ಚಿಕ್ಕಬಳ್ಳಾಪುರ: ಆತನಿಗೆ ಮದುವೆಯಾಗಿ ಮಕ್ಕಳಿದ್ದರೂ ಮತ್ತೊಬ್ಬ ಯುವತಿಯೊಂದಿಗೆ ಲವ್ವಿಡವ್ವಿ. ಜೊತೆಗೆ ಆಕೆಯನ್ನು ಗರ್ಭಿಣಿ ಮಾಡಿದ್ದನು. ಅಲ್ಲದೇ ಕದ್ದುಮುಚ್ಚಿ ಸಂಸಾರ ನಡೆಸುತ್ತಿದ್ದನು. ಈ ವಿಷಯ ಎರಡು ಕಡೆಯ ಮನೆಯವರಿಗೆ ಗೊತ್ತಿಗಿತ್ತು. ಹೀಗಾಗಿ ಇಬ್ಬರು ಮನೆ, ಊರು ಬಿಟ್ಟು ಹೋಗಿದ್ದರು. ಮನೆ, ಊರು ಬಿಟ್ಟೋದಂತ ಅವರಿಗೆ ಇರೋದಕ್ಕೆ ನೆಲೆ ಇಲ್ಲದೇ, ಬಾಡಿಗೆ ಮನೆಯಲ್ಲಿ ಸಂಸಾರ ಸಾಗಿಸುತ್ತಿದ್ದರು. ಆದರೇ ಕುಟುಂಬ ನಿರ್ವಣೆಗಾಗಿ ಆ ಪ್ರೇಮಿಗಳು ಇಳಿದಿದ್ದು ಮಾತ್ರ ಸರಗಳ್ಳತನ.
ಹೌದು ಹೀಗೆ ಸರಗಳ್ಳತನಕ್ಕೆ ಇಳಿದಿದ್ದಂತ ಇಬ್ಬರು ಪ್ರೇಮಿಗಳನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿ ಬಿದನೂರು ತಾಲ್ಲೂಕಿನ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮುದುಗೆರೆ ಗ್ರಾಮದ ಅಶ್ವಿನಿ ಹಾಗೂ ಗೋವಿಂದರಾಜು ಎಂಬುದಾಗಿ ತಿಳಿದು ಬಂದಿದೆ.
ಮನೆ ಮಾಡೋದಕ್ಕೆ ಹಣ ವಿಲ್ಲದೇ ಬೈಕ್ ಕದ್ದಿದ್ದಂತ ಗೋವಿಂದರಾಜು, ಅದೇ ಬೈಕಿನಲ್ಲಿ ಸರಗಳ್ಳತನಕ್ಕೆ ಇಳಿದಿದ್ದನು. ಸಿಸಿಟಿವಿಗಳಲ್ಲಿ ದಾಖಲಾಗಿದ್ದಂತ ದೃಶ್ಯ ಆಧರಿಸಿ ಅಶ್ವಿನಿ, ಗೋವಿಂದರಾಜು ಬಂಧಿಸಿದ್ದಾರೆ. ಬಂಧನದ ನಂತ್ರ ವಿಚಾರಣೆ ವೇಳೆಯಲ್ಲಿ ಸತ್ಯ ಬಾಯಿಬಿಟ್ಟಿದ್ದಾರೆ.
ಉಕ್ರೇನ್ ಮೇಲೆ ರಷ್ಯಾದಿಂದ ದೊಡ್ಡ ಪ್ರಮಾಣದಲ್ಲಿ ಡ್ರೋನ್ ದಾಳಿ: ಭಯಾನಕ ವೀಡಿಯೋ ನೋಡಿ
ಗ್ರಾಮೀಣ ಜನತೆಗೆ ಗುಡ್ ನ್ಯೂಸ್ : ಈ ಯೋಜನೆಯಡಿ ಸಿಗಲಿದೆ 2 ಲಕ್ಷ ರೂ. ಸಬ್ಸಿಡಿ ಸಾಲ.!