ಹುಬ್ಬಳ್ಳಿ: ಮಕ್ಕಳ ಆಹಾರ ಸಂಗ್ರಹ ಮಾಡಿದ್ದಂತ ಆರೋಪದಲ್ಲಿ ಪ್ರಮುಖ ಆರೋಪಿಯಾಗಿದ್ದಂತ ಬತುಲ್ ಕಿಲ್ಲೇದಾರ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತುಗೊಳಿಸಿ ಆದೇಶಿಸಲಾಗಿದೆ.
2021ರ ಹುಬ್ಬಳ್ಳಿ-ಧಾರವಾಡ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಬತುಲ್ ಸ್ಪರ್ಧಿಸಿದ್ದರು. ಇದೇ ಬತುಲ್ ಪತಿ ಫಾರೂಕ್ ಮಕ್ಕಳ ಆಹಾರವನ್ನು ಅಕ್ರಮವಾಗಿ ತನ್ನ ಗೋದಾಮಿನಲ್ಲಿ ಸಂಗ್ರಹಿಸಿದ್ದರು. ಅಧಿಕಾರಿಗಳು ದಾಳಿ ನಡೆಸಿದಂತ ವೇಳೆಯಲ್ಲಿ ಅಕ್ರಮವಾಗಿ ಮಕ್ಕಳ ಆಹಾರ ಸಂಗ್ರಹ ಮಾಡಿದ್ದು ಬೆಳಕಿಗೆ ಬಂದಿತ್ತು.
ಕಳೆದ ವಾರ ನಡೆದಿದ್ದಂತ ರೈಡ್ ನ ಬಳಿಕ ಹುಬ್ಬಳ್ಳಿಯಿಂದ ಕಾಂಗ್ರೆಸ್ ನಾಯಕಿ ಬತುಲ್ ಪರಾರಿಯಾಗಿದ್ದರು. ಬತುಲ್ ಪತಿ ಫಾರೂಕ್ ಸೇರಿದಂತೆ ಮೂವರ ವಿರುದ್ಧ ಕೇಸ್ ದಾಖಲಾಗಿತ್ತು.
ಇದೀಗ ಮಕ್ಕಳ ಆಹಾರವನ್ನು ಅಕ್ರಮವಾಗಿ ಸಂಗ್ರಹಿಸಿದ್ದಂತ ಆರೋಪದ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಅಮಾನತುಗೊಳಿಸಿ ಹುಬ್ಬಳ್ಳಿ ಧಾರವಾಡ ಕಾಂಗ್ರೆಸ್ ಅಧ್ಯಕ್ಷ ಅಲ್ತಫ್ ಹಳ್ಳೂರು ಆದೇಶ ಹೊರಡಿಸಿದ್ದಾರೆ.
ಬೆಂಗಳೂರನ್ನು ಒಡೆಯುವ ಕೆಲಸಕ್ಕೆ ಕೈ ಹಾಕಿರುವುದು ಖಂಡಿತ ಸರಿಯಲ್ಲ: ಬಿವೈ ವಿಜಯೇಂದ್ರ
ಶಿವಮೊಗ್ಗದ ಪ್ರಯಾಣಿಕರ ಗಮನಕ್ಕೆ: ಅರಸಾಳು-ಕುಂಸಿಯಲ್ಲಿ ರೈಲುಗಳ ತಾತ್ಕಾಲಿಕ ನಿಲುಗಡೆ ಮುಂದುವರಿಕೆ