ಬೆಂಗಳೂರು : ಐಟಿ-ಬಿಟಿ ಇಲಾಖೆ, ಕಿಯೋನಿಕ್ ಸಹಯೋಗದಲ್ಲಿ ಕರ್ನಾಟಕದ ಸ್ಟಾರ್ಟಪ್ಗಳು ನಿರ್ಮಿಸಿರುವ ಕೃತಕ ಬುದ್ದಿಮತ್ತೆ ಆಧಾರಿತ ‘ಕಿಯೋ’ (ಕೆಇಒ) ಹೆಸರಿನ ಕಂಪ್ಯೂಟರ್ಅನ್ನು ಸಿಎಂ ಸಿದ್ದರಾಮಯ್ಯ ಇಂದು ಬೆಂಗಳೂರು ಟೆಕ್ ಸಮ್ಮಿಟ್-2025ರ ಉದ್ಘಾಟನಾ ಸಮಾರಂಭದಲ್ಲಿ ಬಿಡುಗಡೆ ಮಾಡಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಈ ಮಾಹಿತಿ ಹಂಚಿಕೊಂಡರು. ಇದು ಕರ್ನಾಟಕದಲ್ಲಿ ಸಂಪೂರ್ಣವಾಗಿ ವಿನ್ಯಾಸಗೊಳಿಸಲಾದ ಮತ್ತು ಅಭಿವೃದ್ಧಿಪಡಿಸಲಾದ ಈ ಮಾದರಿಯ ಮೊದಲ AI ವೈಯಕ್ತಿಕ ಕಂಪ್ಯೂಟರ್. ಇದು ಚಿಕ್ಕ ಮತ್ತು ಚೊಕ್ಕದಾದ, ಕೈಗೆಟುಕುವ ದರದ ಮತ್ತು AI-ಚಾಲಿತ ಮಾಸ್-ಕಂಪ್ಯೂಟಿಂಗ್ ವ್ಯವಸ್ಥೆಯಾಗಿದ್ದು, ಇದು ಯಾರು ಬೇಕಾದರೂ ಬಳಸಬಹುದಾದ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ. ಓಪನ್-ಸೋರ್ಸ್ RISC-V ಪ್ರೊಸೆಸರ್ನಲ್ಲಿ ನಿರ್ಮಿಸಲಾಗಿದೆ ಹಾಗೂ ಪಠ್ಯಕ್ರಮ-ಸಂಯೋಜಿತ ಕಲಿಕೆಯ ಬೆಂಬಲಕ್ಕಾಗಿ ಆನ್-ಡಿವೈಸ್ AI ಎಂಜಿನ್ – BUDDH ಸೇರಿದಂತೆ ಸಂಪೂರ್ಣ ಕಂಪ್ಯೂಟಿಂಗ್ ವೈಶಿಷ್ಟ್ಯಗಳೊಂದಿಗೆ ಒಳಗೊಂಡಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕದಲ್ಲಿ 15% ಕ್ಕಿಂತ ಕಡಿಮೆ ಕುಟುಂಬಗಳು ವೈಯಕ್ತಿಕ ಕಂಪ್ಯೂಟರ್ ಅನ್ನು ಹೊಂದಿವೆ. ಸಾಧನಗಳ ಕೊರತೆಯಿಂದಾಗಿ 60% ಕ್ಕಿಂತ ಅಧಿಕ ವಿದ್ಯಾರ್ಥಿಗಳು ಆನ್ಲೈನ್ ಕಲಿಕೆಯನ್ನು ಪ್ರವೇಶಿಸಲಾಗದೆ ಪರದಾಡುತ್ತಿದ್ದಾರೆ ಮತ್ತು ಸುಮಾರು 45% ಶಾಲೆಗಳು ಮಾತ್ರ ಕಂಪ್ಯೂಟರ್ಗಳನ್ನು ಹೊಂದಿವೆ ಎಂದು ಹೇಳಿದ್ದಾರೆ.
ಪ್ರತಿ ಮನೆ ಮತ್ತು ತರಗತಿಯನ್ನು ತಲುಪಬಹುದಾದ ಅಗ್ಗದ, ಸಾಂದ್ರೀಕೃತ ಹಾಗೂ AI-ಚಾಲಿತ ಮಾಸ್ ಕಂಪ್ಯೂಟಿಂಗ್ ಈಗ ಕಲಿಕೆ, ಕೌಶಲ್ಯ ಮತ್ತು ಆರ್ಥಿಕ ಭಾಗವಹಿಸುವಿಕೆಗೆ ಅವಶ್ಯಕವಾಗಿದೆ.
ಕರ್ನಾಟಕವು ಸಾರ್ವಭೌಮ, ಸ್ವದೇಶಿ ತಂತ್ರಜ್ಞಾನವನ್ನು ದೊಡ್ಡ ಪ್ರಮಾಣದಲ್ಲಿ ಹೇಗೆ ನಿರ್ಮಿಸುತ್ತಿದೆ ಎಂಬುದನ್ನು KEO ತೋರಿಸಿದೆ. ಇದು ಶಕ್ತಿಯುತ ಕಂಪ್ಯೂಟಿಂಗ್ ಅನ್ನು ತಳಮಟ್ಟಕ್ಕೆ ಕೊಂಡೊಯ್ಯುವ ಮತ್ತು ಪ್ರತಿಯೊಬ್ಬರು ಕಲಿಯುವ ಹಾಗೂ ಪ್ರತಿಯೊಬ್ಬ ನಾಗರಿಕರು ಡಿಜಿಟಲ್ ಆರ್ಥಿಕತೆಯಲ್ಲಿ ಸಂಪೂರ್ಣವಾಗಿ ಭಾಗವಹಿಸಬಹುದಾದ ಭವಿಷ್ಯವನ್ನು ಸೃಷ್ಟಿಸುವತ್ತ ನಮ್ಮ ಹೆಜ್ಜೆಯಾಗಿದೆ.








