Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಅಂಚೆ ಬಳಕೆದಾರರೇ ಗಮನಿಸಿ ; ‘ಸ್ಪೀಡ್ ಪೋಸ್ಟ್’ ವಿತರಣೆಯಲ್ಲಿ ಮಹತ್ವದ ಬದಲಾವಣೆ!

27/09/2025 8:01 PM

ದಸರಾ ಧರ್ಮಕ್ಕೆ ಸೀಮಿತಿವಲ್ಲದ ನಾಡಹಬ್ಬ: ಸಚಿವ ಕೃಷ್ಣ ಬೈರೇಗೌಡ ಅಭಿಪ್ರಾಯ

27/09/2025 7:39 PM

Good News ; ಕೇಂದ್ರ ಸರ್ಕಾರದಿಂದ ಅಂಗವಿಕಲರ ‘ವಿದ್ಯಾರ್ಥಿ ವೇತನ’ಕ್ಕೆ ಅರ್ಜಿ ಆಹ್ವಾನ ; ತಕ್ಷಣ ಅಪ್ಲೈ ಮಾಡಿ!

27/09/2025 7:32 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ದಸರಾ ಧರ್ಮಕ್ಕೆ ಸೀಮಿತಿವಲ್ಲದ ನಾಡಹಬ್ಬ: ಸಚಿವ ಕೃಷ್ಣ ಬೈರೇಗೌಡ ಅಭಿಪ್ರಾಯ
KARNATAKA

ದಸರಾ ಧರ್ಮಕ್ಕೆ ಸೀಮಿತಿವಲ್ಲದ ನಾಡಹಬ್ಬ: ಸಚಿವ ಕೃಷ್ಣ ಬೈರೇಗೌಡ ಅಭಿಪ್ರಾಯ

By kannadanewsnow0927/09/2025 7:39 PM

ಬೆಂಗಳೂರು: ದಸರಾ ಒಂದು ಧರ್ಮಕ್ಕೆ ಸೀಮಿತವಾದ ಹಬ್ಬವಲ್ಲ. ಬದಲಿಗೆ ನಾಡಿನಲ್ಲಿರುವ ಎಲ್ಲಾ ಜಾತಿ ಧರ್ಮದವರೂ ಒಗ್ಗಟ್ಟಾಗಿ ಆಚರಿಸುವ ನಾಡಹಬ್ಬ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಭಿಪ್ರಾಯಪಟ್ಟರು. 

ಶನಿವಾರ ಸಹಕಾರ ನಗರ ಮೈದಾನದಲ್ಲಿ ದುರ್ಗಾದೇವಿಯನ್ನು ಪ್ರತಿಷ್ಠಾಪಿಸಿ ಸಹಸ್ರನಾಮ ಜಪಿಸಿ ಮಾತನಾಡಿದ ಅವರು, “ಒಂಭತ್ತು ದಿನಗಳು ನಡೆಯುವ ದಸರಾ ತುಂಬಾ ವಿಶಿಷ್ಠವಾದ ಹಬ್ಬ. ಒಂಭತ್ತು ದಿನಗಳ ಪೈಕಿ ಒಂದೊಂದು ದಿನವೂ ಕಲೆ, ಸಾಹಿತ್ಯ, ಸಂಗೀತ, ಜಾನಪದ ನೃತ್ಯ ಸೇರಿದಂತೆ ನಾಡಿನ ಎಲ್ಲಾ ಬಗೆಯ ಕಲಾ ಪ್ರಕಾರಗಳನ್ನೂ ಕೊಂಡಾಡಲಾಗುತ್ತದೆ. ಈ ಕಲಾ ಪ್ರಕಾರಗಳಲ್ಲಿ ನಾಡಿನ ಎಲ್ಲಾ ಜಾತಿ-ಧರ್ಮದ ಜನರೂ ಪಾಲ್ಗೊಳ್ಳುತ್ತಾರೆ. ಹೀಗೆ ಸಮಾಜದ ಎಲ್ಲಾ ಬಗೆಯ ಜನರನ್ನೂ ಒಂದೆಡೆ ಸೇರಿಸುವ ಕೀರ್ತಿ ನಾಡಹಬ್ಬ ದಸರಾಕ್ಕೆ ಮಾತ್ರವಿದೆ. ಹೀಗಾಗಿ ಈ ಹಬ್ಬ ಧರ್ಮಾತೀತವಾದದ್ದು” ಎಂದರು.

ದಸರಾ ಹಬ್ಬವನ್ನು ದೇಶದಾದ್ಯಂತ ಬೇರೆ ಬೇರೆ ಹೆಸರಿನಲ್ಲಿ ಆಚರಿಸಲಾಗುತ್ತದೆ. ನಾವು ದಸರಾ ಎಂದತೆ ಉತ್ತರ ಭಾರತದವರು ನವರಾತ್ರಿ ಎಂದು ಕರೆಯುತ್ತಾರೆ. ಹೆಸರು ಏನೇ ಆದರೂ ದುಷ್ಟ ಶಕ್ತಿಗಳ ವಿರುದ್ಧ ಉತ್ತಮರ ಗೆಲುವು ಎಂಬುದೇ ದಸರಾ ಹಬ್ಬ ನೀಡುವ ಸಂದೇಶ. ಏಳು ಶತಮಾನಗಳ ಹಿಂದೆ ಶ್ರೀರಂಗಪಟ್ಟಣದಲ್ಲಿ ದಸರಾವನ್ನು ನಾಡಹಬ್ಬವಾಗಿ ಆಚರಿಸಲಾಗುತ್ತಿತ್ತು. ತದನಂತರ ಈ ಹಬ್ಬ ಪರಂಪರಾಗತವಾಗಿ ಮೈಸೂರಿನಲ್ಲಿ ಆಚರಿಸಲಾಗುತ್ತಿದೆ. ಸತತ 9  ದಿನಗಳ ಕಾಲ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಧರ್ಮ ಮತ್ತು ಸಂಸ್ಕೃತಿ ಎರಡನ್ನೂ ಮಿಳಿತಗೊಳಿಸಿ ಇಡೀ ಸಮಾಜ ಒಂದು ಗೂಡಿ ಆಚರಿಸುವುದೇ ನಮ್ಮ ನಾಡಿನ ದಸರಾ ಹಬ್ಬದ ವಿಶೇಷ” ಎಂದು ಹರ್ಷ ವ್ಯಕ್ತಪಡಿಸಿದರು.

“ನಗರ ಭಾಗಗಳಲ್ಲಿ ಹಬ್ಬ ಎಂದರೆ ಮನೆಯಲ್ಲಿ ಹೆಂಗಸರು ದೇವರ ಪೂಜೆ ಮಾಡುವುದು, ಗಂಡಸರು ಟೀವಿ ನೋಡುವುದು ವಿಶಿಷ್ಟ ಊಟ ಮಾಡುವುದರೊಂದಿಗೆ ಹಬ್ಬ ಮುಗಿದು ಹೋಗುತ್ತದೆ. ಆದರೆ, ನಮ್ಮ ಕ್ಷೇತ್ರದಲ್ಲಿ ಹೀಗೆ ಆಗಬಾರದು. ಸಾರ್ವಜನಿಕರೆಲ್ಲರೂ ಒಗ್ಗಟ್ಟಾಗಿ ಒಂದೆಡೆ ಸೇರಿ ಸಾಮೂಹಿಕವಾಗಿ ಹಬ್ಬ ಆಚರಿಸಬೇಕು ಎಂಬದೇ ನಮ್ಮ ಉದ್ದೇಶ. ಅದಕ್ಕಾಗಿಯೇ ನಮ್ಮ ಕ್ಷೆತ್ರದಲ್ಲಿ ಸಂಕ್ರಾಂತಿ, ಯುಗಾದಿ, ಓಣಂ, ದಸರಾ ಸೇರಿದಂತೆ ಎಲ್ಲಾ ಹಬ್ಬವನ್ನೂ ಆಯೋಜಿಸಲಾಗುತ್ತದೆ. ಹಬ್ಬವೆಂದರೆ ಗ್ರಾಮೀಣ ಭಾಗಗಳಂತೆ ಎಲ್ಲರೂ ಒಟ್ಟಾಗಿ ಸೇರಿ ಸಂತೋಷದಿಂದ ಜೊತೆಗೆ ಆಚರಿಸಬೇಕು” ಎಂದು ತಿಳಿಸಿದರು.

ಇಂದು ದಸರಾ ಪ್ರಯುಕ್ತ ದೇವರ ಪೂಜಾ ಕಾರ್ಯಕ್ರಮ ಆಯೋಜಿಸಲಾಗಿದೆ. ಭಾನುವಾರ ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿವೆ. ನಮ್ಮ ಕ್ಷೇತ್ರದ ಯುವಕರು ಮಹಿಳೆಯರು ಹಾಗೂ ಯಕ್ಷಗಾನ ತಂಡಗಳು ನೃತ್ಯ ಪ್ರದರ್ಶನ ನೀಡಲಿದ್ದಾರೆ. ರಸಸಂಜೆ ಸಂಗೀತ ಕಾರ್ಯಕ್ರಮ ಇರಲಿದೆ. ಅಲ್ಲದೆ, ದಸರಾ ಹಬ್ಬವೆಂದರೆ ಗೊಂಬೆಗಳ ಪ್ರದರ್ಶನ. ಆದರೆ, ನಮ್ಮ ಜನ ಈಗ ಈ ಹಳೆ ಸಂಪ್ರದಾಯವನ್ನು ಮರೆಯುತ್ತಿದ್ದಾರೆ. ಹೀಗಾಗಿ ಭಾನುವಾರ ಬೆಳಗ್ಗೆಯಿಂದಲೇ ಗೊಂಬೆಗಳ ಪ್ರದರ್ಶನ ಇಟ್ಟವರ ಮನೆಗೆ ತೆರಳಿ ಉಡುಗೊರೆ ನೀಡಲಾಗುವುದು. ಈ ಮೂಲಕ ನಮ್ಮ ಸಂಪ್ರದಾಯ ಮುಂದಿನ ಪೀಳಿಗೆಗೂ ಉಳಿಯಲು ಪ್ರೇರೇಪಿಸಲಾಗುವುದು ಎಂದರು.

Share. Facebook Twitter LinkedIn WhatsApp Email

Related Posts

BREAKING: ಬೆಂಗಳೂರಲ್ಲಿ ಕೇವಲ ಜಲ್ಲಿ ಹಾಕಿ ಟಾರ್ ಹಾಕದೇ ಬಿಟ್ಟ AE ಸಸ್ಪೆಂಡ್: ಸಿಎಂ ಸಿದ್ದರಾಮಯ್ಯ ಆದೇಶ

27/09/2025 7:18 PM1 Min Read

ಹೀಗಿದೆ ಸಿಎಂ ಸಿದ್ದರಾಮಯ್ಯ ಬೆಂಗಳೂರು ಸಿಡಿ ರೌಂಡ್ಸ್ ಹೈಲೈಟ್ಸ್

27/09/2025 7:04 PM2 Mins Read

ದೀಪಕ್ಕೆ ಯಾವ ಎಣ್ಣೆ ಹಾಕಿದ್ರೆ ಏನು ಫಲ? ಇಲ್ಲಿದೆ ಮಾಹಿತಿ

27/09/2025 6:31 PM4 Mins Read
Recent News

ಅಂಚೆ ಬಳಕೆದಾರರೇ ಗಮನಿಸಿ ; ‘ಸ್ಪೀಡ್ ಪೋಸ್ಟ್’ ವಿತರಣೆಯಲ್ಲಿ ಮಹತ್ವದ ಬದಲಾವಣೆ!

27/09/2025 8:01 PM

ದಸರಾ ಧರ್ಮಕ್ಕೆ ಸೀಮಿತಿವಲ್ಲದ ನಾಡಹಬ್ಬ: ಸಚಿವ ಕೃಷ್ಣ ಬೈರೇಗೌಡ ಅಭಿಪ್ರಾಯ

27/09/2025 7:39 PM

Good News ; ಕೇಂದ್ರ ಸರ್ಕಾರದಿಂದ ಅಂಗವಿಕಲರ ‘ವಿದ್ಯಾರ್ಥಿ ವೇತನ’ಕ್ಕೆ ಅರ್ಜಿ ಆಹ್ವಾನ ; ತಕ್ಷಣ ಅಪ್ಲೈ ಮಾಡಿ!

27/09/2025 7:32 PM

BREAKING: ಬೆಂಗಳೂರಲ್ಲಿ ಕೇವಲ ಜಲ್ಲಿ ಹಾಕಿ ಟಾರ್ ಹಾಕದೇ ಬಿಟ್ಟ AE ಸಸ್ಪೆಂಡ್: ಸಿಎಂ ಸಿದ್ದರಾಮಯ್ಯ ಆದೇಶ

27/09/2025 7:18 PM
State News
KARNATAKA

ದಸರಾ ಧರ್ಮಕ್ಕೆ ಸೀಮಿತಿವಲ್ಲದ ನಾಡಹಬ್ಬ: ಸಚಿವ ಕೃಷ್ಣ ಬೈರೇಗೌಡ ಅಭಿಪ್ರಾಯ

By kannadanewsnow0927/09/2025 7:39 PM KARNATAKA 2 Mins Read

ಬೆಂಗಳೂರು: ದಸರಾ ಒಂದು ಧರ್ಮಕ್ಕೆ ಸೀಮಿತವಾದ ಹಬ್ಬವಲ್ಲ. ಬದಲಿಗೆ ನಾಡಿನಲ್ಲಿರುವ ಎಲ್ಲಾ ಜಾತಿ ಧರ್ಮದವರೂ ಒಗ್ಗಟ್ಟಾಗಿ ಆಚರಿಸುವ ನಾಡಹಬ್ಬ ಎಂದು…

BREAKING: ಬೆಂಗಳೂರಲ್ಲಿ ಕೇವಲ ಜಲ್ಲಿ ಹಾಕಿ ಟಾರ್ ಹಾಕದೇ ಬಿಟ್ಟ AE ಸಸ್ಪೆಂಡ್: ಸಿಎಂ ಸಿದ್ದರಾಮಯ್ಯ ಆದೇಶ

27/09/2025 7:18 PM

ಹೀಗಿದೆ ಸಿಎಂ ಸಿದ್ದರಾಮಯ್ಯ ಬೆಂಗಳೂರು ಸಿಡಿ ರೌಂಡ್ಸ್ ಹೈಲೈಟ್ಸ್

27/09/2025 7:04 PM

ದೀಪಕ್ಕೆ ಯಾವ ಎಣ್ಣೆ ಹಾಕಿದ್ರೆ ಏನು ಫಲ? ಇಲ್ಲಿದೆ ಮಾಹಿತಿ

27/09/2025 6:31 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.