Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಅಮಾವಾಸ್ಯೆ ತಿಥಿಯಂದು ನಿಮ್ಮ ಮನೆಯಲ್ಲಿ ಅರ್ಧ ಗಂಟೆ ಈ ದೀಪವನ್ನು ಹಚ್ಚಿ, ಪೂರ್ವಿಕರ ಶಾಪ, ಪಿತೃ ದೋಷ ನಿವಾರಣೆ

17/03/2026 7:03 PM

‘KSRTC’ಗೆ ಒಲಿದ ಎರಡು ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿಗಳು: ‘ಧ್ವನಿಸ್ಪಂದನ’, ಅವತಾರ್ 4.0’ಗೆ ಜಾಗತಿಕ ಮನ್ನಣೆ!

17/03/2026 6:41 PM

ವಾಹನ ಸವಾರರಿಗೆ ಬಿಗ್ ರಿಲೀಫ್ ; ಪೆಟ್ರೋಲ್, ಡೀಸೆಲ್ ಕುರಿತು ಕೇಂದ್ರ ಸರ್ಕಾರ ಮಹತ್ವದ ಘೋಷಣೆ!

17/03/2026 6:22 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘KSRTC’ಗೆ ಒಲಿದ ಎರಡು ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿಗಳು: ‘ಧ್ವನಿಸ್ಪಂದನ’, ಅವತಾರ್ 4.0’ಗೆ ಜಾಗತಿಕ ಮನ್ನಣೆ!
KARNATAKA

‘KSRTC’ಗೆ ಒಲಿದ ಎರಡು ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿಗಳು: ‘ಧ್ವನಿಸ್ಪಂದನ’, ಅವತಾರ್ 4.0’ಗೆ ಜಾಗತಿಕ ಮನ್ನಣೆ!

By kannadanewsnow0917/03/2026 6:41 PM

ಬೆಂಗಳೂರು/ಹೈದರಾಬಾದ್: ಸಾರಿಗೆ ಕ್ಷೇತ್ರದಲ್ಲಿನ ನಾವೀನ್ಯತೆ ಮತ್ತು ತಾಂತ್ರಿಕ ಪ್ರಗತಿಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ಎರಡು ಪ್ರತಿಷ್ಠಿತ ‘ಎಲೆಟ್ಸ್ ಮೊಬಿಲಿಟಿ ಎಕ್ಸಲೆನ್ಸ್ 2026’ (Elets Mobility Excellence 2026) ರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.

ಯಾವ ವರ್ಗಗಳಲ್ಲಿ ಪ್ರಶಸ್ತಿ?

  1. ನಾಗರಿಕ ಸಹಭಾಗಿತ್ವ ಮತ್ತು ಒಳಗೊಳ್ಳುವಿಕೆ (Inclusive Mobility): ನಿಗಮದ ‘ಧ್ವನಿಸ್ಪಂದನ’ ಉಪಕ್ರಮಕ್ಕಾಗಿ ಈ ಪ್ರಶಸ್ತಿ ಲಭಿಸಿದೆ.

  2. ಸಾರ್ವಜನಿಕ ಸಾರಿಗೆ ಡಿಜಿಟಲೀಕರಣ (Outstanding Public Transport Digitisation): ಯುಪಿಐ (UPI) ಸೌಲಭ್ಯ ಒಳಗೊಂಡ ‘ಅವತಾರ್ 4.0’ (AWATAR 4.0) ಯೋಜನೆಗಾಗಿ ಈ ಗೌರವ ಸಂದಿದೆ.

ಪ್ರಶಸ್ತಿ ತಂದುಕೊಟ್ಟ ಯೋಜನೆಗಳ ವೈಶಿಷ್ಟ್ಯ:

  • ಧ್ವನಿಸ್ಪಂದನ (ಮೈಸೂರು): ಜರ್ಮನಿಯ GiZ ಸಹಯೋಗದೊಂದಿಗೆ ಮೈಸೂರು ನಗರದ 200 ಬಸ್‌ಗಳಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದು ದೃಷ್ಟಿ ವಿಕಲಚೇತನ ಪ್ರಯಾಣಿಕರಿಗೆ ಬಸ್‌ಗಳನ್ನು ಗುರುತಿಸಲು ಮತ್ತು ಸುಲಭವಾಗಿ ಸಂಚರಿಸಲು ನೆರವಾಗುತ್ತಿದೆ. ಇದರಿಂದ ಅವರ ಆತ್ಮವಿಶ್ವಾಸ ಮತ್ತು ಸಂಚಾರದ ಸ್ವಾತಂತ್ರ್ಯ ಹೆಚ್ಚಿದೆ.

  • ಅವತಾರ್ 4.0 ಮತ್ತು ಯುಪಿಐ: ಪ್ರಯಾಣಿಕರು ಎಲ್ಲಿಂದಲಾದರೂ, ಯಾವುದೇ ಸಮಯದಲ್ಲಿ ಟಿಕೆಟ್ ಕಾಯ್ದಿರಿಸಲು ‘ಅವತಾರ್’ ವ್ಯವಸ್ಥೆ ಸಹಕಾರಿಯಾಗಿದೆ. ಇದರೊಂದಿಗೆ ಅಳವಡಿಸಲಾಗಿರುವ ಡೈನಾಮಿಕ್ ಯುಪಿಐ (Dynamic UPI) ಪಾವತಿ ವ್ಯವಸ್ಥೆಯು ನಗದುರಹಿತ ವ್ಯವಹಾರ ಮತ್ತು ಪಾರದರ್ಶಕತೆಯನ್ನು ಉತ್ತೇಜಿಸಿದೆ.

ಪ್ರಶಸ್ತಿ ಪ್ರದಾನ ಸಮಾರಂಭ:

ದಿನಾಂಕ 17/03/2026 ರಂದು ಹೈದರಾಬಾದ್‌ನ ನೊವೊಟೆಲ್ ಹೋಟೆಲ್‌ನಲ್ಲಿ ನಡೆದ ಸಮಾರಂಭದಲ್ಲಿ, ಕೆಎಸ್‌ಆರ್‌ಟಿಸಿ ನಿರ್ದೇಶಕಿ (ಸಿ ಮತ್ತು ಜಾ) ಗಾಯಿತ್ರಿ ಕೆ.ಎಂ. ಅವರು ತೆಲಂಗಾಣ ಸರ್ಕಾರದ ಸಾರಿಗೆ ಆಯುಕ್ತರಾದ ಕೆ. ಇಳಂಬರಿತಿ ಮತ್ತು ಎಲೆಟ್ಸ್ ಟೆಕ್ನೋಮೀಡಿಯಾದ ಸಿಇಒ ಡಾ. ರವಿ ಗುಪ್ತಾ ಅವರಿಂದ ಪ್ರಶಸ್ತಿಗಳನ್ನು ಸ್ವೀಕರಿಸಿದರು.

ಒಟ್ಟಾರೆಯಾಗಿ ಕರ್ನಾಟಕದ ಹೆಮ್ಮೆಯ ಕೆ ಎಸ್ ಆರ್ ಟಿ ಸಿಯು ತಂತ್ರಜ್ಞಾನವನ್ನು ಸಾಮಾನ್ಯ ಜನರ ಮತ್ತು ವಿಕಲಚೇತನರ ಸೇವೆಗೆ ಬಳಸಿಕೊಳ್ಳುವಲ್ಲಿ ದೇಶಕ್ಕೇ ಮಾದರಿಯಾಗಿ ನಿಂತಿದೆ. ಆ ಮೂಲಕ ಜನಮನ್ನಣೆ ಗಳಿಸಿರುವುದು ಹೆಮ್ಮೆಯ ಸಂಗತಿಯೇ ಸರಿ.

SHOCKING : ಎದೆಗೆ ರಿವಾಲ್ವರ್ ಇಟ್ಟು ರೀಲ್ಸ್ ಮಾಡಿದಾಗ ಮಿಸ್‌ಫೈರ್ : ಗೆಳೆಯನ ಮುಂದೆನೆ ಹೋಯ್ತು ಜೀವ | Watch Video

BREAKING : ಎಲ್ಲಾ ಗ್ರಾಹಕರಿಗೆ ‘eKYC, ಆಧಾರ್ ದೃಢೀಕರಣ’ ಅಗತ್ಯವಿಲ್ಲ ; ಕೇಂದ್ರ ಸರ್ಕಾರ ಸ್ಪಷ್ಟನೆ

Share. Facebook Twitter LinkedIn WhatsApp Email

Related Posts

ಅಮಾವಾಸ್ಯೆ ತಿಥಿಯಂದು ನಿಮ್ಮ ಮನೆಯಲ್ಲಿ ಅರ್ಧ ಗಂಟೆ ಈ ದೀಪವನ್ನು ಹಚ್ಚಿ, ಪೂರ್ವಿಕರ ಶಾಪ, ಪಿತೃ ದೋಷ ನಿವಾರಣೆ

17/03/2026 7:03 PM3 Mins Read

ಸೊರಬ ಆಸ್ಪತ್ರೆಯಲ್ಲಿ ಸೌಲಭ್ಯಗಳ ಕೊರತೆ: ತಾಲ್ಲೂಕು ಬಿಜೆಪಿ ಅಧ್ಯಕ್ಷ ಪ್ರಕಾಶ್ ಅಗಸನಹಳ್ಳಿ ಉಗ್ರ ಹೋರಾಟದ ಎಚ್ಚರಿಕೆ

17/03/2026 6:05 PM2 Mins Read

BREAKING: ಬೆಂಗಳೂರಿನಲ್ಲಿ ಬಿರು ಬಿಸಿಲಿಗೆ ವರುಣನ ತಂಪು: ಹಲವೆಡೆ ದಿಢೀರ್ ಮಳೆ, ವಾಹನ ಸವಾರರು ಕಂಗಾಲು!

17/03/2026 5:37 PM1 Min Read
Recent News

ಅಮಾವಾಸ್ಯೆ ತಿಥಿಯಂದು ನಿಮ್ಮ ಮನೆಯಲ್ಲಿ ಅರ್ಧ ಗಂಟೆ ಈ ದೀಪವನ್ನು ಹಚ್ಚಿ, ಪೂರ್ವಿಕರ ಶಾಪ, ಪಿತೃ ದೋಷ ನಿವಾರಣೆ

17/03/2026 7:03 PM

‘KSRTC’ಗೆ ಒಲಿದ ಎರಡು ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿಗಳು: ‘ಧ್ವನಿಸ್ಪಂದನ’, ಅವತಾರ್ 4.0’ಗೆ ಜಾಗತಿಕ ಮನ್ನಣೆ!

17/03/2026 6:41 PM

ವಾಹನ ಸವಾರರಿಗೆ ಬಿಗ್ ರಿಲೀಫ್ ; ಪೆಟ್ರೋಲ್, ಡೀಸೆಲ್ ಕುರಿತು ಕೇಂದ್ರ ಸರ್ಕಾರ ಮಹತ್ವದ ಘೋಷಣೆ!

17/03/2026 6:22 PM

BREAKING: ನಟ, ನಿರ್ದೇಶಕ ಜೋಗಿ ಪ್ರೇಮ್‌ ಗೆ ಬಿಗ್‌ ಶಾಕ್‌: ಸರ್ಸೆ ಸೆರಗ ಸರ್ಸೆ ಹಾಡು ತೆಗೆದುಹಾಕಲು ಸರ್ಕಾರದ ಆದೇಶ

17/03/2026 6:09 PM
State News
KARNATAKA

ಅಮಾವಾಸ್ಯೆ ತಿಥಿಯಂದು ನಿಮ್ಮ ಮನೆಯಲ್ಲಿ ಅರ್ಧ ಗಂಟೆ ಈ ದೀಪವನ್ನು ಹಚ್ಚಿ, ಪೂರ್ವಿಕರ ಶಾಪ, ಪಿತೃ ದೋಷ ನಿವಾರಣೆ

By kannadanewsnow0917/03/2026 7:03 PM KARNATAKA 3 Mins Read

ಅಮಾವಾಸ್ಯೆ ತಿಥಿಯಂದು ನಿಮ್ಮ ಮನೆಯಲ್ಲಿ ಅರ್ಧ ಗಂಟೆ ಈ ದೀಪವನ್ನು ಹಚ್ಚಿದರೆ ಸಾಕು. ಪೂರ್ವಿಕರ ಶಾಪ, ಪಿತೃ ದೋಷ ನಿವಾರಣೆಯಾಗಿ…

‘KSRTC’ಗೆ ಒಲಿದ ಎರಡು ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿಗಳು: ‘ಧ್ವನಿಸ್ಪಂದನ’, ಅವತಾರ್ 4.0’ಗೆ ಜಾಗತಿಕ ಮನ್ನಣೆ!

17/03/2026 6:41 PM

ಸೊರಬ ಆಸ್ಪತ್ರೆಯಲ್ಲಿ ಸೌಲಭ್ಯಗಳ ಕೊರತೆ: ತಾಲ್ಲೂಕು ಬಿಜೆಪಿ ಅಧ್ಯಕ್ಷ ಪ್ರಕಾಶ್ ಅಗಸನಹಳ್ಳಿ ಉಗ್ರ ಹೋರಾಟದ ಎಚ್ಚರಿಕೆ

17/03/2026 6:05 PM

BREAKING: ಬೆಂಗಳೂರಿನಲ್ಲಿ ಬಿರು ಬಿಸಿಲಿಗೆ ವರುಣನ ತಂಪು: ಹಲವೆಡೆ ದಿಢೀರ್ ಮಳೆ, ವಾಹನ ಸವಾರರು ಕಂಗಾಲು!

17/03/2026 5:37 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.