ಮೈಸೂರು: ಆಪರೇಷನ್ ನಾರ್ಕೋಸ್ ಆಧೀನದಲ್ಲಿ ಮೈಸೂರು ವಿಭಾಗದ ರೈಲ್ವೆ ರಕ್ಷಣಾ ಪಡೆ 2025ರ ಜೂನ್ 14ರಂದು ಮಾದಕ ವಸ್ತುವನ್ನು ಜಪ್ತಿ ಮಾಡಿದ್ದಾರೆ.
ಸ್ಯಾಮ್ ಪ್ರಕಾಶ್ ಜೆ.ಆರ್, ಹಿರಿಯ ವಿಭಾಗೀಯ ಭದ್ರತಾ ಆಯುಕ್ತರು/ಆರ್ಪಿಎಫ್/ಮೈಸೂರು ಅವರ ನಿರ್ದೇಶನದಂತೆ, ವಿಶೇಷ ತಂಡವು ರೈಲು ಸಂಖ್ಯೆ 18111 ಟಾಟಾನಗರ – ಯಶವಂತಪುರ ಎಕ್ಸ್ಪ್ರೆಸ್ನ ಬಿರೂರು – ಕಡೂರು ಮಾರ್ಗದಲ್ಲಿ ಬೋಗಿ ಸಂಖ್ಯೆ. S5 ರಲ್ಲಿ ತಪಾಸಣೆ ನಡೆಸಿದರು.
ಈ ತಂಡದಲ್ಲಿ ಅನಂದ ಬಿ, ಸಹಾಯಕ ಉಪನಿರೀಕ್ಷಕ/ಸಿಬಿಐ/ಮೈಸೂರು, ಶಿವನಂದ ಟಿ, ಮುಖ್ಯ ಕಾನ್ಸ್ಟೇಬಲ್/ದಾವಣಗೆರೆ, ಮುಜಮ್ಮಿಲ್ ಖಾನ್, ಕಾನ್ಸ್ಟೇಬಲ್/ಮೈಸೂರು, ಮತ್ತು ಜಿ. ಶಿವಮೂರ್ತಿ, ಸಹಾಯಕ ಉಪನಿರೀಕ್ಷಕ/ಆರ್ಪಿಎಫ್/ಅರಸೀಕೆರೆಯವರು ಸೇರಿದ್ದರು. ಈ ಸಂಯುಕ್ತ ಕಾರ್ಯಾಚರಣೆಯ ಫಲವಾಗಿ ಗಾಂಜಾ ವಶಪಡಿಸುವಲ್ಲಿ ಯಶಸ್ವಿಯಾದರು.
ಪರಿಶೀಲನೆ ವೇಳೆ ಮಹೇಂದ್ರ ದಾಸ್ (ವಯಸ್ಸು 57), ಧನು ರವಿ ದಾಸ್ ಅವರ ಪುತ್ರ, ಬಿಹಾರದ ಜಮುಯ್ ಜಿಲ್ಲೆಯ ಸೋನಾ ಗ್ರಾಮದ ನಿವಾಸಿಯಾಗಿರುವ ಹಾಗೂ ಈ ರೈಲಿನಲ್ಲಿ ನಲ್ಲಿ ಬೆಡ್ರೋಲ್ ಸಿಬ್ಬಂದಿಯಾಗಿ ಕೆಲಸಮಾಡುತ್ತಿದ್ದ ವ್ಯಕ್ತಿಯು 5.050 ಕೆಜಿ ಗಾಂಜಾ ಹೊಂದಿರುವ ಚೀಲವನ್ನು ಕೈಯಲ್ಲಿ ಇಟ್ಟುಕೊಂಡಿರುವುದು ಪತ್ತೆಯಾಯಿತು.
ಈ ಮಾದಕ ವಸ್ತುವನ್ನು ಸಂಜೆ 4:00 ಗಂಟೆಗೆ ಕಡೂರು ರೈಲು ನಿಲ್ದಾಣದಲ್ಲಿ ವಶಪಡಿಸಲಾಗಿದ್ದು, ಈ ಪ್ರಕರಣವನ್ನು ಅಬಕಾರಿ ಇಲಾಖೆಗೆ ಹಸ್ತಾಂತರಿಸಲಾಯಿತು. ಅಬಕಾರಿ ಇಲಾಖೆಯ ಇನ್ಸ್ಪೆಕ್ಟರ್ ಶ್ರೀ ಸಂದೀಪ್ ಎಲ್.ಸಿ, ಕಡೂರು ಅವರು ಜಪ್ತಿ ಮಾಡಿದರು.
ವಶಪಡಿಸಿದ ವಸ್ತುಗಳು ಗಾಂಜಾ 5.050 ಕೆಜಿ ₹3,03,000, ಮತ್ತು ಒಂದು ಸ್ಯಾಮ್ಸಂಗ್ ಮೊಬೈಲ್ ₹7,000, ಒಟ್ಟು ಮೌಲ್ಯ: ₹3,10,000
ಜಪ್ತಿ ವೇಳೆ ಫೋಟೋಗ್ರಾಫಿಕ್ ದಾಖಲೆಗಳನ್ನು ಸಿದ್ಧಪಡಿಸಲಾಯಿತು. ಅಬಕಾರಿ ಇಲಾಖೆ ಈ ಪ್ರಕರಣವನ್ನು ಎನ್ಡಿಪಿಎಸ್ ಕಾಯ್ದೆ, 1985ರ ಸೆಕ್ಷನ್ 8(c) ಮತ್ತು 20(b)(ii)(B) ಅಡಿಯಲ್ಲಿ FIR No. 47/2024-25 ನ್ನು ದಾಖಲಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಈ ಯಶಸ್ವಿ ಕಾರ್ಯಾಚರಣೆ ಮೂಲಕ ರೈಲ್ವೆ ರಕ್ಷಣಾ ಪಡೆ ನಿಷಿದ್ಧ ಮಾದಕ ವಸ್ತು ಸಾಗಣೆಯ ವಿರುದ್ಧದ ತನ್ನ ಬದ್ಧತೆಯನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದು, ಸಾರ್ವಜನಿಕ ಸುರಕ್ಷತೆ ಹಾಗೂ ಭಾರತೀಯ ರೈಲ್ವೆಯ ಸಮಗ್ರತೆಯನ್ನು ಕಾಯ್ದುಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂಬುದಾಗಿ ಮೈಸೂರು ವಿಭಾಗದ ಹಿರಿಯ ಕಾನೂನು ಅಧಿಕಾರಿ ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ ಎಸ್ ಶ್ರೀಧರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.