ಹೊಸಪೇಟೆ : ತುಂಗಾಭದ್ರಾ ಜಲಾಶಯದ 19 ನೇ ಕ್ರಸ್ಟ್ ಗೇಟ್ ಕೂರಿಸಿದ ಕಾರ್ಮಿಕರಿಗೆ ಸಚಿವ ಜಮೀರ್ ಅಹ್ಮದ್ ಖಾನ್ ತಲಾ 50,000 ರೂ. ಬಹುಮಾನ ನೀಡಿದ್ದಾರೆ.
ತುಂಗಾಭದ್ರಾ ಜಲಾಶಯದಲ್ಲಿ ಕ್ರೇನ್ ಅಪರೇಟರ್ಸ್, ಗೇಟ್ ಅನ್ನು ಜಲಾಶಯಕ್ಕೆ ಇಳಿಸುವ ಕಾರ್ಯದಲ್ಲಿ ತೊಡಗಿದವರು ಸೇರಿ ಒಟ್ಟು 20 ಪ್ರಮುಖ ಕಾರ್ಮಿಕರಿಗೆ ತಲಾ 50 ಸಾವಿರ ರೂ.ಗಳನ್ನು ನೀಡಲಾಗಿದೆ. ಜಮೀರ್ ಖಾನ್ ಅನುಪಸ್ಥಿತಿಯಲ್ಲಿ ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಈ ಹಣ ಕಾರ್ಮಿಕರಿಗೆ ಹಸ್ತಾಂತರಿಸಿದ್ದಾರೆ.
ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯ ಯಶಸ್ವಿಯಾದ್ರೆ ಕಾರ್ಮಿಕರಿಗೆ ವೈಯಕ್ತಿಕವಾಗಿ 50 ಸಾವಿರ ರೂ. ಬಹುಮಾನ ನಿಡುವುದಾಗಿ ಸಚಿವ ಜಮೀರ್ ಅಹ್ಮದ್ ಖಾನ್ ಘೋಷಿಸಿದ್ದರು. ಅದರಂತೆ ಶಾಸಕ ಗಣೇಶ್ ಮೂಲಕ ಹಣವನ್ನು ನೀಡಿದ್ದಾರೆ.