Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯ ಸರ್ಕಾರದಿಂದ ಹೊಸನಗರ 8, ಸಾಗರದ 8 ಶಾಲೆಗಳ ದುರಸ್ತಿಗೆ ಅನುದಾನ ಮಂಜೂರು

28/01/2026 10:27 PM

ಚಿನ್ನದ ಬೆಲೆಗಳ ಕುರಿತು ಕೇಂದ್ರ ಸರ್ಕಾರ ಸಂಚಲನಾತ್ಮಕ ನಿರ್ಧಾರ? ಬಜೆಟ್’ನಲ್ಲಿ ಪ್ರಮುಖ ಘೋಷಣೆ! ಬೆಲೆ ಕಮ್ಮಿಯಾಗುತ್ತಾ?

28/01/2026 9:50 PM

‘ಆಧಾರ್ ಕಾರ್ಡ್’ನಲ್ಲಿ ಹೊಸ ನವೀಕರಣ, ಇನ್ಮುಂದೆ ನೀವು ಎಲ್ಲಿ ಬೇಕಾದ್ರೂ, ಯಾವಾಗ ಬೇಕಾದ್ರೂ ಬದಲಾಯಿಸ್ಬೋದು!

28/01/2026 9:37 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮಂಡ್ಯದಲ್ಲಿ ಆರು ತಿಂಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ: ಇಂದು ಅಸ್ಥಿಪಂಜರದ ರೀತಿಯಲ್ಲಿ ಪತ್ತೆ!
KARNATAKA

ಮಂಡ್ಯದಲ್ಲಿ ಆರು ತಿಂಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ: ಇಂದು ಅಸ್ಥಿಪಂಜರದ ರೀತಿಯಲ್ಲಿ ಪತ್ತೆ!

By kannadanewsnow0905/01/2026 8:52 PM

ಮಂಡ್ಯ : ಕಳೆದ ಆರು ತಿಂಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬ ಆತನ ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದು, ಸೋಮವಾರ ಮನೆಯಲ್ಲಿ ಅಸ್ಥಿಪಂಜರ ಪತ್ತೆಯಾಗಿರುವ ಘಟನೆ ಸಕ್ಕರೆನಾಡು ಮಂಡ್ಯದಲ್ಲಿ ಜರುಗಿದೆ.

ಮದ್ದೂರು ತಾಲೂಕಿನ ದೊಡ್ಡ ಅರಸಿನಕೆರೆ ಗ್ರಾಮದ ಮಹದೇವಸ್ವಾಮಿ ಅಲಿಯಾಸ್ ಬೋಟಿ ಮಹದೇವ (45) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ ಎನ್ನಲಾಗಿದೆ.

ಮೃತ ವ್ಯಕ್ತಿ ಮಹದೇವಸ್ವಾಮಿ ಕೆ.ಎಂ.ದೊಡ್ಡಿಯಲ್ಲಿ ಬೀದಿ ಬದಿ ಹೋಟೆಲ್ ನಡೆಸುತ್ತಿದ್ದು, ದೊಡ್ಡಅರಸಿನಕೆರೆ ಚಿಕ್ಕಮಾಯಿಗಯ್ಯ ಎಂಬುವವರ ಮನೆಯಲ್ಲಿ ಬಾಡಿಗೆಗೆ ಪಡೆದು ವಾಸವಿದ್ದರು. ಕಳೆದ ಒಂದೂವರೆ ವರ್ಷದ ಹಿಂದೆ ವಿಪರೀತ ಸಾಲ ಮಾಡಿಕೊಂಡಿದ್ದರಿಂದ ಮನೆಬಿಟ್ಟು ನಾಪತ್ತೆಯಾಗಿದ್ದನು. ಈತನ ಪತ್ನಿ ನಾಪತ್ತೆಯಾದ ಗಂಡನನ್ನು ಸಾಕಷ್ಟು ಹುಡುಕಿ ಸಾಕಾಗಿದ್ದರು.

ಬಳಿಕ, ತಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಬೆಂಗಳೂರಿಗೆ ತೆರಳಿ ಖಾಸಗಿ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಕಳೆದ ಒಂದೂವರೆ ವರ್ಷದಿಂದಲೂ ಮನೆ ಬಾಡಿಗೆಗೆ ನೀಡಿದ್ದ ಮಾಯಿಗಯ್ಯ ಅವರ ಪತ್ನಿ ಗೀತಾ ಎಂಬುವವರು ಬಾಡಿಗೆ ನೀಡುವಂತೆ ಕೇಳಿದ್ದರು. ಆದರೆ ಬಾಡಿಗೆ ನೀಡಲು ಮಹದೇವಸ್ವಾಮಿ ಇಲ್ಲದಿರುವ ಕಾರಣ ಈತನ ತಮ್ಮ ರವಿ ಎಂಬುವವನನ್ನು ಮನೆ ಖಾಲಿ ಮಾಡಿಕೊಡುವಂತೆ ಹೇಳಿದ್ದರು. ಸ್ವಲ್ಪ ಸಮಯ ನೀಡುವಂತೆ ಮಹದೇವಸ್ವಾಮಿ ಇಲ್ಲದ್ದರಿಂದ ಆತ ಸಿಗುವವರೆಗೆ ಕಾಲಾವಕಾಶ ನೀಡುವಂತೆ ರವಿ ಕೇಳಿಕೊಂಡಿದ್ದರು. ಆದರೆ ಮನೆ ಮಾಲೀಕರು ಬಾಡಿಗೆ ವಿಷಯವನ್ನು ಕೈಬಿಟ್ಟಿದ್ದರು.

ಮುಂದಿನ ತಿಂಗಳು ಫೆಬ್ರವರಿಯಲ್ಲಿ ಗ್ರಾಮ ದೇವತೆ ಏಳೂರಮ್ಮ ದೇವಿಯ ಜಾತ್ರೆ ಇರುವುದರಿಂದ ಸುಣ್ಣ, ಬಣ್ಣ ಮಾಡಿಸಲು ಮನೆ ಖಾಲಿ ಮಾಡಿಕೊಡುವಂತೆ ರವಿಯನ್ನು ಕೇಳಿಕೊಂಡಿದ್ದರು.
ರವಿ ಇಂದು ಸಮಯ ತೆಗೆದುಕೊಂಡಿದ್ದು, ಅದರಂತೆ ಮನೆಯಲ್ಲಿನ ಸಾಮಾನು ಸರಂಜಾಮು ತೆಗೆದುಕೊಳ್ಳಲು ಮನೆಯ ಹತ್ತಿರ ಹೋಗಿದ್ದಾರೆ. ಮನೆಯ ಬಾಗಿಲನ್ನು ಒಳಗಿನಿಂದ ಬೀಗ ಹಾಕಿರುವುದು ಗೊತ್ತಾಗಿ, ಆರೆ ಮತ್ತಿತರ ಆಯುಧ ಬಳಸಿ ಬಾಗಿನ್ನು ತೆರೆದಿದ್ದಾರೆ. ಮನೆ ಬಾಗಿಲ ಹಿಂಬದಿಯಲ್ಲೇ ನೇಣು ಬಿಗಿದುಕೊಂಡ ಮಹದೇವಸ್ವಾಮಿ ಅಸ್ಥಿಪಂಜರ ಪತ್ತೆಯಾಗಿದೆ.
ಈತ ಮನೆಬಿಟ್ಟು ಹೋದ ನಂತರ ಗ್ರಾಮದಲ್ಲಿ ಯಾರಿಗೂ ಕಾಣಿಸಿಕೊಂಡಿರಲಿಲ್ಲ. ಈ ಮಧ್ಯೆ ರಾತ್ರಿ ವೇಳೆ ಮನೆಗೆ ಆಗಮಿಸಿ ನೇಣು ಬಿಗಿದುಕೊಂಡು ಸಾವನ್ನಪ್ಪಿರಬಹುದೆಂದು ತಮ್ಮ ರವಿ ಪೊಲೀಸರಿಗೆ ತಿಳಿಸಿದ್ದಾರೆ.

ಮೃತ ಮಹದೇವಸ್ವಾಮಿ ಆತ್ಮಹತ್ಯೆಯ ವಿಚಾರವನ್ನು ಬೆಂಗಳೂರಿನಲ್ಲಿದ್ದ ಪತ್ನಿ ಪವಿತ್ರಗೆ ವಿಚಾರ ತಿಳಿಸಿ ಶವದ ಅಸ್ಥಿ ಪಂಜರವನ್ನು ಕೆ.ಎಂ.ದೊಡ್ಡಿ ಪೊಲೀಸರು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವರದಿ : ಗಿರೀಶ್ ರಾಜ್, ಮಂಡ್ಯ

BIG NEWS: 8 ದಿನಗಳಲ್ಲಿ ‘KPCL ನೇಮಕಾತಿ’ಯ ತಾತ್ಕಾಲಿಕ ಫಲಿತಾಂಶ ಪ್ರಕಟ – ಕೆಇಎ

ರಾಜ್ಯ ಸರ್ಕಾರದಿಂದ ‘ಬಳ್ಳಾರಿ ಶೂಟೌಟ್’ ಮುಚ್ಚಿ ಹಾಕಲು ಷಡ್ಯಂತ್ರ್ಯ: HDK ಗಂಭೀರ ಆರೋಪ

Share. Facebook Twitter LinkedIn WhatsApp Email

Related Posts

ರಾಜ್ಯ ಸರ್ಕಾರದಿಂದ ಹೊಸನಗರ 8, ಸಾಗರದ 8 ಶಾಲೆಗಳ ದುರಸ್ತಿಗೆ ಅನುದಾನ ಮಂಜೂರು

28/01/2026 10:27 PM2 Mins Read

ಸಾವಿನಲ್ಲೂ ಸಾರ್ಥಕತೆ ಮೆರೆದ ಅನಂತ್ ಸುಬ್ಬರಾವ್: ನಾಳೆ ನಿಮ್ಹಾನ್ಸ್ ಆಸ್ಪತ್ರೆಗೆ ದೇಹದಾನ

28/01/2026 9:31 PM1 Min Read

ವರ್ಷಕ್ಕೊಮ್ಮೆ ಹೀಗೆ ಮಾಡಿ, ನಿಮ್ಮ ಬಗೆಹರಿಯದ ದುಃಖಗಳೆಲ್ಲ ಪರಿಹಾರ ಗ್ಯಾರಂಟಿ

28/01/2026 9:19 PM2 Mins Read
Recent News

ರಾಜ್ಯ ಸರ್ಕಾರದಿಂದ ಹೊಸನಗರ 8, ಸಾಗರದ 8 ಶಾಲೆಗಳ ದುರಸ್ತಿಗೆ ಅನುದಾನ ಮಂಜೂರು

28/01/2026 10:27 PM

ಚಿನ್ನದ ಬೆಲೆಗಳ ಕುರಿತು ಕೇಂದ್ರ ಸರ್ಕಾರ ಸಂಚಲನಾತ್ಮಕ ನಿರ್ಧಾರ? ಬಜೆಟ್’ನಲ್ಲಿ ಪ್ರಮುಖ ಘೋಷಣೆ! ಬೆಲೆ ಕಮ್ಮಿಯಾಗುತ್ತಾ?

28/01/2026 9:50 PM

‘ಆಧಾರ್ ಕಾರ್ಡ್’ನಲ್ಲಿ ಹೊಸ ನವೀಕರಣ, ಇನ್ಮುಂದೆ ನೀವು ಎಲ್ಲಿ ಬೇಕಾದ್ರೂ, ಯಾವಾಗ ಬೇಕಾದ್ರೂ ಬದಲಾಯಿಸ್ಬೋದು!

28/01/2026 9:37 PM

ಸಾವಿನಲ್ಲೂ ಸಾರ್ಥಕತೆ ಮೆರೆದ ಅನಂತ್ ಸುಬ್ಬರಾವ್: ನಾಳೆ ನಿಮ್ಹಾನ್ಸ್ ಆಸ್ಪತ್ರೆಗೆ ದೇಹದಾನ

28/01/2026 9:31 PM
State News
KARNATAKA

ರಾಜ್ಯ ಸರ್ಕಾರದಿಂದ ಹೊಸನಗರ 8, ಸಾಗರದ 8 ಶಾಲೆಗಳ ದುರಸ್ತಿಗೆ ಅನುದಾನ ಮಂಜೂರು

By kannadanewsnow0928/01/2026 10:27 PM KARNATAKA 2 Mins Read

ಶಿವಮೊಗ್ಗ: ರಾಜ್ಯ ಸರ್ಕಾರದಿಂದ ಶಾಸಕ ಗೋಪಾಲಕೃಷ್ಣ ಬೇಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಮತ್ತೊಂದು ಬಂಫರ್ ಗಿಫ್ಟ್ ನೀಡಿದೆ. ಅದೇ ಹೊಸನಗರದ…

ಸಾವಿನಲ್ಲೂ ಸಾರ್ಥಕತೆ ಮೆರೆದ ಅನಂತ್ ಸುಬ್ಬರಾವ್: ನಾಳೆ ನಿಮ್ಹಾನ್ಸ್ ಆಸ್ಪತ್ರೆಗೆ ದೇಹದಾನ

28/01/2026 9:31 PM

ವರ್ಷಕ್ಕೊಮ್ಮೆ ಹೀಗೆ ಮಾಡಿ, ನಿಮ್ಮ ಬಗೆಹರಿಯದ ದುಃಖಗಳೆಲ್ಲ ಪರಿಹಾರ ಗ್ಯಾರಂಟಿ

28/01/2026 9:19 PM

BREAKING: ಚಿಕ್ಕಮಗಳೂರಲ್ಲಿ ಬೋರ್ ಲಾರಿ-ಬೊಲೆರೋ ನಡುವೆ ಭೀಕರ ಅಪಘಾತ: ಓರ್ವ ಸಾವು, 7 ಜನರ ಸ್ಥಿತಿ ಗಂಭೀರ

28/01/2026 9:17 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.