Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಕಿಯಾರಾ ಅಡ್ವಾಣಿ-ಸಿದ್ಧಾರ್ಥ್ ಮಲ್ಹೋತ್ರಾ ದಂಪತಿಗೆ ಹೆಣ್ಣು ಮಗು ಜನನ | Kiara Advani-Sidharth Malhotra

15/07/2025 11:20 PM

ಸಾಗರದ ‘ಉಳ್ಳೂರು ಗ್ರಾಮ ಪಂಚಾಯ್ತಿ PDO’ ವರ್ಗಾವಣೆ ಮಾಡಿ: EOಗೆ ‘ವಸೀಮ್ ಉಳ್ಳೂರು’ ಮನವಿ

15/07/2025 10:05 PM

Vitamin B12 : ವಿಟಮಿನ್ ಬಿ12 ಕೊರತೆ ಸಾವಿಗೆ ಕಾರಣವಾಗ್ಬೋದೇ.? ದೇಹಕ್ಕೆ ಎಷ್ಟು ಹಾನಿಕಾರಕ ಎಂದು ನಿಮ್ಗೆ ತಿಳಿದಿದ್ಯಾ.?

15/07/2025 10:04 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಕಲ್ಯಾಣ ಕರ್ನಾಟಕ ಸಾರಿಗೆ’ ಸೌಲಭ್ಯಗಳ ಅಭಿವೃದ್ಧಿಗೆ ‘ಸಚಿವ ರಾಮಲಿಂಗಾರೆಡ್ಡಿ’ ಮಹತ್ವದ ಕ್ರಮ
KARNATAKA

‘ಕಲ್ಯಾಣ ಕರ್ನಾಟಕ ಸಾರಿಗೆ’ ಸೌಲಭ್ಯಗಳ ಅಭಿವೃದ್ಧಿಗೆ ‘ಸಚಿವ ರಾಮಲಿಂಗಾರೆಡ್ಡಿ’ ಮಹತ್ವದ ಕ್ರಮ

By kannadanewsnow0921/06/2024 9:37 PM

ಬೆಂಗಳೂರು: ಕಲ್ಯಾಣ ಕರ್ನಾಟಕ‌ ಜನತೆಗೆ ಸಾರಿಗೆ ಸೌಲಭ್ಯ ಒದಗಿಸೋದಕ್ಕೆ ಈಗಾಗಲೇ ಸಚಿವ ರಾಮಲಿಂಗಾರೆಡ್ಡಿ ಹೊಸ ಬಸ್ ವ್ಯವಸ್ಥೆ ಮಾಡಿದ್ದರು. ಜೊತೆಗೆ ಹೊಸದಾಗಿ ಬಸ್ ಖರೀದಿ ನಿರ್ಧಾರ ಕೈಗೊಂಡಿದ್ದರು. ಈ ಬೆನ್ನಲ್ಲೇ ಸಮಗ್ರ ಸಾರಿಗೆ ಸೌಲಭ್ಯಗಳ ಅಭಿವೃದ್ಧಿಗೆ ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಮಹತ್ವದ ಕ್ರಮ ಕೈಗೊಂಡಿದ್ದಾರೆ. ಅದೇನು ಅಂತ ಮುಂದೆ ಓದಿ.

ಮುಖ್ಯಮಂತ್ರಿಗಳ ಅನುದಾನ/ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿ ಹಾಗೂ ಸಂಸ್ಥೆಯ ಅನುದಾನದ ಅಡಿಯಲ್ಲಿ ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ ಮೂಲಭೂತ ಸೌಕರ್ಯಗಳೊಂದಿಗೆ ಅಗತ್ಯ ಸಾರಿಗೆ ಸೌಲಭ್ಯಗಳನ್ನು ಒದಗಿಸಲು ದಿನಾಂಕ 20-06-2024 ರಂದು ನಡೆದ ಕೆ‌ಕೆ ಆರ್ ಟಿ ಸಿ ಯ ಮಂಡಳಿ ಸಭೆಯಲ್ಲಿ ಮಾನ್ಯ ಸಾರಿಗೆ ಸಚಿವರು ಹಾಗೂ ಅಧ್ಯಕ್ಷರು ಕೆ ಕೆ ಆರ್ ಟಿ ಸಿ ರವರು, ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿ ಹೊಸ ಬಸ್ಸುಗಳು, ಡಿಜಿಟಲ್ ಟಿಕೇಟ್ ಯಂತ್ರಗಳು (ಅ್ಯಡ್ರಾಯಡ್ ಆದಾರಿತ) ಹಾಗೂ ಹಲವು ಬಸ್ ನಿಲ್ದಾಣಗಳ ಕಾಮಗಾರಿಗಳಿಗೆ ಅನುಮೋದನೆ ನೀಡಿದ್ದಾರೆ.

ಕಕರಸಾ ನಿಗಮಕ್ಕೆ 2024 -2025 ಸಾಲಿನಲ್ಲಿ ವಿವಿಧ ಮಾದರಿಯ 330 ಬಸ್ ಗಳನ್ನು ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ನಿಗಮದಿಂದ ಆರ್ಥಿಕ ಸಹಾಯ ಪಡೆದು ಖರೀದಿಸಲು ನಿರ್ಧರಿಸಲಾಯಿತು. ನಿಗಮದಲ್ಲಿ 6500 ಆಂಡ್ರಾಯ್ಡ್ ಆಧರಿತ ವಿದ್ಯುತ್ಮಾನ ಟಿಕೆಟ್ ವಿತರಣೆ ಯಂತ್ರಗಳನ್ನು ಬಾಡಿಗೆ ಆಧಾರದ ಮೇಲೆ ತೆಗೆದುಕೊಳ್ಳಲು ನಿರ್ಧರಿಸಲಾಯಿತು. ಸದರಿ ಯಂತ್ರಗಳಿಂದ ಪ್ರಯಾಣಿಕರು ಡಿಜಿಟಲ್ ಪೇಮೆಂಟ್ ಮುಖಾಂತರ ಹಣ ಪಾವತಿ (UPI, Cards ) ಮಾಡಿ ಟಿಕೆಟ್ ಪಡೆಯಬಹುದಾಗಿದೆ. ಇದು ಪ್ರಯಾಣಿಕರ‌ ಬಹುದಿನಗಳ ಬೇಡಿಕೆಯಾಗಿತ್ತು.

ನಿಗಮದ ವ್ಯಾಪ್ತಿಯಲ್ಲಿ ಉದ್ದೇಶಿಸಲಾಗಿರುವ 17 ಬಸ್ ನಿಲ್ದಾಣಗಳ ಕಾಮಗಾರಿ ರೂ.5741.84 ಲಕ್ಷಗಳ ವೆಚ್ಚದ ವಿವರಗಳು:

-ಬೇವೂರದಲ್ಲಿ ರೂ 450.00 ಲಕ್ಷ ವೆಚ್ಚದಲ್ಲಿ 26 ಗುಂಟೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣ,-ತಲಕಲ್ ಇಂಜಿನಿಯರಿಂಗ್ ಕಾಲೇಜ್ ಹತ್ತಿರ ರೂ.600.00 ಲಕ್ಷ ವೆಚ್ಚದಲ್ಲಿ 29 ಗುಂಟೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣ, ಸಂಕನೂರ ಕ್ರಾಸ್ ಬಳಿ ರೂ.320.23 ಲಕ್ಷ ವೆಚ್ಚದಲ್ಲಿ 24 ಗುಂಟೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣ, ಬನ್ನಿಕೊಪ್ಪದಲ್ಲಿ ರೂ.221.61 ಲಕ್ಷ ವೆಚ್ಚದಲ್ಲಿ 20 ಗುಂಟೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣ, ಹೀರೆವಂಕಲಕುಂಟಾದಲ್ಲಿ ರೂ‌. 300.00 ಲಕ್ಷ ವೆಚ್ಚದಲ್ಲಿ 26 ಗುಂಟೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣ, ಬಂಡಿ ಕ್ರಾಸ್ ಬಳಿ ರೂ. 300.00‌ಲಕ್ಷ ವೆಚ್ಚದಲ್ಲಿ 21 ಗುಂಟೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣ, ಕುದರೆಮೊತಿಯಲ್ಲಿ ರೂ‌.300.00 ಲಕ್ಷ ವೆಚ್ಚದಲ್ಲಿ 23 ಗುಂಟೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣ ಕ್ರಮ ಕೈಗೊಳ್ಳಲಾಗುತ್ತಿದೆ.

ಇಟಗಿಯಲ್ಲಿ ರೂ.400.00 ಲಕ್ಷ ವೆಚ್ಚದಲ್ಲಿ 24 ಗುಂಟೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣ, ರಾಜೂರ ಅಡುರದಲ್ಲಿ ರೂ. 300.00 ಲಕ್ಷ ವೆಚ್ಚದಲ್ಲಿ 20 ಗುಂಟೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣ, ಕುಕನೂರ ತಾಲೂಕಿನ ಬೆಣಕಲ್ಲ ದಲ್ಲಿ ರೂ.200.00 ಲಕ್ಷ ವೆಚ್ಚದಲ್ಲಿ 20 ಗುಂಟೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣ, ಕುಕನೂರ ತಾಲೂಕಿನ ಮಂಡಲಗೇರಿಯಲ್ಲಿ ರೂ.200.00 ಲಕ್ಷ ವೆಚ್ಚದಲ್ಲಿ 20 ಗುಂಟೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣ, ಕುಕನೂರ ತಾಲೂಕಿನ ಹಿರೇಮ್ಯಾಗೇರಿಯಲ್ಲಿ ರೂ.200.00 ಲಕ್ಷ ವೆಚ್ಚದಲ್ಲಿ 20 ಗುಂಟೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣ, ಕುಕನೂರ ತಾಲೂಕಿನ ಮುರಡಿಯಲ್ಲಿ ರೂ.200.00 ಲಕ್ಷ ವೆಚ್ಚದಲ್ಲಿ 20 ಗುಂಟೆ ವಿಸ್ತೀರ್ಣದಲ್ಲಿ ಬಸ್
ನಿಲ್ದಾಣ, ಕುಕನೂರ ತಾಲೂಕಿನ ಹಿರೇ ಅರಳಿಹಳ್ಳಿಯಲ್ಲಿ ರೂ.200.00 ಲಕ್ಷ ವೆಚ್ಚದಲ್ಲಿ 20 ಗುಂಟೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣಕ್ಕೆ ಕ್ರಮ ವಹಿಸಲಾಗುತ್ತಿದೆ.

ಕುಕನೂರ ತಾಲೂಕಿನ ಗಾಣದಾಳದಲ್ಲಿ ರೂ 200.00 ಲಕ್ಷ ವೆಚ್ಚದಲ್ಲಿ 20 ಗುಂಟೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣ, ಮಾನವಿ ಜಿ|| ರಾಯಚೂರಿನಲ್ಲಿ ರೂ.950.00 ಲಕ್ಷ ವೆಚ್ಚದಲ್ಲಿ 20 ಗುಂಟೆ ವಿಸ್ತೀರ್ಣದಲ್ಲಿ ಹಾಗೂ ಹುಲಸೂರ ಜಿಲ್ಲೆ ಬೀದರ್ ನಲ್ಲಿ ರೂ 400.00‌ಲಕ್ಷ ವೆಚ್ಚದಲ್ಲಿ 20 ಗುಂಟೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.

‘ಸೈದೂರು ಮುಖಂಡ’ರಿಂದ ‘ಶಾಸಕ ಬೇಳೂರು ಗೋಪಾಲಕೃಷ್ಣ’ಗೆ ‘ಡಿಸಿಸಿ ಬ್ಯಾಂಕ್ ಚುನಾವಣೆ’ಗೆ ಬೆಂಬಲ ಘೋಷಣೆ

ನಿಮ್ಮ ಮೂಲ ವೇತನ 12,000 ರೂ.ಗಳಾಗಿದ್ರೆ, ನಿವೃತ್ತಿಯ ನಂತ್ರ ಎಷ್ಟು ಲಕ್ಷ ‘PF’ ಬರುತ್ತೆ ಗೊತ್ತಾ.?

Share. Facebook Twitter LinkedIn WhatsApp Email

Related Posts

ಸಾಗರದ ‘ಉಳ್ಳೂರು ಗ್ರಾಮ ಪಂಚಾಯ್ತಿ PDO’ ವರ್ಗಾವಣೆ ಮಾಡಿ: EOಗೆ ‘ವಸೀಮ್ ಉಳ್ಳೂರು’ ಮನವಿ

15/07/2025 10:05 PM1 Min Read

ಇಂದು ಕೆಪಿಸಿಸಿ ಕಚೇರಿಯಲ್ಲಿ ನಡೆದ ಎಐಸಿಸಿ ಹಿಂದುಳಿದ ವರ್ಗಗಳ ಸಲಹಾ ಸಭೆಯ ಪ್ರಮುಖ ಹೈಲೈಟ್ಸ್

15/07/2025 9:44 PM2 Mins Read

BREAKING: ಬೆಂಗಳೂರಲ್ಲಿ ರೌಡಿ ಶೀಟರ್ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಹತ್ಯೆ

15/07/2025 9:39 PM1 Min Read
Recent News

BREAKING: ಕಿಯಾರಾ ಅಡ್ವಾಣಿ-ಸಿದ್ಧಾರ್ಥ್ ಮಲ್ಹೋತ್ರಾ ದಂಪತಿಗೆ ಹೆಣ್ಣು ಮಗು ಜನನ | Kiara Advani-Sidharth Malhotra

15/07/2025 11:20 PM

ಸಾಗರದ ‘ಉಳ್ಳೂರು ಗ್ರಾಮ ಪಂಚಾಯ್ತಿ PDO’ ವರ್ಗಾವಣೆ ಮಾಡಿ: EOಗೆ ‘ವಸೀಮ್ ಉಳ್ಳೂರು’ ಮನವಿ

15/07/2025 10:05 PM

Vitamin B12 : ವಿಟಮಿನ್ ಬಿ12 ಕೊರತೆ ಸಾವಿಗೆ ಕಾರಣವಾಗ್ಬೋದೇ.? ದೇಹಕ್ಕೆ ಎಷ್ಟು ಹಾನಿಕಾರಕ ಎಂದು ನಿಮ್ಗೆ ತಿಳಿದಿದ್ಯಾ.?

15/07/2025 10:04 PM

ನಾಳೆ ಮಧ್ಯಾಹ್ನ 2 ಗಂಟೆಗೆ ICSI CSEET-2025ರ ಫಲಿತಾಂಶ ಪ್ರಕಟ | ICSI CSEET Result

15/07/2025 9:56 PM
State News
KARNATAKA

ಸಾಗರದ ‘ಉಳ್ಳೂರು ಗ್ರಾಮ ಪಂಚಾಯ್ತಿ PDO’ ವರ್ಗಾವಣೆ ಮಾಡಿ: EOಗೆ ‘ವಸೀಮ್ ಉಳ್ಳೂರು’ ಮನವಿ

By kannadanewsnow0915/07/2025 10:05 PM KARNATAKA 1 Min Read

ಶಿವಮೊಗ್ಗ : ಜಿಲ್ಲೆಯ ಸಾಗರ ತಾಲ್ಲೂಕಿನ ಉಳ್ಳೂರು ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಯನ್ನು ವರ್ಗಾಯಿಸುವಂತೆ ಒತ್ತಾಯಿಸಿ ಮಂಗಳವಾರ ಕರ್ನಾಟಕ ರಕ್ಷಣಾ…

ಇಂದು ಕೆಪಿಸಿಸಿ ಕಚೇರಿಯಲ್ಲಿ ನಡೆದ ಎಐಸಿಸಿ ಹಿಂದುಳಿದ ವರ್ಗಗಳ ಸಲಹಾ ಸಭೆಯ ಪ್ರಮುಖ ಹೈಲೈಟ್ಸ್

15/07/2025 9:44 PM

BREAKING: ಬೆಂಗಳೂರಲ್ಲಿ ರೌಡಿ ಶೀಟರ್ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಹತ್ಯೆ

15/07/2025 9:39 PM

GOOD NEWS: MDS ಪ್ರವೇಶ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ಜುಲೈ.17ರವರೆಗೆ ಶುಲ್ಕ ಪಾವತಿಗೆ ಅವಕಾಶ

15/07/2025 9:01 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.