Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

NABL ರಾಷ್ಟ್ರೀಯ ಮಾನ್ಯತೆ ಪಡೆದ ಹ್ಯಾಪಿಯೆಸ್ಟ್‌ ಡಯಾಗ್ನೋಸ್ಟಿಕ್ಸ್‌

29/01/2026 6:28 PM

ಬೆಂಗಳೂರಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಮರುಬಳಕೆ ಕುರಿತು ಆಯೋಜಿಸಿದ್ದ ಮೆಗಾ ಜಾಗೃತಿ ಮೇಳ ಯಶಸ್ವಿ

29/01/2026 6:25 PM

ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್: ಮೈಸೂರು ರೈಲ್ವೆ ಮ್ಯೂಸಿಯಂನಲ್ಲಿ ಡಿಜಿಟಲ್ ಪಾವತಿ ಸೌಲಭ್ಯ ಪ್ರಾರಂಭ

29/01/2026 6:23 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಮರುಬಳಕೆ ಕುರಿತು ಆಯೋಜಿಸಿದ್ದ ಮೆಗಾ ಜಾಗೃತಿ ಮೇಳ ಯಶಸ್ವಿ
KARNATAKA

ಬೆಂಗಳೂರಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಮರುಬಳಕೆ ಕುರಿತು ಆಯೋಜಿಸಿದ್ದ ಮೆಗಾ ಜಾಗೃತಿ ಮೇಳ ಯಶಸ್ವಿ

By kannadanewsnow0929/01/2026 6:25 PM

ಬೆಂಗಳೂರು: ಪ್ಲಾಸ್ಟಿಕ್‌ ತ್ಯಾಜ್ಯಗಳ ಕುರಿತು ಆಯೋಜಿಸಿದ್ದ ಜಾಗೃತಿ ಮೇಳದ ಭಾಗವಾಗಿ ಪ್ಲಾಸ್ಟಿಕ್‌ನಿಂದ ಮರು ತಯಾರಿಸಿದ ಪ್ಲಾಸ್ಟಿಕ್ ಸ್ಮಾರ್ಟ್ ವರ್ಕ್‌ಬುಕ್‌ಗಳನ್ನು ಹೆಗ್ಗನಹಳ್ಳಿಯ ಕೆಪಿಎಸ್ ಪ್ರಾಥಮಿಕ ಶಾಲಾ ಮಕ್ಕಳಿಗೆ ವಿತರಿಸಲಾಯಿತು.

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (DIET), ಯಿಪ್ಪೀ! ಬೆಟರ್ ವರ್ಲ್ಡ್ ಇವರ ಸಹಯೋಗದಲ್ಲಿ “ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಮೆಗಾ ಜಾಗೃತಿ ಮೇಳ”ವನ್ನು ಆಯೋಜಿಸಲಾಗಿತ್ತು. ಹೆಗ್ಗನಹಳ್ಳಿಯ ಕೆಪಿಎಸ್ ಪ್ರಾಥಮಿಕ ಶಾಲೆಯಲ್ಲಿ ITC ಬೆಂಬಲದೊಂದಿಗೆ ಅಗಸ್ತ್ಯ ಇಂಟರ್ನ್ಯಾಷನಲ್ ಫೌಂಡೇಶನ್ ಸಹಯೋಗದಲ್ಲಿ ನಡೆಸಲಾಯಿತು.

ಈ ವೇಳೆ ಮಾತನಾಡಿದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಪ್ರಾಂಶುಪಾಲೆ ಪ್ರಣಿತಾ, ಮಕ್ಕಳಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯಗಳ ಮರುಬಳಕೆ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಮೆಗಾ ಜಾಗೃತಿ ಮೇಳವನ್ನು ಆಯೋಜಿಸಲಾಗಿತ್ತು. ಇಂದು ಸಾಕಷ್ಟು ಪ್ಲಾಸ್ಟಿಕ್‌ ಉತ್ಪಾದನೆಯಾಗುತ್ತಿದ್ದು, ಅದರ ಸಂಸ್ಕರಣೆ ಸವಾಲಿನ ಕೆಲಸವಾಗಿದೆ. ಇಂದಿನ ಮಕ್ಕಳಿಗೆ ಪ್ಲಾಸ್ಟಿಕ್‌ ಕಡಿಮೆ ಬಳಕೆ, ಮರುಬಳಕೆ ಬಗ್ಗೆ ಜಾಗೃತಿ ಮೂಡಿಸಿದರೆ ಮಾತ್ರ ನಮ್ಮ ಮುಂದಿನ ಪೀಳಿಗೆ ಈ ಭೂಮಿಯನ್ನು ಆರೋಗ್ಯವಾಗಿಡಲು ಸಾಧ್ಯ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಹೆಗ್ಗನಹಳ್ಳಿಯಲ್ಲಿರುವ ಕೆಪಿಎಸ್ ಪ್ರಾಥಮಿಕ ಶಾಲೆಯ 1,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು. ಜೊತೆಗೆ, 1,000 ಕ್ಕೂ ಹೆಚ್ಚು ಪ್ಲಾಸ್ಟಿಕ್ ಸ್ಮಾರ್ಟ್ ವರ್ಕ್‌ಬುಕ್‌ಗಳನ್ನು ಈ ಮಕ್ಕಳಿಗೆ ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪೋಸ್ಟರ್‌, ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯ ಕುರಿತು ವಿಜ್ಞಾನ ಮಾದರಿ ಮತ್ತು ಮರುಬಳಕೆಯ ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳ ಪ್ರದರ್ಶನದಂತಹ ವಿವಿಧ ಚಟುವಟಿಕೆಗಳು ಸಹ ಸೇರಿದ್ದವು.

“ITC ಲಿಮಿಟೆಡ್‌ನ ತಿಂಡಿಗಳು, ನೂಡಲ್ಸ್ ಮತ್ತು ಪಾಸ್ತಾ, ಆಹಾರ ವ್ಯವಹಾರದ ಉಪಾಧ್ಯಕ್ಷ ಮತ್ತು ಮಾರ್ಕೆಟಿಂಗ್ ಮುಖ್ಯಸ್ಥ ಶ್ರೀ ಸುರೇಶ್ ಚಂದ್,” ಮಾತನಾಡಿ, ITCಯಲ್ಲಿ, ಸುಸ್ಥಿರತೆ ಮತ್ತು ಶಿಕ್ಷಣವು ಪರಸ್ಪರ ಪೂರಕವಾಗಿದೆ ಎಂದು ನಾವು ನಂಬುತ್ತೇವೆ. ಯಿಪ್ಪೀ! ಬೆಟರ್ ವರ್ಲ್ಡ್ ಕಾರ್ಯಕ್ರಮವು ಮಕ್ಕಳನ್ನು ಜವಾಬ್ದಾರಿಯುತ ನಾಗರಿಕರಾಗಲು ಜ್ಞಾನ ಮತ್ತು ಪ್ರೇರಣೆಯೊಂದಿಗೆ ಸಜ್ಜುಗೊಳಿಸಲು ಬದ್ಧವಾಗಿದೆ. ಆಕ್ಟಿಲರ್ನ್ ಶೈಕ್ಷಣಿಕ ಪುಸ್ತಕಗಳಂತಹ ಉಪಕ್ರಮಗಳ ಮೂಲಕ, ನಾವು ಸುಸ್ಥಿರ ನಾಳೆಗಾಗಿ ಸಸಿಗಳನ್ನು ನೆಡುತ್ತಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ದಕ್ಷಿಣ ನೋಡಲ್‌ ಅಧಿಕಾರಿ ಸ್ವಾಮಿ, ಕೆಪಿಎನ್‌ ಪ್ರಾಂಶುಪಾಲೆ ಪ್ರಮೀಳಾ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ (ಸಿಆರ್‌ಪಿ) ರಮೇಶ್ ಉಪಸ್ಥಿತರಿದ್ದರು.

ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್: ಮೈಸೂರು ರೈಲ್ವೆ ಮ್ಯೂಸಿಯಂನಲ್ಲಿ ಡಿಜಿಟಲ್ ಪಾವತಿ ಸೌಲಭ್ಯ ಪ್ರಾರಂಭ

ರಾಜ್ಯ ಸರ್ಕಾರಿ ನೌಕರರಿಗೆ ಸಿಹಿಸುದ್ದಿ: ಹಬ್ಬದ ಮುಂಗಡ ಪಡೆಯಲು ಈ ಹಬ್ಬಗಳನ್ನು ಸೇರ್ಪಡೆಗೊಳಿಸಿ ಸರ್ಕಾರ ಆದೇಶ

Share. Facebook Twitter LinkedIn WhatsApp Email

Related Posts

NABL ರಾಷ್ಟ್ರೀಯ ಮಾನ್ಯತೆ ಪಡೆದ ಹ್ಯಾಪಿಯೆಸ್ಟ್‌ ಡಯಾಗ್ನೋಸ್ಟಿಕ್ಸ್‌

29/01/2026 6:28 PM2 Mins Read

ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್: ಮೈಸೂರು ರೈಲ್ವೆ ಮ್ಯೂಸಿಯಂನಲ್ಲಿ ಡಿಜಿಟಲ್ ಪಾವತಿ ಸೌಲಭ್ಯ ಪ್ರಾರಂಭ

29/01/2026 6:23 PM1 Min Read

ರಾಜ್ಯ ಸರ್ಕಾರಿ ನೌಕರರಿಗೆ ಸಿಹಿಸುದ್ದಿ: ಹಬ್ಬದ ಮುಂಗಡ ಪಡೆಯಲು ಈ ಹಬ್ಬಗಳನ್ನು ಸೇರ್ಪಡೆಗೊಳಿಸಿ ಸರ್ಕಾರ ಆದೇಶ

29/01/2026 6:17 PM1 Min Read
Recent News

NABL ರಾಷ್ಟ್ರೀಯ ಮಾನ್ಯತೆ ಪಡೆದ ಹ್ಯಾಪಿಯೆಸ್ಟ್‌ ಡಯಾಗ್ನೋಸ್ಟಿಕ್ಸ್‌

29/01/2026 6:28 PM

ಬೆಂಗಳೂರಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಮರುಬಳಕೆ ಕುರಿತು ಆಯೋಜಿಸಿದ್ದ ಮೆಗಾ ಜಾಗೃತಿ ಮೇಳ ಯಶಸ್ವಿ

29/01/2026 6:25 PM

ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್: ಮೈಸೂರು ರೈಲ್ವೆ ಮ್ಯೂಸಿಯಂನಲ್ಲಿ ಡಿಜಿಟಲ್ ಪಾವತಿ ಸೌಲಭ್ಯ ಪ್ರಾರಂಭ

29/01/2026 6:23 PM

ರಾಜ್ಯ ಸರ್ಕಾರಿ ನೌಕರರಿಗೆ ಸಿಹಿಸುದ್ದಿ: ಹಬ್ಬದ ಮುಂಗಡ ಪಡೆಯಲು ಈ ಹಬ್ಬಗಳನ್ನು ಸೇರ್ಪಡೆಗೊಳಿಸಿ ಸರ್ಕಾರ ಆದೇಶ

29/01/2026 6:17 PM
State News
KARNATAKA

NABL ರಾಷ್ಟ್ರೀಯ ಮಾನ್ಯತೆ ಪಡೆದ ಹ್ಯಾಪಿಯೆಸ್ಟ್‌ ಡಯಾಗ್ನೋಸ್ಟಿಕ್ಸ್‌

By kannadanewsnow0929/01/2026 6:28 PM KARNATAKA 2 Mins Read

ಬೆಂಗಳೂರು: ಅತ್ಯುತ್ತಮ ಡಯಾಗ್ನಾಸ್ಟಿಕ್‌ ಸೇವೆ ನೀಡುತ್ತಿರುವ “ಹ್ಯಾಪಿಯೆಸ್ಟ್ ಡಯಾಗ್ನೋಸ್ಟಿಕ್ಸ್”, ರಾಷ್ಟ್ರೀಯ ಪರೀಕ್ಷಾ ಮತ್ತು ಮಾಪನಾಂಕ ನಿರ್ಣಯ ಪ್ರಯೋಗಾಲಯಗಳ ಮಾನ್ಯತಾ ಮಂಡಳಿಯಿಂದ…

ಬೆಂಗಳೂರಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಮರುಬಳಕೆ ಕುರಿತು ಆಯೋಜಿಸಿದ್ದ ಮೆಗಾ ಜಾಗೃತಿ ಮೇಳ ಯಶಸ್ವಿ

29/01/2026 6:25 PM

ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್: ಮೈಸೂರು ರೈಲ್ವೆ ಮ್ಯೂಸಿಯಂನಲ್ಲಿ ಡಿಜಿಟಲ್ ಪಾವತಿ ಸೌಲಭ್ಯ ಪ್ರಾರಂಭ

29/01/2026 6:23 PM

ರಾಜ್ಯ ಸರ್ಕಾರಿ ನೌಕರರಿಗೆ ಸಿಹಿಸುದ್ದಿ: ಹಬ್ಬದ ಮುಂಗಡ ಪಡೆಯಲು ಈ ಹಬ್ಬಗಳನ್ನು ಸೇರ್ಪಡೆಗೊಳಿಸಿ ಸರ್ಕಾರ ಆದೇಶ

29/01/2026 6:17 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.