Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಬಾಗಲಕೋಟೆ ಉಪಚುನಾವಣೆ : ಮತದಾನ ಮಾಡುವ ವೇಳೆ ಏಕಾಏಕಿ ಕುಸಿದು ಬಿದ್ದ ವೃದ್ದೆ!

09/04/2026 12:46 PM

ಇಂದು ಮಧ್ಯಾಹ್ನ 3 ಗಂಟೆಗೆ `ದ್ವಿತೀಯ PUC ಫಲಿತಾಂಶ’ ಪ್ರಕಟ : ರಿಸಲ್ಟ್ ನೋಡಲು ಜಸ್ಟ್ ಇಲ್ಲಿ ಸ್ಕ್ಯಾನ್ ಮಾಡಿ.!

09/04/2026 12:37 PM

ರಾಜ್ಯದಲ್ಲಿ ಅರ್ಹರ ಬಿಪಿಎಲ್ ಕಾರ್ಡ್ ಗಳು ರದ್ದಾಗಿದ್ದರೆ ಅರ್ಜಿ ಸಲ್ಲಿಸಿ, 15 ದಿನಗಳಲ್ಲಿ ಕಾರ್ಡ್ ವಿತರಣೆ : ಸಚಿವ ಮುನಿಯಪ್ಪ

09/04/2026 12:35 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » 2 ದಶಕದಲ್ಲಿ ಜಗತ್ತಿನಾದ್ಯಂತ 1600 ಪತ್ರಕರ್ತರ ಹತ್ಯೆಗೆ KUWJ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಆತಂಕ
KARNATAKA

2 ದಶಕದಲ್ಲಿ ಜಗತ್ತಿನಾದ್ಯಂತ 1600 ಪತ್ರಕರ್ತರ ಹತ್ಯೆಗೆ KUWJ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಆತಂಕ

By kannadanewsnow0913/11/2025 8:28 PM

ಬೆಂಗಳೂರು: ಯುನೆಸ್ಕೋ ಮಾಹಿತಿಯ ಪ್ರಕಾರ, ಕಳೆದ ಎರಡು ದಶಕಗಳಲ್ಲಿ ಜಾಗತಿಕವಾಗಿ 1,600 ಕ್ಕೂ ಹೆಚ್ಚು ಪತ್ರಕರ್ತರು ಹತ್ಯೆಯಾಗಿರುವುದು ನೋವಿನ ಸಂಗತಿ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲೂೃಜೆ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದರು.

ಬೆಂಗಳೂರಿನಲ್ಲಿ ಯುನೆಸ್ಕೊ, ಪತ್ರಕರ್ತರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ‘ಸುರಕ್ಷತೆ, ಕಾನೂನು ಸಬಲೀಕರಣ ಮತ್ತು ಭಾರತದಲ್ಲಿ ಪತ್ರಕರ್ತರ ಲಿಂಗ-ಪ್ರತಿಕ್ರಿಯಾತ್ಮಕ ರಕ್ಷಣೆ ಕುರಿತ ಮೂರು ದಿನಗಳ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಇನ್ನೂ ನೋವಿನ ಸಂಗತಿ ಅಂದರೆ, ಸುಮಾರು ಶೇ.80 ಪ್ರಕರಣಗಳಲ್ಲಿ, ಅಪರಾಧಿಗಳನ್ನು ಎಂದಿಗೂ ನ್ಯಾಯದ ಮುಂದೆ ತರಲಾಗಿಲ್ಲ ಎಂದು ಅವರು ವಿಷಾದಿಸಿದರು.

ಸತ್ಯದ ನೆಲೆಯಲ್ಲಿ ಹೋರಾಟ ಮಾಡುತ್ತಿರುವ ಪ್ರಪಂಚದಾದ್ಯಂತ ಪತ್ರಕರ್ತರು ಇಂದಿಗೂ ಬೆದರಿಕೆಗಳು, ಕಿರುಕುಳ ಮತ್ತು ಜೀವಹಾನಿಯನ್ನು ಎದುರಿಸುತ್ತಲೇ ಇದ್ದಾರೆ ಎಂದರು.

ಭಾರತದಲ್ಲಿಯೂ ಸಹ, ಭ್ರಷ್ಟಾಚಾರ, ಪರಿಸರ ಸಮಸ್ಯೆಗಳು ಅಥವಾ ಮಾನವ ಹಕ್ಕುಗಳ ಉಲ್ಲಂಘನೆಯನ್ನು ವರದಿ ಮಾಡುವ ವರದಿಗಾರರು ಬೆದರಿಕೆ ಅಥವಾ ಹಿಂಸೆಯನ್ನು ಎದುರಿಸಿದ ಪ್ರಕರಣಗಳನ್ನು ನಾವು ನೋಡಿದ್ದೇವೆ. ವಾಕ್ ಸ್ವಾತಂತ್ರ್ಯದ ರಕ್ಷಣೆಯಲ್ಲಿ ಧೃಢವಾಗಿ ನಿಂತ ಗೌರಿ ಲಂಕೇಶ್‌ರಂತಹ ಧೈರ್ಯಶಾಲಿ ಪತ್ರಕರ್ತರ ಹತ್ಯೆಯ ಸೇರಿದಂತೆ ಹಲವು ಪ್ರಕರಣಗಳು ಇಂದಿಗೂ ಹಸಿ ಹಸಿಯಾಗಿವೆ. ಅದಕ್ಕಾಗಿ ಸತ್ಯವನ್ನು ಮಾತನಾಡುವವರನ್ನು ರಕ್ಷಿಸುವ ತುರ್ತುಸ್ಥಿತಿ ಇಂದು ಇದೆ ಎಂದು ಹೇಳಿದರು.

ಅಪರಾಧಗಳಿಗೆ ಶಿಕ್ಷೆ ಕೊಡಿಸಬೇಕು. ಪತ್ರಕರ್ತರನ್ನು ರಕ್ಷಿಸುವುದರ ಬಗ್ಗೆ ಮಾತ್ರವಲ್ಲ. ಪ್ರಜಾಪ್ರಭುತ್ವ, ಪಾರದರ್ಶಕತೆ ಮತ್ತು ಸಾರ್ವಜನಿಕರ ತಿಳಿದುಕೊಳ್ಳುವ ಹಕ್ಕನ್ನು ರಕ್ಷಿಸಲು ಎಲ್ಲ ಸುದ್ದಿ ಸಂಸ್ಥೆಗಳು ಮತ್ತು ಪತ್ರಕರ್ತರ ಸಂಘಟನೆಗಳು ಮುಂದಾಗಬೇಕು ಎಂದರು.

ಈ ಕಾರ್ಯಾಗಾರವು ಭಾರತದಾದ್ಯಂತದ ಪತ್ರಕರ್ತರು, ಕಾನೂನು ತಜ್ಞರು ಮತ್ತು ನಾಗರಿಕ ಸಮಾಜದ ಪ್ರತಿನಿಧಿಗಳನ್ನು ಒಟ್ಟುಗೂಡಿಸುವ ಪ್ರಯತ್ನ ಮಾಡಿದೆ. ಕಾನೂನು ಸಾಕ್ಷರತೆ, ಸೈಬರ್ ಸುರಕ್ಷತೆ ಮತ್ತು ಲಿಂಗ-ಪ್ರತಿಕ್ರಿಯಾತ್ಮಕ ರಕ್ಷಣೆಯಲ್ಲಿ ಸಾಮರ್ಥ್ಯಗಳನ್ನು ಬಲಪಡಿಸುತ್ತದೆ ಎಂದರು.

ದಕ್ಷಿಣ ಏಷ್ಯಾ ಪ್ರಾಂತೀಯ ಯುನೆಸ್ಕೊ ಕಚೇರಿಯ ಮಾಹಿತಿ ಮತ್ತು ಸಂವಹನ ವಿಭಾಗದ ಮುಖ್ಯಸ್ಥೆ ಮಾಲಿ ಹಜಾಜ್, ಇಂಡಿಯನ್ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷ ಗೀತಾರ್ಥ ಪಾಠಕ್, ಪ್ರಧಾನ ಕಾರ್ಯದರ್ಶಿ ಸಬೀನಾ ಇಂದ್ರಜಿತ್, ಒಹೆಚ್ ಸಿಹೆಚ್ ಆರ್ ಮಾನವ ಹಕ್ಕುಗಳ ಅಧಿಕಾರಿ ಐದಾ ಮಾರ್ಟಿಯಸ್, ಕರ್ನಾಟಕ ಸಿಐಡಿ ಕಾನೂನು ಸಲಹೆಗಾರ ಮಹೇಶ್ ವಿ ವೈದ್ಯ, ವೇದಿಕೆಯಲ್ಲಿದ್ದರು.

ಕಾಶ್ಮೀರ, ಮಿಜೊರಾಂ, ತ್ರಿಪುರ, ಗುಜರಾತ್, ಮಧ್ಯಪ್ರದೇಶ, ಉತ್ತರ ಪ್ರದೇಶ, ದೆಹಲಿ, ಮಣಿಪುರ, ಆಂಧ್ರ, ತೆಲಂಗಾಣ, ತಮಿಳುನಾಡು, ಕೇರಳ, ರಾಜಸ್ಥಾನ, ಸೇರಿದಂತೆ ಹಲವು ರಾಜ್ಯಗಳ ಮಾಧ್ಯಮ ಪ್ರತಿನಿಧಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

BREAKING: ಬೆಳಗಾವಿಯಲ್ಲಿ 100ಕ್ಕೂ ಹೆಚ್ಚು ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಗೆ ಬೆಂಕಿ: ಸಿಎಂ ಸಿದ್ಧರಾಮಯ್ಯ ತನಿಖೆಗೆ ಆದೇಶ

ಶಿವಮೊಗ್ಗ: ಆನಂದಪುರ ವ್ಯಾಪ್ತಿಯ ರೈತರಿಗೆ ಪೊಲೀಸರಿಂದ ಮಹತ್ವದ ಮಾಹಿತಿ, ಈ ಸೂಚನೆ

Share. Facebook Twitter LinkedIn WhatsApp Email

Related Posts

BREAKING : ಬಾಗಲಕೋಟೆ ಉಪಚುನಾವಣೆ : ಮತದಾನ ಮಾಡುವ ವೇಳೆ ಏಕಾಏಕಿ ಕುಸಿದು ಬಿದ್ದ ವೃದ್ದೆ!

09/04/2026 12:46 PM1 Min Read

ಇಂದು ಮಧ್ಯಾಹ್ನ 3 ಗಂಟೆಗೆ `ದ್ವಿತೀಯ PUC ಫಲಿತಾಂಶ’ ಪ್ರಕಟ : ರಿಸಲ್ಟ್ ನೋಡಲು ಜಸ್ಟ್ ಇಲ್ಲಿ ಸ್ಕ್ಯಾನ್ ಮಾಡಿ.!

09/04/2026 12:37 PM1 Min Read

ರಾಜ್ಯದಲ್ಲಿ ಅರ್ಹರ ಬಿಪಿಎಲ್ ಕಾರ್ಡ್ ಗಳು ರದ್ದಾಗಿದ್ದರೆ ಅರ್ಜಿ ಸಲ್ಲಿಸಿ, 15 ದಿನಗಳಲ್ಲಿ ಕಾರ್ಡ್ ವಿತರಣೆ : ಸಚಿವ ಮುನಿಯಪ್ಪ

09/04/2026 12:35 PM1 Min Read
Recent News

BREAKING : ಬಾಗಲಕೋಟೆ ಉಪಚುನಾವಣೆ : ಮತದಾನ ಮಾಡುವ ವೇಳೆ ಏಕಾಏಕಿ ಕುಸಿದು ಬಿದ್ದ ವೃದ್ದೆ!

09/04/2026 12:46 PM

ಇಂದು ಮಧ್ಯಾಹ್ನ 3 ಗಂಟೆಗೆ `ದ್ವಿತೀಯ PUC ಫಲಿತಾಂಶ’ ಪ್ರಕಟ : ರಿಸಲ್ಟ್ ನೋಡಲು ಜಸ್ಟ್ ಇಲ್ಲಿ ಸ್ಕ್ಯಾನ್ ಮಾಡಿ.!

09/04/2026 12:37 PM

ರಾಜ್ಯದಲ್ಲಿ ಅರ್ಹರ ಬಿಪಿಎಲ್ ಕಾರ್ಡ್ ಗಳು ರದ್ದಾಗಿದ್ದರೆ ಅರ್ಜಿ ಸಲ್ಲಿಸಿ, 15 ದಿನಗಳಲ್ಲಿ ಕಾರ್ಡ್ ವಿತರಣೆ : ಸಚಿವ ಮುನಿಯಪ್ಪ

09/04/2026 12:35 PM

ಜನಸಾಮಾನ್ಯರಿಗೆ ಬಿಗ್ ರಿಲೀಫ್ : ಇನ್ಮುಂದೆ `ಮೊಬೈಲ್ ರೀಚಾರ್ಜ್ ದರ’ ಇಳಿಕೆ..!

09/04/2026 12:25 PM
State News
KARNATAKA

BREAKING : ಬಾಗಲಕೋಟೆ ಉಪಚುನಾವಣೆ : ಮತದಾನ ಮಾಡುವ ವೇಳೆ ಏಕಾಏಕಿ ಕುಸಿದು ಬಿದ್ದ ವೃದ್ದೆ!

By kannadanewsnow0509/04/2026 12:46 PM KARNATAKA 1 Min Read

ಬಾಗಲಕೋಟೆ : ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ ಇಂದು ಮತದಾನ ನಡೆಯುತ್ತಿದ್ದು, ಮತದಾನಕ್ಕೆ ಸರತಿ ಸಾಲಿನಲ್ಲಿ ನಿಂತಿದ್ದಾಗ ವೃದ್ದೆ…

ಇಂದು ಮಧ್ಯಾಹ್ನ 3 ಗಂಟೆಗೆ `ದ್ವಿತೀಯ PUC ಫಲಿತಾಂಶ’ ಪ್ರಕಟ : ರಿಸಲ್ಟ್ ನೋಡಲು ಜಸ್ಟ್ ಇಲ್ಲಿ ಸ್ಕ್ಯಾನ್ ಮಾಡಿ.!

09/04/2026 12:37 PM

ರಾಜ್ಯದಲ್ಲಿ ಅರ್ಹರ ಬಿಪಿಎಲ್ ಕಾರ್ಡ್ ಗಳು ರದ್ದಾಗಿದ್ದರೆ ಅರ್ಜಿ ಸಲ್ಲಿಸಿ, 15 ದಿನಗಳಲ್ಲಿ ಕಾರ್ಡ್ ವಿತರಣೆ : ಸಚಿವ ಮುನಿಯಪ್ಪ

09/04/2026 12:35 PM

ಜನಸಾಮಾನ್ಯರಿಗೆ ಬಿಗ್ ರಿಲೀಫ್ : ಇನ್ಮುಂದೆ `ಮೊಬೈಲ್ ರೀಚಾರ್ಜ್ ದರ’ ಇಳಿಕೆ..!

09/04/2026 12:25 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.