Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬಿಸಿಲ ಧಗೆಗೆ ಬಾಡುತ್ತಿದೆ ಬಾಲ್ಯ: ಹವಾಮಾನ ಬದಲಾವಣೆಯಿಂದ ಹೆಚ್ಚುತ್ತಿದೆ ಮಕ್ಕಳಲ್ಲಿ ಅಪೌಷ್ಟಿಕತೆ

04/05/2026 3:44 PM

ಸಿನಿಮಾ ಮಾತ್ರವಲ್ಲ, ಹೂಡಿಕೆಯಲ್ಲೂ ‘ದಳಪತಿ’ ವಿಜಯ ಮಾದರಿ: 624 ಕೋಟಿ ಆಸ್ತಿಯ ಹಿಂದಿರುವ ಸಕ್ಸಸ್ ಸೀಕ್ರೆಟ್!

04/05/2026 3:41 PM

BIG NEWS : ದಾವಣಗೆರೆಯಲ್ಲಿ ‘SDPI’ ಓಟ್ ನಮಗೆ ಬಹಳ ಡೇಂಜರ್ : ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆ

04/05/2026 3:37 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಹಾಲಿನ ಬೆಲೆ ಹೆಚ್ಚಳ ಸರಕಾರದ ಜನದ್ರೋಹಿ ನಿರ್ಧಾರ: ಬಿಜೆಪಿ MLC ಎನ್.ರವಿಕುಮಾರ್
KARNATAKA

ಹಾಲಿನ ಬೆಲೆ ಹೆಚ್ಚಳ ಸರಕಾರದ ಜನದ್ರೋಹಿ ನಿರ್ಧಾರ: ಬಿಜೆಪಿ MLC ಎನ್.ರವಿಕುಮಾರ್

By kannadanewsnow0926/06/2024 6:41 PM

ಬೆಂಗಳೂರು: ಹಾಲಿನ ಬೆಲೆ ಹೆಚ್ಚಳ ಮತ್ತೊಂದು ಬರೆ ಹಾಕುವ ಕೆಲಸ ಎಂದು ವಿಧಾನಪರಿಷತ್ ಎನ್. ರವಿಕುಮಾರ್ ಅವರು ಟೀಕಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಾಲಿನ ದರ ಹೆಚ್ಚಳಕ್ಕೆ ಪ್ಯಾಕೆಟ್‍ಗೆ 50 ಎಂಎಲ್ ಹೆಚ್ಚು ಹಾಲು ಕೊಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಬೂಬು ಕೊಡುತ್ತಿದ್ದಾರೆ. ಅದಕ್ಕಾಗಿ 2 ರೂ. ಹೆಚ್ಚು ಮಾಡಿದ್ದೇವೆ ಎಂದಿದ್ದಾರೆ ಎಂದರು.

ಹಾಲು ಹೆಚ್ಚು ನೀಡಲು ಯಾರಾದರೂ ನಿಮಗೆ ಮನವಿಪತ್ರ ಕೊಟ್ಟಿದ್ದರೇ? ಈ ರೀತಿ ಮನೆಮುರುಕ ನಿರ್ಧಾರವನ್ನು ಯಾಕೆ ಈ ಸರಕಾರ ಮಾಡುತ್ತಿದೆ? ಜನಕ್ಕೆ ಬೇಡದ ಜನವಿರೋಧಿ ನಿರ್ಧಾರವಿದು. ರಾಜ್ಯದಲ್ಲಿ 20 ಲಕ್ಷ ಮೇವಿನ ಅವಶ್ಯಕತೆ ಇದೆ. 8 ಲಕ್ಷ ಟನ್ ಮೇವನ್ನು ಮಾತ್ರ ಕೊಡುತ್ತಿದ್ದಾರೆ. ಈ ಸರಕಾರಕ್ಕೆ ಮೇವು ಕೊಡಲಾಗುತ್ತಿಲ್ಲ ಎಂದು ಟೀಕಿಸಿದರು.

ಹಾಲು ಹೆಚ್ಚು ಕೊಡುವ ನೆಪದಲ್ಲಿ ಹೆಚ್ಚು ಹಣ ಕೇಳುವುದು ಜನದ್ರೋಹಿ ನಿರ್ಧಾರ ಎಂದು ಆಕ್ಷೇಪಿಸಿದರು. ಈ ನಿರ್ಧಾರವನ್ನು ಕೂಡಲೇ ವಾಪಸ್ ಪಡೆಯಬೇಕೆಂದು ಅವರು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯವರನ್ನು ಆಗ್ರಹಿಸಿದರು. ಹಾಲಿನ ದರ ಏರಿಕೆಯ ಪರಿಣಾಮವಾಗಿ ಚಹಾ, ಕಾಫಿ, ಹೋಟೆಲ್‍ಗಳ ತಿಂಡಿ ದರ ಹೆಚ್ಚಳದ ವಿಷಯ ಕೇಳಿ ಬರುತ್ತಿದೆ. ಮದ್ಯದ ಬೆಲೆ ಈಗಾಗಲೇ ಹೆಚ್ಚಿಸಿದ್ದೀರಿ. ಬೊಕ್ಕಸ ತುಂಬಿಸುವ ಕುಕೃತ್ಯವಿದು ಎಂದು ಆರೋಪಿಸಿದರು.

ಬೇಜವಾಬ್ದಾರಿ ಸರಕಾರದ ಜನವಿರೋಧಿ ಮುಖ್ಯಮಂತ್ರಿ..

ರಾಜ್ಯದ ಬೇಜವಾಬ್ದಾರಿ ಸರಕಾರದ ಜನವಿರೋಧಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಿರ್ಧಾರಗಳಿಂದ ರಾಜ್ಯದ ಜನತೆ ದಿನದಿಂದ ದಿನಕ್ಕೆ ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆಯಿಂದ ಕೋಟ್ಯಂತರ ಜನರು ಸಂಕಷ್ಟಕ್ಕೆ ಈಡಾಗಿದ್ದರು. ಇದರಿಂದ ರಸ್ತೆ ಮೇಲೆ ಓಡಾಡುವ ಬಸ್‍ಗಳು, ಲಾರಿಗಳು, ಕಾರುಗಳು, ಸಾಮಗ್ರಿಗಳನ್ನು ಒಯ್ಯುವ ವಾಹನಗಳ ದರ ಹೆಚ್ಚಾಗಿ ವಸ್ತುಗಳ ದರವೂ ದುಬಾರಿಯಾಗಿದೆ ಎಂದು ರವಿಕುಮಾರ್ ಅವರು ವಿವರಿಸಿದರು.

ಮಳೆ ಬರುತ್ತಿದೆ. ಬಿತ್ತನೆ ಬೀಜ, ಗೊಬ್ಬರಗಳ ದರವನ್ನೂ ನೀವು ಹೆಚ್ಚು ಮಾಡಿದ್ದೀರಿ. ತರಕಾರಿ, ದವಸಧಾನ್ಯಗಳ ಬೆಲೆ ಹೆಚ್ಚಾಗಿದೆ. ಇದಲ್ಲದೆ, ಮನೆ ಕಂದಾಯ, ನೋಂದಣಿ ಶುಲ್ಕ ಹೆಚ್ಚಿಸಿದ್ದೀರಿ. ಸರಕಾರಿ ಆಸ್ತಿಗಳ ಪರಭಾರೆ ಮಾಡಿ ಸರಕಾರ ವ್ಯಾಪಾರ ಮಾಡುತ್ತಿದೆ ಎಂದು ಆರೋಪಿಸಿದರು. ಈ ಸರಕಾರದ ಮನೆಮುರುಕ ನಿರ್ಧಾರಗಳನ್ನು ನೋಡಿದರೆ ಇವರು ಕರ್ನಾಟಕ ರಾಜ್ಯದಲ್ಲಿ ಏನೂ ಉಳಿಸುವುದಿಲ್ಲ ಎಂದು ಗೊತ್ತಾಗುತ್ತಿದೆ ಎಂದು ತಿಳಿಸಿದರು.

ಸಿದ್ದರಾಮಯ್ಯನವರು ನಿದ್ರೆಯಲ್ಲಿ ಇದ್ದಂತಿದೆ. ಜನರ ಸಂಕಷ್ಟ ಅವರಿಗೆ ಕಾಣುತ್ತಿಲ್ಲ. ಮುಖ್ಯಮಂತ್ರಿ, ಕಣ್ಣಿದ್ದೂ ಕುರುಡರಾಗಿದ್ದಾರೆ. ಕಿವಿ ಇದ್ದರೂ ಕಿವುಡರಾಗಿದ್ದಾರೆ. ಬುದ್ಧಿ ಇದ್ದರೂ ಬುದ್ಧಿ ಕಳಕೊಂಡು ಬುದ್ಧಿ ಭ್ರಮಣೆ ಆದಂತೆ ಕಾಣುತ್ತಿದೆ. ಜನರು ರೊಚ್ಚಿಗೇಳುವ ಮೊದಲು, ಜನರು ರಸ್ತೆಗೆ ಇಳಿಯುವ ಮುಂಚೆ ಕೂಡಲೇ ಹಾಲು, ಡೀಸೆಲ್, ಪೆಟ್ರೋಲ್ ದರ ಹೆಚ್ಚಳವನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ಜುಲೈ 2ನೇ ವಾರದಲ್ಲಿ ಬೆಂಗಳೂರಿನ ‘ಯಲಹಂಕದ ಅನಿಲ ವಿದ್ಯುತ್ ಘಟಕ’ ಲೋಕಾರ್ಪಣೆ: ಸಚಿವ ಕೆ.ಜೆ ಜಾರ್ಜ್

ವಿದ್ಯಾರ್ಥಿಗಳೇ ಗಮನಿಸಿ: ಜುಲೈ.13, 14ರಂದು ನಿಗದಿ ಪಡಿಸಿದ್ದ ‘PG CET-2024ರ ಪರೀಕ್ಷೆ’ ಮುಂದೂಡಿಕೆ

Share. Facebook Twitter LinkedIn WhatsApp Email

Related Posts

BIG NEWS : ದಾವಣಗೆರೆಯಲ್ಲಿ ‘SDPI’ ಓಟ್ ನಮಗೆ ಬಹಳ ಡೇಂಜರ್ : ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆ

04/05/2026 3:37 PM1 Min Read

ಕನ್ನಡ ಹೋರಾಟಗಾರರ ಮೇಲಿನ ಮೊಕದ್ದಮೆ ಹಿಂಪಡೆಯಲು ಕರವೇ ಆಗ್ರಹ: ಗೃಹ ಸಚಿವರಿಗೆ ನಾರಾಯಣಗೌಡ ಮನವಿ

04/05/2026 3:34 PM2 Mins Read

BIG NEWS : ಶೃಂಗೇರಿ ಅಂಚೆ ಮತಗಳ ಎಣಿಕೆಯಲ್ಲಿ ಅಕ್ರಮ ಆರೋಪ : ಜೀವರಾಜ್ ಸೇರಿ ಮೂವರ ವಿರುದ್ಧ FIR ದಾಖಲು

04/05/2026 3:28 PM1 Min Read
Recent News

ಬಿಸಿಲ ಧಗೆಗೆ ಬಾಡುತ್ತಿದೆ ಬಾಲ್ಯ: ಹವಾಮಾನ ಬದಲಾವಣೆಯಿಂದ ಹೆಚ್ಚುತ್ತಿದೆ ಮಕ್ಕಳಲ್ಲಿ ಅಪೌಷ್ಟಿಕತೆ

04/05/2026 3:44 PM

ಸಿನಿಮಾ ಮಾತ್ರವಲ್ಲ, ಹೂಡಿಕೆಯಲ್ಲೂ ‘ದಳಪತಿ’ ವಿಜಯ ಮಾದರಿ: 624 ಕೋಟಿ ಆಸ್ತಿಯ ಹಿಂದಿರುವ ಸಕ್ಸಸ್ ಸೀಕ್ರೆಟ್!

04/05/2026 3:41 PM

BIG NEWS : ದಾವಣಗೆರೆಯಲ್ಲಿ ‘SDPI’ ಓಟ್ ನಮಗೆ ಬಹಳ ಡೇಂಜರ್ : ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆ

04/05/2026 3:37 PM

ಕನ್ನಡ ಹೋರಾಟಗಾರರ ಮೇಲಿನ ಮೊಕದ್ದಮೆ ಹಿಂಪಡೆಯಲು ಕರವೇ ಆಗ್ರಹ: ಗೃಹ ಸಚಿವರಿಗೆ ನಾರಾಯಣಗೌಡ ಮನವಿ

04/05/2026 3:34 PM
State News
KARNATAKA

BIG NEWS : ದಾವಣಗೆರೆಯಲ್ಲಿ ‘SDPI’ ಓಟ್ ನಮಗೆ ಬಹಳ ಡೇಂಜರ್ : ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆ

By kannadanewsnow0504/05/2026 3:37 PM KARNATAKA 1 Min Read

ಬೆಂಗಳೂರು : ದಾವಣಗೆರೆಯಲ್ಲಿ ಎಸ್‌ಡಿಪಿಐನ್ನು ಲೈಟ್ಆಗಿ ತೆಗೆದುಕೊಂಡಿರಲಿಲ್ಲ. ಅದು ಪೊಲಿಟಿಕಲ್ ಪಾರ್ಟಿ ಅಲ್ಲ. ಮುಸ್ಲಿಂ ನಾಯಕರು ಕೆಲಸ ಮಾಡಿಲ್ಲ ಅನ್ನೋ…

ಕನ್ನಡ ಹೋರಾಟಗಾರರ ಮೇಲಿನ ಮೊಕದ್ದಮೆ ಹಿಂಪಡೆಯಲು ಕರವೇ ಆಗ್ರಹ: ಗೃಹ ಸಚಿವರಿಗೆ ನಾರಾಯಣಗೌಡ ಮನವಿ

04/05/2026 3:34 PM

BIG NEWS : ಶೃಂಗೇರಿ ಅಂಚೆ ಮತಗಳ ಎಣಿಕೆಯಲ್ಲಿ ಅಕ್ರಮ ಆರೋಪ : ಜೀವರಾಜ್ ಸೇರಿ ಮೂವರ ವಿರುದ್ಧ FIR ದಾಖಲು

04/05/2026 3:28 PM

ನೈರುತ್ಯ ರೈಲ್ವೆ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಕೊಕ್: ರೈಲು ತಡೆ ಹೋರಾಟದ ಎಚ್ಚರಿಕೆ ನೀಡಿದ ಕರವೇ ಅಧ್ಯಕ್ಷ ನಾರಾಯಣಗೌಡ

04/05/2026 3:26 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.