ 25 ರವರೆಗೆ ಅಯೋಧ್ಯೆಯಲ್ಲಿ ‘ರಾಮ್ ನಾಮ್ ಮಹಾ ಯಜ್ಞ’ |’Ram Naam Maha Yagna’

Share. Facebook Twitter LinkedIn WhatsApp Email

Related Posts

Alert : ಮೊಬೈಲ್ ಚಾರ್ಜ್‌ ಮಾಡುವಾಗ ಈ ತಪ್ಪು ಮಾಡಿದ್ರೆ ನಿಮ್ಮ `ಫೋನ್’ ಬಾಂಬ್ ನಂತೆ ಬ್ಲ್ಯಾಸ್ಟ್‌ ಆಗಬಹುದು.!

07/06/2025 6:55 AM2 Mins Read

GOOD NEWS : ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ : ‘ರೇಷನ್’ ಜೊತೆಗೆ ಉಚಿತವಾಗಿ ಸಿಗಲಿವೆ ಈ 10 ಅಗತ್ಯ ವಸ್ತುಗಳು.!

07/06/2025 6:39 AM4 Mins Read

BIG NEWS : ರಾಜ್ಯದಲ್ಲಿ ಜೂನ್ 12ಕ್ಕೆ `ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ’ : ಸರ್ಕಾರದಿಂದ ಮಹತ್ವದ ಆದೇಶ.!

07/06/2025 6:29 AM1 Min Read
Recent News

BIG NEWS : ತತ್ಕಾಲ್ ಟಿಕೆಟ್ ವಂಚನೆ ತಡೆಗೆ ಮಹತ್ವದ ಕ್ರಮ : 2.5 ಕೋಟಿ `IRCTC’ ಖಾತೆ ನಿಷೇಧ | Taktal fraud

07/06/2025 7:01 AM

Shocking: ಚಾಕೊಲೇಟ್ ಕದ್ದ ಆರೋಪ : ಐವರು ಬಾಲಕರ ಬೆತ್ತಲೆಯಾಗಿ ಮೆರವಣಿಗೆ

07/06/2025 6:56 AM

Alert : ಮೊಬೈಲ್ ಚಾರ್ಜ್‌ ಮಾಡುವಾಗ ಈ ತಪ್ಪು ಮಾಡಿದ್ರೆ ನಿಮ್ಮ `ಫೋನ್’ ಬಾಂಬ್ ನಂತೆ ಬ್ಲ್ಯಾಸ್ಟ್‌ ಆಗಬಹುದು.!

07/06/2025 6:55 AM

BREAKING : ಮೆಕ್ಸಿಕೋದಲ್ಲಿ ವಿಮಾನ ಪತನ : ಇಬ್ಬರು ಪೈಲಟ್ ಗಳು ಸೇರಿ ಮೂವರು ಸಾವು | WATCH VIDEO

07/06/2025 6:47 AM
State News
KARNATAKA

Alert : ಮೊಬೈಲ್ ಚಾರ್ಜ್‌ ಮಾಡುವಾಗ ಈ ತಪ್ಪು ಮಾಡಿದ್ರೆ ನಿಮ್ಮ `ಫೋನ್’ ಬಾಂಬ್ ನಂತೆ ಬ್ಲ್ಯಾಸ್ಟ್‌ ಆಗಬಹುದು.!

By kannadanewsnow5707/06/2025 6:55 AM KARNATAKA 2 Mins Read

ಬೆಂಗಳೂರು : ಇಂದಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಮೊಬೈಲ್‌ ಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಹೀಗಾಗಿ ಮೊಬೈಲ್‌ ಗಳನ್ನು ಚಾರ್ಜ್‌…

GOOD NEWS : ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ : ‘ರೇಷನ್’ ಜೊತೆಗೆ ಉಚಿತವಾಗಿ ಸಿಗಲಿವೆ ಈ 10 ಅಗತ್ಯ ವಸ್ತುಗಳು.!

07/06/2025 6:39 AM

BIG NEWS : ರಾಜ್ಯದಲ್ಲಿ ಜೂನ್ 12ಕ್ಕೆ `ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ’ : ಸರ್ಕಾರದಿಂದ ಮಹತ್ವದ ಆದೇಶ.!

07/06/2025 6:29 AM
vidhana soudha

BIG NEWS : ರಾಜ್ಯ ಸರ್ಕಾರದಿಂದ ‘ಒಕ್ಕಲಿಗ ಸಮುದಾಯದವರಿಗೆ’ ಗುಡ್ ನ್ಯೂಸ್ : ‘ಗಂಗಾ ಕಲ್ಯಾಣ, ಸ್ವಾವಲಂಬಿ ಸಾರಥಿ’ ಸೇರಿ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

07/06/2025 6:20 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.