Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಚಾರಣಿಗರ ಸುರಕ್ಷತೆಗಾಗಿ ಟ್ರ್ಯಾಕಿಂಗ್ ಆಪ್, ವಿಮೆ : ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ

09/04/2026 10:42 AM

SHOCKING : `AC’ ಕವರ್ ತೆಗೆದ ಮೆಕ್ಯಾನಿಕ್‌ ಗೆ ಕಾದಿತ್ತು ಬಿಗ್ ಶಾಕ್ : ಒಳಗಿತ್ತು ‘ಇಲಿರಾಯನ’ ಹೈಟೆಕ್ ಬಂಗಲೆ | WATCH VIDEO

09/04/2026 10:35 AM

21 ವರ್ಷ ದೇಶ ಸೇವೆ ಮಾಡಿದೆ, ಈಗ ನನ್ನ ಪೌರತ್ವವನ್ನೇ ಶಂಕಿಸಲಾಗುತ್ತಿದೆ”: ಮತದಾರರ ಪಟ್ಟಿಯಿಂದ ಕಾರ್ಗಿಲ್ ಯುದ್ಧ ವೀರನ ಹೆಸರು ಡಿಲೀಟ್!

09/04/2026 10:33 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಅರಮನೆ ವೃದ್ಧಾಶ್ರಮ’ದ ಕ್ಯಾಲೆಂಡರ್ ಬಿಡುಗಡೆಗೊಳಿಸಿದ ‘ಶಾಸಕ ಗೋಪಾಲಕೃಷ್ಣ ಬೇಳೂರು’
Uncategorized

‘ಅರಮನೆ ವೃದ್ಧಾಶ್ರಮ’ದ ಕ್ಯಾಲೆಂಡರ್ ಬಿಡುಗಡೆಗೊಳಿಸಿದ ‘ಶಾಸಕ ಗೋಪಾಲಕೃಷ್ಣ ಬೇಳೂರು’

By kannadanewsnow0913/01/2026 10:29 PM

ಶಿವಮೊಗ್ಗ: ನಾಗರಾಜ್ ಗುಡ್ಡೇಮನೆ ಅವರ ಅರಮನೆ ವೃದ್ಧಾಶ್ರಮದಿಂದ ಹೊರ ತಂದಿರುವಂತ 2026ರ ಕ್ಯಾಲೆಂಡರ್ ಅನ್ನು ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ತಮ್ಮ ಸ್ವಗೃಹದಲ್ಲಿ ಬಿಡುಗಡೆ ಮಾಡಿದರು.

ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿರುವಂತ ಶಾಸಕ ಗೋಪಾಲಕೃಷ್ಣ ನಿವಾಸದಲ್ಲಿ ನಾಗರಾಜ್ ಗುಡ್ಡೇಮನೆ ನಡೆಸುತ್ತಿರುವಂತ ಅರಮನೆ ವೃದ್ಧಾಶ್ರಮದ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದಂತ ಅವರು, ಇಂದು ಕುಟುಂಬಗಳು ಹೊಡೆದು ಹೋಗುತ್ತಿವೆ. ಸಿಂಗಲ್ ಫ್ಯಾಮಿಲಿ ಲೈಫ್ ಹೆಚ್ಚಾಗಿದೆ. ಮಕ್ಕಳೊಂದಿಗೆ, ಸೊಸೆಯೊಂದಿಗೆ ಹಿರಿಯ ನಾಗರೀಕರು ಹೊಂದಾಣಿಕೆ ಮಾಡಿಕೊಳ್ಳುವುದೇ ಕಷ್ಟವಾಗಿದೆ. ಹೀಗಾಗಿ ವೃದ್ಧಾಶ್ರಮಗಳು ಹೆಚ್ಚಾಗುತ್ತಿವೆ. ಇದು ಖೇದಕರ ಸಂಗತಿಯಾಗಿದೆ ಎಂದರು.

ಅರಮನೆ ವೃದ್ಧಾಶ್ರಮದ ಎಲ್ಲಿದೆ? ಏನೆಲ್ಲಾ ಸೌಲಭ್ಯಗಳಿವೆ?

ಸಾಮಾಜಿಕ ಸೇವಕರಾದಂತ ನಾಗರಾಜ್ ಗುಡ್ಡೇಮನೆ ಅವರು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲ್ಲೂಕಿನ ಮೂಸವಳ್ಳಿ ಬಳಿಯಲ್ಲಿ ಅರಮನೆ ಎನ್ನುವಂತ ವೃದ್ಧಾಶ್ರಮವನ್ನು ಆರಂಭಿಸಿದ್ದಾರೆ. ಮಕ್ಕಳಿಂದ ದೂರವಾಗಿ ತಮ್ಮ ವಯೋಕಾಲದಲ್ಲಿ ಬದುಕುವಂತ ವೃದ್ಧರಿಗಾಗಿ ಈ ಆಶ್ರಮವನ್ನು ನಿರ್ಮಿಸಲಾಗಿದೆ. ಎಲ್ಲಾ ರೀತಿಯ ಸೌಲಭ್ಯವನ್ನು ಅರಮನೆ ವೃದ್ಧಾಶ್ರಮ ಒಳಗೊಂಡಿದೆ.

ಮಕ್ಕಳು ವಿವಿಧ ಕಾರಣದಿಂದಾಗಿ ತಮ್ಮ ವಯಸ್ಸಾದ ತಂದೆ-ತಾಯಿಗಳನ್ನು ನೋಡಿಕೊಳ್ಳಲು ಸಾಧ್ಯವಾಗದಂತವರು, ಇಲ್ಲಿಗೆ ಕರೆದುಕೊಂಡು ಬಂದು ಸೇರಿಸಬಹುದು. ಅವರಿಗೆ ಉತ್ತಮ ಸೌಲಭ್ಯದೊಂದಿಗೆ ಮನೆಯ ವಾತಾವರಣವನ್ನು ಒದಗಿಸಿಕೊಡುವಂತ ಕೆಲಸವನ್ನು ಮಾಡಲಿದ್ದೇವೆ. ಸಾಗರದ ಸಮೀಪದ ಸಿದ್ದಾಪುರದ ಮೂಸವಳ್ಳಿ ಗ್ರಾಮದಲ್ಲಿ ಅರಮನೆ ವೃದ್ಧಾಶ್ರಮ ಇದಾಗಿದೆ.

ಅರಮನೆ ವೃದ್ಧಾಶ್ರಮದಲ್ಲಿ ಉತ್ತಮ ಆಹಾರ, ಸ್ನಾನಕ್ಕೆ ಬಿಸಿನೀರಿನ ವ್ಯವಸ್ಥೆ, ಔಷದಗಳ ಪೂರೈಕೆ, ತರಬೇತಿ ಪಡೆದ ಆಯಾಗಳ ಮೂಲಕ ವೃದ್ಧರ ಸೇವೆಯ ಕೆಲಸವನ್ನು ಮಾಡಲಿದೆ. ಈಗಾಗಲೇ ಐದಾರು ವೃದ್ಧರನ್ನು ಅರಮನೆ ವೃದ್ಧಾಶ್ರಮದಲ್ಲಿ ಪೋಷಣೆ ಮಾಡಲಾಗುತ್ತಿದೆ.

ಅರಮನೆ ವೃದ್ಧಾಶ್ರಮಕ್ಕೆ ಸೇರಿಸಲು 9900133833ಗೆ ಸಂಪರ್ಕಿಸಲು ಮನವಿ

ಈ ಬಗ್ಗೆ ಮಾಹಿತಿ ಹಂಚಿಕೊಂಡ ನಾಗರಾಜ್ ಗುಡ್ಡೇಮನೆ ಅವರು, ಹಿರಿಯರ ಸೇವೆ ಮಾಡುವ ಉದ್ದೇಶದಿಂದ ಅರಮನೆ ವೃದ್ಧಾಶ್ರಮ ನಡೆಸಲಾಗುತ್ತಿದೆ. ಪೋಷಕರೊಂದಿಗೆ ಹೊಂದಾಣಿಕೆಯಾದಂತವರು ತಮ್ಮ ವಯೋ ವೃದ್ಧರನ್ನು ಇಲ್ಲಿಗೆ ಕರೆದುಕೊಂಡು ಬಂದು ಸೇರಿಸಬಹುದಾಗಿದೆ. ಅವರನ್ನು ಉತ್ತಮ ರೀತಿಯಲ್ಲಿ ಪಾಲನೆ ಮಾಡುವ ಜವಾಬ್ದಾರಿ ನಮ್ಮದಾಗಿದೆ ಎಂಬುದಾಗಿ ತಿಳಿಸಿದ್ದಾರೆ.

ಅರಮನೆ ವೃದ್ಧಾಶ್ರಮಕ್ಕೆ ವೃದ್ಧರನ್ನು ಸೇರಿಸೋದಕ್ಕೆ 9900133833 ಮೊಬೈಲ್ ಸಂಖ್ಯೆಗೆ ಕರೆ ಮಾಡಬಹುದು ಎಂಬುದಾಗಿ ಹೇಳಿದ್ದಾರೆ.

ಇಂದು ಅರಮನೆ ವೃದ್ಧಾಶ್ರಮದ 2026ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ವೇಳೆ ಸಾಗರ ನಗರಸಭೆಯ ಮಾಜಿ ವಿರೋಧಪಕ್ಷದ ನಾಯಕ ಗಣಪತಿ ಮಂಡಗಳಲೆ, ಮಾಜಿ ಎಪಿಎಂಸಿ ಅಧ್ಯಕ್ಷ, ಸೂರನಗದ್ದೆ ಮಂಜು, ಧನಂಜಯ ಆರೋಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವರದಿ: ವಸಂತ ಬಿ ಈಶ್ವರಗೆರೆ.., ಸಂಪಾದಕರು..

ನಾಳೆಯಿಂದ ‘ಸಿಗಂದೂರು ಜಾತ್ರಾ’ ಮಹೋತ್ಸವ: ‘ಭಕ್ತರ ಸ್ವಾಗತ’ಕ್ಕೆ ಸಕಲ ಸಿದ್ಧತೆ

Share. Facebook Twitter LinkedIn WhatsApp Email

Related Posts

ಇಂದಿನಿಂದ ಬಹುನಿರೀಕ್ಷಿತ 19ನೇ ಆವೃತ್ತಿಯ `IPL’ ಟೂರ್ನಿ ಆರಂಭ : RCB vs SRH ನಡುವೆ ಹೈವೋಲ್ಟೇಜ್ ಉದ್ಘಾಟನಾ ಪಂದ್ಯ!

28/03/2026 6:32 AM2 Mins Read

​ತೈಲ ಉಳಿಸಲು ಶ್ರೀಲಂಕಾ ಮಾಸ್ಟರ್ ಪ್ಲಾನ್: ಇನ್ನು ಮುಂದೆ ಪ್ರತಿ ಬುಧವಾರ ಸರ್ಕಾರಿ ರಜೆ ಘೋಷಣೆ!

17/03/2026 10:49 AM1 Min Read

ALERT : ಅಪ್ಪಿ ತಪ್ಪಿಯೂ ಖಾಲಿ ಹೊಟ್ಟೆಯಲ್ಲಿ ಈ ಆಹಾರಗಳನ್ನು ಸೇವಿಸಬೇಡಿ !

15/03/2026 12:31 PM2 Mins Read
Recent News

BIG NEWS : ಚಾರಣಿಗರ ಸುರಕ್ಷತೆಗಾಗಿ ಟ್ರ್ಯಾಕಿಂಗ್ ಆಪ್, ವಿಮೆ : ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ

09/04/2026 10:42 AM

SHOCKING : `AC’ ಕವರ್ ತೆಗೆದ ಮೆಕ್ಯಾನಿಕ್‌ ಗೆ ಕಾದಿತ್ತು ಬಿಗ್ ಶಾಕ್ : ಒಳಗಿತ್ತು ‘ಇಲಿರಾಯನ’ ಹೈಟೆಕ್ ಬಂಗಲೆ | WATCH VIDEO

09/04/2026 10:35 AM

21 ವರ್ಷ ದೇಶ ಸೇವೆ ಮಾಡಿದೆ, ಈಗ ನನ್ನ ಪೌರತ್ವವನ್ನೇ ಶಂಕಿಸಲಾಗುತ್ತಿದೆ”: ಮತದಾರರ ಪಟ್ಟಿಯಿಂದ ಕಾರ್ಗಿಲ್ ಯುದ್ಧ ವೀರನ ಹೆಸರು ಡಿಲೀಟ್!

09/04/2026 10:33 AM

SHOCKING : ಗಂಡ ಸತ್ತು ಹುಳು ಬಿದ್ದರೂ ಅರಿಯದ ಪತ್ನಿ: ಕೊಳೆತ ಪತಿಯ ಶವದೊಂದಿಗೆ 10 ದಿನ ಕಳೆದ ಮಾನಸಿಕ ಅಸ್ವಸ್ಥ ಪತ್ನಿ!

09/04/2026 10:30 AM
State News
KARNATAKA

BIG NEWS : ಚಾರಣಿಗರ ಸುರಕ್ಷತೆಗಾಗಿ ಟ್ರ್ಯಾಕಿಂಗ್ ಆಪ್, ವಿಮೆ : ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ

By kannadanewsnow0509/04/2026 10:42 AM KARNATAKA 1 Min Read

ಬೆಂಗಳೂರು, ಏ.9: ರಾಜ್ಯದ ಗಿರಿಶ್ರೇಣಿಗಳಿಗೆ ಬರುವ ಚಾರಣಿಗರ ಸುರಕ್ಷತೆಯ ದೃಷ್ಟಿಯಿಂದ ದೇಶಕ್ಕೆ ಮಾದರಿಯಾಗುವಂತಹ ಪ್ರಮಾಣಿತ ಮಾನದಂಡ (ಎಸ್.ಓ.ಪಿ.) ರೂಪಿಸುವಂತೆ ಅರಣ್ಯ,…

SHOCKING : `AC’ ಕವರ್ ತೆಗೆದ ಮೆಕ್ಯಾನಿಕ್‌ ಗೆ ಕಾದಿತ್ತು ಬಿಗ್ ಶಾಕ್ : ಒಳಗಿತ್ತು ‘ಇಲಿರಾಯನ’ ಹೈಟೆಕ್ ಬಂಗಲೆ | WATCH VIDEO

09/04/2026 10:35 AM

SHOCKING : ಗಂಡ ಸತ್ತು ಹುಳು ಬಿದ್ದರೂ ಅರಿಯದ ಪತ್ನಿ: ಕೊಳೆತ ಪತಿಯ ಶವದೊಂದಿಗೆ 10 ದಿನ ಕಳೆದ ಮಾನಸಿಕ ಅಸ್ವಸ್ಥ ಪತ್ನಿ!

09/04/2026 10:30 AM

ಗಂಡಸರಿಗೂ ಬಂತಾ ‘ಶಕ್ತಿ ಯೋಜನೆ’? ಚಾಮರಾಜನಗರದಲ್ಲಿ ಪುರುಷ ಪ್ರಯಾಣಿಕನಿಗೆ ಉಚಿತ ಟಿಕೆಟ್ ನೀಡಿದ ಕಂಡಕ್ಟರ್!

09/04/2026 10:30 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.