ಬೆಂಗಳೂರು: ಇಂದು ದೊಡ್ಡಕಲ್ಲಸಂದ್ರದ ನಮ್ಮ ಮೆಟ್ರೋ ಹಸಿರು ಮಾರ್ಗದ ರೈಲು ನಿಲ್ದಾಣದಲ್ಲಿ ರೈಲು ಸಮೀಪ ಬರುತ್ತಿದ್ದಂತೆ ವ್ಯಕ್ತಿಯೊಬ್ಬ ರೈಲು ಹಳಿಗಳ ಮೇಲೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದನು. ಹೀಗೆ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಗುರುತು ಪತ್ತೆಯಾಗಿದೆ.
ಬೆಂಗಳೂರಿನ ದೊಡ್ಡಕಲ್ಲಸಂದ್ರದ ನಮ್ಮ ಮೆಟ್ರೋ ರೈಲು ನಿಲ್ದಾಣದಲ್ಲಿ ಹಳಿಗಳ ಮೇಲೆ ಹಾರಿ ಆತ್ಮಹತ್ಯೆಗೆ ಶರಣಾದಂತ ವ್ಯಕ್ತಿಯನ್ನು ನವೀನ್ ಕುಮಾರ್ ಅರೋರ(57) ಎಂಬುದಾಗಿ ಗುರುತಿಸಲಾಗಿದೆ. ಹಸಿರು ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲು ದೊಡ್ಡಕಲ್ಲಸಂದ್ರದ ನಿಲ್ದಾಣಕ್ಕೆ ಬರುವವರೆಗೂ ಸುಮ್ಮನಿದ್ದಂತ ಆತ, ದಿಢೀರ್ ರೈಲಿನ ಮುಂದೆ ಹಾರಿದ್ದನು.
ಮೆಟ್ರೋ ರೈಲಿನ ಮುಂದೆ ಹಾರಿದ್ದರಿಂದಾಗಿ ನವೀನ್ ಕುಮಾರ್ ಅರೋರ ರೈಲು ಅಡಿಗೆ ಸಿಲುಕಿ ಸುಮಾರು 40 ರಿಂದ 50 ಅಡಿಗಳ ದೂರದವರೆಗೆ ಮೃತದೇಹವನ್ನು ಕೊಂಡಯ್ಯಲಾಗಿತ್ತು.
ಆತ್ಮಹತ್ಯೆಗೆ ಶರಣಾದಂತ ನವೀನ್ ಕುಮಾರ್ ಅರೋರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸ್ಥಳಕ್ಕೆ ಬಂದಂತ ಕೋಣನಕುಂಟೆ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಸಿದ್ಧರಾಮಯ್ಯ ತೇಜೋವಧೆ ಮಾಡೋದಕ್ಕೆ ಬಿಜೆಪಿ ಇಳಿದಿದೆ, ಅದು ಎಂದೂ ಸಾಧ್ಯವಿಲ್ಲ: ಎಲ್.ಹನುಮಂತಯ್ಯ
ವೀರಶೈವ, ಲಿಂಗಾಯತ ಸಮುದಾಯದವರಿಗೆ ಗುಡ್ ನ್ಯೂಸ್: ಈ ಯೋಜನೆಗಳಿಗೆ ಅರ್ಜಿ ಆಹ್ವಾನ