Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಉದ್ಯಮಿ ಸಿ.ಜೆ ರಾಯ್ ಸಾವಿನ ಸುದ್ದಿ ಕೇಳಿ ತುಂಬಾ ದುಃಖ ಆಯಿತು: ಬಿಗ್ ಬಾಸ್ ವಿನ್ನರ್ ಹನುಮಂತ ಲಮಾಣಿ

31/01/2026 3:28 PM

BIG NEWS : ಮೈಸೂರಲ್ಲಿ ಬೈಕ್ ನಲ್ಲಿ ತೆರಳುವಾಗ ದಂಪತಿ, ಮಗುವಿನ ಮೇಲೆ ಏಕಾಏಕಿ ಚಿರತೆ ದಾಳಿ!

31/01/2026 3:23 PM

BREAKING : ಫೆ.1ರಿಂದ ‘ಜೆಇಇ ಮೇನ್ಸ್’ ಸೆಷನ್ 2 ನೋಂದಣಿ ಆರಂಭ ; ಫೆ. 25ರೊಳಗೆ ಅರ್ಜಿ ಸಲ್ಲಿಸಿ |JEE Mains 2026

31/01/2026 3:18 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಇಂದು ಇಡೀ ದಿನ ಸಾಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ‘ಶಾಸಕ ಬೇಳೂರು ಗೋಪಾಲಕೃಷ್ಣ ಶಂಕುಸ್ಥಾಪನೆ’
KARNATAKA

ಇಂದು ಇಡೀ ದಿನ ಸಾಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ‘ಶಾಸಕ ಬೇಳೂರು ಗೋಪಾಲಕೃಷ್ಣ ಶಂಕುಸ್ಥಾಪನೆ’

By kannadanewsnow0903/12/2024 9:47 PM

ಶಿವಮೊಗ್ಗ: ಇಂದು ಇಡೀ ದಿನ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಕೋಟ್ಯಂತರ ರೂಪಾಯಿಯ ಅನುದಾನದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿ ಇಂದು ಬೆಳಿಗ್ಗೆ 10.30ಕ್ಕೆ ಜೋಸೆಫ್ ಚರ್ಚ್ ಗೆ ತೆರಳಿದಂತ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಹೈ ಮಾಸ್ಕ್ ದೀಪದ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

ಈ ಬಳಿಕ ಮಾತನಾಡಿದಂತ ಅವರು ನಾನು ಧರ್ಮಾತೀತವಾಗಿ ಕೆಲಸ ಮಾಡುವ ವ್ಯಕ್ತಿ. ನಾನು ಯಾವತ್ತೂ ಇವರದ್ದು ಆ ಧರ್ಮ, ಈ ಧರ್ಮ, ಆ ಜಾತಿ, ಈ ಜಾತಿ ಅಂತ ನೋಡಿಲ್ಲ ಎಂದರು.

1 ವಾರದೊಳಗೆ ಸಾಗರದ ಜೋಸೆಫ್ ನಗರ ಚರ್ಚ್ ಆವರಣದಲ್ಲಿ ಹೈ ಮಾಸ್ಕ್ ದೀಪವನ್ನು ಅಳವಡಿಸುವ ಕಾರ್ಯವನ್ನು ಮುಕ್ತಾಯಗೊಳಿಸುವಂತೆ ಸ್ಥಳದಲ್ಲೇ ನಗರಸಭೆ ಪೌರಾಯುಕ್ತ ಹೆಚ್.ಕೆ ನಾಗಪ್ಪ ಅವರಿಗೆ ಸೂಚಿಸಿದರು.

ಇದಾದ ನಂತ್ರ ಸಾಗರದ ಜನ್ನತ್ ನಗರದಲ್ಲಿನ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ಆ ಬಳಿಕ ಸಾಗರದ ಅರಳಿಕೊಪ್ಪ ಶಾಲಾ ಆವರಣದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು.

ಇನ್ನೂ ಸಾಗರದ ವಾರ್ಡ್ ನಂ.25ರಲ್ಲಿನ ಮಾಲಿನಿ ಆಸ್ಪತ್ರೆಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ, ವಾರ್ಡ್ ನಂ.10ರ ಜೋಗ ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ಜೊತೆಗೆ ಇಂದಿರಾ ಕ್ಯಾಂಟೀನ್ ಗೆ ಭೇಟಿ ನೀಡಿ, ಆಹಾರದ ಗುಣಮಟ್ಟವನ್ನು ಪರೀಕ್ಷಿಸಿದರು.

ನಗರಸಭೆ ಆವರಣದ ಗಾಂಧಿ ಮೈದಾನದಲ್ಲಿ ಡೇ-ನಲ್ಮ್ ಯೋಜನೆಯ ಪಿಎಂ ಸ್ವ ನಿಧಿ ಕಾರ್ಯಕ್ರಮದಡಿ ಬೀದಿ ಬದಿ ವ್ಯಾಪಾರಿಗಳಿಗೆ ಮತ್ತು ಸ್ವ ಉದ್ಯೋಗ ಕೈಗೊಳ್ಳುವ ನಿರುದ್ಯೋಗಿ ಫಲಾನುಭವಿಗಳಿಗೆ ಸಾಲ ಮಂಜೂರಾತಿ ಪತ್ರಗಳನ್ನು ವಿತರಿಸಿದರು.

ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದಂತ ಅವರು ಮಹಾರಾಷ್ಟ್ರದಲ್ಲಿ ನಮ್ಮ ಯೋಜನೆಗಳನ್ನು ಕಾಪಿ ಮಾಡಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಜನ ಜೀವನ ಬದಲಾಗಿದೆ ಎಂದರು.

ಬೀದಿ ಬದಿಯ ವ್ಯಾಪಾರಿಗಳು ಪುಡ್ ಕೋರ್ಟ್ ಗೆ ಶಿಫ್ಟ್ ಆಗಬೇಕು. ಸಾಗರ ನಗರದ ಮೂರು ಕಡೆಯಲ್ಲಿ ಪುಡ್ ಕೋರ್ಟ್ ನಿರ್ಮಾಣ ಮಾಡಲಾಗುತ್ತಿದೆ. ಆಹಾರ ಗುಣಮಟ್ಟಕ್ಕೆ ಒತ್ತು ನೀಡಿ. ನಿಮ್ಮ ಮಕ್ಕಳು ನಿಮ್ಮಂತೆ ಆಗಲು ಬಿಡಬೇಡಿ. ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿ, ಉನ್ನತ ಮಟ್ಟಕ್ಕೆ ಬೆಳೆಯುವಂತೆ ಮಾಡಿ ಎಂದರು.

ಇದೇ ಸಂದರ್ಭದಲ್ಲಿ ಬೋಂಡ ಅಂಗಡಿ ಮಾಡಿಕೊಂಡಿದ್ದಂತ ವ್ಯಕ್ತಿಯೊಬ್ಬರು ತಮ್ಮ ಪುತ್ರನನ್ನು ಇಂಜಿನಿಯರಿಂಗ್ ಮಾಡಿಸಿರೋದಾಗಿ ತಿಳಿದು ಅವರನ್ನು ಹಾಡಿ ಹೊಗಳಿದ್ದಲ್ಲದೇ, ಹೂ ಗುಚ್ಚ ನೀಡಿ ಅಭಿನಂದಿಸಿ, ಎಲ್ಲರೂ ಇದೇ ರೀತಿ ನಿಮ್ಮ ಮಕ್ಕಳನ್ನು ಉತ್ತಮ ರೀತಿಯಲ್ಲಿ ಓದಿಸಿ ಎಂಬುದಾಗಿ ಹುರಿದುಂಬಿಸಿದರು.

ಮಧ್ಯಾಹ್ನದ ಬಳಿಕ ಸಾಗರದ ವಾರ್ಡ್ ನಂ.5ರ ಬಿಡಿ ಕ್ವಾಟ್ರಸ್ ನಲ್ಲಿ ರಸ್ತೆ ಅಭಿವೃದ್ಧಿಗೆ, ಅಣಲೆಕೊಪ್ಪ ಬಿಡಿಓ ಲೇಔಟ್ 7ನೇ ಕ್ರಾಸ್ ನಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ಆ ನಂತ್ರ ಚಂದ್ರಮಾವಿನಕೊಪ್ಪಲಿನ ಹಿಂದೂ ರುದ್ರಭೂಮಿಗೆ ಹೈ ಮಾಸ್ಕ್ ದೀಪ, ಇತರೆ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಸಾಗರದ ನೆಹರೂ ಮೈದಾನದಲ್ಲಿ ಹೈ ಮಾಸ್ಕ್ ದೀಪಗಳ ಶಂಕುಸ್ಥಾಪನೆಯನ್ನು ಶಾಸಕ ಬೇಳೂರು ಗೋಪಾಲಕೃಷ್ಣ ನೆರವೇರಿಸಿದರು. ಈ ಮೂಲಕ ಇಂದು ಇಡೀ ದಿನ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಬಿಡುವಿರದಂತೆ ಸಾಗರ ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಸಾಗರ ನಗರಸಭೆ ಪೌರಾಯುಕ್ತ ಹೆಚ್.ಕೆ ನಾಗಪ್ಪ, ನಗರಸಭೆ ಸದಸ್ಯ ಗಣಪತಿ ಮಂಡಗಳಲೆ, ಲಲಿತಮ್ಮ, ನಾಮ ನಿರ್ದೇಶಿತ ಸದಸ್ಯ ರವಿ ಲಿಂಗನಮಕ್ಕಿ, ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷೆ ಭವ್ಯ ಕೃಷ್ಣಮೂರ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವರದಿ: ವಸಂತ ಬಿ ಈಶ್ವರಗೆರೆ

Share. Facebook Twitter LinkedIn WhatsApp Email

Related Posts

ಉದ್ಯಮಿ ಸಿ.ಜೆ ರಾಯ್ ಸಾವಿನ ಸುದ್ದಿ ಕೇಳಿ ತುಂಬಾ ದುಃಖ ಆಯಿತು: ಬಿಗ್ ಬಾಸ್ ವಿನ್ನರ್ ಹನುಮಂತ ಲಮಾಣಿ

31/01/2026 3:28 PM1 Min Read

BIG NEWS : ಮೈಸೂರಲ್ಲಿ ಬೈಕ್ ನಲ್ಲಿ ತೆರಳುವಾಗ ದಂಪತಿ, ಮಗುವಿನ ಮೇಲೆ ಏಕಾಏಕಿ ಚಿರತೆ ದಾಳಿ!

31/01/2026 3:23 PM1 Min Read

ಸಾಗರದ ಮಾರಿಕಾಂಬ ದೇವಿ ಭಕ್ತರಿಗೆ ಗುಡ್ ನ್ಯೂಸ್: ಜಾತ್ರೆ ಪ್ರಯುಕ್ತ ವಿಶೇಷ ರೈಲು ಸಂಚಾರ

31/01/2026 2:31 PM2 Mins Read
Recent News

ಉದ್ಯಮಿ ಸಿ.ಜೆ ರಾಯ್ ಸಾವಿನ ಸುದ್ದಿ ಕೇಳಿ ತುಂಬಾ ದುಃಖ ಆಯಿತು: ಬಿಗ್ ಬಾಸ್ ವಿನ್ನರ್ ಹನುಮಂತ ಲಮಾಣಿ

31/01/2026 3:28 PM

BIG NEWS : ಮೈಸೂರಲ್ಲಿ ಬೈಕ್ ನಲ್ಲಿ ತೆರಳುವಾಗ ದಂಪತಿ, ಮಗುವಿನ ಮೇಲೆ ಏಕಾಏಕಿ ಚಿರತೆ ದಾಳಿ!

31/01/2026 3:23 PM

BREAKING : ಫೆ.1ರಿಂದ ‘ಜೆಇಇ ಮೇನ್ಸ್’ ಸೆಷನ್ 2 ನೋಂದಣಿ ಆರಂಭ ; ಫೆ. 25ರೊಳಗೆ ಅರ್ಜಿ ಸಲ್ಲಿಸಿ |JEE Mains 2026

31/01/2026 3:18 PM

ಜಗತ್ತನ್ನೇ ಹೆದರಿಸ್ತಿದೆ ‘ಆಕ್ಸ್ಫರ್ಡ್ ವರದಿ’ ; 4 ಬಿಲಿಯನ್ ಜನರ ಮೇಲೆ ಪರಿಣಾಮ, ಆ ಪಟ್ಟಿಯಲ್ಲಿ ಭಾರತವಿದ್ಯಾ.?

31/01/2026 3:02 PM
State News
KARNATAKA

ಉದ್ಯಮಿ ಸಿ.ಜೆ ರಾಯ್ ಸಾವಿನ ಸುದ್ದಿ ಕೇಳಿ ತುಂಬಾ ದುಃಖ ಆಯಿತು: ಬಿಗ್ ಬಾಸ್ ವಿನ್ನರ್ ಹನುಮಂತ ಲಮಾಣಿ

By kannadanewsnow0931/01/2026 3:28 PM KARNATAKA 1 Min Read

ಉದ್ಯಮಿ ಸಿ.ಜೆ ರಾಯ್ ಅವರ ಸಾವಿನ ಸುದ್ದಿ ಕೇಳಿ ತುಂಬಾ ನೋವಾಯಿತು. ಎರಡು ಬಾರಿ ನನಗೆ ಅವರು ಹಣ ನೀಡಿದ್ದರು.…

BIG NEWS : ಮೈಸೂರಲ್ಲಿ ಬೈಕ್ ನಲ್ಲಿ ತೆರಳುವಾಗ ದಂಪತಿ, ಮಗುವಿನ ಮೇಲೆ ಏಕಾಏಕಿ ಚಿರತೆ ದಾಳಿ!

31/01/2026 3:23 PM

ಸಾಗರದ ಮಾರಿಕಾಂಬ ದೇವಿ ಭಕ್ತರಿಗೆ ಗುಡ್ ನ್ಯೂಸ್: ಜಾತ್ರೆ ಪ್ರಯುಕ್ತ ವಿಶೇಷ ರೈಲು ಸಂಚಾರ

31/01/2026 2:31 PM

ಸಾಗರದ ಮಾರಿ ಜಾತ್ರೆ ಹಿನ್ನಲೆ: ಯಶವಂತಪುರ – ತಾಳಗುಪ್ಪ ನಡುವೆ ವಿಶೇಷ ರೈಲು ಸಂಚಾರದ ವ್ಯವಸ್ಥೆ

31/01/2026 2:25 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.