Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾಗರದಲ್ಲಿ ಬಿಜೆಪಿಯಿಂದ ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಪ್ರತಿಭಟನೆ

20/01/2026 5:44 PM

BREAKING NEWS: ಶಕ್ತಿ ಯೋಜನೆಯ ‘ಉಚಿತ ಟಿಕೆಟ್ ಹಣ’ ದುರ್ಬಳಕೆ: ಬಿಎಂಟಿಸಿಯ ನಾಲ್ವರು ಕಂಡಕ್ಟರ್ ಸಸ್ಪೆಂಡ್

20/01/2026 5:37 PM

ರಾಜ್ಯದ ಎಲ್ಲಾ ಕ್ಲಬ್ ಗಳ ಸದನ ಸಮಿತಿಯ ವರದಿಯನ್ನು ಅನುಷ್ಠಾನಗೊಳಿಸಿ: ಸಭಾಧ್ಯಕ್ಷರಿಗೆ MLC ರಮೇಶ್ ಬಾಬು ಪತ್ರ

20/01/2026 5:30 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING NEWS: ಶಕ್ತಿ ಯೋಜನೆಯ ‘ಉಚಿತ ಟಿಕೆಟ್ ಹಣ’ ದುರ್ಬಳಕೆ: ಬಿಎಂಟಿಸಿಯ ನಾಲ್ವರು ಕಂಡಕ್ಟರ್ ಸಸ್ಪೆಂಡ್
KARNATAKA

BREAKING NEWS: ಶಕ್ತಿ ಯೋಜನೆಯ ‘ಉಚಿತ ಟಿಕೆಟ್ ಹಣ’ ದುರ್ಬಳಕೆ: ಬಿಎಂಟಿಸಿಯ ನಾಲ್ವರು ಕಂಡಕ್ಟರ್ ಸಸ್ಪೆಂಡ್

By kannadanewsnow0920/01/2026 5:37 PM

ಬೆಂಗಳೂರು: ಶಕ್ತಿ ಯೋಜನೆಯಡಿ ಹೊರ ರಾಜ್ಯದವರಿಗೂ ಟಿಕೆಟ್ ನೀಡಿ, ಅದರ ಬದಲಿಗೆ ತಮ್ಮ ಯುಪಿಐ ಖಾತೆಗೆ ಟಿಕೆಟ್ ಮೊತ್ತದ ದರವನ್ನು ಕೆಲ ಬಿಎಂಟಿಸಿ ನಿರ್ವಾಹಕರು ಪಡೆದಿದ್ದು ಬೆಳಕಿಗೆ ಬಂದಿತ್ತು. ಈ ಯುಪಿಐ ಸ್ಕ್ಯಾನರ್ ದುರುಪಯೋಗ ಪ್ರಕರಣದಲ್ಲಿ ನಾಲ್ವರು ನಿರ್ವಾಹಕರನ್ನು ಅಮಾನತುಗೊಳಿಸಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಆದೇಶಿಸಿದೆ.

ಹೊರ ರಾಜ್ಯದವರಿಗೆ ಐಡಿ ಕಾರ್ಡ್ ನೋಡಿದ ನಂತ್ರ, ಅವರಿಗೆ ಶಕ್ತಿ ಯೋಜನೆಯ ಉಚಿತ ಟಿಕೆಟ್ ನೀಡುವಂತಿಲ್ಲ. ಹೀಗಿದ್ದರೂ ಬಿಎಂಟಿಸಿಯ ಕಂಡಕ್ಟರ್, ಅವರಿಗೂ ಶಕ್ತಿ ಯೋಜನೆಯ ಟಿಕೆಟ್ ನೀಡಿ, ಅವರಿಂದ ಅದರಲ್ಲಿ ಇದ್ದಂತ ಹಣವನ್ನು ತಮ್ಮ ಯುಪಿಐ ಸ್ಕ್ಯಾನರ್ ಗೆ ಹಾಕಿಸಿಕೊಂಡಿದ್ದರು.

ಬಿಎಂಟಿಸಿ ತನಿಖಾಧಿಕಾರಿಗಳು ಟಿಕೆಟ್ ಚೆಕ್ ಮಾಡಿದಂತ ಸಂದರ್ಭದಲ್ಲಿ ಹೀಗೊಂದು ಹಗರಣ ಬೆಳಕಿಗೆ ಬಂದಿತ್ತು. ಹೀಗಾಗಿ ಬಿಎಂಟಿಸಿಯ ಎಲ್ಲಾ ಘಟಕದಲ್ಲೂ ಯುಪಿಐ ಸ್ಕ್ಯಾನರ್ ದುರುಪಯೋಗದ ಬಗ್ಗೆ ಸಮಗ್ರ ತನಿಖೆಯನ್ನು ಸಂಸ್ಥೆಯು ನಡೆಸಿತ್ತು. ಈ ಸಂದರ್ಭದಲ್ಲಿ ಮೂವರು ಕಂಡಕ್ಟರ್ ಯುಪಿಐ ಸ್ಕ್ಯಾನರ್ ದುರುಪಯೋಗ ಮಾಡಿಕೊಂಡಿರೋದು ಖಚಿತಗೊಂಡಿದೆ.

ಈ ಹಿನ್ನಲೆಯಲ್ಲಿ ಬಿಎಂಟಿಸಿಯ ಈಶಾನ್ಯ ವಲಯದ ಘಟಕ ಸಂಖ್ಯೆ 23ರ ನಿರ್ವಾಹಕ ಸುರೇಶ್ ಎಂಬುವರನ್ನು ಅಮಾನತುಗೊಳಿಸಲಾಗಿದೆ. ಅವರು ಬರೋಬ್ಬರಿ 47,257 ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ ಎಂಬುದಾಗಿ ಬಿಎಂಟಿಸಿ ತಿಳಿಸಿದೆ.

ಇನ್ನೂ ದಕ್ಷಿಣ ವಲಯದ ಘಟಕ ಸಂಖ್ಯೆ 3ರ ಚಾಲಕ ಕಂ ನಿರ್ವಾಹಕರಾದಂತ ಮಂಚೇಗೌಡ ಎಂಬುವರು ಯುಪಿಐ ಸ್ಕ್ಯಾನರ್ ಬಳಸಿ ರೂ.54,358 ದುರುಪಯೋಗ ಮಾಡಿದ್ದರೇ, ಈಶಾನ್ಯ ವಲಯದ ಘಟಕ ಸಂಖ್ಯೆ 14ರ ನಿರ್ವಾಹಕ ಅಶ್ವಾಕ್ ಖಾನ್ ಅವರು 3,206 ಹಣವನ್ನು ದುರುಪಯೋಗ ಮಾಡಿಕೊಂಡಿರೋದು ತನಿಖೆಯಿಂದ ತಿಳಿದು ಬಂದಿದೆ.

ಈ ಕಾರಣದಿಂದ ನಿರ್ವಾಹಕ ಸುರೇಶ್, ಚಾಲಕ ಕಂ ನಿರ್ವಾಹಕ ಮಂಚೇಗೌಡ, ನಿರ್ವಾಹಕ ಅಶ್ವಾಕ್ ಖಾನ್ ಹಾಗೂ ಇಂದು ಸುಪ್ರಿಯಾ ಎಂಬುವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ವಿಚಾರಣೆ ಪೂರ್ಣಗೊಳ್ಳುವವರೆಗೂ ಅಮಾನತುಗೊಳಿಸಿ ಬಿಎಂಟಿಸಿ ಆದೇಶಿಸಿದೆ.

ಈ ಘಟನೆಯಿಂದ ಎಚ್ಚರಗೊಂಡಿರುವಂತ ಬಿಎಂಟಿಸಿಯು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಲ್ಲಾ ಘಟಕದ ವ್ಯವಸ್ಥಾಪಕರಿಗೆ ವಿವರವಾದ ಸೂಚನೆಗಳನ್ನು ಜಾರಿಗೊಳಿಸಿದೆ. ಜೊತೆಗೆ ಯುಪಿಐ ಸ್ಕ್ಯಾನರ್ ಗಳ ಬಳಕೆಯನ್ನು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡುವಂತೆ, ಎಲ್ಲಾ ಚಾಲನಾ ಸಿಬ್ಬಂದಿಗಳು ನಿಗದಿತ ಟಿಕೆಟ್ ಮತ್ತು ಆದಾಯ ಸಂಗ್ರಹಣೆಯ ಕ್ರಮಗಳನ್ನು ಸಂಪೂರ್ಣವಾಗಿ ಪಾಲಿಸುವಂತೆ ನಿರ್ದೇಶಿಸಿದೆ.

ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು..

Share. Facebook Twitter LinkedIn WhatsApp Email

Related Posts

ಸಾಗರದಲ್ಲಿ ಬಿಜೆಪಿಯಿಂದ ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಪ್ರತಿಭಟನೆ

20/01/2026 5:44 PM2 Mins Read

ರಾಜ್ಯದ ಎಲ್ಲಾ ಕ್ಲಬ್ ಗಳ ಸದನ ಸಮಿತಿಯ ವರದಿಯನ್ನು ಅನುಷ್ಠಾನಗೊಳಿಸಿ: ಸಭಾಧ್ಯಕ್ಷರಿಗೆ MLC ರಮೇಶ್ ಬಾಬು ಪತ್ರ

20/01/2026 5:30 PM2 Mins Read

ವೇತನ ಬಿಡುಗಡೆ ಮಾಡದ ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದ NHM ಗುತ್ತಿಗೆ ನೌಕರರು: ಹೋರಾಟಕ್ಕೆ ಕರೆ ನೀಡಿದ KSHCOEA ಸಂಘ

20/01/2026 5:17 PM2 Mins Read
Recent News

ಸಾಗರದಲ್ಲಿ ಬಿಜೆಪಿಯಿಂದ ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಪ್ರತಿಭಟನೆ

20/01/2026 5:44 PM

BREAKING NEWS: ಶಕ್ತಿ ಯೋಜನೆಯ ‘ಉಚಿತ ಟಿಕೆಟ್ ಹಣ’ ದುರ್ಬಳಕೆ: ಬಿಎಂಟಿಸಿಯ ನಾಲ್ವರು ಕಂಡಕ್ಟರ್ ಸಸ್ಪೆಂಡ್

20/01/2026 5:37 PM

ರಾಜ್ಯದ ಎಲ್ಲಾ ಕ್ಲಬ್ ಗಳ ಸದನ ಸಮಿತಿಯ ವರದಿಯನ್ನು ಅನುಷ್ಠಾನಗೊಳಿಸಿ: ಸಭಾಧ್ಯಕ್ಷರಿಗೆ MLC ರಮೇಶ್ ಬಾಬು ಪತ್ರ

20/01/2026 5:30 PM

ಟಿ20 ವಿಶ್ವಕಪ್ : ‘BCCI’ ಅಥ್ವಾ ‘ICC’ಯ ಒತ್ತಡಕ್ಕೆ ಬಾಂಗ್ಲಾದೇಶ ಮಣಿಯುವುದಿಲ್ಲ ; ಕ್ರೀಡಾ ಸಲಹೆಗಾರ!

20/01/2026 5:23 PM
State News
KARNATAKA

ಸಾಗರದಲ್ಲಿ ಬಿಜೆಪಿಯಿಂದ ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಪ್ರತಿಭಟನೆ

By kannadanewsnow0920/01/2026 5:44 PM KARNATAKA 2 Mins Read

ಶಿವಮೊಗ್ಗ : ಸಾಗರದ ಬಿಜೆಪಿ ವತಿಯಿಂದ ರಾಜ್ಯ ಸರ್ಕಾರದ ಆಡಳಿತ ವೈಫಲ್ಯ ಖಂಡಿಸಿ, ಕ್ಷೇತ್ರವ್ಯಾಪ್ತಿಯಲ್ಲಿ ಗಾಂಜಾ ಸೇರಿ ವಿವಿಧ ಅಪರಾಧ…

BREAKING NEWS: ಶಕ್ತಿ ಯೋಜನೆಯ ‘ಉಚಿತ ಟಿಕೆಟ್ ಹಣ’ ದುರ್ಬಳಕೆ: ಬಿಎಂಟಿಸಿಯ ನಾಲ್ವರು ಕಂಡಕ್ಟರ್ ಸಸ್ಪೆಂಡ್

20/01/2026 5:37 PM

ರಾಜ್ಯದ ಎಲ್ಲಾ ಕ್ಲಬ್ ಗಳ ಸದನ ಸಮಿತಿಯ ವರದಿಯನ್ನು ಅನುಷ್ಠಾನಗೊಳಿಸಿ: ಸಭಾಧ್ಯಕ್ಷರಿಗೆ MLC ರಮೇಶ್ ಬಾಬು ಪತ್ರ

20/01/2026 5:30 PM

ವೇತನ ಬಿಡುಗಡೆ ಮಾಡದ ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದ NHM ಗುತ್ತಿಗೆ ನೌಕರರು: ಹೋರಾಟಕ್ಕೆ ಕರೆ ನೀಡಿದ KSHCOEA ಸಂಘ

20/01/2026 5:17 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.