Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಮದ್ದೂರು ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ಕೇಸ್ : ಲಾಠಿ ಏಟು ತಿಂದ ಮಹಿಳೆ ವಿರುದ್ಧ ‘FIR’ ದಾಖಲು

11/09/2025 4:32 PM

ರಾಜ್ಯದಲ್ಲಿ ನಮ್ಮ ಸರ್ಕಾರ ಬಂದಾಗ ನಿಮ್ಮ ಮೇಲೂ 100% ಕೇಸ್ ಹಾಕುತ್ತೇವೆ : ಸರ್ಕಾರದ ವಿರುದ್ಧ ಆರ್.ಅಶೋಕ್ ಕಿಡಿ

11/09/2025 4:21 PM

BREAKING : ‘ಮಾನನಷ್ಟ ಮೊಕದ್ದಮೆ’ ರದ್ದುಗೊಳಿಸುವಂತೆ ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ನಟಿ ‘ಕಂಗನಾ’

11/09/2025 4:09 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಿಎಂ, ಡಿಸಿಎಂ ವಿರುದ್ಧ ಕುಮಾರಸ್ವಾಮಿ, ದೇವೇಗೌಡರು ವೈಯಕ್ತಿಕ ಆರೋಪಗಳನ್ನು ಮಾಡುತ್ತಿದ್ದಾರೆ: ಚಲುವರಾಯಸ್ವಾಮಿ
KARNATAKA

ಸಿಎಂ, ಡಿಸಿಎಂ ವಿರುದ್ಧ ಕುಮಾರಸ್ವಾಮಿ, ದೇವೇಗೌಡರು ವೈಯಕ್ತಿಕ ಆರೋಪಗಳನ್ನು ಮಾಡುತ್ತಿದ್ದಾರೆ: ಚಲುವರಾಯಸ್ವಾಮಿ

By kannadanewsnow0911/11/2024 2:22 PM

ಚನ್ನಪಟ್ಟಣ: ಜೆಡಿಎಸ್ ಪಕ್ಷದವರಿಗೆ ಚನ್ನಪಟ್ಟಣ ಉಪಚುನಾವಣೆ ಅರಗಿಸಿಕೊಲ್ಲಲು ಆಗುತ್ತಿಲ್ಲ, ಆದ್ದರಿಂದ ಕುಮಾರಸ್ವಾಮಿ ಮತ್ತು ದೇವೇಗೌಡರು ವೈಯಕ್ತಿಕ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಕಿಡಿ ಕಾರಿದರು.

ಚನ್ನಪಟ್ಟಣದ ಹೊರವಲಯದಲ್ಲಿ ಆಯೋಜಿಸಲಾಗಿದ್ದ ಬಹಿರಂಗ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಜೆಡಿಎಸ್ ನ ಕುಮಾರಸ್ವಾಮಿ ಮತ್ತು ದೇವೇಗೌಡರಿಗೆ ಚನ್ನಪಟ್ಟಣ ಕ್ಷೇತ್ರಕ್ಕೆ ತಾವು ನೀಡಿದ ಕೊಡುಗೆಗಳ ಬಗ್ಗೆ ಮಾತನಾಡಲು ಏನು ಇಲ್ಲ, ಅವರು ಚನ್ನಪಟ್ಟಣದಲ್ಲಿ ಯಾವುದೇ ಅಭಿವೃದ್ಧಿ ಮಾಡಿಲ್ಲ. ಹಾಗಾಗಿ ಅಭ್ಯರ್ಥಿ ಯೋಗೇಶ್ವರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬಗ್ಗೆ ವೈಯಕ್ತಿಕ ಆರೋಪವನ್ನೇ ಚುನಾವಣೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ತಾವುಗಳು ರಾಮನಗರ, ಚನ್ನಪಟ್ಟಣಕ್ಕೆ ಆಯ್ಕೆಯಾಗಿ ಅವರು ಕ್ಷೇತ್ರದ ಚುನಾಯಿತರಾಗಿ, ಇಲ್ಲಿಯ ಅಭಿವೃದ್ಧಿಯ ಬಗ್ಗೆ ಮಾತನಾಡಲಿ, ಅದನ್ನು ಬಿಟ್ಟು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಮಾತನಾಡುವುದೇ ವೃತ್ತಿಯನ್ನಾಗಿಸಿಕೊಂಡಿದ್ದಾರೆ ಎಂದರು.

ದೇವೇಗೌಡರು ದೇಶದ ಪ್ರಧಾನಿಯಾಗಿದ್ದವರು, ರಾಜ್ಯದ ಮುಖ್ಯಮಂತ್ರಿಯಾಗಿದ್ದವರು. ಕುಮಾರಸ್ವಾಮಿ ಅವರು ಸಹ ಮಾಜಿ ಮುಖ್ಯಮಂತ್ರಿಗಳಾಗಿದ್ದು ಮಾತನಾಡುವ ರೀತಿಯನ್ನ ತಿಳಿಯಬೇಕು. ಮಾತನಾಡುವ ಭರದಲ್ಲಿ ಬಾಯಿಗೆ ಬಂದದ್ದನ್ನು ಮಾತನಾಡಬಾರದು ಎಂದು ಸಲಹೆ ನೀಡಿದರು.

||ಐದು ವರ್ಷಗಳು ಮತದಾರರ ಬಳಿ ಹೋಗದಂತೆ ಹೆಚ್ಡಿಕೆ ಹೇಳಿಕೆ||

||ಹಳೇ ಮೈಸೂರು ಭಾಗಕ್ಕೆ ಅಪಮಾನ||

ಮಾಜಿ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಅವರು ಚುನಾವಣೆ ಬಗ್ಗೆ, ಮತದಾರರ ಬಗ್ಗೆ ಇಷ್ಟು ಕೀಳಾಗಿ ಮಾತನಾಡಬಾರದಿತ್ತು. ಪವಿತ್ರ ವಿಧಾನಸಭೆಯಲ್ಲಿ ಐದು ವರ್ಷ ಜನರ ಬಳಿಗೆ ಹೋಗಬಾರದು, ಕೊನೆಯ 8-10 ದಿನ ಹೋಗಬೇಕು ಎಂದು ಹೇಳುತ್ತಾರೆ. ಇದು ರಾಜಕಾರಣಿಗಳಿಗೆ ಮಾಡುವ ಅಪಮಾನ. ಇವರ ಮಾತು ಕೇಳಿ ಸಾರ್ವಜನಿಕ ವಲಯದಲ್ಲಿ ಹಳೇ ಮೈಸೂರು ಭಾಗದ ಜನರ ಬಗ್ಗೆ ಯಾವ ಅಭಿಪ್ರಾಯ ಮೂಡುಲಿದೆ ತಿಳಿಯಬೇಕು ಎಂದು ಆತಂಕದ ಮಾತುಗಳನ್ನಾಡಿದರು.

ಉಪಚುನಾವಣೆ ಎದುರಾಗುತಿದ್ದಂತೆ ಯೋಗೇಶ್ವರ್ ಅವರನ್ನು ಹೀನಾಯವಾಗಿ ನಡೆಸಿಕೊಂಡರು. ಯೋಗೇಶ್ವರ್ ಜೊತೆ ಟಿಕೆಟ್ ಸಂಬಂಧ ಕುಳಿತು ಮಾತನಾಡದೆ ಅವರು ಕಾಂಗ್ರೆಸ್ ಪಕ್ಷ ಸೇರಿಕೊಳ್ಳುತ್ತಿದ್ದಂತೆ ಅವರು ಹೋಡಿಹೋದರು ಎನ್ನುತ್ತಾರೆ. ಯೋಗೇಶ್ವರ್ ಅವರನ್ನು ನಡೆಸಿಕೊಂಡ ರೀತಿ ಸರಿಯೇ ಎಂದು ಪ್ರಶ್ನಿಸಿದರು.

||ಡಿಕೆಎಸ್-ಯೋಗೇಶ್ವರ್ ಒಂದಾದರೆ ಕುಮಾರಸ್ವಾಮಿಗೆ ಚನ್ನಪಟ್ಟಣ ಅಭಿವೃದ್ಧಿಯಾಗುವ ಆತಂಕ||

ಯೋಗೇಶ್ವರ್ ಮತ್ತು ಡಿ.ಕೆ.ಶಿವಕುಮಾರ್ ಜೊತೆ ಸೇರೆದರೆ ಚನ್ನಪಟ್ಟಣಕ್ಕೆ ಉಪಯೋಗ ಆಗಲಿದೆ ಎಂದು ಕುಮಾರಸ್ವಾಮಿಗೆ ಆತಂಕವಿದೆ, ಚನ್ನಪಟ್ಟಣ ಅಭಿವೃದ್ಧಿಯಿಂದ ದೂರ ಮಾಡುವ ಉದ್ದೇಶದಿಂದ ರಾಜಕಾರಣ ಮಾಡಿ ವೈಯಕ್ತಿಕವಾಗಿ ಮಾತುಗಳನ್ನು ಆಡುತಿದ್ದಾರೆ ಎಂದರು.

ರಾಜ್ಯದ ಜನತೆಗೆ, ನೀರಾವರಿಗೆ ಕಿಂಚಿತ್ತು ಕೊಡುಗೆ ನೀಡದ ಅವರು ಅಭಿವೃದ್ಧಿ ಬಗ್ಗೆ ಮಾತನಾಡಿಲ್ಲ, ಇತ್ತೀಚೆಗೆ ತೋರೆಕಾಡನಹಳ್ಳಿಯಲ್ಲಿ ನೂರಾರು ಕುಟುಂಬಕ್ಕೆ ನೀರೋದಗಿಸಿರುವ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸದ ಕುಮಾರಸ್ವಾಮಿ, ಕಾಂಗ್ರೆಸ್ ಸರ್ಕಾರದ ಯಾವುದೇ ಅಭಿವೃದ್ಧಿ ಕಾರ್ಯವನ್ನು ಸಹಿಸಲಾಗದೆ ಸರ್ಕಾರದ ಮೇಲೆ ಇಲ್ಲಸಲ್ಲದ ಆರೋಪ ಮಾಡುತಿದ್ದಾರೆ ಎಂದು ಕಿಡಿ ಕಾರಿದರು.

||ಸರ್ಕಾರ ತೆಗೆಯುವ ಮಾತಾಡುವುದು ದೇವೇಗೌಡರಿಗೆ ಅಭ್ಯಾಸ||

ಯಾವ ಸರ್ಕಾರವು ಪೂರ್ಣವಾಧಿಗೆ ಇರುವುದಿಲ್ಲ ಎನ್ನುತ್ತಾರೆ. ಈಗ ಕಾಂಗ್ರೆಸ್ ಸರ್ಕಾರ ತೆಗೆಯುವ ಮಾತು ಆಡುತ್ತಾರೆ, ಪೂರ್ಣವಧಿ ಅಧಿಕಾರ ಪಡೆಯದ ಅವರಿಗೆ ಸರ್ಕಾರ ಬೀಳಿಸುವಂತೆ ಮಾತನಾಡುವುದು ಅಭ್ಯಾಸ ಎಂದು ವ್ಯಂಗ್ಯ ಮಾಡಿದರು.

ಈಗ ಹಾಸನದಲ್ಲಿ ಏನಾಗಿದೆ, ಹಾಸನದಲ್ಲಿ ದೇವೇಗೌಡರನ್ನು 4 ತಿಂಗಳು ಯಾರು ಕೂರಿಸಿದ್ದು, ಇಂದು 350ರಿಂದ 400 ಒಕ್ಕಲಿಗ ಕುಟುಂಬಗಳು ಬೀದಿಗೆ ಬಂದಿವೆ. ಈ ಸಂಬಂಧ ದೇವೇಗೌಡರು ಬೀದಿಗೆ ಇಳಿದು ಯಾಕೆ ಹೋರಾಟ ಮಾಡಲಿಲ್ಲ ಎಂದು ಪ್ರಶ್ನಿಸಿದ ಸಚಿವರು. ನೊಂದ ಕುಟುಂಬಗಳಿಗೆ ಮೊಮ್ಮಕ್ಕಳಿಂದ ತಪ್ಪಾಗಿದೆ ಎಂದು ಕನಿಷ್ಠ ಸಾಂತ್ವನ ಮಾಡದೆ ಮತ್ತೊಬ್ಬ ಮೊಮ್ಮಗನ ಪರ ಚುನಾವಣೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಚುನಾವಣೆ ಬಂದಾಗ ಕುಮಾರಸ್ವಾಮಿ ಕಲೆಕ್ಷನ್ ಮಾಡುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಇದರಲ್ಲಿ ಕುಮಾರಸ್ವಾಮಿ ಚಾಣಾಕ್ಷರು, ಇದನ್ನು ನಮ್ಮಿಂದ ಮಾಡಲು ಬರುವುದಿಲ್ಲ, ಅದನ್ನೂ ನಾನು ಅವರಿಂದ ಕಲಿಯಲು ಇಷ್ಟವಿಲ್ಲ. ಕಾಂಗ್ರೆಸ್ ಗೆ ಬಂದು ಪಾರದೇ ಎಂದು ಹೇಳಿದರು.

||ತಾವು ಗೆದ್ದ ಕ್ಷೇತ್ರಕ್ಕೆ ಕೊಡುಗೆ ನೀಡದ ಹೆಚ್ಡಿಡಿ, ಹೆಚ್ಡಿಕೆ||

ಚನ್ನಪಟ್ಟಣದಲ್ಲಿ ನಿಂತು ದೇವೇಗೌಡರು ಪ್ರಧಾನಿಯಾದರು, ಪ್ರಧಾನಿಯಾಗಿ ಹಾಸನದಲ್ಲಿ ಸೋತರು, ಮತ್ತೆ ಡಿ.ಕೆ.ಶಿವಕುಮಾರ್ ವಿರುದ್ಧ ಗೆದ್ದರು, ಅವರ ಮಗ ಕುಮಾರಸ್ವಾಮಿ ರಾಮನಗರದಲ್ಲಿ ಗೆದ್ದು ಮುಖ್ಯಮಂತ್ರಿಯಾದರು, ಚನ್ನಪಟ್ಟಣದಲ್ಲಿ ಗೆದ್ದು ಅವರು ತಾವು ಗೆದ್ದ ಕ್ಷೇತ್ರಕ್ಕೆ ಯಾವುದೇ ಕೊಡುಗೆ ನೀಡಿಲ್ಲ ಎಂದು ದೂರಿದರು.

ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಅಭ್ಯರ್ಥಿ ಸಿ.ಪಿ.ಯೋಗೇಶ್ವರ್, ಸಚಿವರಾದ ರಾಮಲಿಂಗರೆಡ್ಡಿ, ವೆಂಕಟೇಶ್, ಜಮೀರ್ ಅಹಮದ್, ಮಾಜಿ ಸಂಸದ ಡಿ.ಕೆ.ಸುರೇಶ್, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಶಾಸಕರುಗಳಾದ ನರೇಂದ್ರಸ್ವಾಮಿ,ರವಿಕುಮಾರ್ ಗೌಡ,ಬಾಲಕೃಷ್ಣ, ಚಲನಚಿತ್ರ ನಟ ಸಾಧುಕೋಕಿಲ ಸೇರಿದಂತೆ ಇತರ ಶಾಸಕರು, ನಾಯಕರು, ಮುಖಂಡರು ಇದ್ದರು.

Share. Facebook Twitter LinkedIn WhatsApp Email

Related Posts

BREAKING : ಮದ್ದೂರು ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ಕೇಸ್ : ಲಾಠಿ ಏಟು ತಿಂದ ಮಹಿಳೆ ವಿರುದ್ಧ ‘FIR’ ದಾಖಲು

11/09/2025 4:32 PM1 Min Read

ರಾಜ್ಯದಲ್ಲಿ ನಮ್ಮ ಸರ್ಕಾರ ಬಂದಾಗ ನಿಮ್ಮ ಮೇಲೂ 100% ಕೇಸ್ ಹಾಕುತ್ತೇವೆ : ಸರ್ಕಾರದ ವಿರುದ್ಧ ಆರ್.ಅಶೋಕ್ ಕಿಡಿ

11/09/2025 4:21 PM1 Min Read

ಶಿವಮೊಗ್ಗ: ಸೊರಬದ ಅವಲಗೋಡು ಬಳಿ ಅಪರಿಚಿತ ವಾಹನ ಡಿಕ್ಕಿಯಾಗಿ ‘7 ತಿಂಗಳ ಚಿರತೆ ಮರಿ’ ಸಾವು

11/09/2025 4:04 PM1 Min Read
Recent News

BREAKING : ಮದ್ದೂರು ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ಕೇಸ್ : ಲಾಠಿ ಏಟು ತಿಂದ ಮಹಿಳೆ ವಿರುದ್ಧ ‘FIR’ ದಾಖಲು

11/09/2025 4:32 PM

ರಾಜ್ಯದಲ್ಲಿ ನಮ್ಮ ಸರ್ಕಾರ ಬಂದಾಗ ನಿಮ್ಮ ಮೇಲೂ 100% ಕೇಸ್ ಹಾಕುತ್ತೇವೆ : ಸರ್ಕಾರದ ವಿರುದ್ಧ ಆರ್.ಅಶೋಕ್ ಕಿಡಿ

11/09/2025 4:21 PM

BREAKING : ‘ಮಾನನಷ್ಟ ಮೊಕದ್ದಮೆ’ ರದ್ದುಗೊಳಿಸುವಂತೆ ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ನಟಿ ‘ಕಂಗನಾ’

11/09/2025 4:09 PM

ಶಿವಮೊಗ್ಗ: ಸೊರಬದ ಅವಲಗೋಡು ಬಳಿ ಅಪರಿಚಿತ ವಾಹನ ಡಿಕ್ಕಿಯಾಗಿ ‘7 ತಿಂಗಳ ಚಿರತೆ ಮರಿ’ ಸಾವು

11/09/2025 4:04 PM
State News
KARNATAKA

BREAKING : ಮದ್ದೂರು ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ಕೇಸ್ : ಲಾಠಿ ಏಟು ತಿಂದ ಮಹಿಳೆ ವಿರುದ್ಧ ‘FIR’ ದಾಖಲು

By kannadanewsnow0511/09/2025 4:32 PM KARNATAKA 1 Min Read

ಮಂಡ್ಯ : ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ…

ರಾಜ್ಯದಲ್ಲಿ ನಮ್ಮ ಸರ್ಕಾರ ಬಂದಾಗ ನಿಮ್ಮ ಮೇಲೂ 100% ಕೇಸ್ ಹಾಕುತ್ತೇವೆ : ಸರ್ಕಾರದ ವಿರುದ್ಧ ಆರ್.ಅಶೋಕ್ ಕಿಡಿ

11/09/2025 4:21 PM

ಶಿವಮೊಗ್ಗ: ಸೊರಬದ ಅವಲಗೋಡು ಬಳಿ ಅಪರಿಚಿತ ವಾಹನ ಡಿಕ್ಕಿಯಾಗಿ ‘7 ತಿಂಗಳ ಚಿರತೆ ಮರಿ’ ಸಾವು

11/09/2025 4:04 PM

ಸಿ.ಟಿ ರವಿ ದ್ವೇಷ ಭಾಷಣ ಮಾಡಿದ್ದಕ್ಕೆ FIR ದಾಖಲು: ಸಚಿವ ರಾಮಲಿಂಗಾರೆಡ್ಡಿ ಸಮರ್ಥನೆ

11/09/2025 3:44 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.