Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಬ್ರಿಟಿಷ್ ಎಫ್ -35 ಫೈಟರ್ ಜೆಟ್ ತಿರುವನಂತಪುರದಲ್ಲಿ ತುರ್ತು ಭೂಸ್ಪರ್ಶ | British F-35 Fighter Jet

15/06/2025 11:25 AM

BREAKING : 60 ವರ್ಷದ ವೃದ್ದೆ ಮೇಲೆ ಅತ್ಯಾಚಾರ : ಬಂಧಿಸುವ ವೇಳೆ ಆರೋಪಿ ಕಾಲಿಗೆ ಪೊಲೀಸರಿಂದ ಗುಂಡೇಟು!

15/06/2025 11:24 AM

ಮೈಸೂರು ವಿಭಾಗದ ರೈಲ್ವೆ ರಕ್ಷಣಾ ಪಡೆಯಿಂದ ಭರ್ಜರಿ ಕಾರ್ಯಾಚರಣೆ: 5.050 ಕೆಜಿ ಗಾಂಜಾ ಜಪ್ತಿ

15/06/2025 11:21 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮೈಸೂರು ವಿಭಾಗದ ರೈಲ್ವೆ ರಕ್ಷಣಾ ಪಡೆಯಿಂದ ಭರ್ಜರಿ ಕಾರ್ಯಾಚರಣೆ: 5.050 ಕೆಜಿ ಗಾಂಜಾ ಜಪ್ತಿ
KARNATAKA

ಮೈಸೂರು ವಿಭಾಗದ ರೈಲ್ವೆ ರಕ್ಷಣಾ ಪಡೆಯಿಂದ ಭರ್ಜರಿ ಕಾರ್ಯಾಚರಣೆ: 5.050 ಕೆಜಿ ಗಾಂಜಾ ಜಪ್ತಿ

By kannadanewsnow0915/06/2025 11:21 AM

ಮೈಸೂರು: ಆಪರೇಷನ್ ನಾರ್ಕೋಸ್‌ ಆಧೀನದಲ್ಲಿ ಮೈಸೂರು ವಿಭಾಗದ ರೈಲ್ವೆ ರಕ್ಷಣಾ ಪಡೆ 2025ರ ಜೂನ್ 14ರಂದು ಮಾದಕ ವಸ್ತುವನ್ನು ಜಪ್ತಿ ಮಾಡಿದ್ದಾರೆ.

ಸ್ಯಾಮ್ ಪ್ರಕಾಶ್ ಜೆ.ಆರ್, ಹಿರಿಯ ವಿಭಾಗೀಯ ಭದ್ರತಾ ಆಯುಕ್ತರು/ಆರ್‌ಪಿಎಫ್/ಮೈಸೂರು ಅವರ ನಿರ್ದೇಶನದಂತೆ, ವಿಶೇಷ ತಂಡವು ರೈಲು ಸಂಖ್ಯೆ 18111 ಟಾಟಾನಗರ – ಯಶವಂತಪುರ ಎಕ್ಸ್‌ಪ್ರೆಸ್‌ನ ಬಿರೂರು – ಕಡೂರು ಮಾರ್ಗದಲ್ಲಿ ಬೋಗಿ ಸಂಖ್ಯೆ. S5 ರಲ್ಲಿ ತಪಾಸಣೆ ನಡೆಸಿದರು.

ಈ ತಂಡದಲ್ಲಿ ಅನಂದ ಬಿ, ಸಹಾಯಕ ಉಪನಿರೀಕ್ಷಕ/ಸಿಬಿಐ/ಮೈಸೂರು, ಶಿವನಂದ ಟಿ, ಮುಖ್ಯ ಕಾನ್ಸ್ಟೇಬಲ್/ದಾವಣಗೆರೆ, ಮುಜಮ್ಮಿಲ್ ಖಾನ್, ಕಾನ್ಸ್ಟೇಬಲ್/ಮೈಸೂರು, ಮತ್ತು ಜಿ. ಶಿವಮೂರ್ತಿ, ಸಹಾಯಕ ಉಪನಿರೀಕ್ಷಕ/ಆರ್‌ಪಿಎಫ್/ಅರಸೀಕೆರೆಯವರು ಸೇರಿದ್ದರು. ಈ ಸಂಯುಕ್ತ ಕಾರ್ಯಾಚರಣೆಯ ಫಲವಾಗಿ ಗಾಂಜಾ ವಶಪಡಿಸುವಲ್ಲಿ ಯಶಸ್ವಿಯಾದರು.

ಪರಿಶೀಲನೆ ವೇಳೆ ಮಹೇಂದ್ರ ದಾಸ್ (ವಯಸ್ಸು 57), ಧನು ರವಿ ದಾಸ್ ಅವರ ಪುತ್ರ, ಬಿಹಾರದ ಜಮುಯ್ ಜಿಲ್ಲೆಯ ಸೋನಾ ಗ್ರಾಮದ ನಿವಾಸಿಯಾಗಿರುವ ಹಾಗೂ ಈ ರೈಲಿನಲ್ಲಿ ನಲ್ಲಿ ಬೆಡ್‌ರೋಲ್ ಸಿಬ್ಬಂದಿಯಾಗಿ ಕೆಲಸಮಾಡುತ್ತಿದ್ದ ವ್ಯಕ್ತಿಯು 5.050 ಕೆಜಿ ಗಾಂಜಾ ಹೊಂದಿರುವ ಚೀಲವನ್ನು ಕೈಯಲ್ಲಿ ಇಟ್ಟುಕೊಂಡಿರುವುದು ಪತ್ತೆಯಾಯಿತು.

ಈ ಮಾದಕ ವಸ್ತುವನ್ನು ಸಂಜೆ 4:00 ಗಂಟೆಗೆ ಕಡೂರು ರೈಲು ನಿಲ್ದಾಣದಲ್ಲಿ ವಶಪಡಿಸಲಾಗಿದ್ದು, ಈ ಪ್ರಕರಣವನ್ನು ಅಬಕಾರಿ ಇಲಾಖೆಗೆ ಹಸ್ತಾಂತರಿಸಲಾಯಿತು. ಅಬಕಾರಿ ಇಲಾಖೆಯ ಇನ್ಸ್ಪೆಕ್ಟರ್ ಶ್ರೀ ಸಂದೀಪ್ ಎಲ್.ಸಿ, ಕಡೂರು ಅವರು ಜಪ್ತಿ ಮಾಡಿದರು.

ವಶಪಡಿಸಿದ ವಸ್ತುಗಳು ಗಾಂಜಾ 5.050 ಕೆಜಿ ₹3,03,000, ಮತ್ತು ಒಂದು ಸ್ಯಾಮ್ಸಂಗ್ ಮೊಬೈಲ್ ₹7,000, ಒಟ್ಟು ಮೌಲ್ಯ: ₹3,10,000

ಜಪ್ತಿ ವೇಳೆ ಫೋಟೋಗ್ರಾಫಿಕ್ ದಾಖಲೆಗಳನ್ನು ಸಿದ್ಧಪಡಿಸಲಾಯಿತು. ಅಬಕಾರಿ ಇಲಾಖೆ ಈ ಪ್ರಕರಣವನ್ನು ಎನ್‌ಡಿಪಿಎಸ್ ಕಾಯ್ದೆ, 1985ರ ಸೆಕ್ಷನ್ 8(c) ಮತ್ತು 20(b)(ii)(B) ಅಡಿಯಲ್ಲಿ FIR No. 47/2024-25 ನ್ನು ದಾಖಲಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಈ ಯಶಸ್ವಿ ಕಾರ್ಯಾಚರಣೆ ಮೂಲಕ ರೈಲ್ವೆ ರಕ್ಷಣಾ ಪಡೆ ನಿಷಿದ್ಧ ಮಾದಕ ವಸ್ತು ಸಾಗಣೆಯ ವಿರುದ್ಧದ ತನ್ನ ಬದ್ಧತೆಯನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದು, ಸಾರ್ವಜನಿಕ ಸುರಕ್ಷತೆ ಹಾಗೂ ಭಾರತೀಯ ರೈಲ್ವೆಯ ಸಮಗ್ರತೆಯನ್ನು ಕಾಯ್ದುಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂಬುದಾಗಿ ಮೈಸೂರು ವಿಭಾಗದ ಹಿರಿಯ ಕಾನೂನು ಅಧಿಕಾರಿ ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ ಎಸ್ ಶ್ರೀಧರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share. Facebook Twitter LinkedIn WhatsApp Email

Related Posts

BREAKING : 60 ವರ್ಷದ ವೃದ್ದೆ ಮೇಲೆ ಅತ್ಯಾಚಾರ : ಬಂಧಿಸುವ ವೇಳೆ ಆರೋಪಿ ಕಾಲಿಗೆ ಪೊಲೀಸರಿಂದ ಗುಂಡೇಟು!

15/06/2025 11:24 AM1 Min Read

BIG NEWS : ರಾಜ್ಯದಲ್ಲಿ ‘ದಲಿತ ಸಿಎಂ’ ಕೂಗು ವಿಚಾರ : ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದೇನು?

15/06/2025 11:19 AM1 Min Read

ಇಡುಗುಂಜಿ ಗಣಪತಿಗೆ ಈ ರೀತಿಯಾದ ಒಂದು ಸಣ್ಣ ಹರಕೆ ಹೇಳಿ ನಿಮ್ಮ ಎಲ್ಲ ಕಷ್ಟಗಳು ದೂರ

15/06/2025 10:40 AM2 Mins Read
Recent News

BREAKING: ಬ್ರಿಟಿಷ್ ಎಫ್ -35 ಫೈಟರ್ ಜೆಟ್ ತಿರುವನಂತಪುರದಲ್ಲಿ ತುರ್ತು ಭೂಸ್ಪರ್ಶ | British F-35 Fighter Jet

15/06/2025 11:25 AM

BREAKING : 60 ವರ್ಷದ ವೃದ್ದೆ ಮೇಲೆ ಅತ್ಯಾಚಾರ : ಬಂಧಿಸುವ ವೇಳೆ ಆರೋಪಿ ಕಾಲಿಗೆ ಪೊಲೀಸರಿಂದ ಗುಂಡೇಟು!

15/06/2025 11:24 AM

ಮೈಸೂರು ವಿಭಾಗದ ರೈಲ್ವೆ ರಕ್ಷಣಾ ಪಡೆಯಿಂದ ಭರ್ಜರಿ ಕಾರ್ಯಾಚರಣೆ: 5.050 ಕೆಜಿ ಗಾಂಜಾ ಜಪ್ತಿ

15/06/2025 11:21 AM

BIG NEWS : ರಾಜ್ಯದಲ್ಲಿ ‘ದಲಿತ ಸಿಎಂ’ ಕೂಗು ವಿಚಾರ : ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದೇನು?

15/06/2025 11:19 AM
State News
KARNATAKA

BREAKING : 60 ವರ್ಷದ ವೃದ್ದೆ ಮೇಲೆ ಅತ್ಯಾಚಾರ : ಬಂಧಿಸುವ ವೇಳೆ ಆರೋಪಿ ಕಾಲಿಗೆ ಪೊಲೀಸರಿಂದ ಗುಂಡೇಟು!

By kannadanewsnow0515/06/2025 11:24 AM KARNATAKA 1 Min Read

ಉತ್ತರಕನ್ನಡ : ವೃದ್ಧೆಯೊಬ್ಬರ ಅತ್ಯಾಚಾರ ಮಾಡಿ, ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ನಗರಠಾಣೆ ಪೋಲಿಸರು ಶನಿವಾರ ಬಂಧಿಸಿದ್ದಾರೆ. ಬಂಧಿಸುವ ಸಮಯದಲ್ಲಿ ಆರೋಪಿ…

ಮೈಸೂರು ವಿಭಾಗದ ರೈಲ್ವೆ ರಕ್ಷಣಾ ಪಡೆಯಿಂದ ಭರ್ಜರಿ ಕಾರ್ಯಾಚರಣೆ: 5.050 ಕೆಜಿ ಗಾಂಜಾ ಜಪ್ತಿ

15/06/2025 11:21 AM

BIG NEWS : ರಾಜ್ಯದಲ್ಲಿ ‘ದಲಿತ ಸಿಎಂ’ ಕೂಗು ವಿಚಾರ : ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದೇನು?

15/06/2025 11:19 AM

ಇಡುಗುಂಜಿ ಗಣಪತಿಗೆ ಈ ರೀತಿಯಾದ ಒಂದು ಸಣ್ಣ ಹರಕೆ ಹೇಳಿ ನಿಮ್ಮ ಎಲ್ಲ ಕಷ್ಟಗಳು ದೂರ

15/06/2025 10:40 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.