Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಯುಗಾದಿಯ ಬಳಿಕ ಪ್ರಕೃತಿ ಮುನಿಯುತ್ತೆ! ಭೀಕರ ಭೂಕಂಪ, ಭಾರಿ ಪ್ರವಾಹ ; ಬಾಬಾ ವಂಗಾ ಭಯಾನಕ ಭವಿಷ್ಯ!

04/03/2026 9:52 PM

ಸಿಲಿಂಡರ್’ನಲ್ಲಿ ಎಷ್ಟು ಗ್ಯಾಸ್ ಇದೆಯೆಂದು ತಿಳಿಯೋದು ಈಗ ಸುಲಭ! ಈ 2 ನಿಮಿಷಗಳ ಟ್ರಿಕ್ ಬಳಸಿ

04/03/2026 9:20 PM

ಮಹಿಳೆಗೆ ಕೆಲಸ ಕೊಡಿಸೋದಾಗಿ 3 ಲಕ್ಷ ವಸೂಲಿ ವಂಚನೆ: ಕಾಂಗ್ರೆಸ್‌ನಿಂದ ನಾಜಿಮಾ, ತಿಮ್ಮರಾಜು ಉಚ್ಚಾಟನೆ

04/03/2026 9:01 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸವಿತಾ ಸಮಾಜ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ನಡೆದಿಲ್ಲವೆಂದ ಲೋಕಾಯುಕ್ತ ತನಿಖಾ ವರದಿ
KARNATAKA

ಸವಿತಾ ಸಮಾಜ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ನಡೆದಿಲ್ಲವೆಂದ ಲೋಕಾಯುಕ್ತ ತನಿಖಾ ವರದಿ

By kannadanewsnow0920/01/2026 12:22 PM

ಬೆಂಗಳೂರು : ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮದಲ್ಲಿ ಯಾವುದೇ ಹಣಕಾಸಿನ ಅಕ್ರಮ ನಡೆದಿಲ್ಲ ಎಂಬುದನ್ನು ಸಾಬೀತುಗೊಳಿಸಿರುವ ಲೋಕಾಯುಕ್ತ, ಈ ಪ್ರಕರಣವನ್ನು ಮುಕ್ತಾಯಗೊಳಿಸಿದೆ. ಇದರಿಂದಾಗಿ ಸವಿತಾ ಸಮಾಜ ಅಭಿವೃದ್ಧಿ ನಿಗಮದಲ್ಲಿ ಅವ್ಯವಹಾರ ಆರೋಪ ಎದುರಿಸುತ್ತಿದ್ದ ನಿಗಮದ ಅಧ್ಯಕ್ಷ ನರೇಶ್‌ ಕುಮಾರ್‌ ಅವರಿಗೆ ಬಿಗ್‌ ರಿಲೀಫ್‌ ಸಿಕ್ಕಿದೆ.

ದಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧೀನದಲ್ಲಿರುವ ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮದಲ್ಲಿ 2020-21, 2021-22, 2022-23 ಈ ಅವಧಿಯಲ್ಲಿ “ಸಹಾಯ ಧನ ಯೋಜನೆಯ” ಹೆಸರಿನಲ್ಲಿ ಕೋಟ್ಯಾಂತರ ಹಣ ಅವ್ಯವಹಾರವಾಗಿದೆ. ಫಲಾನುಭವಿಗಳಿಗೆ ಸಿಗಬೇಕಾದ ಸಹಾಯ ಧನ ದುರುಪಯೋಗವಾಗಿದೆ ಎಂದು ಆರೋಪಿಸಿ ದೂರುದಾರರು ಲೋಕಾಯುಕ್ತದಲ್ಲಿ ಪ್ರಕರಣದ ದಾಖಲು ಮಾಡಿದ್ದರು.

ಪ್ರಕರಣವನ್ನು ಸಮಗ್ರ ತನಿಖೆಗೆ ಒಳಪಡಿಸಿದ ಲೋಕಾಯುಕ್ತ, ದೂರಿನಲ್ಲಿ ಯಾವುದೇ ಸತ್ಯಾಂಶವಿಲ್ಲ. ದೂರಿನಲ್ಲಿ ನೀಡಿರುವ ಆರೋಪಗಳಿಗೆ ಯಾವುದೇ ಸಾಕ್ಷಾಧಾರಗಳಿಲ್ಲ. ಸಿಕ್ಕ ಸಾಕ್ಷಿಗಳು ಸಹಾಯ ಧನ ಸಿಕ್ಕಿರುವ ಬಗ್ಗೆ ಖಚಿತ ಮಾಹಿತಿ ನೀಡಿದ್ದು, ಈ ಎಲ್ಲ ವಿಷಯಗಳನ್ನು ಆಧರಿಸಿ ಈ ಪ್ರಕರಣವನ್ನು ಮುಕ್ತಾಯಗೊಳಿಸಿದೆ ಎಂದು ಲೋಕಾಯುಕ್ತ ತಿಳಿಸಿದೆ.

ಆರೋಪವೇನು?

ಸವಿತಾ ಸಮಾಜದವರಿಗಾಗಿ ಮೀಸಲಾಗಿರುವ ವಿವಿಧ ಧನ ಸಹಾಯ ಯೋಜನೆಗಳನ್ನು ಅನರ್ಹರಿಗೆ ಹಾಗೂ ಸುಳ್ಳು ವ್ಯಕ್ತಿಗಳ ಪಟ್ಟಿ ಸೃಷ್ಟಿಸಿ 5 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಲಪಟಾಯಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ಅಕ್ರಮ ಎಸಗಿದವರ ವಿರುದ್ಧ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ದೂರುದಾರರು ಲೋಕಾಯುಕ್ತದಲ್ಲಿ ದೂರು ದಾಖಲು ಮಾಡಿದ್ದರು.

ಸಾಕ್ಷಿಗಳೇ ಇಲ್ಲ

ದೂರು ಸ್ವೀಕರಿಸಿದ ಲೋಕಾಯಕ್ತ ಪ್ರಕರಣವನ್ನು ಸಮಗ್ರ ತನಿಖೆಗೆ ಒಳಪಡಿಸಿತು. ವಿವಿಧ ಯೋಜನೆಗಳಿಗಾಗಿ ಸರಕಾರ ಬಿಡುಗಡೆ ಮಾಡಿದ್ದ 12 ಕೋಟಿ ರೂ .ಲೆಕ್ಕದ ವಿವಿರವನ್ನು ಪಡೆಯಿತು. ಫಲಾನುಭವಿಗಳ ಪಟ್ಟಿ ಪಡೆದು, ನೈಜ್ಯ ಮಾಹಿತಿ ಸಂಗ್ರಹಣೆಗೆ ಮುಂದಾಯಿತು. ಈ ವೇಳೆ ಅರ್ಹ ಫಲಾನುಭವಿಗಳ ಖಾತೆಗೆ ಸಹಾಯ ಧನ ರೂಪದಲ್ಲಿ ಹಣ ಜಮೆಯಾಗಿರುವುದನ್ನು ಫಲಾನುಭವಿಗಳು ಒಪ್ಪಿಕೊಂಡಿದ್ದಾರೆ. ಇನ್ನೂ ಕೆಲವರ ಪೋನ್‌ ವ್ಯಾಪ್ತಿ ಪ್ರದೇಶದಿಂದ ಹೊರಗಿರುವುದಾಗಿ ಲೋಕಾಯುಕ್ತ ವರದಿ ಮಾಡಿದೆ. ಸಹಾಯ ಧನವನ್ನು ಪಟ್ಟಿಯನ್ನು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ 7 ರಿಂದ 8 ಅಧಿಕಾರಿಗಳನ್ನು ಒಳಗೊಂಡ ಜಿಲ್ಲಾ ಮಟ್ಟದ ಆಯ್ಕೆ ಸಮಿತಿ ಮೂಲಕ ಆಯ್ಕೆ ಮಾಡಲಾಗುತ್ತದೆ.

ಇನ್ನೂ ಸಹಾಯ ಧನ ಕೂಡ ನೇರ ನಗದು ವರ್ಗಾವಣೆ(ಡಿಬಿಟಿ) ಮೂಲಕ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಜಮೆಯಾಗಲಿದೆ. ಎಲ್ಲಿಯೂ ಅವ್ಯವಹಾರ ನಡೆದಿರುವುದಕ್ಕೆ ಸಾಕ್ಷಾಧಾರಗಳು ಲಭ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ಯಾವುದೇ ಹಣ ದುರುಪಯೋಗವಾಗದೇ ಇರುವುದನ್ನು ಲೋಕಾಯಕ್ತ ತನಿಖೆಯಲ್ಲಿ ಸಾಬೀತುಗೊಂಡಿದೆ. ಇದನ್ನೇ ದೂರು ದಾರರಿಗೂ ತಿಳಿಸಿದ್ದು, ಅವರಿಂದ ಆಕ್ಷೇಪಣೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ದೂರುದಾರು ಸಲ್ಲಿಸಿದ ಪ್ರತ್ಯುತ್ತರಲ್ಲಿ ಆರೋಪಕ್ಕೆ ಸಂಬಂಧಿಸಿದ ಯಾವುದೇ ಸಾಕ್ಷಿಗಳನ್ನು ಸಲ್ಲಿಸಿಲ್ಲ. ಫಲಾನುಭವಿಗಳಿಂದಲೂ ಯಾವುದೇ ದೂರು ಬಂದಿಲ್ಲ. ಈ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಮುಕ್ತಾಯಗೊಳಿಸಬಹುದಾಗಿದೆ ಎಂದು ಲೋಕಾಯುಕ್ತ ತಿಳಿಸಿದೆ.

Share. Facebook Twitter LinkedIn WhatsApp Email

Related Posts

ಮಹಿಳೆಗೆ ಕೆಲಸ ಕೊಡಿಸೋದಾಗಿ 3 ಲಕ್ಷ ವಸೂಲಿ ವಂಚನೆ: ಕಾಂಗ್ರೆಸ್‌ನಿಂದ ನಾಜಿಮಾ, ತಿಮ್ಮರಾಜು ಉಚ್ಚಾಟನೆ

04/03/2026 9:01 PM1 Min Read

ಬೆಂಗಳೂರಿನ ಸರ್ವಜ್ಞ ನಗರವನ್ನು ಮಾದರಿ ಕ್ಷೇತ್ರವಾಗಿ ಮಾರ್ಪಾಡು: ಸಚಿವ ಕೆ.ಜೆ ಜಾರ್ಜ್

04/03/2026 8:04 PM2 Mins Read

KEAಯಿಂದ ಈ ಹುದ್ದೆಗಳ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆ ಅಂತಿಮ ಕೀ ಉತ್ತರ, ತಾತ್ಕಾಲಿಕ ಅಂಕ ಪಟ್ಟಿ ಬಿಡುಗಡೆ

04/03/2026 7:58 PM1 Min Read
Recent News

ಯುಗಾದಿಯ ಬಳಿಕ ಪ್ರಕೃತಿ ಮುನಿಯುತ್ತೆ! ಭೀಕರ ಭೂಕಂಪ, ಭಾರಿ ಪ್ರವಾಹ ; ಬಾಬಾ ವಂಗಾ ಭಯಾನಕ ಭವಿಷ್ಯ!

04/03/2026 9:52 PM

ಸಿಲಿಂಡರ್’ನಲ್ಲಿ ಎಷ್ಟು ಗ್ಯಾಸ್ ಇದೆಯೆಂದು ತಿಳಿಯೋದು ಈಗ ಸುಲಭ! ಈ 2 ನಿಮಿಷಗಳ ಟ್ರಿಕ್ ಬಳಸಿ

04/03/2026 9:20 PM

ಮಹಿಳೆಗೆ ಕೆಲಸ ಕೊಡಿಸೋದಾಗಿ 3 ಲಕ್ಷ ವಸೂಲಿ ವಂಚನೆ: ಕಾಂಗ್ರೆಸ್‌ನಿಂದ ನಾಜಿಮಾ, ತಿಮ್ಮರಾಜು ಉಚ್ಚಾಟನೆ

04/03/2026 9:01 PM

ರೋಗಗಳ ದೂರ ಮಾಡುವ ದಿವ್ಯೌಷಧ.! ಬೇಸಿಗೆಯಲ್ಲಿ ಪ್ರತಿದಿನ ಒಂದು ಲೋಟ ಕುಡಿದ್ರೆ ಈ ಸಮಸ್ಯೆಗಳು ಬರುವುದಿಲ್ಲ

04/03/2026 8:52 PM
State News
KARNATAKA

ಮಹಿಳೆಗೆ ಕೆಲಸ ಕೊಡಿಸೋದಾಗಿ 3 ಲಕ್ಷ ವಸೂಲಿ ವಂಚನೆ: ಕಾಂಗ್ರೆಸ್‌ನಿಂದ ನಾಜಿಮಾ, ತಿಮ್ಮರಾಜು ಉಚ್ಚಾಟನೆ

By kannadanewsnow0904/03/2026 9:01 PM KARNATAKA 1 Min Read

ಶಿವಮೊಗ್ಗ: ಮಹಿಳೆಗೆ ಕೆಲಸ ಕೊಡಿಸುವುದಾಗಿ 3 ಲಕ್ಷ ಪಡೆದು, ವಂಚಿಸಿದಂತ ಆರೋಪದ ಹಿನ್ನಲೆಯಲ್ಲಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ನಾಜಿಮಾ…

ಬೆಂಗಳೂರಿನ ಸರ್ವಜ್ಞ ನಗರವನ್ನು ಮಾದರಿ ಕ್ಷೇತ್ರವಾಗಿ ಮಾರ್ಪಾಡು: ಸಚಿವ ಕೆ.ಜೆ ಜಾರ್ಜ್

04/03/2026 8:04 PM

KEAಯಿಂದ ಈ ಹುದ್ದೆಗಳ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆ ಅಂತಿಮ ಕೀ ಉತ್ತರ, ತಾತ್ಕಾಲಿಕ ಅಂಕ ಪಟ್ಟಿ ಬಿಡುಗಡೆ

04/03/2026 7:58 PM

ಒಳಮೀಸಲಾತಿ ಜಾರಿಯಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಬದ್ಧತೆಯೇ ಇಲ್ಲ: ಛಲವಾದಿ ನಾರಾಯಣಸ್ವಾಮಿ ಕಿಡಿ

04/03/2026 7:52 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.