Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ವಿಶ್ವ ಕ್ಷಯರೋಗ ದಿನ 2026 : ಈ ಸಾಂಕ್ರಾಮಿಕ ರೋಗದ ಲಕ್ಷಣಗಳು, ಕಾರಣಗಳು, ಅಪಾಯಕಾರಿ ಅಂಶಗಳೇನು ತಿಳಿಯಿರಿ | World Tuberculosis Day

24/03/2026 8:31 AM

ಅಮೆರಿಕದ ತೈಲ ಸಂಸ್ಕರಣಾಗಾರದಲ್ಲಿ ಭೀಕರ ಸ್ಫೋಟ: ಗಗನಕ್ಕೇರಿದ ಬೆಂಕಿಯ ಜ್ವಾಲೆ, ಟೆಕ್ಸಾಸ್‌ನಲ್ಲಿ ಆತಂಕದ ವಾತಾವರಣ

24/03/2026 8:23 AM

ಬಾತ್‌ರೂಮ್ Vs ವಾಶ್‌ರೂಮ್ ನಡುವಿನ ವ್ಯತ್ಯಾಸವೇನು? ಇಲ್ಲಿದೆ ಸರಳ ವಿವರಣೆ!

24/03/2026 8:10 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದಲ್ಲಿ ‘ಇ-ಖಾತೆ ಸಮಸ್ಯೆ’ ನಿವಾರಣೆಗೆ ಮಹತ್ವದ ಕ್ರಮ : ಇಂದು ಸಚಿವರ ನೇತೃತ್ವದಲ್ಲಿ ಮಹತ್ವದ ಸಭೆ
KARNATAKA

ರಾಜ್ಯದಲ್ಲಿ ‘ಇ-ಖಾತೆ ಸಮಸ್ಯೆ’ ನಿವಾರಣೆಗೆ ಮಹತ್ವದ ಕ್ರಮ : ಇಂದು ಸಚಿವರ ನೇತೃತ್ವದಲ್ಲಿ ಮಹತ್ವದ ಸಭೆ

By kannadanewsnow5713/11/2024 6:29 AM

ಬೆಂಗಳೂರು: ರಾಜ್ಯದಲ್ಲಿ ಇ-ಖಾತಾ ವ್ಯವಸ್ಥೆ ಕಡ್ಡಾಯಗೊಳಿಸಿದ ನಂತ್ರ ಹಲವು ಸಮಸ್ಯೆಗೆ ಕಾರಣವಾಗಿತ್ತು. ಈ ಸಮಸ್ಯೆ ನಿವಾರಣೆಗಾಗಿ ನವೆಂಬರ್.13ರಂದು ಕಂದಾಯ, ಗ್ರಾಮೀಣಾಭಿವೃದ್ಧಿ ಹಾಗೂ ನಗರಾಭಿವೃದ್ಧಿ ಸಚಿವ ನೇತೃತ್ವದಲ್ಲಿ ಮಹತ್ವದ ಸಭೆಯನ್ನು ನಿಗದಿ ಪಡಿಸಲಾಗಿದೆ. ಈ ಸಭೆಯಲ್ಲಿ ಇ-ಖಾತಾ ಸಮಸ್ಯೆಯಲ್ಲಿನ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ.

ಇಂದು ಕಂದಾಯ ಸಚಿವ ವಿಶೇಷ ಕರ್ತವ್ಯಾಧಿಕಾರಿ ನಿಶ್ಚಯ್ ಎನ್.ಕೆ ಅವರು ಸಭಾ ಸೂಚನಾ ಪತ್ರವನ್ನು ಹೊರಡಿಸಿದದಾರೆ. ಅದರಲ್ಲಿ ಸ್ಥಿರಾಸ್ತಿಗಳ ನೋಂದಣಿಗಾಗಿ, ಗ್ರಾಮಪಂಚಾಯಿತಿ ಮತ್ತು ಸ್ಥಳೀಯ ನಗರ ಸಂಸ್ಥೆಗಳಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಇ-ಖಾತೆಗಳನ್ನು ಶೀಘ್ರವಾಗಿ ವಿತರಿಸುವ ಕುರಿತು ಚರ್ಚಿಸಲು ಮಾನ್ಯ ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ಮತ್ತು ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ, ಮಾನ್ಯ ನಗರಾಭಿವೃದ್ಧಿ ಸಚಿವರ ಹಾಗೂ ಪೌರಾಡಳಿತ ಮತ್ತು ಹಜ್ ಸಚಿವರ ಉಪಸ್ಥಿತಿಯಲ್ಲಿ ದಿನಾಂಕ:13/11/2024 ರಂದು ಬೆಳಿಗ್ಗೆ 11:00 ಗಂಟೆಗೆ ಕೊಠಡಿ ಸಂಖ್ಯೆ:222, ವಿಕಾಸ ಸೌಧ, ಬೆಂಗಳೂರು ಇಲ್ಲಿ ಸಭೆಯನ್ನು ಏರ್ಪಡಿಸಿದ್ದು, ಸದರಿ ಸಭೆಗೆ ಹಾಜರಾಗುವಂತೆ ತಮ್ಮನ್ನು ಕೋರಲು ಮಾನ್ಯ ಸಚಿವರಿಂದ ನಿರ್ದೇಶಿತನಾಗಿದ್ದೇನೆ ಎಂದಿದ್ದಾರೆ.

ಸಭೆಯಲ್ಲಿ ಚರ್ಚಿಸಬೇಕಾದ ವಿಷಯಗಳು

1. ಸ್ಥಿರಾಸ್ತಿ ಸಂಬಂಧ ದಸ್ತಾವೇಜುಗಳ ನೋಂದಣಿಗಾಗಿ ಕಾವೇರಿ-2 ಇ-ಸ್ವತ್ತು ತಂತ್ರಾಂಶದೊಂದಿಗೆ ಇ-ಆಸ್ತಿ ತಂತ್ರಾಂಶ ಮತ್ತು ತಂತ್ರಾಂಶವನ್ನು 2014 ರಿಂದಲೇ ಸಂಯೋಜನೆಗೊಳಿಸಿದ್ದು, ನೋಂದಣಿಗಾಗಿ ಇ-ಖಾತಾ ಕಡ್ಡಾಯವಾಗಿರುತ್ತದೆ. ಹಾಗಾಗಿ, ಸಾರ್ವಜನಿಕರಿಗೆ ದಸ್ತಾವೇಜು ನೋಂದಣಿಗಾಗಿ ಇ-ಖಾತಾ ತುರ್ತಾಗಿ ವಿತರಿಸುವ ಕುರಿತು.

2. ಮಂಗಳೂರು ಮತ್ತು ಇತರ ಕೆಲವು ಕಡೆ ವಿತರಿಸುತ್ತಿರುವ ಇ-ಆಸ್ತಿ ಖಾತೆಗಳಲ್ಲಿ ಸ್ಥಿರಾಸ್ತಿಯ ಅಳತೆಯ ವಿವರಗಳು ನಮೂದಾಗದೇ ಇರುವುದರಿಂದ, ಕಾವೇರಿ-2 ತಂತ್ರಾಂಶದಲ್ಲಿ ನೋಂದಣಿಗೆ ಸಮಸ್ಯೆಯಾಗುತ್ತಿರುವ ಬಗ್ಗೆ.

3. ಕೃಷಿ ಜಮೀನು ಭೂ ಪರಿವರ್ತನೆ ನಂತರ ನಿವೇಶನ ಬಿಡುಗಡೆಗೊಳಿಸುವ ಪೂರ್ವದಲ್ಲಿ ಉದ್ಯಾನವನ (Park), CA ಸೈಟ್ ಮತ್ತು ರಸ್ತೆ ಜಮೀನುಗಳ ಪರಿತ್ರಾಜನ ಪತ್ರ ನೀಡಲು ಅನುಕೂಲವಾಗುವಂತೆ ಇರುವ ಜಮೀನಿಗೆ ಇ-ಖಾತೆ ಮಂಜೂರು ಮಾಡುವ ಕುರಿತು.

4. ಒಂದು ಸ್ಥಿರಾಸ್ತಿಯನ್ನು ವಿಭಜಿಸಿ, ಮಾರಾಟ ಮಾಡುವುದಕ್ಕಾಗಿ, ನೋಂದಣಿಗಾಗಿ ಇ-ಖಾತೆಯನ್ನು ವಿಭಜಿಸಬೇಕಾಗಿರುತ್ತದೆ. ವಿಭಜಿತ ಖಾತೆ ಇಲ್ಲದಿದ್ದಲ್ಲಿ ದಸ್ತಾವೇಜು ನೋಂದಣಿಗೆ ಸಾಧ್ಯವಾಗುವುದಿಲ್ಲ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳು, ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತು.

5. ಮಹಾನಗರ ಪಾಲಿಕೆಗಳಲ್ಲಿ ನೀಡುತ್ತಿರುವ TDR ಗಳನ್ನು ಪುನರ್ ಉಪಯೋಗಿಸದಂತೆ ತಡೆಯಲು, TDR ಗಳಿಗೂ ಸಹ ಇ-ಖಾತೆಯನ್ನು ವಿತರಿಸುವ ಬಗ್ಗೆ.

6. ಆಸ್ತಿ ನೊಂದಣಿಯ ನಂತರ XML ದತ್ತಾಂಶವನ್ನು ಇ ವೃತ್ತಿಗೆ ಕಳುಹಿಸಿದ ನಂತರ ಖಾತೆ ಮಾಡುವ/ತಿರಸ್ಕರಿಸುವ ಬಗ್ಗೆ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ Delete Option ಬಳಸುತ್ತಿರುವ ಬಗ್ಗೆ

7. ಭೂಪರಿವರ್ತನೆಯ ನಂತರ ಸಂಬಂಧಿಸಿದ ಯೋಜನಾ ಪ್ರಾಧಿಕಾರದಿಂದ ಲೇಔಟ್ : ಪ್ಲಾನ್‌ಗೆ ಅನುಮತಿ ಪಡೆಯದೆ ಜಮೀನನ್ನು ಮಾರಾಟ ಮಾಡಬೇಕಾಗಿದ್ದಲ್ಲಿ ಅಂತಹ ಆಸ್ತಿಗಳಿಗೆ ಉಂಡೆ ಖಾತೆ ಮಾಡುವುದು ಹಾಗೂ ಇಂತಹ ಜಮೀನುಗಳನ್ನು ಮಾರಾಟ ಮಾಡುವಾಗ ಮಾರ್ಗಸೂಚಿ ದರ ನಿಗಧಿಪಡಿಸುವ ಬಗ್ಗೆ.

Minister to chair crucial meeting to resolve e-account problem in state today ರಾಜ್ಯದಲ್ಲಿ ‘ಇ-ಖಾತೆ ಸಮಸ್ಯೆ’ ನಿವಾರಣೆಗೆ ಮಹತ್ವದ ಕ್ರಮ : ಇಂದು ಸಚಿವರ ನೇತೃತ್ವದಲ್ಲಿ ಮಹತ್ವದ ಸಭೆ
Share. Facebook Twitter LinkedIn WhatsApp Email

Related Posts

ಬಾತ್‌ರೂಮ್ Vs ವಾಶ್‌ರೂಮ್ ನಡುವಿನ ವ್ಯತ್ಯಾಸವೇನು? ಇಲ್ಲಿದೆ ಸರಳ ವಿವರಣೆ!

24/03/2026 8:10 AM1 Min Read

ಪೋಷಕರಿಗೆ ಗುಡ್ ನ್ಯೂಸ್ : ಜೂನ್ ನಿಂದ 10,000 ಅಂಗನವಾಡಿ ಕೇಂದ್ರಗಳಲ್ಲಿ LKG, UKG ತರಗತಿ ಆರಂಭ

24/03/2026 7:45 AM1 Min Read

ನಿಮಗೆ ರಾಘವೇಂದ್ರ ಸ್ವಾಮಿಗಳ ಜೀವನ ಚರಿತ್ರೆ ಗೊತ್ತಾ?! ಇಲ್ಲಿದೆ ಓದಿ.!

24/03/2026 7:27 AM6 Mins Read
Recent News

ವಿಶ್ವ ಕ್ಷಯರೋಗ ದಿನ 2026 : ಈ ಸಾಂಕ್ರಾಮಿಕ ರೋಗದ ಲಕ್ಷಣಗಳು, ಕಾರಣಗಳು, ಅಪಾಯಕಾರಿ ಅಂಶಗಳೇನು ತಿಳಿಯಿರಿ | World Tuberculosis Day

24/03/2026 8:31 AM

ಅಮೆರಿಕದ ತೈಲ ಸಂಸ್ಕರಣಾಗಾರದಲ್ಲಿ ಭೀಕರ ಸ್ಫೋಟ: ಗಗನಕ್ಕೇರಿದ ಬೆಂಕಿಯ ಜ್ವಾಲೆ, ಟೆಕ್ಸಾಸ್‌ನಲ್ಲಿ ಆತಂಕದ ವಾತಾವರಣ

24/03/2026 8:23 AM

ಬಾತ್‌ರೂಮ್ Vs ವಾಶ್‌ರೂಮ್ ನಡುವಿನ ವ್ಯತ್ಯಾಸವೇನು? ಇಲ್ಲಿದೆ ಸರಳ ವಿವರಣೆ!

24/03/2026 8:10 AM

ಇಂಧನ ಕೊರತೆ ನೀಗಿಸಲು ಸಿದ್ಧತೆ: ಯುಎಇಯಿಂದ 2 ಎಲ್‌ಪಿಜಿ ಹಡಗು ಹಾಗೂ ಸೌದಿಯಿಂದ ತೈಲ ಟ್ಯಾಂಕರ್ ಭಾರತದತ್ತ!

24/03/2026 8:02 AM
State News
KARNATAKA

ಬಾತ್‌ರೂಮ್ Vs ವಾಶ್‌ರೂಮ್ ನಡುವಿನ ವ್ಯತ್ಯಾಸವೇನು? ಇಲ್ಲಿದೆ ಸರಳ ವಿವರಣೆ!

By kannadanewsnow5724/03/2026 8:10 AM KARNATAKA 1 Min Read

ನಾವು ಶಾಪಿಂಗ್ ಮಾಲ್, ರೆಸ್ಟೋರೆಂಟ್, ಜಿಮ್ ಅಥವಾ ಹೋಟೆಲ್‌ಗಳಿಗೆ ಹೋದಾಗ ಅಲ್ಲಿನ ಶೌಚಾಲಯಗಳ ಹೊರಗೆ ಬೇರೆ ಬೇರೆ ಬೋರ್ಡ್‌ಗಳನ್ನು ನೋಡಿರುತ್ತೇವೆ.…

ಪೋಷಕರಿಗೆ ಗುಡ್ ನ್ಯೂಸ್ : ಜೂನ್ ನಿಂದ 10,000 ಅಂಗನವಾಡಿ ಕೇಂದ್ರಗಳಲ್ಲಿ LKG, UKG ತರಗತಿ ಆರಂಭ

24/03/2026 7:45 AM

ನಿಮಗೆ ರಾಘವೇಂದ್ರ ಸ್ವಾಮಿಗಳ ಜೀವನ ಚರಿತ್ರೆ ಗೊತ್ತಾ?! ಇಲ್ಲಿದೆ ಓದಿ.!

24/03/2026 7:27 AM

ALERT : ಸಾಲದ `EMI’ ಪಾವತಿ ಮಿಸ್ ಮಾಡಿಕೊಂಡರೆ ನಿಮಗಾಗುವ ನಷ್ಟಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

24/03/2026 7:25 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.