ಮಕ್ಕಳಲ್ಲಿನ ಶ್ರವಣದೋಷವನ್ನು ಮೊದಲೇ ಗುರುತಿಸಲು ಮತ್ತು ಶ್ರವಣ ದೋಷದ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ರಾಜ್ಯ ಸರ್ಕಾರವು ಕಿವ್ವಿ ಯೋಜನೆಯನ್ನು ಜಾರಿಗೆ ತಂದಿದ್ದು, ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಿ ನಂತರ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸಲಿದ್ದೇವೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಮಕ್ಕಳಲ್ಲಿನ ಶ್ರವಣದೋಷವನ್ನು ಮೊದಲೇ ಗುರುತಿಸಲು ಮತ್ತು ಶ್ರವಣ ದೋಷದ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ನಮ್ಮ ಸರ್ಕಾರದಿಂದ ರೂಪಿಸಲಾಗಿರುವ ʻಕಿವ್ವಿ ಯೋಜನೆʼಗೆ ಐಐಟಿ ಮದ್ರಾಸ್ ಸಂಸ್ಥೆ ಬೆಂಬಲಿಸಲು ಸಮ್ಮತಿಸಿರುವುದು ಸಂತಸದ ವಿಷಯವಾಗಿದೆ ಎಂದರು.
ಕಿವ್ವಿ ಯೋಜನೆಗೆ ಅಗತ್ಯವಿರುವ ಅಗತ್ಯ ಸಾಧನಗಳನ್ನು ಒದಗಿಸಲು, ಸ್ಕ್ರೀನಿಂಗ್ ಪರೀಕ್ಷೆಗಳನ್ನು ನಡೆಸುವ ತರಬೇತಿ ನೀಡಲು, ಸಂಶೋಧನೆ ಉದ್ದೇಶಗಳಿಗಾಗಿ ಡೇಟಾವನ್ನು ಸಂಗ್ರಹಿಸಿ ವಿಶ್ಲೇಷಿಸಲು, ಕಿವ್ವಿ ಯೋಜನೆಯನ್ನು ರಾಜ್ಯಾದ್ಯಂತ ಕಾರ್ಯಗತಗೊಳಿಸಿ ಯಶಸ್ವಿಯಾಗಿಸಲು ಸಂಪೂರ್ಣ ಸಹಕಾರ ನೀಡುವುದಾಗಿ ಐಐಟಿ ಮದ್ರಾಸ್ ಸಂಸ್ಥೆ ತಿಳಿಸಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ನಮ್ಮ ಸರ್ಕಾರವು ರೂಪಿಸುತ್ತಿರುವ ಕಿವ್ವಿ ಯೋಜನೆಯು ಶ್ರವಣದೋಷ ಹೊಂದಿರುವ ಅನೇಕ ಮಕ್ಕಳ ಜೀವನಕ್ಕೆ ಬೆಳಕು ನೀಡಲಿದೆ. ಶ್ರವಣ ದೋಷದ ಇರುವ ಮಕ್ಕಳ ಪೋಷಕರಲ್ಲಿ ಜಾಗೃತಿ ಮೂಡಿಸಿ ಧೈರ್ಯವನ್ನು ತುಂಬಲಿದೆ ಎಂದು ಹೇಳಿದ್ದಾರೆ.