Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Gold Loan : ಬ್ಯಾಂಕಿನಲ್ಲಿ 10 ಗ್ರಾಂ ಚಿನ್ನದ ಮೇಲೆ ಎಷ್ಟು ಸಾಲ ನೀಡಲಾಗುತ್ತದೆ? ಇಎಂಐ ಎಷ್ಟು? ಇಲ್ಲಿದೆ ಸಂಪೂರ್ಣ ಮಾಹಿತಿ

05/02/2026 10:25 AM

BREAKING : ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಭಾರಿ ಅಕ್ರಮ : ವೈಯಕ್ತಿಕ ಸ್ಕ್ಯಾನರ್ ಬಳಸಿ ಸಿಬ್ಬಂದಿಗಳಿಂದ ಲಕ್ಷಾಂತರ ರೂ. ವಂಚನೆ!

05/02/2026 10:23 AM

ಮೈಸೂರಿನಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿ : ಬಹಿರ್ದೆಸೆಗೆ ತೆರಳಿದ್ದಾಗ ಆನೆ ದಾಳಿಗೆ ವೃದ್ಧ ಸಾವು!

05/02/2026 10:18 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮುಖ್ಯಮಂತ್ರಿಯಾಗಿದ್ದರೂ ಕುಮಾರಣ್ಣ ನಿಮ್ಮ ಸಮಸ್ಯೆ ಬಗೆಹರಿಸಲಿಲ್ಲ: ಡಿ.ಕೆ. ಸುರೇಶ್
KARNATAKA

ಮುಖ್ಯಮಂತ್ರಿಯಾಗಿದ್ದರೂ ಕುಮಾರಣ್ಣ ನಿಮ್ಮ ಸಮಸ್ಯೆ ಬಗೆಹರಿಸಲಿಲ್ಲ: ಡಿ.ಕೆ. ಸುರೇಶ್

By kannadanewsnow0905/11/2024 7:59 PM

ರಾಮನಗರ : “ಮುಖ್ಯಮಂತ್ರಿಯಾಗಿದ್ದರೂ ಕುಮಾರಣ್ಣ ನಿಮ್ಮ ಸಮಸ್ಯೆ ಬಗೆಹರಿಸಲಿಲ್ಲ. ತಾಜ್ ವೆಸ್ಟ್ ಎಂಡ್ ಹೊಟೇಲ್ ಒಳಗೆ ದಳದ ಕಾರ್ಯಕರ್ತರನ್ನು ಬಿಡದ ಕಾರಣ, ನಿಮ್ಮ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ” ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ವಾಗ್ದಾಳಿ ನಡೆಸಿದರು.

ಚನ್ನಪಟ್ಟಣ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಅವರ ಪರ ಕೋಡಂಬಳ್ಳಿ, ಅಕ್ಕೂರು, ಅರಲಾಳುಸಂದ್ರ, ಮೆಣಸಿಗನಹಳ್ಳಿ ಗ್ರಾಮದಲ್ಲಿ ಸುರೇಶ್ ಅವರು ಮಂಗಳವಾರ ಪ್ರಚಾರ ಮಾಡಿದರು. ಈ ವೇಳೆ ಅವರು ಹೇಳಿದ್ದಿಷ್ಟು;

ಚನ್ನಪಟ್ಟಣ ಕ್ಷೇತ್ರದ ಜನರ ಆಶೀರ್ವಾದದಿಂದ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದರು. ಮುಖ್ಯಮಂತ್ರಿ ಆದವರಿಗೆ ತಾಲ್ಲೂಕಿನ ಅಭಿವೃದ್ಧಿ ಮಾಡಲು ಎಷ್ಟು ಸಮಯ ಬೇಕು?

ವಿರೂಪಾಕ್ಷಿಪುರ, ಅಕ್ಕೂರು ಹೋಬಳಿಯ ಸಮಸ್ಯೆ ಏನು? ಈ ಭಾಗದ ರೈತರ ಸಮಸ್ಯೆ ಏನು ಎಂದು ಗೊತ್ತಿದ್ದರೆ ಅವುಗಳನ್ನು ಬಗೆಹರಿಸಲು ಹತ್ತರಿಂದ ಹದಿನೈದು ದಿನಗಳು ಸಾಕು.

ನೀವು ಮುಖ್ಯಮಂತ್ರಿ ಮಾಡಿದರೂ ಕುಮಾರಸ್ವಾಮಿ ಅವರಾಗಲಿ ಅಥವಾ ಜೆಡಿಎಸ್ ಮುಖಂಡರಾಗಲಿ ನಿಮ್ಮ ಊರಿನ ಋಣ ತೀರಿಸುವ ಕೆಲಸ ಮಾಡಲಿಲ್ಲ. ನೀವು ಅವರನ್ನು ಮುಖ್ಯಮಂತ್ರಿಗಿಂತ ಇನ್ನೇನು ಮಾಡಲು ಸಾಧ್ಯ? ನಿಮ್ಮ ಸಮಸ್ಯೆ ಬಗೆಹರಿಸಲು ಅವರಿಗೆ ಶಕ್ತಿ ಇರಲಿಲ್ಲವೇ? ಈ ಭಾಗದ ಮುಖಂಡರು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲು ಆಗುತ್ತಿರಲಿಲ್ಲವೇ? ಅಥವಾ ನಿಮ್ಮನ್ನು ಅವರಿದ್ದ ವೆಸ್ಟ್ ಎಂಡ್ ಹೋಟೆಲ್ ಒಳಗೆ ಬಿಡುತ್ತಿರಲಿಲ್ಲವೇ?

ಜೆಡಿಎಸ್ ಕಾರ್ಯಕರ್ತರನ್ನು ವೆಸ್ಟ್ ಎಂಡ್ ಹೋಟೆಲ್ ಒಳಗೆ ಬಿಡುತ್ತಿರಲಿಲ್ಲವಂತೆ. ಹೀಗಾಗಿ ನಿಮ್ಮ ಸಮಸ್ಯೆ ಬಗೆಹರಿಸಿ ಕೆಲಸ ಮಾಡಲು ಆಗಲಿಲ್ಲವಂತೆ. ಈಗ ಮಗನನ್ನು ಕರೆತಂದು ಕೆಲಸ ಮಾಡುತ್ತೇವೆ ಎಂದು ಕಣ್ಣೀರು ಹಾಕುತ್ತಿದ್ದಾರೆ.

ಮುಖ್ಯಮಂತ್ರಿ ಆದಾಗಲೇ ನಿಮ್ಮ ಕಷ್ಟ ಕೇಳದವರು, ಕೋವಿಡ್ ಸಮಯದಲ್ಲಿ ನಿಮ್ಮ ನೋವಿಗೆ ಸ್ಪಂದಿಸದವರು, ಈಗ ಮಗ, ಮೊಮ್ಮಗನಿಗೆ ಈ ಜನರಿಂದ ಮತ ಹಾಕಿಸಿಕೊಳ್ಳಲು ಬಂದಿದ್ದಾರೆ. ಹಣ ಕೊಟ್ಟು ಮತ ಹಾಕಿಸಿಕೊಳ್ಳುವುದಾಗಿ ಹೇಳಿದ್ದಾರಂತೆ. ಮತದಾರರು ಎರಡು ಬಾರಿ ಮತ ಹಾಕಿದಾಗ ಹಣ ಪಡೆದಿದ್ದರೆ? ಕುಮಾರಸ್ವಾಮಿ ಅವರನ್ನು ನಿಮ್ಮವರು ಎಂದು ಭಾವಿಸಿ ಮನೆ ಮಗನಾದ ಯೋಗೇಶ್ವರ್ ಮರೆತು ಮತ ಹಾಕಿದಿರಿ. ಹೀಗಾಗಿ ಈ ಬಾರಿ ಕುಮಾರಣ್ಣನ ನೋಟು, ಯೋಗೇಶ್ವರ್ ಗೆ ಓಟು ಎಂದು ತೀರ್ಮಾನ ಮಾಡಿ.

ನಾವು ಗ್ಯಾರಂಟಿ ಯೋಜನೆ ಕೊಟ್ಟು ಕುಮಾರಣ್ಣ, ಅಶೋಕಣ್ಣ ನಿಂದ ಬೈಸಿಕೊಳ್ಳುತ್ತಿದ್ದೇವೆ. ನಾವು ಯೋಜನೆ ಜಾರಿ ಮಾಡುವಾಗ ಜಾತಿ ನೋಡಿದ್ದೇವೆಯೇ? ಆದರೂ ಪ್ರಧಾನಮಂತ್ರಿಗಳು ಮಹಿಳೆಯರಿಗೆ 2 ಸಾವಿರ ಕೊಟ್ಟು ರಾಜ್ಯ ಹಾಳುಮಾಡಿದ್ದೇವೆ ಎಂದು ಟೀಕಿಸುತ್ತಿದ್ದಾರೆ”.

ನಾಳಿನ ತೊಟ್ನಳ್ಳಿಯ ಪೂಜ್ಯರಿಂದ ಪಾದಯಾತ್ರೆ ಬಿಜೆಪಿ ಬೆಂಬಲ: ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ

ರೈತರಿಗೆ ಸಿಹಿ ಸುದ್ದಿ ; ಕೇಂದ್ರ ಸರ್ಕಾರದ ಈ ಯೋಜನೆಯಡಿ ‘2 ಲಕ್ಷ ಸಾಲ’ ಲಭ್ಯ, ನೀವೂ ಅರ್ಜಿ ಸಲ್ಲಿಸಿ

Share. Facebook Twitter LinkedIn WhatsApp Email

Related Posts

Gold Loan : ಬ್ಯಾಂಕಿನಲ್ಲಿ 10 ಗ್ರಾಂ ಚಿನ್ನದ ಮೇಲೆ ಎಷ್ಟು ಸಾಲ ನೀಡಲಾಗುತ್ತದೆ? ಇಎಂಐ ಎಷ್ಟು? ಇಲ್ಲಿದೆ ಸಂಪೂರ್ಣ ಮಾಹಿತಿ

05/02/2026 10:25 AM3 Mins Read

BREAKING : ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಭಾರಿ ಅಕ್ರಮ : ವೈಯಕ್ತಿಕ ಸ್ಕ್ಯಾನರ್ ಬಳಸಿ ಸಿಬ್ಬಂದಿಗಳಿಂದ ಲಕ್ಷಾಂತರ ರೂ. ವಂಚನೆ!

05/02/2026 10:23 AM1 Min Read

ಮೈಸೂರಿನಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿ : ಬಹಿರ್ದೆಸೆಗೆ ತೆರಳಿದ್ದಾಗ ಆನೆ ದಾಳಿಗೆ ವೃದ್ಧ ಸಾವು!

05/02/2026 10:18 AM1 Min Read
Recent News

Gold Loan : ಬ್ಯಾಂಕಿನಲ್ಲಿ 10 ಗ್ರಾಂ ಚಿನ್ನದ ಮೇಲೆ ಎಷ್ಟು ಸಾಲ ನೀಡಲಾಗುತ್ತದೆ? ಇಎಂಐ ಎಷ್ಟು? ಇಲ್ಲಿದೆ ಸಂಪೂರ್ಣ ಮಾಹಿತಿ

05/02/2026 10:25 AM

BREAKING : ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಭಾರಿ ಅಕ್ರಮ : ವೈಯಕ್ತಿಕ ಸ್ಕ್ಯಾನರ್ ಬಳಸಿ ಸಿಬ್ಬಂದಿಗಳಿಂದ ಲಕ್ಷಾಂತರ ರೂ. ವಂಚನೆ!

05/02/2026 10:23 AM

ಮೈಸೂರಿನಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿ : ಬಹಿರ್ದೆಸೆಗೆ ತೆರಳಿದ್ದಾಗ ಆನೆ ದಾಳಿಗೆ ವೃದ್ಧ ಸಾವು!

05/02/2026 10:18 AM

BREAKING : ಚಿಕ್ಕಮಗಳೂರಲ್ಲಿ ವಿವಾಹಿತ ‌ಹಿಂದೂ ಮಹಿಳೆಯ ಜೊತೆ ಸಿಕ್ಕಿಬಿದ್ದ ಅನ್ಯ ಧರ್ಮದ ಕಾಂಗ್ರೆಸ್ ಮುಖಂಡ!

05/02/2026 10:15 AM
State News
KARNATAKA

Gold Loan : ಬ್ಯಾಂಕಿನಲ್ಲಿ 10 ಗ್ರಾಂ ಚಿನ್ನದ ಮೇಲೆ ಎಷ್ಟು ಸಾಲ ನೀಡಲಾಗುತ್ತದೆ? ಇಎಂಐ ಎಷ್ಟು? ಇಲ್ಲಿದೆ ಸಂಪೂರ್ಣ ಮಾಹಿತಿ

By kannadanewsnow5705/02/2026 10:25 AM KARNATAKA 3 Mins Read

ಬ್ಯಾಂಕಿನಲ್ಲಿ 10 ಗ್ರಾಂ ಚಿನ್ನದ ಮೇಲೆ ಎಷ್ಟು ಸಾಲ ನೀಡಲಾಗುತ್ತದೆ? ಇಎಂಐ ಎಷ್ಟು? ದೈನಂದಿನ ಜೀವನದಲ್ಲಿ ಯಾವುದೇ ಸಮಯದಲ್ಲಿ ಹಠಾತ್…

BREAKING : ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಭಾರಿ ಅಕ್ರಮ : ವೈಯಕ್ತಿಕ ಸ್ಕ್ಯಾನರ್ ಬಳಸಿ ಸಿಬ್ಬಂದಿಗಳಿಂದ ಲಕ್ಷಾಂತರ ರೂ. ವಂಚನೆ!

05/02/2026 10:23 AM

ಮೈಸೂರಿನಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿ : ಬಹಿರ್ದೆಸೆಗೆ ತೆರಳಿದ್ದಾಗ ಆನೆ ದಾಳಿಗೆ ವೃದ್ಧ ಸಾವು!

05/02/2026 10:18 AM

BREAKING : ಚಿಕ್ಕಮಗಳೂರಲ್ಲಿ ವಿವಾಹಿತ ‌ಹಿಂದೂ ಮಹಿಳೆಯ ಜೊತೆ ಸಿಕ್ಕಿಬಿದ್ದ ಅನ್ಯ ಧರ್ಮದ ಕಾಂಗ್ರೆಸ್ ಮುಖಂಡ!

05/02/2026 10:15 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.