Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

GST reforms | ಜಿಎಸ್‌ಟಿ ಸ್ಲ್ಯಾಬ್‌ ಇಳಿಕೆ ಬಳಿಕ ಭಾರತದಲ್ಲಿ ಏನು ಅಗ್ಗವಾಗಬಹುದು? ಇಲ್ಲಿದೆ ಮಾಹಿತಿ

17/08/2025 5:23 AM

ನಿಮ್ಗೆ ಗೊತ್ತಾ.? ಭಾರತದ ಈ ಜಿಲ್ಲೆಯಲ್ಲಿ ಎರಡು ದೇಶಗಳ ರೈಲು ನಿಲ್ದಾಣಗಳಿವೆ.!

16/08/2025 10:14 PM

BREAKING: ತಾಳಗುಪ್ಪ-ಮೈಸೂರು ಎಕ್ಸ್ ಪ್ರೆಸ್ ರೈಲಿನ ಕೆಳಗೆ ಬೆಂಕಿ: ಸಿಬ್ಬಂದಿ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

16/08/2025 10:07 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಂಬಿಕೆಯಿಟ್ಟು ಜನ ಗೆಲ್ಲಿಸಿದರೂ ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಕೆಲಸ ಮಾಡಲಿಲ್ಲ: ಡಿ.ಕೆ ಸುರೇಶ್
KARNATAKA

ನಂಬಿಕೆಯಿಟ್ಟು ಜನ ಗೆಲ್ಲಿಸಿದರೂ ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಕೆಲಸ ಮಾಡಲಿಲ್ಲ: ಡಿ.ಕೆ ಸುರೇಶ್

By kannadanewsnow0931/10/2024 5:50 PM

ಚನ್ನಪಟ್ಟಣ : “ಕುಮಾರಸ್ವಾಮಿ ಅವರನ್ನು ಗೆಲ್ಲಿಸಿದರೆ ಚನ್ನಪಟ್ಟಣಕ್ಕೆ ಉಪಯೋಗವಾಗುತ್ತದೆ ಎಂದು ಜನರು ನಂಬಿಕೆ ಇಟ್ಟಿದ್ದರು. ಆದರೆ ಅವರಿಂದ ನಯಾ ಪೈಸೆ ಉಪಯೋಗವಾಗಲಿಲ್ಲ” ಎಂದು ಮಾಜಿ ಸಂಸದ ಡಿಕೆ ಸುರೇಶ್ ಅವರು ವಾಗ್ದಾಳಿ ನಡೆಸಿದರು.

ಚನ್ನಪಟ್ಟಣದ ಕೋಡಂಬಳ್ಳಿ ಹಾಗೂ ಕೊಂಡಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಪರ ಪ್ರಚಾರ ನಡೆಸಿದ ಡಿ.ಕೆ. ಸುರೇಶ್ ಅವರು, “ತಾಲೂಕಿನ ರೈತರು ಯುವಕರು ಮಹಿಳೆಯರು ಕುಮಾರಸ್ವಾಮಿ ಅವರಿಗೆ ಮತ ನೀಡಿದ್ದರು. ಅವರು ನಂಬಿಕೆ ಉಳಿಸಿಕೊಳ್ಳಲಿಲ್ಲ. ಕುಮಾರಸ್ವಾಮಿಯವರು ನಿಮ್ಮ ಕಷ್ಟ ಕೇಳಲು ಬರಲಿಲ್ಲ. ಕಳೆದ ವರ್ಷ ಕೆರೆ ತುಂಬಿಸಲಿಲ್ಲ” ಎಂದರು.

“ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಿದ ಯೋಗೇಶ್ವರ್ ಅವರನ್ನು ಹೊತ್ತುಕೊಂಡು ಕ್ಷೇತ್ರದಲ್ಲಿ 150 ಕ್ಕೂ ಹೆಚ್ಚು ಮೆರವಣಿಗೆ ಮಾಡಿದ್ದೀರಿ. ಬೆಳ್ಳಿ ಗದೆ, ಕತ್ತಿ ಸೇರಿದಂತೆ ಅವರ ಶಿಲೆಯನ್ನೂ ಮಾಡಿಸಿದ್ದೀರಿ. ಇಂತಹ ನೀರು ಕೊಟ್ಟ ವ್ಯಕ್ತಿಗೆ ಕಳೆದ ಎರಡು ಚುನಾವಣೆಯಲ್ಲಿ ಮತ ಹಾಕದೆ ಜನರು ನೀರು ಬಿಟ್ಟಿದ್ದಾರೆ. ಬಾಯಿ ಮಾತಿನಲ್ಲಿ ಹೊಗಳಿ, ಮತ ಹಾಕದೇ ಕೈ ಕೊಟ್ಟಿದ್ದಾರೆ” ಎಂದರು.

“ಯೋಗೇಶ್ವರ್ ಅವರು ನೀರು ಕೊಟ್ಟರು. ನಾವು ವಿದ್ಯುತ್ ನೀಡಿದೆವು ಆದರೆ ನೀವು ನಮಗೆ ಶಕ್ತಿಯನ್ನು ಕೊಡಲಿಲ್ಲ. ನೀರು ಕೊಟ್ಟ ಯೋಗೇಶ್ವರ್ ಅವರಿಗೆ ಮತ್ತೆ ಅವಕಾಶ ನೀಡಬೇಕು. ಮತ ನೀಡಬೇಕು” ಎಂದು ಮನವಿ ಮಾಡಿದರು.

ಕೆಲವರು ನೆಂಟರಂತೆ ಬರುತ್ತಾರೆ ಹೋಗುತ್ತಾರೆ

“ನಿಮ್ಮ ಊರಿನ ಯೋಗೇಶ್ವರ್ ಅವರಿಗೆ ಮತ ನೀಡಿ ಗೆಲ್ಲಿಸುವ ಅವಕಾಶ ಸಿಕ್ಕಿದೆ. ಇದೇ ತಾಲೂಕಿನಲ್ಲಿ ಹುಟ್ಟಿದ್ದಾರೆ, ಬೆಳೆದಿದ್ದಾರೆ ಚುನಾವಣೆಯಲ್ಲಿ ಸೋತಿದ್ದಾರೆ. ಬೇರೆಯವರು ನೆಂಟರಂತೆ ಬರುತ್ತಾರೆ ಅನುಕೂಲ ಮಾಡಿಕೊಂಡು ಹೋಗುತ್ತಾರೆ” ಎಂದರು.

“ಕ್ಷೇತ್ರದಲ್ಲಿ ಕೆಲಸ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕೈಯನ್ನು ಬಲಪಡಿಸಲು ನವೆಂಬರ್ 13ರಂದು ನಡೆಯುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು ಎಂದು ಮನವಿ ಮಾಡುತ್ತೇನೆ” ಎಂದರು.

ಕನ್ನಡಿಗರ ರಕ್ಷಣೆ ಮಾಡಬೇಕು

“ಕನ್ನಡಿಗರಾಗಿ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯಗಳ ವಿರುದ್ಧ ನಾವು ದನಿ ಎತ್ತಬೇಕು. ನಾವೆಲ್ಲರೂ ಒಗ್ಗಟ್ಟಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಬೇಕು. ಕನ್ನಡಿಗರು ನಮ್ಮ ರಕ್ಷಣೆಯನ್ನು ನಾವು ಮಾಡಿಕೊಳ್ಳಬೇಕು. ನಮ್ಮ ತೆರಿಗೆ ನಮ್ಮ ಹಕ್ಕು, ನಮ್ಮ ನೀರು ನಮ್ಮ ಹಕ್ಕು ಈ ವಿಷಯಗಳನ್ನು ಮುಂದಿಟ್ಟುಕೊಂಡು ನಾವು ಹೋರಾಟ ಮಾಡುತ್ತಾ ಇದ್ದೇವೆ. ಇದಕ್ಕೆ ನೀವು ಬಲ ತುಂಬಬೇಕು” ಎಂದು ಹೇಳಿದರು.

ಪ್ರಚಾರ ಮೆರವಣಿಗೆಯಲ್ಲಿ ಸಚಿವರಾದ ಚೆಲುವರಾಯ ಸ್ವಾಮಿ, ಎಂಎಲ್ಸಿ ಪುಟ್ಟಣ್ಣ, ಮಾಜಿ ಶಾಸಕ ಅಶ್ವಥ್ ಮತ್ತಿತರರು ಇದ್ದರು.

Share. Facebook Twitter LinkedIn WhatsApp Email

Related Posts

BREAKING: ತಾಳಗುಪ್ಪ-ಮೈಸೂರು ಎಕ್ಸ್ ಪ್ರೆಸ್ ರೈಲಿನ ಕೆಳಗೆ ಬೆಂಕಿ: ಸಿಬ್ಬಂದಿ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

16/08/2025 10:07 PM1 Min Read

ಬಿಬಿಎಂಪಿ 6 ವಲಯಗಳಲ್ಲಿ ಸಾಮೂಹಿಕ ಸ್ವಚ್ಛತಾ ಕಾರ್ಯ, ಪಾದಚಾರಿ ಮಾರ್ಗಗಳಲ್ಲಿ ಒತ್ತುವರಿ ತೆರವು

16/08/2025 9:34 PM2 Mins Read

ಇದು ರಾಜ್ಯದಲ್ಲೇ ಮೊದಲು: ಅಪಘಾತದ ಗಾಯಾಳುಗನ್ನು ಆಸ್ಪತ್ರೆಗೆ ದಾಖಲಿಸಲು ಶಾಸಕ ‘ಝೀರೋ ಟ್ರಾಫಿಕ್ಸ್’ ವ್ಯವಸ್ಥೆ

16/08/2025 9:30 PM1 Min Read
Recent News

GST reforms | ಜಿಎಸ್‌ಟಿ ಸ್ಲ್ಯಾಬ್‌ ಇಳಿಕೆ ಬಳಿಕ ಭಾರತದಲ್ಲಿ ಏನು ಅಗ್ಗವಾಗಬಹುದು? ಇಲ್ಲಿದೆ ಮಾಹಿತಿ

17/08/2025 5:23 AM

ನಿಮ್ಗೆ ಗೊತ್ತಾ.? ಭಾರತದ ಈ ಜಿಲ್ಲೆಯಲ್ಲಿ ಎರಡು ದೇಶಗಳ ರೈಲು ನಿಲ್ದಾಣಗಳಿವೆ.!

16/08/2025 10:14 PM

BREAKING: ತಾಳಗುಪ್ಪ-ಮೈಸೂರು ಎಕ್ಸ್ ಪ್ರೆಸ್ ರೈಲಿನ ಕೆಳಗೆ ಬೆಂಕಿ: ಸಿಬ್ಬಂದಿ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

16/08/2025 10:07 PM

BREAKING : ಅಲಾಸ್ಕಾದಲ್ಲಿ ಟ್ರಂಪ್ ಜೊತೆಗಿನ ಮಾತುಕತೆ ಪ್ರಾಮಾಣಿಕ, ಅರ್ಥಪೂರ್ಣ, ಉಪಯುಕ್ತವಾಗಿತ್ತು ; ಪುಟಿನ್ ಮೊದಲ ಪ್ರತಿಕ್ರಿಯೆ

16/08/2025 9:42 PM
State News
KARNATAKA

BREAKING: ತಾಳಗುಪ್ಪ-ಮೈಸೂರು ಎಕ್ಸ್ ಪ್ರೆಸ್ ರೈಲಿನ ಕೆಳಗೆ ಬೆಂಕಿ: ಸಿಬ್ಬಂದಿ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

By kannadanewsnow0916/08/2025 10:07 PM KARNATAKA 1 Min Read

ಹಾಸನ: ಜಿಲ್ಲೆಯಲ್ಲಿ ಚಲಿಸುತ್ತಿದ್ದ ರೈಲಿನ ಬೋಗಿ ಕೆಳಗೆ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದಂತ ರೈಲ್ವೆ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ…

ಬಿಬಿಎಂಪಿ 6 ವಲಯಗಳಲ್ಲಿ ಸಾಮೂಹಿಕ ಸ್ವಚ್ಛತಾ ಕಾರ್ಯ, ಪಾದಚಾರಿ ಮಾರ್ಗಗಳಲ್ಲಿ ಒತ್ತುವರಿ ತೆರವು

16/08/2025 9:34 PM

ಇದು ರಾಜ್ಯದಲ್ಲೇ ಮೊದಲು: ಅಪಘಾತದ ಗಾಯಾಳುಗನ್ನು ಆಸ್ಪತ್ರೆಗೆ ದಾಖಲಿಸಲು ಶಾಸಕ ‘ಝೀರೋ ಟ್ರಾಫಿಕ್ಸ್’ ವ್ಯವಸ್ಥೆ

16/08/2025 9:30 PM

ರಾಜ್ಯದಲ್ಲೊಂದು ಹೃದಯ ವಿದ್ರಾವಕ ಘಟನೆ: ಕಂದಮ್ಮ ಎದುರೆ ಗೃಹಿಣಿ ನೇಣಿಗೆ ಶರಣು

16/08/2025 9:15 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.