Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಪಾಕಿಸ್ತಾನದಲ್ಲಿ ಕಾರ್ಖಾನೆ ಬಾಂಬ್ ಸ್ಫೋಟ: 15 ಸಾವು, ಹಲವರಿಗೆ ಗಾಯ factory blast

21/11/2025 1:52 PM

BREAKING : ‘CM’ ಆಗಿ ನಾನೇ ಮುಂದುವರೆಯುತ್ತೇನೆ, ನಾನೇ ಬಜೆಟ್ ಮಂಡಿಸುತ್ತೇನೆ : ಸಿಎಂ ಸಿದ್ದರಾಮಯ್ಯ ಘೋಷಣೆ

21/11/2025 1:47 PM

ಕೇಂದ್ರ ಸರ್ಕಾರ ಬೇರೆ ಕಡೆಯಿಂದ ಮೆಕ್ಕೆಜೋಳ ಆಮದು ಮಾಡಿಕೊಳ್ಳೋ ಬದಲು ರಾಜ್ಯದಿಂದ ಖರೀದಿ ಮಾಡಿಬೇಕಿತ್ತು : ಸಿಎಂ ಸಿದ್ದರಾಮಯ್ಯ

21/11/2025 1:42 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಕರ್ನಾಟಕ ಮಾಧ್ಯಮ ಅಕಾಡೆಮಿ’ಯಿಂದ ‘ವಿವಿಧ ದತ್ತಿನಿಧಿ ಪ್ರಶಸ್ತಿ’ಗಳಿಗೆ ಪತ್ರಕರ್ತರಿಂದ ಅರ್ಜಿ ಆಹ್ವಾನ
KARNATAKA

‘ಕರ್ನಾಟಕ ಮಾಧ್ಯಮ ಅಕಾಡೆಮಿ’ಯಿಂದ ‘ವಿವಿಧ ದತ್ತಿನಿಧಿ ಪ್ರಶಸ್ತಿ’ಗಳಿಗೆ ಪತ್ರಕರ್ತರಿಂದ ಅರ್ಜಿ ಆಹ್ವಾನ

By kannadanewsnow0928/10/2025 7:13 PM

ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿಯು 2025ನೇ ಸಾಲಿನ ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗಾಗಿ ಪತ್ರಕರ್ತರಿಂದ ಲೇಖನಗಳನ್ನು ಆಹ್ವಾನಿಸಿದೆ.

ವಿವಿಧ ಮಾಧ್ಯಮ ಸಂಸ್ಥೆಗಳು ದತ್ತಿನಿದಿ ಪ್ರಶಸ್ತಿಗಳನ್ನು ಸ್ಥಾಪಿಸಿದ್ದು, ಬೆಂಗಳೂರಿನ ‘ಅಭಿಮಾನಿ ಪ್ರಕಾಶನ’ ಸಂಸ್ಥೆಯು ರಾಜ್ಯ ಮತ್ತು ಜಿಲ್ಲಾಮಟ್ಟದ ಕನ್ನಡ ಪತ್ರಿಕೆಗಳಲ್ಲಿ ‘ಸಾಮಾಜಿಕ ಸಮಸ್ಯೆ’ಗಳನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸುವ ಲೇಖನ-ವರದಿಗಳಿಗೆ ʼಅಭಿಮಾನಿ ಪ್ರಶಸ್ತಿʼ, ಮೈಸೂರಿನ ʼಮೈಸೂರು ದಿಗಂತʼ ಪತ್ರಿಕಾ ಸಂಸ್ಥೆಯು ʼ‘ಮಾನವೀಯ ಸಮಸ್ಯೆʼಗಳನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸುವ ಲೇಖನ-ವರದಿಗಳಿಗೆ ʼಮೈಸೂರು ದಿಗಂತ ಪ್ರಶಸ್ತಿʼ, ಬೆಂಗಳೂರಿನ ಅಭಿಮನ್ಯು ಪತ್ರಿಕೆ ಸಂಸ್ಥೆಯು ದಮನಿತ ಸಮುದಾಯಗಳ ಪರ ದನಿಯಾದ ಅತ್ಯುತ್ತಮ ಲೇಖನ/ ಅಂಕಣ/ ಸಂಪಾದಕೀಯ/ ಪರಿಣಾಮಕಾರಿ ವರದಿಗೆ ʼಅಭಿಮನ್ಯು ಪ್ರಶಸ್ತಿʼ, ಬೆಂಗಳೂರಿನ ʼಪ್ರಜಾ ಸಂದೇಶʼ ಪತ್ರಿಕಾ ಸಂಸ್ಥೆಯು ಶೋಷಣೆಯನ್ನು ಪರಿಣಾಮಕಾರಿಯಾಗಿ ಬಿಂಬಿಸುವ ಲೇಖನಕ್ಕೆ ʼಪ್ರಜಾ ಸಂದೇಶ ದತ್ತಿ ಪ್ರಶಸ್ತಿʼಗಳನ್ನು ಸ್ಥಾಪಿಸಿವೆ. ಈ ದತ್ತಿ ಪ್ರಶಸ್ತಿಗಳು ತಲಾ 10,000/- (ಹತ್ತು ಸಾವಿರ) ರೂ .ನಗದು ಬಹುಮಾನ ಒಳಗೊಂಡಿವೆ.

ಆಸಕ್ತ ಪತ್ರಕರ್ತರು 2025ರ ಜನವರಿ 1 ರಿಂದ 2025ರ ಅಕ್ಟೋಬರ್‌ 25ರ ವರೆಗೆ ಪ್ರಕಟವಾಗಿರುವ ತಮ್ಮ ಒಂದು ಲೇಖನ – ವರದಿಯನ್ನು ಕಳುಹಿಸಬಹುದು.

ಕನ್ನಡ ದೈನಿಕ- ಟಿವಿ-ವಾಹಿನಿ, ವಾರ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರು ಹೆಸರು (ಬೈಲೈನ್) ಬರೆದಿರುವ ವರದಿ ಲೇಖನಗಳಿಗೆ ಮಾತ್ರ ಅವಕಾಶ. ಲೇಖನ-ವರದಿಗಳಲ್ಲಿ ಹೆಸರು (ಬೈಲೈನ್) ಪ್ರಕಟವಾಗದಿದ್ದಲ್ಲಿ ಸಂಬಂಧಿಸಿದ ಪತ್ರಿಕೆಯ ಸಂಪಾದಕರಿಂದ ದೃಢೀಕರಣ ಪತ್ರವನ್ನು ಪಡೆದು ಕಳುಹಿಸಬೇಕು. ಲೇಖನ ವರದಿಗಳ ಲಕೋಟೆಯಲ್ಲಿ ಯಾವ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸುತ್ತಿರುವುದು ಎಂಬುದನ್ನು ‘ಅಭಿಮಾನಿ ಪ್ರಶಸ್ತಿ- 2025’, ‘ಮೈಸೂರು ದಿಗಂತ ಪ್ರಶಸ್ತಿ-2025’, “ಅಭಿಮನ್ಯು ಪ್ರಶಸ್ತಿ-2025” ಹಾಗೂ ʼಪ್ರಜಾ ಸಂದೇಶ ದತ್ತಿ ಪ್ರಶಸ್ತಿ-2025ʼ ಎಂದು ಸ್ಪಷ್ಟವಾಗಿ ಬರೆದು ಲೇಖನಗಳನ್ನು ಇದೇ ನವೆಂಬರ್‌ 12ರ ಒಳಗಾಗಿ ಕಾರ್ಯದರ್ಶಿ, ಕರ್ನಾಟಕ ಮಾಧ್ಯಮ ಅಕಾಡೆಮಿ, ಪೋಡಿಯಂ ಬ್ಲಾಕ್, ವಿಶ್ವೇಶ್ವರಯ್ಯ ಕೇಂದ್ರ ಡಾ. ಬಿ.ಆರ್. ಅಂಬೇಡ್ಕರ್ ವೀಧಿ, ಬೆಂಗಳೂರು-560001 ಇವರಿಗೆ ಅಂಚೆ ಮೂಲಕ ಅಥವಾ ಖುದ್ದಾಗಿ ತಲುಪಿಸಬಹುದು.

ಕರ್ನಾಟಕ ಮಾಧ್ಯಮ ಅಕಾಡೆಮಿಯು 2025ನೇ ಸಾಲಿನ ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗಾಗಿ ಪತ್ರಕರ್ತರಿಂದ ಲೇಖನಗಳನ್ನು ಆಹ್ವಾನಿಸಿದೆ.

ವಿವಿಧ ಮಾಧ್ಯಮ ಸಂಸ್ಥೆಗಳು ದತ್ತಿನಿದಿ ಪ್ರಶಸ್ತಿಗಳನ್ನು ಸ್ಥಾಪಿಸಿದ್ದು, ಬೆಂಗಳೂರಿನ ‘ಅಭಿಮಾನಿ ಪ್ರಕಾಶನ’ ಸಂಸ್ಥೆಯು ರಾಜ್ಯ ಮತ್ತು ಜಿಲ್ಲಾಮಟ್ಟದ ಕನ್ನಡ ಪತ್ರಿಕೆಗಳಲ್ಲಿ ‘ಸಾಮಾಜಿಕ ಸಮಸ್ಯೆ’ಗಳನ್ನು… pic.twitter.com/RrwpZrsOxF

— DIPR Karnataka (@KarnatakaVarthe) October 28, 2025

ಕಾಂಗ್ರೆಸ್ ಪಕ್ಷ, ಈ ಸರಕಾರವನ್ನು ಯಾರೂ ನಂಬುತ್ತಿಲ್ಲ: MLC ಛಲವಾದಿ ನಾರಾಯಣಸ್ವಾಮಿ

ಉದ್ಯೋಗಿಗಳೇ ಗಮನಿಸಿ ; ಡಿಎ, ಪಿಂಚಣಿ, ಗ್ರಾಚ್ಯುಟಿ ಸೇರಿ ನಿವೃತ್ತಿ ನಿಯಮಗಳಲ್ಲಿ 5 ಬದಲಾವಣೆ!

Share. Facebook Twitter LinkedIn WhatsApp Email

Related Posts

BREAKING : ‘CM’ ಆಗಿ ನಾನೇ ಮುಂದುವರೆಯುತ್ತೇನೆ, ನಾನೇ ಬಜೆಟ್ ಮಂಡಿಸುತ್ತೇನೆ : ಸಿಎಂ ಸಿದ್ದರಾಮಯ್ಯ ಘೋಷಣೆ

21/11/2025 1:47 PM1 Min Read

ಕೇಂದ್ರ ಸರ್ಕಾರ ಬೇರೆ ಕಡೆಯಿಂದ ಮೆಕ್ಕೆಜೋಳ ಆಮದು ಮಾಡಿಕೊಳ್ಳೋ ಬದಲು ರಾಜ್ಯದಿಂದ ಖರೀದಿ ಮಾಡಿಬೇಕಿತ್ತು : ಸಿಎಂ ಸಿದ್ದರಾಮಯ್ಯ

21/11/2025 1:42 PM1 Min Read

ನಾಯಕತ್ವ ಬದಲಾವಣೆ ಅಪ್ರಸ್ತುತ, ಸಿದ್ದರಾಮಯ್ಯರನ್ನು 5 ವರ್ಷ ‘CM’ ಎಂದು ಆಯ್ಕೆ ಮಾಡಲಾಗಿದೆ : ಬಸವರಾಜ್ ರಾಯರೆಡ್ಡಿ

21/11/2025 1:41 PM1 Min Read
Recent News

BREAKING: ಪಾಕಿಸ್ತಾನದಲ್ಲಿ ಕಾರ್ಖಾನೆ ಬಾಂಬ್ ಸ್ಫೋಟ: 15 ಸಾವು, ಹಲವರಿಗೆ ಗಾಯ factory blast

21/11/2025 1:52 PM

BREAKING : ‘CM’ ಆಗಿ ನಾನೇ ಮುಂದುವರೆಯುತ್ತೇನೆ, ನಾನೇ ಬಜೆಟ್ ಮಂಡಿಸುತ್ತೇನೆ : ಸಿಎಂ ಸಿದ್ದರಾಮಯ್ಯ ಘೋಷಣೆ

21/11/2025 1:47 PM

ಕೇಂದ್ರ ಸರ್ಕಾರ ಬೇರೆ ಕಡೆಯಿಂದ ಮೆಕ್ಕೆಜೋಳ ಆಮದು ಮಾಡಿಕೊಳ್ಳೋ ಬದಲು ರಾಜ್ಯದಿಂದ ಖರೀದಿ ಮಾಡಿಬೇಕಿತ್ತು : ಸಿಎಂ ಸಿದ್ದರಾಮಯ್ಯ

21/11/2025 1:42 PM

ನಾಯಕತ್ವ ಬದಲಾವಣೆ ಅಪ್ರಸ್ತುತ, ಸಿದ್ದರಾಮಯ್ಯರನ್ನು 5 ವರ್ಷ ‘CM’ ಎಂದು ಆಯ್ಕೆ ಮಾಡಲಾಗಿದೆ : ಬಸವರಾಜ್ ರಾಯರೆಡ್ಡಿ

21/11/2025 1:41 PM
State News
KARNATAKA

BREAKING : ‘CM’ ಆಗಿ ನಾನೇ ಮುಂದುವರೆಯುತ್ತೇನೆ, ನಾನೇ ಬಜೆಟ್ ಮಂಡಿಸುತ್ತೇನೆ : ಸಿಎಂ ಸಿದ್ದರಾಮಯ್ಯ ಘೋಷಣೆ

By kannadanewsnow0521/11/2025 1:47 PM KARNATAKA 1 Min Read

ಮೈಸೂರು : ಕಳೆದ ಎರಡು ದಿನಗಳ ಹಿಂದೆ ಅಷ್ಟೇ ಮುಖ್ಯಮಂತ್ರಿಯಾಗಿ ನಾನೇ ಮುಂದುವರೆಯುತ್ತೇನೆ ಬಜೆಟ್ ಸಹ ನಾನೇ ಮಾಡಿಸುತ್ತೇನೆ ಎಂದು…

ಕೇಂದ್ರ ಸರ್ಕಾರ ಬೇರೆ ಕಡೆಯಿಂದ ಮೆಕ್ಕೆಜೋಳ ಆಮದು ಮಾಡಿಕೊಳ್ಳೋ ಬದಲು ರಾಜ್ಯದಿಂದ ಖರೀದಿ ಮಾಡಿಬೇಕಿತ್ತು : ಸಿಎಂ ಸಿದ್ದರಾಮಯ್ಯ

21/11/2025 1:42 PM

ನಾಯಕತ್ವ ಬದಲಾವಣೆ ಅಪ್ರಸ್ತುತ, ಸಿದ್ದರಾಮಯ್ಯರನ್ನು 5 ವರ್ಷ ‘CM’ ಎಂದು ಆಯ್ಕೆ ಮಾಡಲಾಗಿದೆ : ಬಸವರಾಜ್ ರಾಯರೆಡ್ಡಿ

21/11/2025 1:41 PM

BREAKING : ವಿಚ್ಛೇದಿತ ಮಹಿಳೆಯರನ್ನ ಮದುವೆಯಾಗೋದಾಗಿ ನಂಬಿಸಿ ವಂಚನೆ ಕೇಸ್ : ಆರೋಪಿ ಆತ್ಮಹತ್ಯೆಗೆ ಶರಣು!

21/11/2025 1:26 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.