Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ತಾಜ್ ಮಹಲ್ ಭದ್ರತೆಗಾಗಿ ಡ್ರೋನ್ ವಿರೋಧಿ ವ್ಯವಸ್ಥೆ ನಿಯೋಜನೆ | Taj Mahal

31/05/2025 6:50 AM

BIG NEWS : ರಾಜ್ಯಾದ್ಯಂತ ಭಾರೀ ಮಳೆ : ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವಂತೆ ಸಚಿವರು, ಜಿಲ್ಲಾಧಿಕಾರಿಗಳಿಗೆ ಸಿಎಂ ಸೂಚನೆ.!

31/05/2025 6:45 AM

ವರ್ಷಕ್ಕೆ 700 ಬಾಲ್ಯ ವಿವಾಹ: ಸಿಎಂ ಸಿದ್ದರಾಮಯ್ಯ ಕಳವಳ | Child marriage

31/05/2025 6:43 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ಸಚಿವ ಭೈರತಿ ಸಹಚರರ ದಾಂಧಲೆ; ಕೇರಳ ಮೂಲದ ವ್ಯಕ್ತಿಯ ಕೊಲೆಗೆ ಸಂಚು ಆರೋಪ, ಪೊಲೀಸರಿಗೆ ದೂರು
KARNATAKA

BIG NEWS: ಸಚಿವ ಭೈರತಿ ಸಹಚರರ ದಾಂಧಲೆ; ಕೇರಳ ಮೂಲದ ವ್ಯಕ್ತಿಯ ಕೊಲೆಗೆ ಸಂಚು ಆರೋಪ, ಪೊಲೀಸರಿಗೆ ದೂರು

By kannadanewsnow0905/11/2024 9:51 PM

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನೆಲೆಸಿದ್ದ ಕೇರಳ ಮೂಲದ ದಂಪತಿಗಳನ್ನು ದೂರಮಾಡಿ ಅಸ್ತಿ ಕಬಳಿಸಲು ಸಚಿವ ಭೈರತಿ ಸುರೇಶ್ ಅಪ್ತರೆನ್ನಲಾದ ಗುಂಪು ದಾಂಧಲೆ ನಡೆಸಿರುವ ಪ್ರಕರಣ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ರೌಡಿಗಳ ಅಟ್ಟಹಾಸಕ್ಕೆ ಪೊಲೀಸರೂ ಸಾಥ್ ನೀಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಈ ಬಗ್ಗೆ ಗೃಹ ಇಲಾಖೆಗೆ ದೂರು ಸಲ್ಲಿಕೆಯಾಗಿದೆ. ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೂ ದೂರು ಸಲ್ಲಿಕೆಯಾಗಿದೆ.

ದಂಪತಿಗಳ ನಡುವಿನ ವಿರಸದ ಪ್ರಕರಣದ ಲಾಭ ಪಡೆಯಲು ರೌಡಿ ಗುಂಪು ಹೆಣ್ಣೂರು ಬಳಿ ನಿವೇಶನವೊಂದಕ್ಕೆ ಏಕಾಏಕಿ ನುಗ್ಗಿ ಪುಂಡಾಟ ಪ್ರದರ್ಶಿಸಿದೆ. ಹೆಣ್ಣೂರು ಗೋಪಿ ಮತ್ತು ಇಪ್ಪತ್ತು ಅಪರಿಚಿತ ವ್ಯಕ್ತಿಗಳ ದಾಂಧಲೆಯನ್ನು ಪ್ರತಿಭಟಿಸಿದ ಜಮೀನು ಮಾಲೀಕ ಶಾಜಿ ಜೋಸೆಫ್ ಅವರ ಕೊಲೆಗೆ ಯತ್ನ ನಡೆದಿದೆ. ಅಷ್ಟೇ ಅಲ್ಲ, ಮಾರಣಾಂತಿಕ ದಾಳಿ ನಡೆಸುವ ರಾಟ್‌ವೀಲರ್ ನಾಯಿಯನ್ನೂ ಕರೆತಂದು ದಾಳಿಗೆ ಯತ್ನಿಸಿದ್ದಾರೆಂದೂ ಸಂತ್ರಸ್ತರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ದೂರಿನಲ್ಲಿ ಏನಿದೆ?

ಹೆಣ್ಣೂರು ವಾಸವಿರುವ ಸಾಜಿ ಜೋಸೆಫ್ ಹಾಗೂ ಸಿನಿ ಸಾಜಿ ದಂಪತಿ ನಡುವೆ ವೈವಾಹಿಕ ಕಲಹಗಳು ನಡೆಯುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದಾರೆ. ಸಾಜಿ ಜೋಸೆಫ್ ಅವರು ವಾಸವಿರುವ ಮನೆ ಸಮೀಪವೇ ತಮ್ಮ ಪತ್ನಿ ಹೆಸರಲ್ಲೂ ನಿವೇಶನ ಖರೀದಿಸಿದ್ದು, ಪತ್ನಿಯ ಜಿಪಿಎ ಮೂಲಕ ನಿವೇಶನ ಉಪಯೋಗಿಸುತ್ತಾ ಬಂದಿದ್ದಾರೆ. ಆದರೆ ಯಾವಾಗ ತಮ್ಮ ದಾಂಪತ್ಯದಲ್ಲಿ ವಿರಸ ಉಂಟಾಯಿತೋ, ತಮ್ಮ ವಿರುದ್ಧ ಹಲವಾರು ದೂರುಗಳನ್ನು ಸಲ್ಲಿಸಿ ಪತ್ನಿ ಸಿನಿ ಸಾಜಿ ಕಿರುಕುಳ ನೀಡಿದ್ದಾರೆ ಎಂದು ಸಾಜಿ ಜೋಸೆಫ್ ಆರೋಪಿಸಿದ್ದಾರೆ. ತಮ್ಮ ಹೆಸರಲ್ಲಿ ನಕಲಿ ಜಿಪಿಎ ಮಾಡಿಸಲಾಗಿದೆ ಎಂದೂ ಆರೋಪಿಸಿ ಪತ್ನಿ ಪ್ರಕರಣ ದಾಖಲಿಸಿದ್ದಾರೆ ಎಂದು ಪತಿ ಆರೋಪ ಮಾಡಿದ್ದಾರೆ.

ಈ ನಡುವೆ ನಿವೇಶನ ವಿವಾದವು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದ್ದು, 01.11.2024 ರಂದು ಬೆಳಿಗ್ಗೆ 11:30 ಗಂಟೆ ಸುಮಾರಿಗೆ ಸುನಿ ಸಾಜಿ ಅವರು, ಹೆಣ್ಣೂರು ಗೋಪಿ ಮತ್ತು ಇಪ್ಪತ್ತು ಅಪರಿಚಿತ ವ್ಯಕ್ತಿಗಳೊಂದಿಗೆ ವಿವಾದಿತ ನಿವೇಶನಕ್ಕೆ ಅಕ್ರಮ ಪ್ರವೇಶ ಮಾಡಿ, ಅಲ್ಲಿದ್ದ ಗುಡಿಸಲಿಗೆ ನುಗ್ಗಿ ದಾಂದಲೆ ನಡೆಸಿದ್ದಾರೆ. ಆ ವೇಳೆ ಸ್ಥಳಕ್ಕೆ ಆಗಮಿಸಿದ ಹೆಣ್ಣೂರು ಠಾಣಾ ವ್ಯಾಪ್ತಿಯ ಹೊಯ್ಸಳ ಪೋಲೀಸರೂ ಯಾವುದೇ ಕ್ರಮ ವಹಿಸದೆ ಗೂಂಡಾಗಳ ಕೃತ್ಯಗಳಿಗೆ ಬೆಂಗಾವಲಾಗಿ ನಿಂತಿದ್ದರು ಎಂದು ಸಾಜಿ ಜೋಸೆಫ್ ದೂರಿನಲ್ಲಿ ಆರೋಪಿಸಿದ್ದಾರೆ.

ಅಪರಿಚಿತರು ಮಾರುತಿ ಇಸಿಒ ವ್ಯಾನ್ (KA01 MT 0568)ನಲ್ಲಿ ನಿಷೇಧಿತ, ರೊಟ್ವೀಲರ್ ನಾಯಿಯನ್ನು ಕರೆತಂದಿದ್ದು ಆ ಮೂಲಕ ತಮ್ಮ ಮೇಲೆ ದಾಳಿಗೆ ಯತ್ನಿಸಿದ್ದಾರೆ. ಸಿನಿ ಸಾಜಿ ಉಪಸ್ಥಿತಿಯಲ್ಲೇ ದಾಂಧಲೆ ನಡೆಸಿರುವ ಹೆಣ್ಣೂರು ಗೋಪಿ, ತಾನು ಸಚಿವ ಭೈರತಿ ಅವರ ಆಪ್ತನಾಗಿದ್ದು ಸಚಿವರು ಈ ನಿವೇಶನವನ್ನು ಖರೀದಿಸುತ್ತಿದ್ದಾರೆ. ಅಡ್ಡಿಪಡಿಸಿದರೆ ಕೊಲೆ ಮಾಡುವುದಾಗಿಯೂ ಬೆದರಿಸಿದ್ದಾನೆ ಎಂದು ಸಾಜಿ ಜೋಸೆಫ್ ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಸುಪಾರಿ ಕಿಲ್ಲರ್ ಎಂದು ಹೇಳಿಕೊಂಡು ಸುಮಾರು 20-30 ಜನರು ತಮ್ಮ ನಿವೇಶನದಲ್ಲೇ ಅಕ್ರಮವಾಗಿ ಉಳಿದುಕೊಂಡು ಮದ್ಯಪಾನ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದರು. ತಮ್ಮ ನಿವೇಶನ ಸಮೀಪದ ಕ್ಯಾಮರಾವನ್ನು ತಿರುಗಿಸಿ ತನ್ನನ್ನು ಕೊಲ್ಲಲು ಪ್ರಯತ್ನ ನಡೆಸಿದ್ದಾರೆ, ನಿವೇಶನದ ಕಟ್ಟಡದಲ್ಲಿ ವಾಸ್ತವ್ಯವಿರುವ ಬಾಡಿಗೆದಾರರಿಗೂ ಬೆದರಿಕೆ ಹಾಕುತ್ತಿದ್ದಾರೆ ಎಂದು ಈ ದೂರಿನಲ್ಲಿ ಆರೋಪ ಮಾಡಿದ್ದಾರೆ.

ಸಚಿವ ಭೈರತಿ ಸುರೇಶ್ ಅವರ ಆಪ್ತರೆಂದು ಹೇಳಿ ರೌಡಿ ಗ್ಯಾಂಗ್ ನಡೆಸಿರುವ ಕೃತ್ಯದ ಬಗ್ಗೆ ಹೆಣ್ಣೂರು ಠಾಣೆಯ ಪೊಲೀಸರ ಗಮನಕ್ಕೆ ತಂದರೂ ಯಾವುದೇ ರೀತಿ ಪ್ರಕರಣ ದಾಖಲಿಸದೆ ಏನ್.ಸಿ.ಆರ್.ದಾಖಲಿಸಿಕೊಂಡಿದ್ದಾರೆ ಎಂದು ಸಾಜಿ ಜೋಸೆಫ್ ಅವರು ಪೊಲೀಸ್ ಮಹಾ ನಿರ್ದೇಶಕರಿಗೆ ನೀಡಿರುವ ದೂರಿನಲ್ಲಿ ಗಮನಸೆಳೆದಿದ್ದಾರೆ. ಯುವಕರ ಪುಂಡಾಟದ ವೀಡಿಯೋ ಹಾಗೂ ಫೋಟೋಗಳನ್ನು ಸಂಗ್ರಹಿಸಿರುವ ಸಾಜಿ ಜೋಸೆಫ್, ಈ ದಾಖಲೆಗಳೊಂದಿಗೆ ದೂರು ನೀಡಿದ್ದು, ಭೈರತಿ ಸುರೇಶ ಸಹಚರರೆನ್ನಲಾದ ಆರೋಪಿಗಳ ವಿರುದ್ಧ ಕಾನೂನು ಕ್ರಮಕ್ಕೆ ಮನವಿ ಮಾಡಿದ್ದಾರೆ.

BREAKING: ನ.24, 25ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ IPL 2025ರ ಮೆಗಾ ಹರಾಜು: 1,574 ಆಟಗಾರರು ನೋಂದಣಿ | IPL 2025 Mega Auction in Jeddah

ರೈತರಿಗೆ ಸಿಹಿ ಸುದ್ದಿ ; ಕೇಂದ್ರ ಸರ್ಕಾರದ ಈ ಯೋಜನೆಯಡಿ ‘2 ಲಕ್ಷ ಸಾಲ’ ಲಭ್ಯ, ನೀವೂ ಅರ್ಜಿ ಸಲ್ಲಿಸಿ

Share. Facebook Twitter LinkedIn WhatsApp Email

Related Posts

BIG NEWS : ರಾಜ್ಯಾದ್ಯಂತ ಭಾರೀ ಮಳೆ : ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವಂತೆ ಸಚಿವರು, ಜಿಲ್ಲಾಧಿಕಾರಿಗಳಿಗೆ ಸಿಎಂ ಸೂಚನೆ.!

31/05/2025 6:45 AM1 Min Read

ವರ್ಷಕ್ಕೆ 700 ಬಾಲ್ಯ ವಿವಾಹ: ಸಿಎಂ ಸಿದ್ದರಾಮಯ್ಯ ಕಳವಳ | Child marriage

31/05/2025 6:43 AM1 Min Read

BIG NEWS : ಇಂದು `ವಿಶ್ವ ತಂಬಾಕು ರಹಿತ ದಿನ’ : ಈ ದಿನದ ಇತಿಹಾಸ, ಥೀಮ್ ಮತ್ತು ಮಹತ್ವ ತಿಳಿಯಿರಿ | World No Tobacco Day 2025

31/05/2025 6:39 AM2 Mins Read
Recent News

ತಾಜ್ ಮಹಲ್ ಭದ್ರತೆಗಾಗಿ ಡ್ರೋನ್ ವಿರೋಧಿ ವ್ಯವಸ್ಥೆ ನಿಯೋಜನೆ | Taj Mahal

31/05/2025 6:50 AM

BIG NEWS : ರಾಜ್ಯಾದ್ಯಂತ ಭಾರೀ ಮಳೆ : ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವಂತೆ ಸಚಿವರು, ಜಿಲ್ಲಾಧಿಕಾರಿಗಳಿಗೆ ಸಿಎಂ ಸೂಚನೆ.!

31/05/2025 6:45 AM

ವರ್ಷಕ್ಕೆ 700 ಬಾಲ್ಯ ವಿವಾಹ: ಸಿಎಂ ಸಿದ್ದರಾಮಯ್ಯ ಕಳವಳ | Child marriage

31/05/2025 6:43 AM

BIG NEWS : ಇಂದು `ವಿಶ್ವ ತಂಬಾಕು ರಹಿತ ದಿನ’ : ಈ ದಿನದ ಇತಿಹಾಸ, ಥೀಮ್ ಮತ್ತು ಮಹತ್ವ ತಿಳಿಯಿರಿ | World No Tobacco Day 2025

31/05/2025 6:39 AM
State News
KARNATAKA

BIG NEWS : ರಾಜ್ಯಾದ್ಯಂತ ಭಾರೀ ಮಳೆ : ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವಂತೆ ಸಚಿವರು, ಜಿಲ್ಲಾಧಿಕಾರಿಗಳಿಗೆ ಸಿಎಂ ಸೂಚನೆ.!

By kannadanewsnow5731/05/2025 6:45 AM KARNATAKA 1 Min Read

ಬೆಂಗಳೂರು: ರಾಜ್ಯಾದ್ಯಂತ ಭಾರಿ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ತಕ್ಷಣ ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ಪರಿಹಾರ ಕಾರ್ಯದ ಉಸ್ತುವಾರಿ ನೋಡಿಕೊಳ್ಳುವಂತೆ…

ವರ್ಷಕ್ಕೆ 700 ಬಾಲ್ಯ ವಿವಾಹ: ಸಿಎಂ ಸಿದ್ದರಾಮಯ್ಯ ಕಳವಳ | Child marriage

31/05/2025 6:43 AM

BIG NEWS : ಇಂದು `ವಿಶ್ವ ತಂಬಾಕು ರಹಿತ ದಿನ’ : ಈ ದಿನದ ಇತಿಹಾಸ, ಥೀಮ್ ಮತ್ತು ಮಹತ್ವ ತಿಳಿಯಿರಿ | World No Tobacco Day 2025

31/05/2025 6:39 AM

BIG NEWS : ರಾಜ್ಯದಲ್ಲಿ ಇನ್ಮುಂದೆ `SARI’ ಪ್ರಕರಣಗಳಲ್ಲಿ ಕೋವಿಡ್ ಪರೀಕ್ಷೆ ಕಡ್ಡಾಯ: ಸರ್ಕಾರ ಮಹತ್ವದ ಆದೇಶ.!

31/05/2025 6:25 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.