Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS: ರಾಜ್ಯದಲ್ಲಿ 50 ವರ್ಷಗಳ ಹಳೆಯ ಎಲ್ಲಾ ಜಲಾಶಯಗಳ ಗೇಟ್‌ ಬದಲಾವಣೆ ನಿರ್ಧಾರ: ಡಿ.ಕೆ ಶಿವಕುಮಾರ್ ಘೋಷಣೆ

12/03/2026 4:46 PM

ಲವ್ ಜಿಹಾದ್ ಅಲ್ಲ, ಹಿಂದೂ ಸಂಪ್ರದಾಯದಂತೆ ಮದುವೆ: ಕುಂಭಮೇಳದ ‘ವೈರಲ್ ಬೆಡಗಿ’ ಮೊನಾಲಿಸಾ ಸ್ಪಷ್ಟನೆ

12/03/2026 4:42 PM

BREAKING : ಫೆಬ್ರವರಿಯಲ್ಲಿ ಹಣದುಬ್ಬರ 3.21%ಕ್ಕೆ ಏರಿಕೆ ; ಅಮೂಲ್ಯ ಲೋಹವು ಜಿಗಿತ!

12/03/2026 4:41 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಲವ್ ಜಿಹಾದ್ ಅಲ್ಲ, ಹಿಂದೂ ಸಂಪ್ರದಾಯದಂತೆ ಮದುವೆ: ಕುಂಭಮೇಳದ ‘ವೈರಲ್ ಬೆಡಗಿ’ ಮೊನಾಲಿಸಾ ಸ್ಪಷ್ಟನೆ
INDIA

ಲವ್ ಜಿಹಾದ್ ಅಲ್ಲ, ಹಿಂದೂ ಸಂಪ್ರದಾಯದಂತೆ ಮದುವೆ: ಕುಂಭಮೇಳದ ‘ವೈರಲ್ ಬೆಡಗಿ’ ಮೊನಾಲಿಸಾ ಸ್ಪಷ್ಟನೆ

By kannadanewsnow0912/03/2026 4:42 PM

ತಿರುವನಂತಪುರಂ: 2025ರ ಮಹಾಕುಂಭ ಮೇಳದಲ್ಲಿ ಸರಮಾಲೆ ಮಾರುವ ಮೂಲಕ ರಾತ್ರೋರಾತ್ರಿ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿದ್ದ ಮಧ್ಯಪ್ರದೇಶದ ಬೆಡಗಿ ಮೊನಾಲಿಸಾ, ಇದೀಗ ಮಹಾರಾಷ್ಟ್ರ ಮೂಲದ ಫರ್ಮಾನ್ ಖಾನ್ ಎಂಬ ಯುವಕನ ಕೈ ಹಿಡಿಯುವ ಮೂಲಕ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ಪೋಷಕರ ವಿರೋಧದ ನಡುವೆಯೂ ಕೇರಳಕ್ಕೆ ತೆರಳಿ ಮದುವೆಯಾಗಿರುವ ಈ ಜೋಡಿಯ ನಡೆ ಈಗ ದೇಶಾದ್ಯಂತ ‘ಲವ್ ಜಿಹಾದ್’ ಚರ್ಚೆಗೆ ಕಾರಣವಾಗಿದೆ.

ದೇವಸ್ಥಾನದಲ್ಲೇ ನಡೆದ ವಿವಾಹ ಮಹೋತ್ಸವ

ಮಧ್ಯಪ್ರದೇಶದ ಮೊನಾಲಿಸಾ ಹಾಗೂ ಮಹಾರಾಷ್ಟ್ರದ ಫರ್ಮಾನ್ ಖಾನ್ ಮಾರ್ಚ್ 11 ರಂದು ಕೇರಳದ ಅರ್ಮನೂರ್ ಶ್ರೀ ನೈನಾರ್ ದೇವಾ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ 6 ತಿಂಗಳಿನಿಂದ ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿದ್ದ ಈ ಜೋಡಿ, ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದ್ದರು ಎನ್ನಲಾಗಿದೆ.

VIDEO | Thiruvananthapuram, Kerala: “I got married according to Hindu rituals. It is not ‘love jihad’. I respect all religions and consider every religion equal,” says Viral Mahakumbh girl Monalisa.

(Full video available on https://t.co/n147TvrpG7) pic.twitter.com/LFNk6GzGMC

— Press Trust of India (@PTI_News) March 12, 2026

‘ಇದು ಲವ್ ಜಿಹಾದ್ ಅಲ್ಲ’ – ಸ್ಪಷ್ಟನೆ ನೀಡಿದ ನಟಿ

ಈ ಮದುವೆಯ ಸುದ್ದಿ ಹರಡುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದು ‘ಲವ್ ಜಿಹಾದ್’ ಸಂಚು ಎಂದು ಹಲವರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ನವಜೋಡಿ ಸ್ಪಷ್ಟನೆ ನೀಡಿದ್ದಾರೆ:

“ನಮ್ಮ ಮದುವೆ ಲವ್ ಜಿಹಾದ್ ಅಲ್ಲ. ನಾವು ಪ್ರೀತಿಸಿ ಮದುವೆಯಾಗಿದ್ದೇವೆ. ಮನೆಯವರು ನನಗೆ ಇಷ್ಟವಿಲ್ಲದ ವ್ಯಕ್ತಿಯ ಜೊತೆ ಮದುವೆ ಮಾಡಲು ಒತ್ತಾಯಿಸುತ್ತಿದ್ದರು. ಆದರೆ ನನಗೆ ಫರ್ಮಾನ್ ಮೇಲೆ ಇಷ್ಟವಿತ್ತು. ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ. ನಮ್ಮ ಪ್ರೀತಿ ಗೆದ್ದಿದೆ,” ಎಂದು ಮೊನಾಲಿಸಾ ಹೇಳಿದ್ದಾರೆ.

ಸರಮಾಲೆ ಮಾರುತ್ತಿದ್ದ ಹುಡುಗಿ ‘ವೈರಲ್ ಸ್ಟಾರ್’ ಆಗಿದ್ದು ಹೇಗೆ?

2025ರ ಮಹಾ ಕುಂಭಮೇಳದ ಸಂದರ್ಭದಲ್ಲಿ ಸರಮಾಲೆ ಮಾರುತ್ತಿದ್ದ ಮೊನಾಲಿಸಾ ಅವರ ವಿಡಿಯೋವನ್ನು ಯೂಟ್ಯೂಬರ್ ಒಬ್ಬರು ಹಂಚಿಕೊಂಡಿದ್ದರು. ಅವರ ಆಕರ್ಷಕ ಕಣ್ಣುಗಳು ಮತ್ತು ಸೌಂದರ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದರು. ಇದರ ಬೆನ್ನಲ್ಲೇ ಸಿನಿಮಾ, ಧಾರಾವಾಹಿ ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಮೊನಾಲಿಸಾ ಬ್ಯುಸಿಯಾಗಿದ್ದರು.

ಪ್ರಸ್ತುತ ಈ ಅಂತರ್ಧರ್ಮೀಯ ವಿವಾಹವು ಪರ-ವಿರೋಧದ ಚರ್ಚೆಗಳಿಗೆ ವೇದಿಕೆ ಮಾಡಿಕೊಟ್ಟಿದ್ದು, ಕೇರಳದ ಈ ಮದುವೆ ಪ್ರಕರಣದ ಮೇಲೆ ಈಗ ಇಡೀ ದೇಶದ ಕಣ್ಣು ನೆಟ್ಟಿದೆ.

ರಾಜ್ಯದ ವಿವಿಧ ಇಲಾಖೆಗಳಲ್ಲಿ 56,432 ಹುದ್ದೆಗಳ ಭರ್ತಿಗೆ ಸರ್ಕಾರ ನಿರ್ಧಾರ

Share. Facebook Twitter LinkedIn WhatsApp Email

Related Posts

BREAKING : ಫೆಬ್ರವರಿಯಲ್ಲಿ ಹಣದುಬ್ಬರ 3.21%ಕ್ಕೆ ಏರಿಕೆ ; ಅಮೂಲ್ಯ ಲೋಹವು ಜಿಗಿತ!

12/03/2026 4:41 PM1 Min Read

ಮತ್ತೆ ಶುರುವಾಯ್ತು ‘ವರ್ಕ್ ಫ್ರಂ ಹೋಮ್’ ; ನೌಕರರಿಗೆ ಮನೆಯಿಂದ್ಲೇ ಕೆಲಸ ಮಾಡುವಂತೆ ‘HCLTech’ ಕಂಪನಿ ಘೋಷಣೆ!

12/03/2026 4:16 PM1 Min Read

ಪೋಷಕರಿಗೆ ಗುಡ್ ನ್ಯೂಸ್ ; 13 ವರ್ಷದೊಳಗಿನ ಮಕ್ಕಳಿಗೆ ‘ಪೋಷಕರ ನಿಯಂತ್ರಣ ಖಾತೆ’ ಪರಿಚಯಸಿದ ‘ವಾಟ್ಸಾಪ್’

12/03/2026 3:45 PM1 Min Read
Recent News

BIG NEWS: ರಾಜ್ಯದಲ್ಲಿ 50 ವರ್ಷಗಳ ಹಳೆಯ ಎಲ್ಲಾ ಜಲಾಶಯಗಳ ಗೇಟ್‌ ಬದಲಾವಣೆ ನಿರ್ಧಾರ: ಡಿ.ಕೆ ಶಿವಕುಮಾರ್ ಘೋಷಣೆ

12/03/2026 4:46 PM

ಲವ್ ಜಿಹಾದ್ ಅಲ್ಲ, ಹಿಂದೂ ಸಂಪ್ರದಾಯದಂತೆ ಮದುವೆ: ಕುಂಭಮೇಳದ ‘ವೈರಲ್ ಬೆಡಗಿ’ ಮೊನಾಲಿಸಾ ಸ್ಪಷ್ಟನೆ

12/03/2026 4:42 PM

BREAKING : ಫೆಬ್ರವರಿಯಲ್ಲಿ ಹಣದುಬ್ಬರ 3.21%ಕ್ಕೆ ಏರಿಕೆ ; ಅಮೂಲ್ಯ ಲೋಹವು ಜಿಗಿತ!

12/03/2026 4:41 PM

ರಾಜ್ಯದ ವಿವಿಧ ಇಲಾಖೆಗಳಲ್ಲಿ 56,432 ಹುದ್ದೆಗಳ ಭರ್ತಿಗೆ ಸರ್ಕಾರ ನಿರ್ಧಾರ

12/03/2026 4:38 PM
State News
KARNATAKA

BIG NEWS: ರಾಜ್ಯದಲ್ಲಿ 50 ವರ್ಷಗಳ ಹಳೆಯ ಎಲ್ಲಾ ಜಲಾಶಯಗಳ ಗೇಟ್‌ ಬದಲಾವಣೆ ನಿರ್ಧಾರ: ಡಿ.ಕೆ ಶಿವಕುಮಾರ್ ಘೋಷಣೆ

By kannadanewsnow0912/03/2026 4:46 PM KARNATAKA 2 Mins Read

ಬೆಂಗಳೂರು : “ತುಂಗಭದ್ರಾ ಅಣೆಕಟ್ಟಿನ ಎಲ್ಲಾ ಕ್ರೆಸ್ಟ್ ಗೇಟ್ ಗಳ ಬದಲಾವಣೆ ಕಾರ್ಯವನ್ನು ನಮ್ಮ ಸರ್ಕಾರ ಆದ್ಯತೆ ಮೇರೆಗೆ ಕೈಗೆತ್ತಿಕೊಂಡಿದ್ದು, ಬರುವ…

ರಾಜ್ಯದ ವಿವಿಧ ಇಲಾಖೆಗಳಲ್ಲಿ 56,432 ಹುದ್ದೆಗಳ ಭರ್ತಿಗೆ ಸರ್ಕಾರ ನಿರ್ಧಾರ

12/03/2026 4:38 PM

GOOD NEWS : ಬೆಂಗಳೂರು ಜನತೆಗೆ ಸಿಹಿಸುದ್ದಿ : ಗೃಹಬಳಕೆ ಸಿಲಿಂಡರ್ ಕೊರತೆ ಇಲ್ಲ : ಜಿಲ್ಲಾಧಿಕಾರಿ ಜಗದೀಶ್ ಸ್ಪಷ್ಟನೆ

12/03/2026 4:26 PM

BREAKING : ರಾಜ್ಯದಲ್ಲಿ ವಾಣಿಜ್ಯ ಸಿಲಿಂಡರ್ ಪೂರೈಕೆಯಲ್ಲಿ ಕಳ್ಳಾಟ? ತನಿಖೆಗೆ ‘CBI’ ಎಂಟ್ರಿ!

12/03/2026 3:45 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.