Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ದೇಶಾದ್ಯಂತ ‘ಮತದಾರರ ಪಟ್ಟಿ ಪರಿಷ್ಕರಣೆ’ಗೆ ಚುನಾವಣಾ ಆಯೋಗ ಸಜ್ಜು ; ಶೀಘ್ರದಲ್ಲೇ ದಿನಾಂಕ ಪ್ರಕಟ

11/09/2025 6:42 AM

ರಾಜ್ಯಾದ್ಯಂತ 6-10ನೇ ತರಗತಿ ವಿದ್ಯಾರ್ಥಿಗಳಿಗೆ `ಮರು ಸಿಂಚನ’ ಕಾರ್ಯಕ್ರಮ ವಿಸ್ತರಣೆ : ಸರ್ಕಾರದಿಂದ ಮಹತ್ವದ ಆದೇಶ

11/09/2025 6:40 AM

ರಾಜ್ಯ ಸರ್ಕಾರದಿಂದ ವಿದ್ಯಾರ್ಥಿ’ಗಳಿಗೆ ಗುಡ್ ನ್ಯೂಸ್ : `ಅರಿವು ಯೋಜನೆ’ಯಡಿ ಸಿಗಲಿದೆ 1 ಲಕ್ಷ ರೂ. ಸಾಲ.!

11/09/2025 6:38 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: KSRTCಯಿಂದ ಆಯುಧ ಪೂಜೆಗೆ ನೀಡುತ್ತಿರುವ ಮೊತ್ತ ರೂ.250ಕ್ಕೆ ಹೆಚ್ಚಿಸಿ ಆದೇಶ | KSRTC News
KARNATAKA

BREAKING: KSRTCಯಿಂದ ಆಯುಧ ಪೂಜೆಗೆ ನೀಡುತ್ತಿರುವ ಮೊತ್ತ ರೂ.250ಕ್ಕೆ ಹೆಚ್ಚಿಸಿ ಆದೇಶ | KSRTC News

By kannadanewsnow0909/10/2024 8:49 PM

ಬೆಂಗಳೂರು: ಕಳೆದ ಕೆಲ ವರ್ಷಗಳಿಂದ ಕೆ ಎಸ್ ಆರ್ ಟಿಸಿಯಿಂದ ಸಾರಿಗೆ ಬಸ್ಸುಗಳನ್ನು ಆಯುಧ ಪೂಜೆಯಂದು ಪೂಜಿಸಲು ರೂ.100 ನೀಡಲಾಗುತ್ತಿತ್ತು. ಈ ದುಬಾರಿ ದುನಿಯಾದಲ್ಲಿ ಇಷ್ಟು ಹಣ ಸಾಕಾಗುವುದೇ ಎಂಬುದಾಗಿ ಅನೇಕರು ಪ್ರಶ್ನಿಸಿದ್ದರು. ಅಲ್ಲದೇ ಹೆಚ್ಚಳಕ್ಕೂ ಒತ್ತಾಯಿಸಿದ್ದರು. ಈಗ ಕೆ ಎಸ್ ಆರ್ ಟಿ ಸಿ ಸಂಸ್ಥೆಯಲ್ಲಿ ಆಯುಧ ಪೂಜೆಗೆ ರೂ.100 ನೀಡುತ್ತಿರುವುದನ್ನು‌ ರೂ.250 ಕ್ಕೆ ಹೆಚ್ಚಿಸಿ ಆದೇಶಿಸಿದೆ.

ಈ ಕುರಿತಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮುಖ್ಯ ಯಾಂತ್ರಿಕ ಅಭಿಯಂತರರು ಆದೇಶವನ್ನು ಹೊರಡಿಸಿದ್ದು, ಪ್ರತಿ ವರ್ಷವು ನಾಡಹಬ್ಬ ಮೈಸೂರು ದಸರಾ ಪ್ರಯುಕ್ತ ಆಚರಣೆಯಲ್ಲಿರುವ ಆಯುಧ ಪೂಜೆಯ ದಿನದಂದು ನಿಗಮದ ವಾಹನಗಳು ಮತ್ತು ಯಂತ್ರೋಪಕರಣಗಳನ್ನು ಸುಸ್ಥಿತಿಯಲ್ಲಿಟ್ಟು ಪೂಜೆ ಮಾಡುವುದು ಸಂಪುದಾಯವಿದ್ದು ಉಲ್ಲೇಖಿತ ಪತ್ರ 2 ರಲ್ಲಿ ವಿಭಾಗಗಳಲ್ಲಿ ಕಾರ್ಯಾಚರಣೆಯಲ್ಲಿರುವ ಪ್ರತಿ ಪ್ರಯಾಣಿಕ ಹಾಗೂ ಇಲಾಖಾ ವಾಹನದ ಪೂಜಾ ಕಾರ್ಯಕ್ಕೆ ರೂ. 100/- (ನೂರು ರೂಪಾಯಿಗಳು ಮಾತ್ರ) ರಂತೆ ಮುಂಗಡ ಹಣ ಪಡೆದು ಸ್ವಚ್ಛತೆಯೊಂದಿಗೆ ವಾಹನಗಳ ಮತ್ತು ಯಂತ್ರೋಪಕರಣಗಳ ಪೂಜೆ ಮಾಡುವಂತೆ ಸೂಚಿಸಲಾಗಿತ್ತು ಎಂದಿದ್ದಾರೆ.

ಮುಂದುವರೆದಂತೆ, ಮಾನ್ಯ ವ್ಯವಸ್ಥಾಪಕ ನಿರ್ದೇಶಕರ ಆದೇಶದಂತೆ ವಿಭಾಗಗಳಲ್ಲಿ ಕಾರ್ಯಾಚರಣೆಯಲ್ಲಿರುವ ಪ್ರತಿ ಪುಯಾಣಿಕ ಹಾಗೂ ಇಲಾಖಾ ವಾಹನದ ಪೂಜಾ ಕಾರ್ಯಕ್ಕೆ ದರವನ್ನು ಪರಿಷ್ಕರಿಸಿ ರೂ. 250/- (ಎರಡು ನೂರ ಐವತ್ತು ರೂಪಾಯಿಗಳು ಮಾತ್ರ) ಅನ್ನು ನಿಗದಿಪಡಿಸಿರುವುದರಿಂದ, ಅದರಂತೆ ಮುಂಗಡ ಹಣ ಪಡೆದು ಸ್ವಚ್ಛತೆಯೊಂದಿಗೆ ವಾಹನಗಳ/ಯಂತ್ರೋಪಕರಣಗಳ ಪೂಜಾ ಕಾರ್ಯಾಗಳನ್ನು ನೆರವೇರಿಸುವಂತೆ ಸೂಚಿಸಿದ್ದಾರೆ.

ಅಂದಹಾಗೆ ಒಂದು ಘಟಕದಲ್ಲಿ ಸರಿ ಸುಮಾರು 100 ರಿಂದ 500 ಬಸ್ಸುಗಳಿರುತ್ತವೆ. ಒಂದು ಬಸ್ಸಿಗೆ ರೂ. 100 ಎಂದು ಒಂದು ಘಟಕಕ್ಕೆ / ಕಾರ್ಯಾಗಾರಕ್ಕೆ ನೀಡಲಾಗುತ್ತದೆ. 2008 ರವರೆಗೂ ರೂ.10 ಪ್ರತಿ‌ ಬಸ್ಸಿಗೆ , 2009 ರಲ್ಲಿ ಪ್ರತಿ ಬಸ್ಸಿಗೆ ರೂ 30 ಕ್ಕೆ ಏರಿಕೆ ಮಾಡಲಾಯಿತು. 2016 ರಲ್ಲಿ ಪ್ರತಿ ಬಸ್ಸಿಗೆ ರೂ.50 ಕ್ಕೆ ಏರಿಕೆ , 2017 ರಲ್ಲಿ ಪ್ರತಿ‌ ಬಸ್ಸಿಗೆ ರೂ.100 ಕ್ಕೆ ಏರಿಕೆ ‌ಮಾಡಲಾಗಿತ್ತು. ರೂ.100 ಪ್ರತಿ‌ ಬಸ್ಸಿಗೆ ನೀಡುವ ಮೊತ್ತವು 2023 ರವರೆಗೂ ರೂ.100 ಆಗಿತ್ತು. 2024 ಅಂದರೆ ಪ್ರಸಕ್ತ ವರ್ಷದಲ್ಲಿ ಆಯುಧಪೂಜೆಗೆ ಪ್ರತಿ‌ ಬಸ್ಸಿಗೆ ಈಗ ನೀಡಲಾಗುತ್ತಿರುವ ರೂ.100 ಅನ್ನು ರೂ.250 ಕ್ಕೆ ಹೆಚ್ಚಿಸಲು ಮಾನ್ಯ ಸಾರಿಗೆ ಹಾಗೂ ಮುಜರಾಯಿ ಸಚಿವರು ಆದೇಶಿಸಿದ್ದಾರೆ. ಅದರಂತೆ ಪರಿಷ್ಕೃತ ಆದೇಶ‌ ಹೊರಡಿಸಲಾಗಿದೆ.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

BREAKING: ರಾಜ್ಯದಲ್ಲಿ ಮತ್ತೊಂದು ‘ಹಗರಣ’ ಬೆಳಕಿಗೆ: ‘ಜಿ.ಎ ಬಾವ’ ಸೇರಿ ಇತರರ ವಿರುದ್ಧ ‘FIR’ ದಾಖಲು

Good News: ದಸರಾ ಹಬ್ಬದ ಪ್ರಯುಕ್ತ ಅರಸೀಕೆರೆ-ಮೈಸೂರು ನಡುವೆ ಡೆಮು ವಿಶೇಷ ರೈಲು ಸಂಚಾರ

ಬೆಂಗಳೂರಿನ ಆಸ್ತಿ ಮಾಲೀಕರಿಗೆ ಮಹತ್ವದ ಮಾಹಿತಿ: ಈ ಹಂತ ಅನುಸರಿಸಿ, ‘ಆನ್ ಲೈನ್’ನಲ್ಲೇ ‘ಇ-ಖಾತಾ’ ವೀಕ್ಷಿಸಿ

Share. Facebook Twitter LinkedIn WhatsApp Email

Related Posts

ರಾಜ್ಯಾದ್ಯಂತ 6-10ನೇ ತರಗತಿ ವಿದ್ಯಾರ್ಥಿಗಳಿಗೆ `ಮರು ಸಿಂಚನ’ ಕಾರ್ಯಕ್ರಮ ವಿಸ್ತರಣೆ : ಸರ್ಕಾರದಿಂದ ಮಹತ್ವದ ಆದೇಶ

11/09/2025 6:40 AM1 Min Read

ರಾಜ್ಯ ಸರ್ಕಾರದಿಂದ ವಿದ್ಯಾರ್ಥಿ’ಗಳಿಗೆ ಗುಡ್ ನ್ಯೂಸ್ : `ಅರಿವು ಯೋಜನೆ’ಯಡಿ ಸಿಗಲಿದೆ 1 ಲಕ್ಷ ರೂ. ಸಾಲ.!

11/09/2025 6:38 AM1 Min Read

ರಾಜ್ಯದ 984 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ `ಇಂಗ್ಲಿಷ್ ಮೀಡಿಯಂ’ ತರಗತಿ ಆರಂಭಕ್ಕೆ ಅನುಮತಿ

11/09/2025 6:33 AM2 Mins Read
Recent News

ದೇಶಾದ್ಯಂತ ‘ಮತದಾರರ ಪಟ್ಟಿ ಪರಿಷ್ಕರಣೆ’ಗೆ ಚುನಾವಣಾ ಆಯೋಗ ಸಜ್ಜು ; ಶೀಘ್ರದಲ್ಲೇ ದಿನಾಂಕ ಪ್ರಕಟ

11/09/2025 6:42 AM

ರಾಜ್ಯಾದ್ಯಂತ 6-10ನೇ ತರಗತಿ ವಿದ್ಯಾರ್ಥಿಗಳಿಗೆ `ಮರು ಸಿಂಚನ’ ಕಾರ್ಯಕ್ರಮ ವಿಸ್ತರಣೆ : ಸರ್ಕಾರದಿಂದ ಮಹತ್ವದ ಆದೇಶ

11/09/2025 6:40 AM

ರಾಜ್ಯ ಸರ್ಕಾರದಿಂದ ವಿದ್ಯಾರ್ಥಿ’ಗಳಿಗೆ ಗುಡ್ ನ್ಯೂಸ್ : `ಅರಿವು ಯೋಜನೆ’ಯಡಿ ಸಿಗಲಿದೆ 1 ಲಕ್ಷ ರೂ. ಸಾಲ.!

11/09/2025 6:38 AM

‘ಎಲ್ಲೆಡೆ ಸಂಪೂರ್ಣ ಅರಾಜಕತೆ ಇತ್ತು’: ಕಠ್ಮಂಡುವಿನಲ್ಲಿ ಸಿಲುಕಿರುವ ಪ್ರವಾಸಿಗರು

11/09/2025 6:34 AM
State News
KARNATAKA

ರಾಜ್ಯಾದ್ಯಂತ 6-10ನೇ ತರಗತಿ ವಿದ್ಯಾರ್ಥಿಗಳಿಗೆ `ಮರು ಸಿಂಚನ’ ಕಾರ್ಯಕ್ರಮ ವಿಸ್ತರಣೆ : ಸರ್ಕಾರದಿಂದ ಮಹತ್ವದ ಆದೇಶ

By kannadanewsnow5711/09/2025 6:40 AM KARNATAKA 1 Min Read

ಬೆಂಗಳೂರು : 2025-26ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ 111(v)ರ ಘೋಷಣೆಯಂತೆ ಅತೀ ಕಡಿಮೆ ಕಲಿಕಾ ಸ್ತರದಲ್ಲಿರುವ 6 ರಿಂದ…

ರಾಜ್ಯ ಸರ್ಕಾರದಿಂದ ವಿದ್ಯಾರ್ಥಿ’ಗಳಿಗೆ ಗುಡ್ ನ್ಯೂಸ್ : `ಅರಿವು ಯೋಜನೆ’ಯಡಿ ಸಿಗಲಿದೆ 1 ಲಕ್ಷ ರೂ. ಸಾಲ.!

11/09/2025 6:38 AM

ರಾಜ್ಯದ 984 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ `ಇಂಗ್ಲಿಷ್ ಮೀಡಿಯಂ’ ತರಗತಿ ಆರಂಭಕ್ಕೆ ಅನುಮತಿ

11/09/2025 6:33 AM

ರಾಜ್ಯಾದ್ಯಂತ ನಾಳೆಯಿಂದ `SSLC’ ಅರ್ಧವಾರ್ಷಿಕ ಪರೀಕ್ಷೆ ಆರಂಭ : ವಿದ್ಯಾರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ

11/09/2025 6:19 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.