ಬೆಂಗಳೂರು: ವಕೀಲೆ ರಮ್ಯಾ ಹಗೂ ಪುನೀತ್ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ನೆಲಮಂಗಲ ಗ್ರಾಮಾಂತರ ಠಾಣೆಯ ಪೊಲೀಸರು ಉದ್ಯಮಿ ದಿನೇಶ್ ಎಂಬುವರನ್ನು ಬಂಧಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಗ್ರಾಮಾಂತರ ಠಾಣೆಯ ಪೊಲೀಸರು ವಕೀಲೆ ರಮ್ಯಾ, ಪುನೀತ್ ಅನುಮಾನಾಸ್ಪದ ಸಾವು ಪ್ರಕರಣದಲ್ಲಿ ದಿನೇಶ್ ಎಂಬಾತನನ್ನು ಬಂಧಿಸಿದ್ದಾರೆ.
ರಮ್ಯಾ, ಪುನೀತ್ ಪ್ರಕರಣದಲ್ಲಿ ದಿನೇಶ್ ಹೆಸರು ಕೇಳಿ ಬಂದಿತ್ತು. ನೇಣುಬಿಗಿದ ಸ್ಥಿತಿಯಲ್ಲಿ ರಮ್ಯಾ (26) ಮೃತದೇಹ ಪತ್ತೆಯಾಗಿತ್ತು. ಶ್ರೀನಿವಾಸಪುರ ಶೆಡ್ ನಲ್ಲಿ ವಕೀಲೆ ರಮ್ಯಾ ಶವ ಪತ್ತೆಯಾಗಿತ್ತು. ಕೆಂಪಲಿಂಗನಹಳ್ಳಿ ಮನೆಯಲ್ಲಿ ಪುನೀತ್ (25) ಶವ ಪತ್ತೆಯಾಗಿತ್ತು.
ರಮ್ಯಾ ಮನೆಯಲ್ಲೇ ವಾಸವಿದ್ದ ಪುನೀತ್ ಆತ್ಮಹತ್ಯೆಗೆ ಶರಣಾಗಿದ್ದನು. ಉದ್ಯಮಿ ದಿನೇಶ್ ವಿರುದ್ಧ ಅನುಮಾನವನ್ನು ರಮ್ಯಾ ಪೋಷಕರು ವ್ಯಕ್ತಪಡಿಸಿದ್ದರು. ರಮ್ಯಾ ಪೋಷಕರ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆಗೆ ಇಳಿದಿದ್ದರು.
ಪಹಲ್ಗಾಮ್ ದಾಳಿಯ ನಂತ್ರ ಭಾರತ-ಪಾಕ್ ನಡುವೆ ಹದಗೆಟ್ಟ ಸಂಬಂಧ: ಮಧ್ಯವರ್ತಿ ಕಾರ್ಯಕ್ಕೆ ಮುಂದಾದ ಇರಾನ್