Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Interesting Fact : ಭೂಮಿಯ ಮೇಲೆ ತೀರವಿಲ್ಲದ ಏಕೈಕ ‘ಸಮುದ್ರ’, 99% ಜನರಿಗೆ ಇದು ತಿಳಿದಿಲ್ಲ!

29/11/2025 5:03 PM

SHOCKING : ಮಂಗಳೂರಲ್ಲಿ ಅಮಾನವೀಯ ಘಟನೆ : ತಾಯಿಯನ್ನು ನೆಲಕ್ಕೆ ಕೆಡವಿ, ಚಪ್ಪಲಿಯಿಂದ ಥಳಿಸಿದ ಪಾಪಿ ಮಗಳು!

29/11/2025 4:41 PM

BREAKING : ಬೆಂಗಳೂರಲ್ಲಿ ಪಿಜಿಯಲ್ಲಿ ನೇಣು ಬಿಗಿದುಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು

29/11/2025 4:29 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಹಿರಿಯ ನಾಗರೀಕರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗುಡ್ ನ್ಯೂಸ್: ಮಾಸಾಶನ, ಆರೋಗ್ಯ ವಿಮೆ ಹೆಚ್ಚಳ
KARNATAKA

ಹಿರಿಯ ನಾಗರೀಕರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗುಡ್ ನ್ಯೂಸ್: ಮಾಸಾಶನ, ಆರೋಗ್ಯ ವಿಮೆ ಹೆಚ್ಚಳ

By kannadanewsnow0901/10/2024 4:18 PM

ಬೆಂಗಳೂರು: ರಾಜ್ಯದಲ್ಲಿ 50 ಲಕ್ಷಕ್ಕೂ ಹೆಚ್ಚು ಹಿರಿಯ ನಾಗರಿಕರಿಗೆ ಮಾಸಾಶನ ನೀಡಲಾಗುತ್ತಿದ್ದು, ಮಾಸಾಶನ ಹೆಚ್ಚಿಸುವ ಬಗ್ಗೆ ಇಲಾಖೆ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ-2024 ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿಯವರು, ಹಿರಿಯರನ್ನು ಗೌರವಿಸಿ, ಅವರನ್ನು ಪಾಲನೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.

ಹಿರಿಯರು ಮಾಡಿದ ಸಾಮಾಜಿಕ ಕೊಡುಗೆಗಳನ್ನು ಸ್ಮರಿಸಬೇಕು. ಹಿರಿಯರ ನಾಗರಿಕರನ್ನು ಕೇವಲ ಗೌರವಿಸಲಷ್ಟೇ ಮೀಸಲಿರಿಸಬಾರದು, ಅವರ ಸಾಧನೆಗಳು ಯುವ ಸಮುದಾಯಕ್ಕೆ ಸ್ಪೂರ್ತಿಯಾಗಬೇಕು. ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಅದೇ ನಾವು ಸಮಾಜಕ್ಕೆ ಕೊಡುವ ದೊಡ್ಡ ಕೊಡುಗೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ವೃದ್ಧಾಶ್ರಮಗಳು ಹೆಚ್ಚಾಗುತ್ತಿರುವುದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿದ ಮುಖ್ಯಮಂತ್ರಿಯವರು, ಮನೆಗಳಲ್ಲಿ ಅನುಕೂಲಕರ ವಾತಾವರಣವಿದ್ದರೂ ವೃದ್ಧಾ ಶ್ರಮ ಸೇರುವುದು ಜಾಸ್ತಿಯಾಗುತ್ತಿದೆ. ಏಕೆಂದರೆ, ಮಕ್ಕಳು ವಿದೇಶದಲ್ಲಿ ನೆಲೆಸಿರುತ್ತಾರೆ. ಇದರಿಂದ ಹಿರಿಯರನ್ನು ವೃದ್ಧಾಶ್ರಮಕ್ಕೆ ಸೇರಿಸುವ ಪರಿಪಾಟ ನಡೆಯುತ್ತಿದೆ. ಇಂಥ ಸಂಸ್ಥೃತಿ ನಿಲ್ಲಬೇಕು ಎಂದು ಮುಖ್ಯಮಂತ್ರಿಗಳು ಹೇಳಿದರು.

ಅಶಕ್ತ, ದುರ್ಬಲ ವರ್ಗದವರಿಗೆ ಶಕ್ತಿತುಂಬುವ ಕೆಲಸವಾಗಬೇಕು. ಅವಕಾಶಗಳಿಂದ ವಂಚಿತರಾದವರಿಗೆ, ಆರ್ಥಿಕವಾಗಿ ದುರ್ಬಲರಾಗಿರುವ ಜನರಿಗೆ ಶಕ್ತಿ ತುಂಬುವಂಥ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ ಎಂದರು.

ಸಾಧಕ ಹಿರಿಯ ನಾಗರಿಕರಿಗೆ ಪ್ರಶಸ್ತಿ

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆಗೈದ 6 ಮಂದಿ ಹಾಗೂ ಒಂದು ಸೇವಾ ಸಂಸ್ಥೆಗೆ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜೊತೆಗೆ 10 ಮಹಿಳೆಯರಿಗೆ ಪೌಷ್ಠಿಕಾಂಶ ಕಿಟ್‌ ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿತರಿಸಿದರು.

ಸಚಿವರಿಗೆ ಶಹಬ್ಬಾಶ್ ಸಿಎಂ ಗಿರಿ

ಮುಖ್ಯಮಂತ್ರಿಗಳ ಭಾಷಣದ ಮಧ್ಯೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಹಿರಿಯ ನಾಗರಿಕರ ಮಾಸಾಶನ ಹೆಚ್ಚಳ ಮಾಡುವಂತೆ ಕೇಳಿಕೊಂಡಾಗ, ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಗೃಹಲಕ್ಷ್ಮಿ ಯೋಜನೆಯನ್ನು ಪಟ್ಟುಬಿಡದೆ ಜಾರಿಗೆ ತಂದಿದ್ದೆ ಈ ಹೆಣ್ಣು ಮಗಳು (ಸಚಿವೆ ಲಕ್ಷ್ಮೀ ಹೆಬ್ಬಾಳಕರ್), ಯಾವತ್ತೂ ಅಷ್ಟೆ, ಹಿಡಿದ ಕೆಲಸವನ್ನು ಪಟ್ಟು ಬಿಡದೆ ಮಾಡುತ್ತಾರೆ. ಈ ಮಾಸಾಶನ ಹೆಚ್ಚಳ ಮಾಡಿಸದೆ ಬಿಡುವುದಿಲ್ಲ ಅಂತ ಸಚಿವರ ಕಾರ್ಯವೈಖರಿ ಬಗ್ಗೆ ಮುಖ್ಯಮಂತ್ರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

BREAKING: ಜಪ್ತಿ ಮಾಡಿದ್ದ ವಸ್ತು ವಾಪಾಸ್ ನೀಡದೇ ದುರುಪಯೋಗ: ಬೆಂಗಳೂರಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ವಿರುದ್ಧ FIR ದಾಖಲು

BREAKING : ಬೆಳಗಾವಿಯಲ್ಲಿ ಹೃದಯ ವಿದ್ರಾವಕ ಘಟನೆ : 17 ತಿಂಗಳ ಮಗುವಿನೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ!

Share. Facebook Twitter LinkedIn WhatsApp Email

Related Posts

SHOCKING : ಮಂಗಳೂರಲ್ಲಿ ಅಮಾನವೀಯ ಘಟನೆ : ತಾಯಿಯನ್ನು ನೆಲಕ್ಕೆ ಕೆಡವಿ, ಚಪ್ಪಲಿಯಿಂದ ಥಳಿಸಿದ ಪಾಪಿ ಮಗಳು!

29/11/2025 4:41 PM1 Min Read

BREAKING : ಬೆಂಗಳೂರಲ್ಲಿ ಪಿಜಿಯಲ್ಲಿ ನೇಣು ಬಿಗಿದುಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು

29/11/2025 4:29 PM1 Min Read

BREAKING : ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ನೀಡುವ ದೇಗುಲದಲ್ಲಿ ಹೆಜ್ಜೆನು ದಾಳಿ : ಭಕ್ತರಲ್ಲಿ ಆತಂಕ

29/11/2025 4:23 PM1 Min Read
Recent News

Interesting Fact : ಭೂಮಿಯ ಮೇಲೆ ತೀರವಿಲ್ಲದ ಏಕೈಕ ‘ಸಮುದ್ರ’, 99% ಜನರಿಗೆ ಇದು ತಿಳಿದಿಲ್ಲ!

29/11/2025 5:03 PM

SHOCKING : ಮಂಗಳೂರಲ್ಲಿ ಅಮಾನವೀಯ ಘಟನೆ : ತಾಯಿಯನ್ನು ನೆಲಕ್ಕೆ ಕೆಡವಿ, ಚಪ್ಪಲಿಯಿಂದ ಥಳಿಸಿದ ಪಾಪಿ ಮಗಳು!

29/11/2025 4:41 PM

BREAKING : ಬೆಂಗಳೂರಲ್ಲಿ ಪಿಜಿಯಲ್ಲಿ ನೇಣು ಬಿಗಿದುಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು

29/11/2025 4:29 PM

ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ ; 2700 ಖಾಲಿ ಹುದ್ದೆಗಳ ಭರ್ತಿಗೆ ‘IOCL’ ಅಧಿಸೂಚನೆ ; ತಕ್ಷಣ ಅರ್ಜಿ ಸಲ್ಲಿಸಿ!

29/11/2025 4:28 PM
State News
KARNATAKA

SHOCKING : ಮಂಗಳೂರಲ್ಲಿ ಅಮಾನವೀಯ ಘಟನೆ : ತಾಯಿಯನ್ನು ನೆಲಕ್ಕೆ ಕೆಡವಿ, ಚಪ್ಪಲಿಯಿಂದ ಥಳಿಸಿದ ಪಾಪಿ ಮಗಳು!

By kannadanewsnow0529/11/2025 4:41 PM KARNATAKA 1 Min Read

ಮಂಗಳೂರು : ಮಗಳಿಂದಲೇ ತಾಯಿಗೆ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಮಂಗಳೂರಲ್ಲಿ ನಡೆದಿದೆ. ಚಪ್ಪಲಿಯಲ್ಲಿ ತಾಯಿಗೆ ಪಾಪಿ ಮಗಳು ಥಳಿಸಿದ್ದಾಳೆ. ಕಾವೂರು…

BREAKING : ಬೆಂಗಳೂರಲ್ಲಿ ಪಿಜಿಯಲ್ಲಿ ನೇಣು ಬಿಗಿದುಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು

29/11/2025 4:29 PM

BREAKING : ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ನೀಡುವ ದೇಗುಲದಲ್ಲಿ ಹೆಜ್ಜೆನು ದಾಳಿ : ಭಕ್ತರಲ್ಲಿ ಆತಂಕ

29/11/2025 4:23 PM

BIG NEWS : ಮಣಿಪಾಲ ಆಸ್ಪತ್ರೆಯಿಂದ ಮತ್ತೆ ಕಾವೇರಿ ನಿವಾಸಕ್ಕೆ ತೆರಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ

29/11/2025 4:05 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.